<p><strong>ರೋಣ: </strong>ನ್ಯಾಯಮೂರ್ತಿ ಎ.ಜಿ. ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ಮಾದಿಗ ಹಾಗೂ ಚಲವಾದಿ ಸಮಾಜದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.<br /> <br /> ಆರ್ಥಿಕವಾಗಿ ಸದೃಢವಾಗಿರುವ ಸ್ಪರ್ಶ ಜನಾಂಗದವರು ಅಸ್ಪೃಶ್ಯ ಜನಾಂಗದ ಸೌಲಭ್ಯಗಳನ್ನು ಬಾಚಿಕೊಳ್ಳುತ್ತಿ ರುವುದರಿಂದ ಅಸ್ಪೃಶ್ಯರು ಸರ್ಕಾರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಡೆಯಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. <br /> <br /> ಸಚಿವ ಕಳಕಪ್ಪ ಬಂಡಿ ಅವರು ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅರವಿಂದ ಲಿಂಬಾವಳಿ ಹಾಗೂ ಶಿವರಾಜ ತಂಗಡಗಿ ಅವರು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.<br /> <br /> ರೋಣದ ಮುಲ್ಲಾನಭಾವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ನಂತರ ತಹಶೀಲ್ದಾರ ಕಚೇರಿಗೆ ಆಗಮಿಸಿದರು.ಮುಖಂಡ ದೇವೇಂದ್ರಪ್ಪ ಕೊಳಪ್ಪನವರ ಮಾತನಾಡಿ, ದೇಶದಲ್ಲಿ 2753 ಜಾತಿಗಳಿದ್ದು ರಾಜ್ಯದಲ್ಲಿ 333 ಜಾತಿಗಳ ಪೈಕಿ 10 ಜಾತಿಗಳು ಮಾದಿಗ ಹಾಗೂ ಚಲವಾದಿ ಜನಾಂಗಕ್ಕೆ ಸೇರಿದವರು ಎಂದು ತಿಳಿಸಿದರು.<br /> <br /> ಸಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಾದಿಗ ಹಾಗೂ ಚಲವಾದಿ ಸಮಾಜದವರ ಸ್ಥಿತಿ ಇಂದಿಗೂ ಗಂಭೀರವಾಗಿದೆ. ದಲಿತ ಕೇರಿಗಳು ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಯುವ ಮುಖಂಡ ನಿಂಗಬಸಪ್ಪ ದೊಡ್ಡಮನಿ ಮಾತನಾಡಿ. ಈ ಎರಡು ಜನಾಂಗಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಅನ್ಯಾಯವನ್ನು ಸರಿಪಡಿಸಲು ಸುಮಾರು 8 ವರ್ಷಗಳ ಕಾಲ ನಿವೃತ್ತ ನ್ಯಾಯಮೂರ್ತಿಗಳು ಪ್ರತಿಯೊಂದು ಕುಟುಂಬದ ಶೈಕ್ಷಣಿಕ. ಆರ್ಥಿಕ. ಸಾಮಾಜಿಕ ಹಾಗೂ ರಾಜಕೀಯ ಬಗ್ಗೆ ಸಮೀಕ್ಷೆ ಮಾಡಿದ್ದು. ಸರಕಾರ ಈ ಕೂಡಲೆ ಎ.ಜಿ. ಸದಾಶಿವ ವರದಿಯನ್ನು ಒಪ್ಪಿಕೊಂಡು ಜಾರಿಗೆ ತರಬೆಕು ಎಂದು ಆಗ್ರಹಿಸಿದರು.<br /> <br /> ಮುಖಂಡ ಮಂಜುನಾಥ ಹಾಳಕೇರಿ ಮಾತನಾಡಿ. ಪರಿಸಿಷ್ಟ ಜಾತಿಯಲ್ಲಿ ಇತ್ತೀಚೆಗೆ ಸೇರಿಸಲಾದ ಅಸ್ಪೃಶ್ಯರಲ್ಲದ ಲಂಬಾಣಿ, ಬಂಜಾರ, ಭೋವಿ ಜಾತಿಗಳನ್ನು ಈ ಕೂಡಲೆ ತೆಗೆದು ಹಾಕಬೇಕು. ಈ ಜಾತಿಗಳು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದು, ಪರಿಶಿಷ್ಟರ ಬಹುತೇಕ ಸೌಲಭ್ಯಗಳನ್ನು ಅವರೇ ಬಾಚಿಕೊಳ್ಳುತ್ತಿದ್ದಾರೆ. ಎಲ್ಲ ಬ್ಯಾಕ್ಲಾಗ್ ಹುದ್ದೆಗಳಲ್ಲಿ ಲಂಬಾಣಿಗಳೇ ತುಂಬಿಕೊಂಡಿದ್ದಾರೆ. ಇದರಿಂದ ಅಸ್ಪೃಷ್ಯ ಜಾತಿಯವರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.<br /> <br /> ಪ್ರಕಾಶ ಹೊಸಳ್ಳಿ. ಮೌನೇಶ ಹಾದಿಮನಿ, ಸೋಮನಾಥ ಚಲವಾದಿ,ವೆಂಕಟೇಶ ದ್ವಾಸಲ್ ,ಮಲ್ಲು ಮಾದರ, ವಸಂತ ಚಲವಾದಿ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ತಹಶೀಲ್ದಾರ ಎ.ಟಿ.ನರೇಗಲ್ಲ್ ಮುಖಾಂತರ ರಾಜ್ಯಪಾಲರು ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಣ: </strong>ನ್ಯಾಯಮೂರ್ತಿ ಎ.ಜಿ. ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ಮಾದಿಗ ಹಾಗೂ ಚಲವಾದಿ ಸಮಾಜದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.<br /> <br /> ಆರ್ಥಿಕವಾಗಿ ಸದೃಢವಾಗಿರುವ ಸ್ಪರ್ಶ ಜನಾಂಗದವರು ಅಸ್ಪೃಶ್ಯ ಜನಾಂಗದ ಸೌಲಭ್ಯಗಳನ್ನು ಬಾಚಿಕೊಳ್ಳುತ್ತಿ ರುವುದರಿಂದ ಅಸ್ಪೃಶ್ಯರು ಸರ್ಕಾರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಡೆಯಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. <br /> <br /> ಸಚಿವ ಕಳಕಪ್ಪ ಬಂಡಿ ಅವರು ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅರವಿಂದ ಲಿಂಬಾವಳಿ ಹಾಗೂ ಶಿವರಾಜ ತಂಗಡಗಿ ಅವರು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.<br /> <br /> ರೋಣದ ಮುಲ್ಲಾನಭಾವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ನಂತರ ತಹಶೀಲ್ದಾರ ಕಚೇರಿಗೆ ಆಗಮಿಸಿದರು.ಮುಖಂಡ ದೇವೇಂದ್ರಪ್ಪ ಕೊಳಪ್ಪನವರ ಮಾತನಾಡಿ, ದೇಶದಲ್ಲಿ 2753 ಜಾತಿಗಳಿದ್ದು ರಾಜ್ಯದಲ್ಲಿ 333 ಜಾತಿಗಳ ಪೈಕಿ 10 ಜಾತಿಗಳು ಮಾದಿಗ ಹಾಗೂ ಚಲವಾದಿ ಜನಾಂಗಕ್ಕೆ ಸೇರಿದವರು ಎಂದು ತಿಳಿಸಿದರು.<br /> <br /> ಸಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಾದಿಗ ಹಾಗೂ ಚಲವಾದಿ ಸಮಾಜದವರ ಸ್ಥಿತಿ ಇಂದಿಗೂ ಗಂಭೀರವಾಗಿದೆ. ದಲಿತ ಕೇರಿಗಳು ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಯುವ ಮುಖಂಡ ನಿಂಗಬಸಪ್ಪ ದೊಡ್ಡಮನಿ ಮಾತನಾಡಿ. ಈ ಎರಡು ಜನಾಂಗಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಅನ್ಯಾಯವನ್ನು ಸರಿಪಡಿಸಲು ಸುಮಾರು 8 ವರ್ಷಗಳ ಕಾಲ ನಿವೃತ್ತ ನ್ಯಾಯಮೂರ್ತಿಗಳು ಪ್ರತಿಯೊಂದು ಕುಟುಂಬದ ಶೈಕ್ಷಣಿಕ. ಆರ್ಥಿಕ. ಸಾಮಾಜಿಕ ಹಾಗೂ ರಾಜಕೀಯ ಬಗ್ಗೆ ಸಮೀಕ್ಷೆ ಮಾಡಿದ್ದು. ಸರಕಾರ ಈ ಕೂಡಲೆ ಎ.ಜಿ. ಸದಾಶಿವ ವರದಿಯನ್ನು ಒಪ್ಪಿಕೊಂಡು ಜಾರಿಗೆ ತರಬೆಕು ಎಂದು ಆಗ್ರಹಿಸಿದರು.<br /> <br /> ಮುಖಂಡ ಮಂಜುನಾಥ ಹಾಳಕೇರಿ ಮಾತನಾಡಿ. ಪರಿಸಿಷ್ಟ ಜಾತಿಯಲ್ಲಿ ಇತ್ತೀಚೆಗೆ ಸೇರಿಸಲಾದ ಅಸ್ಪೃಶ್ಯರಲ್ಲದ ಲಂಬಾಣಿ, ಬಂಜಾರ, ಭೋವಿ ಜಾತಿಗಳನ್ನು ಈ ಕೂಡಲೆ ತೆಗೆದು ಹಾಕಬೇಕು. ಈ ಜಾತಿಗಳು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದು, ಪರಿಶಿಷ್ಟರ ಬಹುತೇಕ ಸೌಲಭ್ಯಗಳನ್ನು ಅವರೇ ಬಾಚಿಕೊಳ್ಳುತ್ತಿದ್ದಾರೆ. ಎಲ್ಲ ಬ್ಯಾಕ್ಲಾಗ್ ಹುದ್ದೆಗಳಲ್ಲಿ ಲಂಬಾಣಿಗಳೇ ತುಂಬಿಕೊಂಡಿದ್ದಾರೆ. ಇದರಿಂದ ಅಸ್ಪೃಷ್ಯ ಜಾತಿಯವರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.<br /> <br /> ಪ್ರಕಾಶ ಹೊಸಳ್ಳಿ. ಮೌನೇಶ ಹಾದಿಮನಿ, ಸೋಮನಾಥ ಚಲವಾದಿ,ವೆಂಕಟೇಶ ದ್ವಾಸಲ್ ,ಮಲ್ಲು ಮಾದರ, ವಸಂತ ಚಲವಾದಿ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ತಹಶೀಲ್ದಾರ ಎ.ಟಿ.ನರೇಗಲ್ಲ್ ಮುಖಾಂತರ ರಾಜ್ಯಪಾಲರು ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>