<p>ನವದೆಹಲಿ (ಪಿಟಿಐ): ತಮ್ಮ ಕಾರ್ಯ ನಿರ್ವಹಣೆ ಪಾರದರ್ಶಕವಾಗಿದೆ ಎಂಬುದಾಗಿ ಭಾನುವಾರ ಇಲ್ಲಿ ಪ್ರತಿಪಾದಿಸಿರುವ ಅಣ್ಣಾ ತಂಡವು ಅಣ್ಣಾ ಹಜಾರೆ ಅವರ ಚಳವಳಿ ಕಾಲದಲ್ಲಿ ಸಂಗ್ರಹಿಸಲಾದ ದೇಣಿಗೆಯನ್ನು ಅರವಿಂದ ಕೇಜ್ರಿವಾಲ್ ಸ್ವಂತ ಟ್ರಸ್ಟ್ ಗೆ ಬಳಸಿಕೊಂಡಿದ್ದಾರೆ ಎಂಬ ಸ್ವಾಮಿ ಅಗ್ನಿವೇಶ್ ಅವರ ಆರೋಪವನ್ನು ಅಲ್ಲಗಳೆದಿದೆ.<br /> <br /> ತಂಡದಿಂದ ಹೊರಹಾಕಲಾಗಿರುವ ಅಗ್ನಿವೇಶ್ ಅವರು ~ಸಿಟ್ಟಿನ~ ಹಿನ್ನೆಲೆಯಲ್ಲಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಣ್ಣಾ ತಂಡ ಹೇಳಿದೆ.<br /> <br /> ಅಗ್ನಿವೇಶ್ ಅವರು ಮಾಡಿದ ಎಲ್ಲಾ ಆರೋಪಗಳನ್ನೂ ಅಲ್ಲಗಳೆದ ಅಣ್ಣಾ ತಂಡ ಹಾಗೂ ಕೇಜ್ರಿವಾಲ್ ಅವರ ನಿಕಟವರ್ತಿ ಮನಿಶ್ ಸಿಸೋಡಿಯ ಅವರು ~ನಮ್ಮ ಖಾತೆಗಳು ಈಗಾಗಲೇ ವೆಬ್ ಸೈಟ್ ನಲ್ಲಿ ಇವೆ. ನಾವು ಕಳೆದ 6 ತಿಂಗಳ ಅವಧಿಯಲ್ಲಿ ವಿಶೇಷ ಆಡಿಟ್ ಮಾಡಿಸಿದ್ದೇವೆ ಮತ್ತು ತಿಂಗಳ ಒಳಗಾಗಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಹಾಕಲಿದ್ದೇವೆ~ ಎಂದು ಹೇಳಿದರು.<br /> <br /> ~ಅಗ್ನಿವೇಶ್ ಅವರ ಬಗ್ಗೆ ನಮಗೆ ವೈರತ್ವ ಇಲ್ಲ. ಅವರು ಸಿಟ್ಟಿನ ಭರದಲ್ಲಿ ಏನೋ ಹೇಳಿದ್ದಾರೆ. ಹಿರಿಯರು ಹೇಳಿದ್ದಕ್ಕೆ ವಿರುದ್ಧ ಆಡುವುದು ನಮ್ಮ ಸಂಪ್ರದಾಯವಲ್ಲ. ಅವರು ಒಳ್ಳೆಯ ವ್ಯಕ್ತಿ ಮತ್ತು ನಾವೆಲ್ಲರೂ ಅವರನ್ನು ಗೌರವಿಸುತ್ತೇವೆ~ ಎಂದು ಸಿಸೋಡಿಯ ನುಡಿದರು.<br /> <br /> ಅಣ್ಣಾ ಹಜಾರೆ ಅವರ ಚಳವಳಿಗಾಗಿ ಸಂಗ್ರಹಿಸಲಾಗಿದ್ದ ಹಣವನ್ನು ಅರವಿಂದ ಕೇಜ್ರಿವಾಲ್ ಅವರು ನಡೆಸುವ ಟ್ರಸ್ಟ್ ನಲ್ಲಿ ಠೇವಣಿ ಇಡಲಾಗಿತ್ತು. ಈ ಟ್ರಸ್ಟ್ ನಲ್ಲಿ ತಂಡದ ಪ್ರಮುಖರ ಹೆಸರುಗಳಿರಲಿಲ್ಲ ಎಂದು ಹೇಳಿದ್ದ ಅಗ್ನಿವೇಶ್, ಸುಮಾರು 80 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಕೇಜ್ರಿವಾಲ್ ಅವರು ಸ್ವಂತ ಟ್ರಸ್ಟ್ ಗೆ ಬಳಸಿಕೊಂಡಿದ್ದಾರೆ ಎಂದು ಆಪಾದಿಸಿದ್ದರು.<br /> <br /> <br /> <strong>ಅಣ್ಣಾ ತಂಡದ ವಿರುದ್ದ ಆರೋಪ ನಾಚಿಕೆಗೇಡು: ವರುಣ್ ಗಾಂಧಿ</strong><br /> <br /> <strong>ನವದೆಹಲಿ (ಐಎಎನ್ಎಸ್): </strong>ಸಾರ್ವಜನಿಕರ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ತಂಡದ ವಿರುದ್ದ ಆರೋಪ ಮಾಡುತ್ತಿರುವುದು `ನಾಚಿಕೆಗೇಡು~ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ತಮ್ಮ ಟ್ವಿಟರ್ನಲ್ಲಿ ಬರೆದಿದ್ದಾರೆ.<br /> <br /> ಅಣ್ಣಾ ತಂಡಕ್ಕೆ ತಮ್ಮ ಬೆಂಬಲ ಘೋಷಿಸಿರುವ ವರುಣ್ `ಅಣ್ಣಾ ತಂಡದ ಮೇಲೆ ಯೋಜಿತ ರೀತಿಯಲ್ಲಿ ಆಪಾದನೆಗಳನ್ನು ಮಾಡುತ್ತಿರುವುದು ಅವಮಾನಕರ. ನಾವೆಲ್ಲರೂ ಒಗ್ಗಟ್ಟಾಗಿ `ಭ್ರಷ್ಟಾಚಾರ ವಿರೋಧಿ ಚಳವಳಿ~ ಮೇಲಿನ ನಿಂದನೆಯನ್ನು ವಿರೋಧಿಸಬೇಕು~ ಟ್ವಿಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ತಮ್ಮ ಕಾರ್ಯ ನಿರ್ವಹಣೆ ಪಾರದರ್ಶಕವಾಗಿದೆ ಎಂಬುದಾಗಿ ಭಾನುವಾರ ಇಲ್ಲಿ ಪ್ರತಿಪಾದಿಸಿರುವ ಅಣ್ಣಾ ತಂಡವು ಅಣ್ಣಾ ಹಜಾರೆ ಅವರ ಚಳವಳಿ ಕಾಲದಲ್ಲಿ ಸಂಗ್ರಹಿಸಲಾದ ದೇಣಿಗೆಯನ್ನು ಅರವಿಂದ ಕೇಜ್ರಿವಾಲ್ ಸ್ವಂತ ಟ್ರಸ್ಟ್ ಗೆ ಬಳಸಿಕೊಂಡಿದ್ದಾರೆ ಎಂಬ ಸ್ವಾಮಿ ಅಗ್ನಿವೇಶ್ ಅವರ ಆರೋಪವನ್ನು ಅಲ್ಲಗಳೆದಿದೆ.<br /> <br /> ತಂಡದಿಂದ ಹೊರಹಾಕಲಾಗಿರುವ ಅಗ್ನಿವೇಶ್ ಅವರು ~ಸಿಟ್ಟಿನ~ ಹಿನ್ನೆಲೆಯಲ್ಲಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಣ್ಣಾ ತಂಡ ಹೇಳಿದೆ.<br /> <br /> ಅಗ್ನಿವೇಶ್ ಅವರು ಮಾಡಿದ ಎಲ್ಲಾ ಆರೋಪಗಳನ್ನೂ ಅಲ್ಲಗಳೆದ ಅಣ್ಣಾ ತಂಡ ಹಾಗೂ ಕೇಜ್ರಿವಾಲ್ ಅವರ ನಿಕಟವರ್ತಿ ಮನಿಶ್ ಸಿಸೋಡಿಯ ಅವರು ~ನಮ್ಮ ಖಾತೆಗಳು ಈಗಾಗಲೇ ವೆಬ್ ಸೈಟ್ ನಲ್ಲಿ ಇವೆ. ನಾವು ಕಳೆದ 6 ತಿಂಗಳ ಅವಧಿಯಲ್ಲಿ ವಿಶೇಷ ಆಡಿಟ್ ಮಾಡಿಸಿದ್ದೇವೆ ಮತ್ತು ತಿಂಗಳ ಒಳಗಾಗಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಹಾಕಲಿದ್ದೇವೆ~ ಎಂದು ಹೇಳಿದರು.<br /> <br /> ~ಅಗ್ನಿವೇಶ್ ಅವರ ಬಗ್ಗೆ ನಮಗೆ ವೈರತ್ವ ಇಲ್ಲ. ಅವರು ಸಿಟ್ಟಿನ ಭರದಲ್ಲಿ ಏನೋ ಹೇಳಿದ್ದಾರೆ. ಹಿರಿಯರು ಹೇಳಿದ್ದಕ್ಕೆ ವಿರುದ್ಧ ಆಡುವುದು ನಮ್ಮ ಸಂಪ್ರದಾಯವಲ್ಲ. ಅವರು ಒಳ್ಳೆಯ ವ್ಯಕ್ತಿ ಮತ್ತು ನಾವೆಲ್ಲರೂ ಅವರನ್ನು ಗೌರವಿಸುತ್ತೇವೆ~ ಎಂದು ಸಿಸೋಡಿಯ ನುಡಿದರು.<br /> <br /> ಅಣ್ಣಾ ಹಜಾರೆ ಅವರ ಚಳವಳಿಗಾಗಿ ಸಂಗ್ರಹಿಸಲಾಗಿದ್ದ ಹಣವನ್ನು ಅರವಿಂದ ಕೇಜ್ರಿವಾಲ್ ಅವರು ನಡೆಸುವ ಟ್ರಸ್ಟ್ ನಲ್ಲಿ ಠೇವಣಿ ಇಡಲಾಗಿತ್ತು. ಈ ಟ್ರಸ್ಟ್ ನಲ್ಲಿ ತಂಡದ ಪ್ರಮುಖರ ಹೆಸರುಗಳಿರಲಿಲ್ಲ ಎಂದು ಹೇಳಿದ್ದ ಅಗ್ನಿವೇಶ್, ಸುಮಾರು 80 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಕೇಜ್ರಿವಾಲ್ ಅವರು ಸ್ವಂತ ಟ್ರಸ್ಟ್ ಗೆ ಬಳಸಿಕೊಂಡಿದ್ದಾರೆ ಎಂದು ಆಪಾದಿಸಿದ್ದರು.<br /> <br /> <br /> <strong>ಅಣ್ಣಾ ತಂಡದ ವಿರುದ್ದ ಆರೋಪ ನಾಚಿಕೆಗೇಡು: ವರುಣ್ ಗಾಂಧಿ</strong><br /> <br /> <strong>ನವದೆಹಲಿ (ಐಎಎನ್ಎಸ್): </strong>ಸಾರ್ವಜನಿಕರ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ತಂಡದ ವಿರುದ್ದ ಆರೋಪ ಮಾಡುತ್ತಿರುವುದು `ನಾಚಿಕೆಗೇಡು~ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ತಮ್ಮ ಟ್ವಿಟರ್ನಲ್ಲಿ ಬರೆದಿದ್ದಾರೆ.<br /> <br /> ಅಣ್ಣಾ ತಂಡಕ್ಕೆ ತಮ್ಮ ಬೆಂಬಲ ಘೋಷಿಸಿರುವ ವರುಣ್ `ಅಣ್ಣಾ ತಂಡದ ಮೇಲೆ ಯೋಜಿತ ರೀತಿಯಲ್ಲಿ ಆಪಾದನೆಗಳನ್ನು ಮಾಡುತ್ತಿರುವುದು ಅವಮಾನಕರ. ನಾವೆಲ್ಲರೂ ಒಗ್ಗಟ್ಟಾಗಿ `ಭ್ರಷ್ಟಾಚಾರ ವಿರೋಧಿ ಚಳವಳಿ~ ಮೇಲಿನ ನಿಂದನೆಯನ್ನು ವಿರೋಧಿಸಬೇಕು~ ಟ್ವಿಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>