<p>ನಿವೇಶನದ ವಿಷಯದಲ್ಲಿ ಬಂದ ಟೀಕೆಗಳಿಂದ ಮನನೊಂದ ನ್ಯಾ. ಶಿವರಾಜ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ. ಅವರು ಹೊಂದಿದ್ದ ನಿವೇಶನಗಳ ನಿಯಮ ಕುರಿತ ಸರಿ ತಪ್ಪುಗಳ ಚರ್ಚೆ ಏನೇ ಇರಲಿ, ನ್ಯಾಯಾಂಗದ ಸೇವೆಯಲ್ಲಿರುವವರಿಗೆ ಒಂದು ಮೇಲ್ಪಂಕ್ತಿ ಹಾಕುವುದರ ಜೊತೆಗೆ ಸ್ಪಷ್ಟ ಸಂದೇಶವನ್ನೂ ಕಳುಹಿಸಿದ್ದಾರೆ.<br /> <br /> ಅಧಿಕಾರಕ್ಕೆ ಅಂಟಿ ಕೂರಬಯಸದೇ, ನಿರ್ಗಮಿಸಿರುವುದು ಶ್ಲಾಘನೀಯವಾದರೂ, ಇಂತಹ ಅತೀ ಸಣ್ಣ ಸಣ್ಣ ಸಂಗತಿಗಳನ್ನೂ ವಿಶ್ಲೇಷಿಸುತ್ತ ಹೋದರೆ, ಶುದ್ಧಹಸ್ತರೆನಿಸಿಕೊಂಡವರನ್ನು ತರುವುದೆಲ್ಲಿಂದ? <br /> <br /> ಅವರ ಸುದೀರ್ಘ ಸೇವಾವಧಿಯಲ್ಲಿ ಭ್ರಷ್ಟರಾಗಿದ್ದ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ. ಒಟ್ಟಾರೆ ಈ ಬೆಳವಣಿಗೆಗಳು ಭ್ರಷ್ಟರನ್ನು ವಿರೋಧಿಸುತ್ತಿವೆಯೋ, ಭ್ರಷ್ಟಾಚಾರವನ್ನು ನಿಯಂತ್ರಿಸಬಯಸುವವರನ್ನೇ ವಿರೋಧಿಸುತ್ತಿವೆಯೋ ತಿಳಿಯದಾಗಿದೆ. <br /> <br /> ಆದರೆ ಒಂದಂತೂ ಸತ್ಯ, ಮುಂದಿನ ದಿನಗಳಲ್ಲಿ ಅಪರಂಜಿ ಬಂಗಾರದಂತಹ ನಡೆನುಡಿಗಳನ್ನು ನ್ಯಾಯಾಧೀಶರಾಗಬಯಸುವವರು ಹೊಂದಲೇಬೇಕಾದ ಅನಿವಾರ್ಯತೆಯನ್ನಂತೂ ನ್ಯಾ. ಶಿವರಾಜ ಪಾಟೀಲ ಅವರು ಸೃಷ್ಟಿಸಿ ನಿರ್ಗಮಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿವೇಶನದ ವಿಷಯದಲ್ಲಿ ಬಂದ ಟೀಕೆಗಳಿಂದ ಮನನೊಂದ ನ್ಯಾ. ಶಿವರಾಜ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ. ಅವರು ಹೊಂದಿದ್ದ ನಿವೇಶನಗಳ ನಿಯಮ ಕುರಿತ ಸರಿ ತಪ್ಪುಗಳ ಚರ್ಚೆ ಏನೇ ಇರಲಿ, ನ್ಯಾಯಾಂಗದ ಸೇವೆಯಲ್ಲಿರುವವರಿಗೆ ಒಂದು ಮೇಲ್ಪಂಕ್ತಿ ಹಾಕುವುದರ ಜೊತೆಗೆ ಸ್ಪಷ್ಟ ಸಂದೇಶವನ್ನೂ ಕಳುಹಿಸಿದ್ದಾರೆ.<br /> <br /> ಅಧಿಕಾರಕ್ಕೆ ಅಂಟಿ ಕೂರಬಯಸದೇ, ನಿರ್ಗಮಿಸಿರುವುದು ಶ್ಲಾಘನೀಯವಾದರೂ, ಇಂತಹ ಅತೀ ಸಣ್ಣ ಸಣ್ಣ ಸಂಗತಿಗಳನ್ನೂ ವಿಶ್ಲೇಷಿಸುತ್ತ ಹೋದರೆ, ಶುದ್ಧಹಸ್ತರೆನಿಸಿಕೊಂಡವರನ್ನು ತರುವುದೆಲ್ಲಿಂದ? <br /> <br /> ಅವರ ಸುದೀರ್ಘ ಸೇವಾವಧಿಯಲ್ಲಿ ಭ್ರಷ್ಟರಾಗಿದ್ದ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ. ಒಟ್ಟಾರೆ ಈ ಬೆಳವಣಿಗೆಗಳು ಭ್ರಷ್ಟರನ್ನು ವಿರೋಧಿಸುತ್ತಿವೆಯೋ, ಭ್ರಷ್ಟಾಚಾರವನ್ನು ನಿಯಂತ್ರಿಸಬಯಸುವವರನ್ನೇ ವಿರೋಧಿಸುತ್ತಿವೆಯೋ ತಿಳಿಯದಾಗಿದೆ. <br /> <br /> ಆದರೆ ಒಂದಂತೂ ಸತ್ಯ, ಮುಂದಿನ ದಿನಗಳಲ್ಲಿ ಅಪರಂಜಿ ಬಂಗಾರದಂತಹ ನಡೆನುಡಿಗಳನ್ನು ನ್ಯಾಯಾಧೀಶರಾಗಬಯಸುವವರು ಹೊಂದಲೇಬೇಕಾದ ಅನಿವಾರ್ಯತೆಯನ್ನಂತೂ ನ್ಯಾ. ಶಿವರಾಜ ಪಾಟೀಲ ಅವರು ಸೃಷ್ಟಿಸಿ ನಿರ್ಗಮಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>