<p><span style="font-size: 26px;"><strong>ಹಾಸನ:</strong> ಪರೀಕ್ಷೆಗಿಂತ ಮೂರು ದಿನ ಮೊದಲು ಕಾಲೇಜಿನ ಅರೆಕಾಲಿಕ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಕಳುಹಿಸಿಕೊಟ್ಟಿರುವ ಪ್ರಕರಣ ಇಲ್ಲಿನ ಮಲೆನಾಡು ಎಂಜಿನಿ ಯರಿಂಗ್ ಕಾಲೇಜಿನಲ್ಲಿ ನಡೆದಿರು ವುದು ತಡವಾಗಿ ಬೆಳಕಿಗೆ ಬಂದಿದೆ.</span><br /> <br /> ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಉಪನ್ಯಾಸಕರು ಫೇಸ್ಬುಕ್ ಮೂಲಕ ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಕಳುಹಿಸಿದ್ದು ಅಚ್ಚರಿಗೆ ಕಾರಣವಾಗಿದೆ.<br /> <br /> ಕಾಲೇಜಿನ ಎಂಟನೇ ಸೆಮಿಸ್ಟರ್ಗೆ 50 ಅಂಕಗಳ ಆಂತರಿಕ ಪರೀಕ್ಷೆ (ಇಂಟರ್ನಲ್ಸ್) ಏಪ್ರಿಲ್ 25ರಂದು ನಡೆದಿತ್ತು. ಇಲ್ಲಿ `ಡಿಸ್ಟ್ರಿಬ್ಯೂಟೆಡ್ ಆಪರೇಟಿಂಗ್ ಸಿಸ್ಟಮ್' ವಿಷಯ ಕುರಿತ ಪ್ರಶ್ನೆಪತ್ರಿಕೆಯನ್ನು ವಿಭಾಗದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಲೋಕನಾ ಎಂಬುವರು ಫೇಸ್ಬುಕ್ ಮೂಲಕ ಕಾಶ್ಮೀರ ಮೂಲದ ವಿದ್ಯಾರ್ಥಿ ದೀಕ್ಷಿತ್ ರಾಜ್ದಾನ್ ಎಂಬುವವರಿಗೆ ಕಳುಹಿಸಿ ಕೊಟ್ಟಿದ್ದರು.<br /> <br /> ಪರೀಕ್ಷೆಗಿಂತ ಮೂರು ದಿನ ಮುಂಚಿತವಾಗಿ ಏ. 22ರಂದು ಈ ಪ್ರಕರಣ ನಡೆದಿರುವುದು ತಡವಾಗಿ ಕೆಲವು ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ 'ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ' ಎಂದು ವಿದ್ಯಾರ್ಥಿಗಳು ದೂರಿದ್ದಾರೆ.<br /> <br /> ಲೋಕನಾ ಇದೇ ಕಾಲೇಜಿನ ಕೊನೇ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದು, ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಇಲ್ಲಿಯೇ ಉಪನ್ಯಾಸಕರಾಗಿ ಸೇರಿದ್ದರು.<br /> ಎಂಜಿನಿಯರಿಂಗ್ ಕಾಲೇಜಿನ ಪ್ರಶ್ನೆಪತ್ರಿಕೆ ತಯಾರಿಸಬೇಕಾದರೆ ಉಪನ್ಯಾಸಕರಾಗಿ ಕನಿಷ್ಠ ಐದು ವರ್ಷ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾ ಪನಕ್ಕೆ ಎರಡು ವರ್ಷಗಳ ಅನುಭವ ಇರಬೇಕು ಎಂಬ ನಿಯಮವಿದೆ. ಆದರೆ, 5 ತಿಂಗಳ ಹಿಂದೆಯಷ್ಟೇ ಕಾಲೇಜಿಗೆ ಸೇರಿದ್ದ ಅರೆಕಾಲಿಕ ಉಪನ್ಯಾಸಕರು (ಇದೇ ಕಾಲೇಜಿನ ಹಿರಿಯ ಉಪನ್ಯಾಸಕರೊಬ್ಬರ ಪುತ್ರ) ಪ್ರಶ್ನೆಪತ್ರಿಕೆ ತಯಾರಿಸಿದ್ದರು. ಲೋಕನಾ ಎರಡು ಮೂರು ತಿಂಗಳ ಹಿಂದೆಯಷ್ಟೇ ಇಲ್ಲಿ ಸೇರಿದ್ದರು.<br /> <br /> `ತಾತ್ಕಾಲಿಕ ಉಪನ್ಯಾಸಕರಿಗೆ ಈ ಕೆಲಸಗಳಿಗೆ ಹಣ ಕೊಡಬೇಕಾಗುವುದಿಲ್ಲ. ಅದಕ್ಕಾಗಿ ಕಾಲೇಜಿ ನವರು ಅವರಿಂದಲೇ ಈ ಕೆಲಸ ಮಾಡಿಸುತ್ತಾರೆ' ಎಂದು ಹೆಸರು ತಿಳಿಸಲು ಇಚ್ಛಿಸದ ಉಪನ್ಯಾಸಕರು ತಿಳಿಸಿದ್ದಾರೆ.<br /> <br /> ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರಾಂಶುಪಾಲ ಸತ್ಯ ನಾರಾಯಣ, `ವಿಚಾರ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಒಂದೆರಡು ದಿನಗಳಲ್ಲಿ ಅವರೇ ಉತ್ತರ ನೀಡುತ್ತಾರೆ' ಎಂದಿದ್ದಾರೆ. ಸರ್ಕಾರದ ಮಾಜಿ ಅಡ್ವೋಕೆಟ್ ಜನರಲ್ ಅಶೋಕ ಹಾರನಹಳ್ಳಿ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದಾರೆ.<br /> <br /> ಕಳೆದ ಕೆಲವು ತಿಂಗಳಿಂದ ಕಾಲೇಜಿನ ಬಗ್ಗೆ ಹಲವು ಆರೋಪಗಳು ಬರುತ್ತಿದ್ದು, ಹಿಂದಿನ ಕಾರ್ಯದರ್ಶಿ ಯವರೇ ಪತ್ರಿಕಾಗೋಷ್ಠಿ ನಡೆಸಿ ಹಲವು ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ ಸಮಿತಿಯ ಸದಸ್ಯರೂ ಆಗಿರುವ ಎಂಜಿನಿಯರ್ ಒಬ್ಬರು ಕಾಲೇಜಿನಲ್ಲಿ ಅವ್ಯವಹಾರ ನಡೆಯುತ್ತಿವೆ ಎಂದು ಆರೋಪ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಹಾಸನ:</strong> ಪರೀಕ್ಷೆಗಿಂತ ಮೂರು ದಿನ ಮೊದಲು ಕಾಲೇಜಿನ ಅರೆಕಾಲಿಕ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಕಳುಹಿಸಿಕೊಟ್ಟಿರುವ ಪ್ರಕರಣ ಇಲ್ಲಿನ ಮಲೆನಾಡು ಎಂಜಿನಿ ಯರಿಂಗ್ ಕಾಲೇಜಿನಲ್ಲಿ ನಡೆದಿರು ವುದು ತಡವಾಗಿ ಬೆಳಕಿಗೆ ಬಂದಿದೆ.</span><br /> <br /> ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಉಪನ್ಯಾಸಕರು ಫೇಸ್ಬುಕ್ ಮೂಲಕ ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಕಳುಹಿಸಿದ್ದು ಅಚ್ಚರಿಗೆ ಕಾರಣವಾಗಿದೆ.<br /> <br /> ಕಾಲೇಜಿನ ಎಂಟನೇ ಸೆಮಿಸ್ಟರ್ಗೆ 50 ಅಂಕಗಳ ಆಂತರಿಕ ಪರೀಕ್ಷೆ (ಇಂಟರ್ನಲ್ಸ್) ಏಪ್ರಿಲ್ 25ರಂದು ನಡೆದಿತ್ತು. ಇಲ್ಲಿ `ಡಿಸ್ಟ್ರಿಬ್ಯೂಟೆಡ್ ಆಪರೇಟಿಂಗ್ ಸಿಸ್ಟಮ್' ವಿಷಯ ಕುರಿತ ಪ್ರಶ್ನೆಪತ್ರಿಕೆಯನ್ನು ವಿಭಾಗದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಲೋಕನಾ ಎಂಬುವರು ಫೇಸ್ಬುಕ್ ಮೂಲಕ ಕಾಶ್ಮೀರ ಮೂಲದ ವಿದ್ಯಾರ್ಥಿ ದೀಕ್ಷಿತ್ ರಾಜ್ದಾನ್ ಎಂಬುವವರಿಗೆ ಕಳುಹಿಸಿ ಕೊಟ್ಟಿದ್ದರು.<br /> <br /> ಪರೀಕ್ಷೆಗಿಂತ ಮೂರು ದಿನ ಮುಂಚಿತವಾಗಿ ಏ. 22ರಂದು ಈ ಪ್ರಕರಣ ನಡೆದಿರುವುದು ತಡವಾಗಿ ಕೆಲವು ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ 'ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ' ಎಂದು ವಿದ್ಯಾರ್ಥಿಗಳು ದೂರಿದ್ದಾರೆ.<br /> <br /> ಲೋಕನಾ ಇದೇ ಕಾಲೇಜಿನ ಕೊನೇ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದು, ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಇಲ್ಲಿಯೇ ಉಪನ್ಯಾಸಕರಾಗಿ ಸೇರಿದ್ದರು.<br /> ಎಂಜಿನಿಯರಿಂಗ್ ಕಾಲೇಜಿನ ಪ್ರಶ್ನೆಪತ್ರಿಕೆ ತಯಾರಿಸಬೇಕಾದರೆ ಉಪನ್ಯಾಸಕರಾಗಿ ಕನಿಷ್ಠ ಐದು ವರ್ಷ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾ ಪನಕ್ಕೆ ಎರಡು ವರ್ಷಗಳ ಅನುಭವ ಇರಬೇಕು ಎಂಬ ನಿಯಮವಿದೆ. ಆದರೆ, 5 ತಿಂಗಳ ಹಿಂದೆಯಷ್ಟೇ ಕಾಲೇಜಿಗೆ ಸೇರಿದ್ದ ಅರೆಕಾಲಿಕ ಉಪನ್ಯಾಸಕರು (ಇದೇ ಕಾಲೇಜಿನ ಹಿರಿಯ ಉಪನ್ಯಾಸಕರೊಬ್ಬರ ಪುತ್ರ) ಪ್ರಶ್ನೆಪತ್ರಿಕೆ ತಯಾರಿಸಿದ್ದರು. ಲೋಕನಾ ಎರಡು ಮೂರು ತಿಂಗಳ ಹಿಂದೆಯಷ್ಟೇ ಇಲ್ಲಿ ಸೇರಿದ್ದರು.<br /> <br /> `ತಾತ್ಕಾಲಿಕ ಉಪನ್ಯಾಸಕರಿಗೆ ಈ ಕೆಲಸಗಳಿಗೆ ಹಣ ಕೊಡಬೇಕಾಗುವುದಿಲ್ಲ. ಅದಕ್ಕಾಗಿ ಕಾಲೇಜಿ ನವರು ಅವರಿಂದಲೇ ಈ ಕೆಲಸ ಮಾಡಿಸುತ್ತಾರೆ' ಎಂದು ಹೆಸರು ತಿಳಿಸಲು ಇಚ್ಛಿಸದ ಉಪನ್ಯಾಸಕರು ತಿಳಿಸಿದ್ದಾರೆ.<br /> <br /> ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರಾಂಶುಪಾಲ ಸತ್ಯ ನಾರಾಯಣ, `ವಿಚಾರ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಒಂದೆರಡು ದಿನಗಳಲ್ಲಿ ಅವರೇ ಉತ್ತರ ನೀಡುತ್ತಾರೆ' ಎಂದಿದ್ದಾರೆ. ಸರ್ಕಾರದ ಮಾಜಿ ಅಡ್ವೋಕೆಟ್ ಜನರಲ್ ಅಶೋಕ ಹಾರನಹಳ್ಳಿ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದಾರೆ.<br /> <br /> ಕಳೆದ ಕೆಲವು ತಿಂಗಳಿಂದ ಕಾಲೇಜಿನ ಬಗ್ಗೆ ಹಲವು ಆರೋಪಗಳು ಬರುತ್ತಿದ್ದು, ಹಿಂದಿನ ಕಾರ್ಯದರ್ಶಿ ಯವರೇ ಪತ್ರಿಕಾಗೋಷ್ಠಿ ನಡೆಸಿ ಹಲವು ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ ಸಮಿತಿಯ ಸದಸ್ಯರೂ ಆಗಿರುವ ಎಂಜಿನಿಯರ್ ಒಬ್ಬರು ಕಾಲೇಜಿನಲ್ಲಿ ಅವ್ಯವಹಾರ ನಡೆಯುತ್ತಿವೆ ಎಂದು ಆರೋಪ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>