<p><strong>ಚಿತ್ರದುರ್ಗ:</strong> ತೀರ್ಪು ಪ್ರಕಟಿಸುವುದು ವಿಳಂಬವಾಗುತ್ತಿರುವುದರಿಂದ ಬಹುತೇಕ ಪ್ರಕರಣಗಳು ಸಂವಿಧಾನಬಾಹಿರವಾಗಿ ನ್ಯಾಯಾಲಯದ ಹೊರಗೆ ತೀರ್ಮಾನವಾಗುತ್ತಿವೆ ಎಂದು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ವಿಷಾದ ವ್ಯಕ್ತಪಡಿಸಿದರು.<br /> <br /> ರಾಜ್ಯ ವಕೀಲರ ಪರಿಷತ್ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲರ ಭವನದಲ್ಲಿ ನಡೆದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಮನುಷ್ಯನ ಆಸೆ, ದುರಾಸೆಯಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ತೀರ್ಪು ಬರುವುದು ಸಹ ವಿಳಂಬವಾಗುತ್ತಿದೆ. ಶೇ 25ರಷ್ಟು ಪ್ರಕರಣಗಳು ಮಾತ್ರ ನ್ಯಾಯಾಲಯದ ಒಳಗೆ ಇತ್ಯರ್ಥವಾಗುತ್ತಿದ್ದು, ಉಳಿದಂತೆ ಶೇ 75 ರಷ್ಟು ಪ್ರಕರಣಗಳು ನ್ಯಾಯಾಲಯದ ಹೊರಗೆ ಇತ್ಯರ್ಥವಾಗುತ್ತಿವೆ.<br /> </p>.<p>ವಿಶೇಷವಾಗಿ ಪೊಲೀಸ್ ಠಾಣೆಗಳಲ್ಲಿ ಸಂವಿಧಾನ ಬಾಹಿರವಾಗಿ ಇತ್ಯರ್ಥವಾಗುತ್ತಿವೆ. ಈ ಬಗ್ಗೆ ನ್ಯಾಯಾಧೀಶರು ಹಾಗೂ ವಕೀಲರು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.<br /> <br /> ವಕೀಲರು ಕಾನೂನಿನ ತಿಳಿವಳಿಕೆ ಮತ್ತು ಭಾಷೆಯ ಮೇಲೆ ಹಿಡಿತ ಹೊಂದಿರಬೇಕು. ಆಗ ಮಾತ್ರ ಉತ್ತಮವಾಗಿ ವಾದ ಮಾಡುವ ಮೂಲಕ ಕಕ್ಷಿದಾರರಿಗೆ ಸೂಕ್ತ ನ್ಯಾಯ ಕೊಡಿಸಲು ಸಾಧ್ಯ. ವಕೀಲರು ಮತ್ತು ನ್ಯಾಯಾಧೀಶರಿಗೆ ಕಾನೂನಿನ ಬಗ್ಗೆ ಆಳವಾದ ಅಧ್ಯಯನ ಅಗತ್ಯವಿದೆ ಎಂದು ಸಲಹೆ ನೀಡಿದರು.<br /> <br /> ಭೋಪಾಲ್ ಅನಿಲ ದುರಂತದಲ್ಲಿ ವಕೀಲರು ಸರಿಯಾದ ರೀತಿಯಲ್ಲಿ ವಾದ ಮಂಡಿಸಿದ್ದರೆ ನೊಂದವರಿಗೆ ನ್ಯಾಯ ಒದಗಿಸಬಹುದಾಗಿತ್ತು. ಈ ದುರಂತ ಕುರಿತಂತೆ ಸಿಬಿಐ ಸಮರ್ಪಕವಾಗಿ ಆರೋಪಪಟ್ಟಿ ಸಲ್ಲಿಸದ ಕಾರಣ ತೀರ್ಪು ವ್ಯತಿರಿಕ್ತವಾಗಿ ಬಂತು.<br /> <br /> ಇಲ್ಲಿ ವಾದ ಮಂಡಿಸುವವರು ಸಹ ಬೇರೆ ಸೆಕ್ಷನ್ಗಳನ್ನು ಬಳಸಿದ್ದರೆ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿತ್ತು. ಸತ್ತವರನ್ನು ಬಿಟ್ಟು ದುರಂತದಿಂದ ಸಾಕಷ್ಟು ನಷ್ಟ ಅನುಭವಿಸಿ, ಅಂಗವಿಕಲರಾದವರ ಪರವಾಗಿ ಯಾದರೂ ವಾದ ಮಾಡಬೇಕಿತ್ತು.<br /> <br /> ಯುವ ವಕೀಲರಲ್ಲಿ ಸಿವಿಲ್ ಪ್ರಕರಣಗಳತ್ತ ಆಸಕ್ತಿ ಕಡಿಮೆಯಾಗುತ್ತಿದೆ. ಸಿವಿಲ್ ವ್ಯಾಜ್ಯಗಳು ಮುಖ್ಯವಾಗಿವೆ. ಸಿವಿಲ್ ಪ್ರಕರಣಗಳು ಜಾಸ್ತಿಯಾದಂತೆ `ಸಿವಿಲೈಜೇಷನ್' ಹೆಚ್ಚಾಗುತ್ತದೆ. ಕ್ರಿಮಿನಲ್ ಪ್ರಕರಣಗಳು ಹೆಚ್ಚಾದಂತೆ `ಕ್ರೈಂ' ಹೆಚ್ಚುತ್ತದೆ ಎನ್ನುವ ಮಾತೊಂದಿದೆ. ಈ ಹಿನ್ನೆಲೆಯಲ್ಲಿ ಸಿವಿಲ್ ದಾವೆ ಹೂಡಲು ಬರುವವರು ಜಗಳ ಮಾಡಲು ಬರುವವರು ಎಂದು ಭಾವಿಸದೆ, ಅವರ ಹಕ್ಕು ಕೇಳಲು ಬಂದಿದ್ದಾರೆ ಎನ್ನುವ ರೀತಿಯಲ್ಲಿ ಯೋಚಿಸಬೇಕು ಎಂದು ತಿಳಿಸಿದರು.<br /> <br /> ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರು ಮಾತನಾಡಿ, `ಕಾನೂನಿನ ಪಾಠಗಳನ್ನು ಸರಿಯಾಗಿ ಕಲಿತುಕೊಂಡರೆ, ನ್ಯಾಯಾಧೀಶರ ಎದುರು ವಕೀಲರು ಸಮರ್ಪಕವಾಗಿ ದಿಟ್ಟತನದಿಂದ ವಾದ ಮಂಡಿಸಬಹುದು. ಕೆಲ ವಿಚಾರಗಳಲ್ಲಿ ಕೆಲ ಕಾಯ್ದೆಗಳು ಸಾಕಷ್ಟು ಸಹಾಯಕ್ಕೆ ಬರುತ್ತವೆ. ಆದರೆ, ಅವು ನಮಗೆ ಗೊತ್ತಿಲ್ಲದಿದ್ದಾಗ ವಿಫಲರಾಗುತ್ತೇವೆ' ಎಂದರು.<br /> <br /> `ವಕೀಲರಿಗೆ `ಲಾ', `ಲಾಂಗ್ವೇಜ್', `ಲರ್ನಿಂಗ್' ಹಾಗೂ `ಲಿಸನಿಂಗ್' ಮುಖ್ಯವಾಗಿದ್ದು, ನಾವು ವಾದ ಮಂಡಿಸಿದ ನಂತರ ತೀರ್ಪು ಹಾಗೂ ತೀರ್ಪಿನ ಪ್ರತಿಯನ್ನು ನೋಡಿ, ವಾದ ಮಂಡಿಸಿದ ವಿಷಯಗಳು ತೀರ್ಪಿನಲ್ಲಿವೆಯೇ' ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದರು.<br /> <br /> ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನಿಪುರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ಶಿವುಯಾದವ್, ಕಾರ್ಯದರ್ಶಿ ವಿ.ಅಶೋಕ್, ಸಹ ಕಾರ್ಯದರ್ಶಿ ಇ.ಶಿವಕುಮಾರ್, ಜಿ.ಶ್ರೀಧರ ಮೂರ್ತಿ, ಪರಿಷತ್ ಸದಸ್ಯರಾದ ಸಿ.ಎಂ.ಜಗದೀಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ತೀರ್ಪು ಪ್ರಕಟಿಸುವುದು ವಿಳಂಬವಾಗುತ್ತಿರುವುದರಿಂದ ಬಹುತೇಕ ಪ್ರಕರಣಗಳು ಸಂವಿಧಾನಬಾಹಿರವಾಗಿ ನ್ಯಾಯಾಲಯದ ಹೊರಗೆ ತೀರ್ಮಾನವಾಗುತ್ತಿವೆ ಎಂದು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ವಿಷಾದ ವ್ಯಕ್ತಪಡಿಸಿದರು.<br /> <br /> ರಾಜ್ಯ ವಕೀಲರ ಪರಿಷತ್ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲರ ಭವನದಲ್ಲಿ ನಡೆದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಮನುಷ್ಯನ ಆಸೆ, ದುರಾಸೆಯಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ತೀರ್ಪು ಬರುವುದು ಸಹ ವಿಳಂಬವಾಗುತ್ತಿದೆ. ಶೇ 25ರಷ್ಟು ಪ್ರಕರಣಗಳು ಮಾತ್ರ ನ್ಯಾಯಾಲಯದ ಒಳಗೆ ಇತ್ಯರ್ಥವಾಗುತ್ತಿದ್ದು, ಉಳಿದಂತೆ ಶೇ 75 ರಷ್ಟು ಪ್ರಕರಣಗಳು ನ್ಯಾಯಾಲಯದ ಹೊರಗೆ ಇತ್ಯರ್ಥವಾಗುತ್ತಿವೆ.<br /> </p>.<p>ವಿಶೇಷವಾಗಿ ಪೊಲೀಸ್ ಠಾಣೆಗಳಲ್ಲಿ ಸಂವಿಧಾನ ಬಾಹಿರವಾಗಿ ಇತ್ಯರ್ಥವಾಗುತ್ತಿವೆ. ಈ ಬಗ್ಗೆ ನ್ಯಾಯಾಧೀಶರು ಹಾಗೂ ವಕೀಲರು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.<br /> <br /> ವಕೀಲರು ಕಾನೂನಿನ ತಿಳಿವಳಿಕೆ ಮತ್ತು ಭಾಷೆಯ ಮೇಲೆ ಹಿಡಿತ ಹೊಂದಿರಬೇಕು. ಆಗ ಮಾತ್ರ ಉತ್ತಮವಾಗಿ ವಾದ ಮಾಡುವ ಮೂಲಕ ಕಕ್ಷಿದಾರರಿಗೆ ಸೂಕ್ತ ನ್ಯಾಯ ಕೊಡಿಸಲು ಸಾಧ್ಯ. ವಕೀಲರು ಮತ್ತು ನ್ಯಾಯಾಧೀಶರಿಗೆ ಕಾನೂನಿನ ಬಗ್ಗೆ ಆಳವಾದ ಅಧ್ಯಯನ ಅಗತ್ಯವಿದೆ ಎಂದು ಸಲಹೆ ನೀಡಿದರು.<br /> <br /> ಭೋಪಾಲ್ ಅನಿಲ ದುರಂತದಲ್ಲಿ ವಕೀಲರು ಸರಿಯಾದ ರೀತಿಯಲ್ಲಿ ವಾದ ಮಂಡಿಸಿದ್ದರೆ ನೊಂದವರಿಗೆ ನ್ಯಾಯ ಒದಗಿಸಬಹುದಾಗಿತ್ತು. ಈ ದುರಂತ ಕುರಿತಂತೆ ಸಿಬಿಐ ಸಮರ್ಪಕವಾಗಿ ಆರೋಪಪಟ್ಟಿ ಸಲ್ಲಿಸದ ಕಾರಣ ತೀರ್ಪು ವ್ಯತಿರಿಕ್ತವಾಗಿ ಬಂತು.<br /> <br /> ಇಲ್ಲಿ ವಾದ ಮಂಡಿಸುವವರು ಸಹ ಬೇರೆ ಸೆಕ್ಷನ್ಗಳನ್ನು ಬಳಸಿದ್ದರೆ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿತ್ತು. ಸತ್ತವರನ್ನು ಬಿಟ್ಟು ದುರಂತದಿಂದ ಸಾಕಷ್ಟು ನಷ್ಟ ಅನುಭವಿಸಿ, ಅಂಗವಿಕಲರಾದವರ ಪರವಾಗಿ ಯಾದರೂ ವಾದ ಮಾಡಬೇಕಿತ್ತು.<br /> <br /> ಯುವ ವಕೀಲರಲ್ಲಿ ಸಿವಿಲ್ ಪ್ರಕರಣಗಳತ್ತ ಆಸಕ್ತಿ ಕಡಿಮೆಯಾಗುತ್ತಿದೆ. ಸಿವಿಲ್ ವ್ಯಾಜ್ಯಗಳು ಮುಖ್ಯವಾಗಿವೆ. ಸಿವಿಲ್ ಪ್ರಕರಣಗಳು ಜಾಸ್ತಿಯಾದಂತೆ `ಸಿವಿಲೈಜೇಷನ್' ಹೆಚ್ಚಾಗುತ್ತದೆ. ಕ್ರಿಮಿನಲ್ ಪ್ರಕರಣಗಳು ಹೆಚ್ಚಾದಂತೆ `ಕ್ರೈಂ' ಹೆಚ್ಚುತ್ತದೆ ಎನ್ನುವ ಮಾತೊಂದಿದೆ. ಈ ಹಿನ್ನೆಲೆಯಲ್ಲಿ ಸಿವಿಲ್ ದಾವೆ ಹೂಡಲು ಬರುವವರು ಜಗಳ ಮಾಡಲು ಬರುವವರು ಎಂದು ಭಾವಿಸದೆ, ಅವರ ಹಕ್ಕು ಕೇಳಲು ಬಂದಿದ್ದಾರೆ ಎನ್ನುವ ರೀತಿಯಲ್ಲಿ ಯೋಚಿಸಬೇಕು ಎಂದು ತಿಳಿಸಿದರು.<br /> <br /> ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರು ಮಾತನಾಡಿ, `ಕಾನೂನಿನ ಪಾಠಗಳನ್ನು ಸರಿಯಾಗಿ ಕಲಿತುಕೊಂಡರೆ, ನ್ಯಾಯಾಧೀಶರ ಎದುರು ವಕೀಲರು ಸಮರ್ಪಕವಾಗಿ ದಿಟ್ಟತನದಿಂದ ವಾದ ಮಂಡಿಸಬಹುದು. ಕೆಲ ವಿಚಾರಗಳಲ್ಲಿ ಕೆಲ ಕಾಯ್ದೆಗಳು ಸಾಕಷ್ಟು ಸಹಾಯಕ್ಕೆ ಬರುತ್ತವೆ. ಆದರೆ, ಅವು ನಮಗೆ ಗೊತ್ತಿಲ್ಲದಿದ್ದಾಗ ವಿಫಲರಾಗುತ್ತೇವೆ' ಎಂದರು.<br /> <br /> `ವಕೀಲರಿಗೆ `ಲಾ', `ಲಾಂಗ್ವೇಜ್', `ಲರ್ನಿಂಗ್' ಹಾಗೂ `ಲಿಸನಿಂಗ್' ಮುಖ್ಯವಾಗಿದ್ದು, ನಾವು ವಾದ ಮಂಡಿಸಿದ ನಂತರ ತೀರ್ಪು ಹಾಗೂ ತೀರ್ಪಿನ ಪ್ರತಿಯನ್ನು ನೋಡಿ, ವಾದ ಮಂಡಿಸಿದ ವಿಷಯಗಳು ತೀರ್ಪಿನಲ್ಲಿವೆಯೇ' ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದರು.<br /> <br /> ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನಿಪುರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ಶಿವುಯಾದವ್, ಕಾರ್ಯದರ್ಶಿ ವಿ.ಅಶೋಕ್, ಸಹ ಕಾರ್ಯದರ್ಶಿ ಇ.ಶಿವಕುಮಾರ್, ಜಿ.ಶ್ರೀಧರ ಮೂರ್ತಿ, ಪರಿಷತ್ ಸದಸ್ಯರಾದ ಸಿ.ಎಂ.ಜಗದೀಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>