<p>ನಾಗಮಂಗಲ: ವಿಶ್ವ ಪರಿಸರ ದಿನದಂದೇ ತಾಲ್ಲೂಕಿನ ದೇವಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಬೃಹತ್ ಮರಗಳನ್ನು ಹನನ ಮಾಡಿ ಧರೆಗೆ ಉರುಳಿಸಲಾಗಿದೆ <br /> <br /> ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈ ಶಾಲೆ ವತಿಯಿಂದ ದೇವಲಾಪುರದ ಬೀದಿಗಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ನಡೆಸಲಾಗಿತ್ತು. ಬುಧವಾರ ಸಂಜೆ ಮತ್ತು ಗುರುವಾರ ಶಾಲೆಯ ಆವರಭಣದಲ್ಲಿ ನಾಲ್ಕು ಬೃಹತ್ ವೃಕ್ಷಗಳನ್ನು ಗುತ್ತಿಗೆದಾರರು ಕಡಿದು ಧರೆಗುರುಳಿಸಿದ್ದು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.<br /> <br /> ಮರಗಳನ್ನು ಏಕೆ ಕಡಿಯುತ್ತಿದ್ದೀರಿ ಎಂದು ಗ್ರಾಮಸ್ಥರು ಗುತ್ತಿಗೆದಾರರನ್ನು ಪ್ರಶ್ನಿಸಿದಾಗ, ಶಾಲೆಯ ಮುಖ್ಯ ಶಿಕ್ಷಕಿ ಮೆಹಜಬೀನ್ ಅಖ್ತರ್ ಅನುಮತಿಯ ಮೇರೆಗೆ ಮರಗಳನ್ನು ಕಡಿಯುತ್ತಿರುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಈ ಆವರಣದಲ್ಲಿರುವ 11 ಮರಗಳನ್ನು ಹರಾಜಿನಲ್ಲಿ ರೂ. 11 ಸಾವಿರಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.<br /> <br /> ಮುಖ್ಯ ಶಿಕ್ಷಕಿ, ಎಸ್ಡಿಎಂಸಿ ಘಟಕ ಮರಗಳನ್ನು ಕಡಿಸಲು ಅನುಮತಿ ನೀಡಿರುವುದು ಅನುಮಾನಗಳಿಗೆ ಎಡೆಮಾಡಿದೆ. ಶಾಲೆ ಆವರಣದಲ್ಲಿನ ಮರಗಳನ್ನು ಕಡಿಯಲು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಹರಾಜು ನಡೆಸಲು ಯಾವುದೇ ಪ್ರಕಟಣೆಯನ್ನೂ ನೀಡಿಲ್ಲ. ಪ್ರಕಟಣೆ ಹೊರಡಿಸಿದ್ದರೆ ಅಂದೇ ಈ ಪ್ರಕ್ರಿಯೆಯನ್ನು ನಿಲ್ಲಿಸುತ್ತಿದ್ದೆವು. ಶಾಲೆ ಆವರಣದ ಮರಗಳನ್ನು ಕತ್ತರಿಸಲು ಅನುಮತಿ ನೀಡಿರುವ ಮುಖ್ಯ ಶಿಕ್ಷಕಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.<br /> <br /> ಗ್ರಾಮ ಪಂಚಾಯಿತಿ ಸದಸ್ಯ ಡಿ.ಕೆ.ಸುರೇಶ್, ಕೃಷ್ಣಮೂರ್ತಿ, ಲೋಕೇಶ್, ಡಿ.ಎಂ.ಜಗದೀಶ್ ಅವರು ಮರಗಳನ್ನು ಕತ್ತರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಮರಗಳು ನೆರಳು ಉತ್ತಮ ಗಾಳಿ ೀಡುತ್ತಿದ್ದವು. ಮಕ್ಕಳ ಮಧ್ಯಾಹ್ನದ ಊಟ ಮರದ ನೆರಳಿನಲ್ಲಿಯೇ ಆಗುತ್ತಿತ್ತು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಗಮಂಗಲ: ವಿಶ್ವ ಪರಿಸರ ದಿನದಂದೇ ತಾಲ್ಲೂಕಿನ ದೇವಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಬೃಹತ್ ಮರಗಳನ್ನು ಹನನ ಮಾಡಿ ಧರೆಗೆ ಉರುಳಿಸಲಾಗಿದೆ <br /> <br /> ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈ ಶಾಲೆ ವತಿಯಿಂದ ದೇವಲಾಪುರದ ಬೀದಿಗಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ನಡೆಸಲಾಗಿತ್ತು. ಬುಧವಾರ ಸಂಜೆ ಮತ್ತು ಗುರುವಾರ ಶಾಲೆಯ ಆವರಭಣದಲ್ಲಿ ನಾಲ್ಕು ಬೃಹತ್ ವೃಕ್ಷಗಳನ್ನು ಗುತ್ತಿಗೆದಾರರು ಕಡಿದು ಧರೆಗುರುಳಿಸಿದ್ದು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.<br /> <br /> ಮರಗಳನ್ನು ಏಕೆ ಕಡಿಯುತ್ತಿದ್ದೀರಿ ಎಂದು ಗ್ರಾಮಸ್ಥರು ಗುತ್ತಿಗೆದಾರರನ್ನು ಪ್ರಶ್ನಿಸಿದಾಗ, ಶಾಲೆಯ ಮುಖ್ಯ ಶಿಕ್ಷಕಿ ಮೆಹಜಬೀನ್ ಅಖ್ತರ್ ಅನುಮತಿಯ ಮೇರೆಗೆ ಮರಗಳನ್ನು ಕಡಿಯುತ್ತಿರುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಈ ಆವರಣದಲ್ಲಿರುವ 11 ಮರಗಳನ್ನು ಹರಾಜಿನಲ್ಲಿ ರೂ. 11 ಸಾವಿರಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.<br /> <br /> ಮುಖ್ಯ ಶಿಕ್ಷಕಿ, ಎಸ್ಡಿಎಂಸಿ ಘಟಕ ಮರಗಳನ್ನು ಕಡಿಸಲು ಅನುಮತಿ ನೀಡಿರುವುದು ಅನುಮಾನಗಳಿಗೆ ಎಡೆಮಾಡಿದೆ. ಶಾಲೆ ಆವರಣದಲ್ಲಿನ ಮರಗಳನ್ನು ಕಡಿಯಲು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಹರಾಜು ನಡೆಸಲು ಯಾವುದೇ ಪ್ರಕಟಣೆಯನ್ನೂ ನೀಡಿಲ್ಲ. ಪ್ರಕಟಣೆ ಹೊರಡಿಸಿದ್ದರೆ ಅಂದೇ ಈ ಪ್ರಕ್ರಿಯೆಯನ್ನು ನಿಲ್ಲಿಸುತ್ತಿದ್ದೆವು. ಶಾಲೆ ಆವರಣದ ಮರಗಳನ್ನು ಕತ್ತರಿಸಲು ಅನುಮತಿ ನೀಡಿರುವ ಮುಖ್ಯ ಶಿಕ್ಷಕಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.<br /> <br /> ಗ್ರಾಮ ಪಂಚಾಯಿತಿ ಸದಸ್ಯ ಡಿ.ಕೆ.ಸುರೇಶ್, ಕೃಷ್ಣಮೂರ್ತಿ, ಲೋಕೇಶ್, ಡಿ.ಎಂ.ಜಗದೀಶ್ ಅವರು ಮರಗಳನ್ನು ಕತ್ತರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಮರಗಳು ನೆರಳು ಉತ್ತಮ ಗಾಳಿ ೀಡುತ್ತಿದ್ದವು. ಮಕ್ಕಳ ಮಧ್ಯಾಹ್ನದ ಊಟ ಮರದ ನೆರಳಿನಲ್ಲಿಯೇ ಆಗುತ್ತಿತ್ತು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>