<p>ಇಂದಿನ ತಂತ್ರಜ್ಞಾನ ಯುಗದ ನಾಗಲೋಟದ ಬದುಕು, ನಾನಾ ಚಿಂತೆಗಳು, ಒತ್ತಡ ಇತ್ಯಾದಿಗಳು ಜೀವನದಲ್ಲಿ ಜಿಗುಪ್ಸೆ ಮೂಡಿಸಿ ನೆಮ್ಮದಿ ನಾಶ ಮಾಡಿವೆ. ಬದಲಾದ ಜೀವನ ವಿಧಾನ, ತಾಂತ್ರಿಕತೆ, ಆಧುನಿಕತೆಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.<br /> <br /> ಈ ವೇಗದ ಯುಗದಲ್ಲಿ ಕೆಲವೊಮ್ಮೆ ಲೈಫು ಇಷ್ಟೇನೆ ಎನಿಸಿ ನಿರಾಸೆ ಉಂಟಾಗುವುದು ಸಹಜ. ಇದಕ್ಕೆ ಪರಿಹಾರ ಎಂಬಂತೆ ನೆಮ್ಮದಿಯನ್ನು ಪುನಃ ಗಳಿಸಿಕೊಳ್ಳಲು ಮೈಸೂರಿನ ವಿದ್ಯಾಸಂಸ್ಥೆಯೊಂದು ಉಚಿತವಾಗಿ ತರಬೇತಿ ನೀಡುತ್ತಿದೆ. ಸಂತೋಷವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವುದೇ ಇದರ ಉದ್ದೇಶ. <br /> <br /> ಪ್ಲೇ ಪ್ಲಾಸುಮ್ ವರ್ಲ್ಡ್ ಯೂನಿವರ್ಸಿಟಿ (ಧನಾತ್ಮಕ ಆಲೋಚನೆಗಳಿಗೆ ವಾರಾಂತ್ಯದ ಕೋರ್ಸ್) ಒಂದು ಖಾಸಗಿ ಸಂಸ್ಥೆ. ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಮಾಜಿ ಸದಸ್ಯ ಡಾ.ಎಂ.ರಂಗನಾಥ್ ಈ ಸಂಸ್ಥೆಯ ನಿರ್ದೇಶಕರು. ಇವರೊಟ್ಟಿಗೆ ನುರಿತ ವೈದ್ಯರು ತರಬೇತಿ ನೀಡುವರು.<br /> <br /> ಚಿಂತೆಯಲ್ಲದೇ ಶಾಂತವಾಗಿ ಸಂತೋಷವಾಗಿ ಇರುವುದನ್ನು ಕಲಿಸುವುದೇ ಬಿಂದಾಸ್ ಲಿವಿಂಗ್ ಕೋರ್ಸ್. ಬ್ರೈನ್ ಸೈನ್ಸ್ ಸಂಶೋಧನೆಗಳನ್ನು ಆಧರಿಸಿ ಈ ಕೋರ್ಸ್ ತಯಾರಿಸಲಾಗಿದೆ. ದೇವರು, ಧರ್ಮ, ಉಪದೇಶಗಳು, ಪೂಜೆ ಇದಾವುದೂ ಇಲ್ಲಿ ಇಲ್ಲ.<br /> <br /> ಎಲ್ಲ ಪ್ರಾಯದವರೂ ಇದಕ್ಕೆ ಸೇರಬಹುದು, ಅದರಲ್ಲೂ ಯುವಪೀಳಿಗೆಗೆ ಹೆಚ್ಚು ಉಪಯುಕ್ತ. ಕಳೆದ ಡಿಸೆಂಬರ್ 11ರಿಂದ `ಸಂತೋಷವಾಗಿ ಇದ್ದುಬಿಡಿ~ ಕಾರ್ಯಾಗಾರ ಆರಂಭವಾಗಿದೆ. 25 ಮಂದಿ ತರಬೇತಿ ಪಡೆಯುತ್ತಿದ್ದು, ಇವರಲ್ಲಿ 15 ಮಂದಿ ವಿದ್ಯಾರ್ಥಿಗಳು.<br /> <br /> ಆತಂಕ ನಿವಾರಣೆ, ಸಮಸ್ಯೆಗಳಿಗೆ ಪರಿಹಾರ, ದುಡಿಯುವ- ಬದುಕುವ ಉತ್ಸಾಹ ಪಡೆಯಲು, ಕೆಲ ದೈಹಿಕ ತೊಂದರೆಗಳನ್ನು ನಿವಾರಿಸಿಕೊಳ್ಳಲು ಈ ಕೋರ್ಸ್ ಸಹಾಯಕ ಎಂಬುದು ತಜ್ಞರ ಅಭಿಮತ. ಎಲ್ಲವೂ ಪ್ರಾಯೋಗಿಕ ತರಗತಿಗಳೇ. ಯೋಗ, ಧ್ಯಾನ, ವ್ರತ ಇದಾವುದು ಇರುವುದಿಲ್ಲ.<br /> <br /> ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಇಟಲಿ, ಸ್ವಿಟ್ಜರ್ಲೆಂಡ್, ಥಾಯ್ಲೆಂಡ್ ಕಾಂಬೋಡಿಯಾ ದೇಶಗಳಲ್ಲೂ ಈ ಕೋರ್ಸ್ ಪ್ರಚಲಿತದಲ್ಲಿದೆ. ತುಂಬಾ ಬುದ್ದಿವಂತರಾಗಿದ್ದೂ, ಉತ್ತಮ ಶಿಕ್ಷಣ ಮತ್ತು ಉನ್ನತ ಹುದ್ದೆ ಪಡೆದವರೆಲ್ಲರೂ ಸಂತೋಷವಾಗಿರುವುದಿಲ್ಲ. <br /> <br /> ಶ್ರೀಮಂತರೆಲ್ಲರೂ ಖುಷಿಯಾಗಿರುವುದಿಲ್ಲ. ಭಾಷಣ ಕೇಳಿದಾಕ್ಷಣ, ಪುಸ್ತಕ ಓದಿದಾಕ್ಷಣ ವ್ಯಕ್ತಿತ್ವ ಬದಲಾಗುವುದು ಕಷ್ಟ. ಜೀವನದಲ್ಲಿ ನೆಮ್ಮದಿ ಅತಿಮುಖ್ಯ, ಸಂತೋಷ ಇದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ.<br /> <br /> ನೆಮ್ಮದಿಗೂ ಕ್ಲಾಸಿಗೆ ಹೋಗಬೇಕೇ ಎಂದು ಯಾರಿಗಾದರೂ ಅನಿಸದೇ ಇರುವುದಿಲ್ಲ. ಸಂತೋಷದಿಂದ ಇರಲು ಶಿಕ್ಷಣ ಮತ್ತು ತರಬೇತಿ ಬೇಕು ಎಂಬುದನ್ನು ವೈದ್ಯಕೀಯ ಮತ್ತು ನರವಿಜ್ಞಾನ ಸಂಶೋಧನೆಗಳು ದೃಢಪಡಿಸಿವೆ.<br /> <br /> ಸಂತೋಷದಿಂದಿರಲು ಬುದ್ಧಿವಂತಿಕೆ ಮತ್ತು ಹಣಕ್ಕಿಂತಲೂ ಮಿಗಿಲಾಗಿ, ನಮ್ಮ ಭಾವನೆಗಳ ಮೇಲೆ ಹಿಡಿತ (ಎಮೊಷನಲ್ ಕ್ವಾಲಿಟಿ-ಇಕ್ಯು), ಜನರೊಟ್ಟಿಗೆ ವಿಶ್ವಾಸದ ಸ್ನೇಹಸಂಬಂಧಗಳು (ಸೋಶಿಯಲ್ ಇಂಟೆಲಿಜೆನ್ಸ್ ಕ್ವಾಲಿಟಿ-ಎಸ್ಕ್ಯು) ಪ್ರಮುಖ ಪಾತ್ರ ವಹಿಸುತ್ತವೆ.<br /> <br /> * ಸಂತೋಷ ಶಾಶ್ವತವಾಗಿ ಉಳಿಯಬೇಕಾದರೆ ಮೆದುಳಿಗೆ ಖುಷಿಯ ಮೇವನ್ನು ಹಾಕಬೇಕು.<br /> <br /> * ಸಂತೋಷ ವ್ಯರ್ಥವಾಗುವುದನ್ನು ತಪ್ಪಿಸಲು ಕೆಲವು ವಿಧಾನಗಳನ್ನು ಕಲಿಯಬೇಕು. <br /> <br /> * ಹೊಸ ಅಭ್ಯಾಸಗಳು ಮೈಗಂಟಿದ ಹಾಗೆ ರೂಢಿಯಾಗುವುದಕ್ಕೆ ವೈಜ್ಞಾನಿಕ ಕ್ರಮ ಅಗತ್ಯ. ಇಲ್ಲದಿದ್ದರೆ `ಕಾಮನ್ ಸೆನ್ಸ್~ ಎನಿಸಿ ಎಲ್ಲವೂ ಸೋತು ಹೋಗುತ್ತವೆ.<br /> <br /> ಮೇಲಿನ ಮೂರು ಅಂಶಗಳು ಬಲವಾದ ವೈಜ್ಞಾನಿಕ ತಳಹದಿಯ ಮೇಲೆ ನಿಂತಿವೆ.<br /> ಕನ್ನಡಿ ನರಕೋಶಗಳು ಎಂಬ ಕೋಶಗಳಿಂದ ನಾವು ಬೇರೆಯವರ ಮುಖ ಭಾವನೆ ಮತ್ತು ಚಟುವಟಿಕೆಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತೇವೆ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದರೆ ಇದರಿಂದಾಗಿ ಬೇರೆಯವರ ಭಾವನೆಗಳು ಮತ್ತು ಇಂಗಿತಗಳನ್ನು ಗ್ರಹಿಸುವುದಷ್ಟೇ ಅಲ್ಲದೇ ಅದನ್ನೆಲ್ಲ ನಮ್ಮಳಗೂ ಅನುಭವಿಸಿ ಬಿಡುತ್ತೇವೆ.<br /> <br /> ಮತ್ತೊಬ್ಬರ ಭಾವನೆಗಳಿಗೆ ನಾವು ಪ್ರತಿಕ್ರಿಯಿಸುವುದನ್ನು ಯೋಚಿಸಿ ಮಾಡಲಾಗುವುದಿಲ್ಲ. ಅದು ತಟ್ಟನೆ ಜೆಟ್ ವೇಗದಲ್ಲಿ ಆಗಿ ಬಿಡುತ್ತದೆ. ಇದರಿಂದ ತಕ್ಷಣ ನಾವು ಒಬ್ಬರೊಂದಿಗೆ ಸಂಪರ್ಕ ಸಾಧಿಸುವುದೋ ಮತ್ತು ಸಂಪರ್ಕ ನಿಲ್ಲಿಸುವುದೋ ನಡೆದುಹೋಗಿರುತ್ತದೆ.<br /> <br /> ವ್ಯಕ್ತಿಯೊಡನೆ ನಮಗೆ ಸಂಬಂಧ ಹಿತವಾಗಿದ್ದರೆ ತಕ್ಷಣ ನಮ್ಮ ಮೆದುಳಿನಲ್ಲಿ `ಡೊಪಮಿನ್~ ಎಂಬ ಸುಖದ ಅನುಭವ ನೀಡುವ ಹಾರ್ಮೋನು ತಯಾರಾಗುತ್ತದೆ. ಯಾವುದೇ ಕೆಲಸವನ್ನು ತಪ್ಪಿಲ್ಲದೇ ಮಾಡುವುದಕ್ಕೂ, ಓದಿದ್ದನ್ನು ಗ್ರಹಿಸುವುದಕ್ಕೂ ಮೆದುಳಿನಲ್ಲಿ ಡೊಪಮಿನ್ ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ಸಾಧ್ಯ. <br /> <br /> ಉತ್ತಮ ಗುಣಮಟ್ಟದ ವಿಶ್ವಾಸ ಮತ್ತು ನಂಬಿಕೆಗಳಿಂದ ಕೂಡಿದ ಸಾಮಾಜಿಕ ಸಂಬಂಧಗಳು ಯಶಸ್ಸು ಮತ್ತು ನೆಮ್ಮದಿಗೆ ಬುನಾದಿ. ಈ ಸಾಮಾಜಿಕ ಸಂಬಂಧಗಳನ್ನು ನಿರ್ವಹಿಸಿಕೊಂಡು ಹೋಗಬೇಕಾದರೆ ಭಾವನೆಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ಪ್ರೌಢತೆ ಬೇಕು. ಕಾರ್ಯಾಗಾರದಲ್ಲಿ ಈ ಎಲ್ಲ ಸಂಗತಿಗಳಿಗೂ ಶಿಕ್ಷಣ ತರಬೇತಿ ನೀಡಲಾಗುತ್ತದೆ.<br /> <br /> ಯಾವುದೇ ಊರಿನವರೂ ಕೋರ್ಸ್ಗೆ ಸೇರಬಹುದು. ಯಾವುದೇ ಶುಲ್ಕ ಇಲ್ಲ. ಎಂಟು ವಾರದ ಈ ಶಿಬಿರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ಗಂಟೆ ತರಗತಿಗಳು ಇರುತ್ತವೆ. ಕಲಿಕಾ ಸಾಮಗ್ರಿಗಳನ್ನು ನೀಡಲಾಗುವುದು. ಪರ ಊರಿನಿಂದ ಬರುವವರಿಗೆ ಹಾಸ್ಟೆಲ್ ಸೌಲಭ್ಯ ಇದೆ. ತರಬೇತಿ ಮುಗಿದ ನಂತರ ಸರ್ಟಿಫಿಕೇಟ್ ನೀಡಲಾಗುವುದು. ಆನ್ಲೈನ್ನಲ್ಲೂ ಹೆಸರು ನೋಂದಾಯಿಸಬಹುದು.<br /> <br /> ಹೆಚ್ಚಿನ ಮಾಹಿತಿಗೆ ಮೊಬೈಲ್:9845654397 ಅಥವಾ <a href="http://www.playpossum.org">www.playpossum.org</a> ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದಿನ ತಂತ್ರಜ್ಞಾನ ಯುಗದ ನಾಗಲೋಟದ ಬದುಕು, ನಾನಾ ಚಿಂತೆಗಳು, ಒತ್ತಡ ಇತ್ಯಾದಿಗಳು ಜೀವನದಲ್ಲಿ ಜಿಗುಪ್ಸೆ ಮೂಡಿಸಿ ನೆಮ್ಮದಿ ನಾಶ ಮಾಡಿವೆ. ಬದಲಾದ ಜೀವನ ವಿಧಾನ, ತಾಂತ್ರಿಕತೆ, ಆಧುನಿಕತೆಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.<br /> <br /> ಈ ವೇಗದ ಯುಗದಲ್ಲಿ ಕೆಲವೊಮ್ಮೆ ಲೈಫು ಇಷ್ಟೇನೆ ಎನಿಸಿ ನಿರಾಸೆ ಉಂಟಾಗುವುದು ಸಹಜ. ಇದಕ್ಕೆ ಪರಿಹಾರ ಎಂಬಂತೆ ನೆಮ್ಮದಿಯನ್ನು ಪುನಃ ಗಳಿಸಿಕೊಳ್ಳಲು ಮೈಸೂರಿನ ವಿದ್ಯಾಸಂಸ್ಥೆಯೊಂದು ಉಚಿತವಾಗಿ ತರಬೇತಿ ನೀಡುತ್ತಿದೆ. ಸಂತೋಷವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವುದೇ ಇದರ ಉದ್ದೇಶ. <br /> <br /> ಪ್ಲೇ ಪ್ಲಾಸುಮ್ ವರ್ಲ್ಡ್ ಯೂನಿವರ್ಸಿಟಿ (ಧನಾತ್ಮಕ ಆಲೋಚನೆಗಳಿಗೆ ವಾರಾಂತ್ಯದ ಕೋರ್ಸ್) ಒಂದು ಖಾಸಗಿ ಸಂಸ್ಥೆ. ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಮಾಜಿ ಸದಸ್ಯ ಡಾ.ಎಂ.ರಂಗನಾಥ್ ಈ ಸಂಸ್ಥೆಯ ನಿರ್ದೇಶಕರು. ಇವರೊಟ್ಟಿಗೆ ನುರಿತ ವೈದ್ಯರು ತರಬೇತಿ ನೀಡುವರು.<br /> <br /> ಚಿಂತೆಯಲ್ಲದೇ ಶಾಂತವಾಗಿ ಸಂತೋಷವಾಗಿ ಇರುವುದನ್ನು ಕಲಿಸುವುದೇ ಬಿಂದಾಸ್ ಲಿವಿಂಗ್ ಕೋರ್ಸ್. ಬ್ರೈನ್ ಸೈನ್ಸ್ ಸಂಶೋಧನೆಗಳನ್ನು ಆಧರಿಸಿ ಈ ಕೋರ್ಸ್ ತಯಾರಿಸಲಾಗಿದೆ. ದೇವರು, ಧರ್ಮ, ಉಪದೇಶಗಳು, ಪೂಜೆ ಇದಾವುದೂ ಇಲ್ಲಿ ಇಲ್ಲ.<br /> <br /> ಎಲ್ಲ ಪ್ರಾಯದವರೂ ಇದಕ್ಕೆ ಸೇರಬಹುದು, ಅದರಲ್ಲೂ ಯುವಪೀಳಿಗೆಗೆ ಹೆಚ್ಚು ಉಪಯುಕ್ತ. ಕಳೆದ ಡಿಸೆಂಬರ್ 11ರಿಂದ `ಸಂತೋಷವಾಗಿ ಇದ್ದುಬಿಡಿ~ ಕಾರ್ಯಾಗಾರ ಆರಂಭವಾಗಿದೆ. 25 ಮಂದಿ ತರಬೇತಿ ಪಡೆಯುತ್ತಿದ್ದು, ಇವರಲ್ಲಿ 15 ಮಂದಿ ವಿದ್ಯಾರ್ಥಿಗಳು.<br /> <br /> ಆತಂಕ ನಿವಾರಣೆ, ಸಮಸ್ಯೆಗಳಿಗೆ ಪರಿಹಾರ, ದುಡಿಯುವ- ಬದುಕುವ ಉತ್ಸಾಹ ಪಡೆಯಲು, ಕೆಲ ದೈಹಿಕ ತೊಂದರೆಗಳನ್ನು ನಿವಾರಿಸಿಕೊಳ್ಳಲು ಈ ಕೋರ್ಸ್ ಸಹಾಯಕ ಎಂಬುದು ತಜ್ಞರ ಅಭಿಮತ. ಎಲ್ಲವೂ ಪ್ರಾಯೋಗಿಕ ತರಗತಿಗಳೇ. ಯೋಗ, ಧ್ಯಾನ, ವ್ರತ ಇದಾವುದು ಇರುವುದಿಲ್ಲ.<br /> <br /> ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಇಟಲಿ, ಸ್ವಿಟ್ಜರ್ಲೆಂಡ್, ಥಾಯ್ಲೆಂಡ್ ಕಾಂಬೋಡಿಯಾ ದೇಶಗಳಲ್ಲೂ ಈ ಕೋರ್ಸ್ ಪ್ರಚಲಿತದಲ್ಲಿದೆ. ತುಂಬಾ ಬುದ್ದಿವಂತರಾಗಿದ್ದೂ, ಉತ್ತಮ ಶಿಕ್ಷಣ ಮತ್ತು ಉನ್ನತ ಹುದ್ದೆ ಪಡೆದವರೆಲ್ಲರೂ ಸಂತೋಷವಾಗಿರುವುದಿಲ್ಲ. <br /> <br /> ಶ್ರೀಮಂತರೆಲ್ಲರೂ ಖುಷಿಯಾಗಿರುವುದಿಲ್ಲ. ಭಾಷಣ ಕೇಳಿದಾಕ್ಷಣ, ಪುಸ್ತಕ ಓದಿದಾಕ್ಷಣ ವ್ಯಕ್ತಿತ್ವ ಬದಲಾಗುವುದು ಕಷ್ಟ. ಜೀವನದಲ್ಲಿ ನೆಮ್ಮದಿ ಅತಿಮುಖ್ಯ, ಸಂತೋಷ ಇದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ.<br /> <br /> ನೆಮ್ಮದಿಗೂ ಕ್ಲಾಸಿಗೆ ಹೋಗಬೇಕೇ ಎಂದು ಯಾರಿಗಾದರೂ ಅನಿಸದೇ ಇರುವುದಿಲ್ಲ. ಸಂತೋಷದಿಂದ ಇರಲು ಶಿಕ್ಷಣ ಮತ್ತು ತರಬೇತಿ ಬೇಕು ಎಂಬುದನ್ನು ವೈದ್ಯಕೀಯ ಮತ್ತು ನರವಿಜ್ಞಾನ ಸಂಶೋಧನೆಗಳು ದೃಢಪಡಿಸಿವೆ.<br /> <br /> ಸಂತೋಷದಿಂದಿರಲು ಬುದ್ಧಿವಂತಿಕೆ ಮತ್ತು ಹಣಕ್ಕಿಂತಲೂ ಮಿಗಿಲಾಗಿ, ನಮ್ಮ ಭಾವನೆಗಳ ಮೇಲೆ ಹಿಡಿತ (ಎಮೊಷನಲ್ ಕ್ವಾಲಿಟಿ-ಇಕ್ಯು), ಜನರೊಟ್ಟಿಗೆ ವಿಶ್ವಾಸದ ಸ್ನೇಹಸಂಬಂಧಗಳು (ಸೋಶಿಯಲ್ ಇಂಟೆಲಿಜೆನ್ಸ್ ಕ್ವಾಲಿಟಿ-ಎಸ್ಕ್ಯು) ಪ್ರಮುಖ ಪಾತ್ರ ವಹಿಸುತ್ತವೆ.<br /> <br /> * ಸಂತೋಷ ಶಾಶ್ವತವಾಗಿ ಉಳಿಯಬೇಕಾದರೆ ಮೆದುಳಿಗೆ ಖುಷಿಯ ಮೇವನ್ನು ಹಾಕಬೇಕು.<br /> <br /> * ಸಂತೋಷ ವ್ಯರ್ಥವಾಗುವುದನ್ನು ತಪ್ಪಿಸಲು ಕೆಲವು ವಿಧಾನಗಳನ್ನು ಕಲಿಯಬೇಕು. <br /> <br /> * ಹೊಸ ಅಭ್ಯಾಸಗಳು ಮೈಗಂಟಿದ ಹಾಗೆ ರೂಢಿಯಾಗುವುದಕ್ಕೆ ವೈಜ್ಞಾನಿಕ ಕ್ರಮ ಅಗತ್ಯ. ಇಲ್ಲದಿದ್ದರೆ `ಕಾಮನ್ ಸೆನ್ಸ್~ ಎನಿಸಿ ಎಲ್ಲವೂ ಸೋತು ಹೋಗುತ್ತವೆ.<br /> <br /> ಮೇಲಿನ ಮೂರು ಅಂಶಗಳು ಬಲವಾದ ವೈಜ್ಞಾನಿಕ ತಳಹದಿಯ ಮೇಲೆ ನಿಂತಿವೆ.<br /> ಕನ್ನಡಿ ನರಕೋಶಗಳು ಎಂಬ ಕೋಶಗಳಿಂದ ನಾವು ಬೇರೆಯವರ ಮುಖ ಭಾವನೆ ಮತ್ತು ಚಟುವಟಿಕೆಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತೇವೆ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದರೆ ಇದರಿಂದಾಗಿ ಬೇರೆಯವರ ಭಾವನೆಗಳು ಮತ್ತು ಇಂಗಿತಗಳನ್ನು ಗ್ರಹಿಸುವುದಷ್ಟೇ ಅಲ್ಲದೇ ಅದನ್ನೆಲ್ಲ ನಮ್ಮಳಗೂ ಅನುಭವಿಸಿ ಬಿಡುತ್ತೇವೆ.<br /> <br /> ಮತ್ತೊಬ್ಬರ ಭಾವನೆಗಳಿಗೆ ನಾವು ಪ್ರತಿಕ್ರಿಯಿಸುವುದನ್ನು ಯೋಚಿಸಿ ಮಾಡಲಾಗುವುದಿಲ್ಲ. ಅದು ತಟ್ಟನೆ ಜೆಟ್ ವೇಗದಲ್ಲಿ ಆಗಿ ಬಿಡುತ್ತದೆ. ಇದರಿಂದ ತಕ್ಷಣ ನಾವು ಒಬ್ಬರೊಂದಿಗೆ ಸಂಪರ್ಕ ಸಾಧಿಸುವುದೋ ಮತ್ತು ಸಂಪರ್ಕ ನಿಲ್ಲಿಸುವುದೋ ನಡೆದುಹೋಗಿರುತ್ತದೆ.<br /> <br /> ವ್ಯಕ್ತಿಯೊಡನೆ ನಮಗೆ ಸಂಬಂಧ ಹಿತವಾಗಿದ್ದರೆ ತಕ್ಷಣ ನಮ್ಮ ಮೆದುಳಿನಲ್ಲಿ `ಡೊಪಮಿನ್~ ಎಂಬ ಸುಖದ ಅನುಭವ ನೀಡುವ ಹಾರ್ಮೋನು ತಯಾರಾಗುತ್ತದೆ. ಯಾವುದೇ ಕೆಲಸವನ್ನು ತಪ್ಪಿಲ್ಲದೇ ಮಾಡುವುದಕ್ಕೂ, ಓದಿದ್ದನ್ನು ಗ್ರಹಿಸುವುದಕ್ಕೂ ಮೆದುಳಿನಲ್ಲಿ ಡೊಪಮಿನ್ ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ಸಾಧ್ಯ. <br /> <br /> ಉತ್ತಮ ಗುಣಮಟ್ಟದ ವಿಶ್ವಾಸ ಮತ್ತು ನಂಬಿಕೆಗಳಿಂದ ಕೂಡಿದ ಸಾಮಾಜಿಕ ಸಂಬಂಧಗಳು ಯಶಸ್ಸು ಮತ್ತು ನೆಮ್ಮದಿಗೆ ಬುನಾದಿ. ಈ ಸಾಮಾಜಿಕ ಸಂಬಂಧಗಳನ್ನು ನಿರ್ವಹಿಸಿಕೊಂಡು ಹೋಗಬೇಕಾದರೆ ಭಾವನೆಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ಪ್ರೌಢತೆ ಬೇಕು. ಕಾರ್ಯಾಗಾರದಲ್ಲಿ ಈ ಎಲ್ಲ ಸಂಗತಿಗಳಿಗೂ ಶಿಕ್ಷಣ ತರಬೇತಿ ನೀಡಲಾಗುತ್ತದೆ.<br /> <br /> ಯಾವುದೇ ಊರಿನವರೂ ಕೋರ್ಸ್ಗೆ ಸೇರಬಹುದು. ಯಾವುದೇ ಶುಲ್ಕ ಇಲ್ಲ. ಎಂಟು ವಾರದ ಈ ಶಿಬಿರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ಗಂಟೆ ತರಗತಿಗಳು ಇರುತ್ತವೆ. ಕಲಿಕಾ ಸಾಮಗ್ರಿಗಳನ್ನು ನೀಡಲಾಗುವುದು. ಪರ ಊರಿನಿಂದ ಬರುವವರಿಗೆ ಹಾಸ್ಟೆಲ್ ಸೌಲಭ್ಯ ಇದೆ. ತರಬೇತಿ ಮುಗಿದ ನಂತರ ಸರ್ಟಿಫಿಕೇಟ್ ನೀಡಲಾಗುವುದು. ಆನ್ಲೈನ್ನಲ್ಲೂ ಹೆಸರು ನೋಂದಾಯಿಸಬಹುದು.<br /> <br /> ಹೆಚ್ಚಿನ ಮಾಹಿತಿಗೆ ಮೊಬೈಲ್:9845654397 ಅಥವಾ <a href="http://www.playpossum.org">www.playpossum.org</a> ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>