<p>`ಯಶಸ್ಸಿನ ಸೂತ್ರಗಳಾವುವು?~ ಎಂಬ ತೀಕ್ಷ್ಣ ಪ್ರಶ್ನೆ ಎತ್ತಿದರು ಮಲಯಾಳಂ ಚಿತ್ರರಂಗದ ಕುಡಿ ಪಾರ್ವತಿ ಮೆನನ್. ಸೋಲು ಗೆಲುವುಗಳ ಬಗ್ಗೆ ಅವರಿಗೆ ಭಯವಿಲ್ಲ. ಗಲ್ಲಾಪೆಟ್ಟಿಗೆ ಯಶಸ್ಸಿಗಿಂತಲೂ ಅವರಿಗೆ ಪ್ರೇಕ್ಷಕರ ಪ್ರೀತಿ ಮುಖ್ಯ.<br /> <br /> ಮೈ ತೋರಿಸುವುದಕ್ಕಿಂತಲೂ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಅಭಿನಯಿಸುವುದು ಮುಖ್ಯ. `ಮಿಲನ~, `ಮಳೆ ಬರಲಿ ಮಂಜೂ ಇರಲಿ~ ಹಾಗೂ `ಪೃಥ್ವಿ~ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದ ಅವರಿಗೆ ಈಗ `ಅಂದರ್ ಬಾಹರ್~ನಲ್ಲಿ ನಟಿಸುವ ಅವಕಾಶ.<br /> <br /> ನಟ ಶಿವರಾಜ್ಕುಮಾರ್ ಪತ್ನಿಯಾಗಿ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ವೈರುಧ್ಯಗಳನ್ನು ಚಿತ್ರಿಸುವ ಜತೆಗೆ ಕೌಟುಂಬಿಕ ಸಂಬಂಧಗಳನ್ನು ಗಾಢವಾಗಿ ಕಟ್ಟಿಕೊಡುವ ಚಿತ್ರವಂತೆ ಇದು.<br /> </p>.<p>ಚಿತ್ರದಲ್ಲಿ ಅವರ ಮೇಕಪ್ ಮಾಗಿದೆ. ಪ್ರೇಯಸಿಯಾಗಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದ ಆಕೆಯ ಪಾಲಿಗೆ ಇದೊಂದು ವಿಭಿನ್ನ ಪಾತ್ರ. ಗೃಹಿಣಿಗೆ ತಕ್ಕಂಥ ಮೇಕಪ್ ಚಿತ್ರದಲ್ಲಿದೆ. <br /> <br /> ಉತ್ತಮ ಕಥೆ ಇರುವ ಕಾರಣ ಅವರು ಪಾತ್ರವನ್ನು ಸಲೀಸಾಗಿ ಒಪ್ಪಿದ್ದಾರೆ. ಇಲ್ಲಿ ಅವರದು ಕೇವಲ ಬಂದು ಹೋಗುವ ಪಾತ್ರ ಅಲ್ಲವಂತೆ. ಕತೆಯುದ್ದಕ್ಕೂ ಅವರು ಕಾಣಿಸಿಕೊಳ್ಳುವರಂತೆ. `ಅಂದರ್ ಬಾಹರ್~ ತಮಗೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಲಿದೆ ಎಂಬ ಆಶಯ ಅವರಲ್ಲಿದೆ. <br /> <br /> ಒಂದು ಚಿತ್ರವನ್ನು ಪೂರ್ಣಗೊಳಿಸಿದ ನಂತರವೇ ಮತ್ತೊಂದರತ್ತ ಗಮನ ಹರಿಸುವ ಅವರು ಕಂಡದ್ದನ್ನೆಲ್ಲ ಒಪ್ಪುವವರಲ್ಲ. ಹೀಗಾಗಿ ಬಂದ ಅನೇಕ ಅವಕಾಶಗಳನ್ನು ಅಲ್ಲಗಳೆದಿದ್ದಾರೆ.<br /> <br /> `ಒಂದೇ ಬಾರಿಗೆ ಐದಾರು ಚಿತ್ರಗಳಲ್ಲಿ ನಟಿಸುವುದು; ಯಾವುದರಲ್ಲೂ ತನ್ಮಯಳಾಗಿ ತೊಡಗಿಸಿಕೊಳ್ಳದೇ ಹೊಗುವುದು ನನಗಿಷ್ಟವಿಲ್ಲ. ಒಂದೇ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡಬೇಕು. <br /> <br /> ಅದು ದುಡ್ಡು ಹಾಕಿದವರಿಗೂ ಪಾತ್ರಕ್ಕೆ ಆಯ್ಕೆ ಮಾಡಿದವರಿಗೂ ಮೆಚ್ಚುಗೆಯಾಗಬೇಕು~ ಎಂಬ ನೀತಿಪಾಠ ಅವರಿಂದ. ಅಂದರ್ ಬಾಹರ್ ಪೂರ್ಣಗೊಂಡ ಬಳಿಕ ಅವರು ಮಲಯಾಳಂ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. <br /> <br /> ಅದಾದ ಬಳಿಕ ಅದೇ ಭಾಷೆಯ ಮತ್ತೊಂದು ಚಿತ್ರ. ಎರಡೂ ಅವರಿಗೆ ಮಹತ್ವದ ಚಿತ್ರಗಳು. ಮಾತು ತಮಿಳು ಚಿತ್ರರಂಗದತ್ತ ಹೊರಳಿತು. `ಪೂ~ ಅವರು ಅಭಿನಯಿಸಿದ ತಮಿಳು ಚಿತ್ರ. ಆ ಬಳಿಕ ಅಲ್ಲಿಂದ ಬಂದ ಎರಡು ಅವಕಾಶಗಳನ್ನು ಅವರು ನಿರಾಕರಿಸಿದರು.<br /> <br /> ಒಂದು ಚಿತ್ರದಲ್ಲಿ `ಪೂ~ನಂಥದ್ದೇ ಪಾತ್ರದಲ್ಲಿ ಅಭಿನಯಿಸಬೇಕಾಗಿತ್ತು. ಮತ್ತೊಂದರಲ್ಲಿ ಅದಕ್ಕೆ ತದ್ವಿರುದ್ಧವಾದ, ಗ್ಲಾಮರ್ ತುಂಬಿ ತುಳುಕುವ ಪಾತ್ರ. ಹೀಗಾಗಿಯೇ ಎರಡಕ್ಕೂ ಗುಡ್ ಬೈ ಹೇಳಿದರು. <br /> <br /> ಈ ಮಧ್ಯೆ ಅವರ ಕನ್ನಡ ಬಹಳಷ್ಟು ಪಳಗಿದೆ. ಕಂಠಪಾಠ ಒಪ್ಪಿಸುವುದಷ್ಟೇ ಅನ್ಯಭಾಷೆಯ ಕಲಾವಿದರ ಕೆಲಸವಾಗಬಾರದು ಎಂದು ಬಲವಾಗಿ ನಂಬಿರುವ ಅವರು ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಯುತ್ತಿದ್ದಾರೆ. <br /> <br /> ಇದಕ್ಕೆ ಸ್ಫೂರ್ತಿ ನೀಡಿದ್ದು `...ಮಂಜೂ ಇರಲಿ~ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್. ಪಾತ್ರಕ್ಕೆ ದನಿ ನೀಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿದಾಗ ವಿಜಯಲಕ್ಷ್ಮಿ ಸಹಾಯಕ್ಕೆ ಬಂದರು. <br /> <br /> ಹಿಂದಿ ಇಂಗ್ಲಿಷ್ನಲ್ಲಿ ಮಾತನಾಡುವ ಬದಲು ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಿದರು. ಮಲಯಾಳಂ ಮರೆತೇ ಹೋಗುವಷ್ಟು ಕನ್ನಡದಲ್ಲಿ ಮಾತನಾಡಿದರು. ಈಗ ಚಿತ್ರಗಳಿಗೆ ಸ್ವತಃ ಡಬ್ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿದೆ. <br /> <br /> ಅಂದಹಾಗೆ ಪಾರ್ವತಿ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳದೇ ಇರಲು ಇದೂ ಒಂದು ಕಾರಣ. ಮೊದಲು ಓದು. ನಂತರ ವೃತ್ತಿ ಪ್ರವೃತ್ತಿ ಎನ್ನುತ್ತಾರೆ ಅವರು. ಸಾಹಿತ್ಯದ ವಿದ್ಯಾರ್ಥಿಯಾಗಿರುವುದು ಉದ್ಯಮದಲ್ಲಿ ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. <br /> <br /> ಬೇರೆ ಬೇರೆ ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಳ್ಳಲು ಅವಕಾಶ ದೊರೆತಿದೆಯಂತೆ.<br /> <br /> ಕಲಾವಿದರು ಸಂಶೋಧಕರೂ ಆಗಿರಬೇಕು. ಆಗ ಮಾತ್ರ ಚಿತ್ರದಲ್ಲಿ ಜೀವಂತವಾಗಿ ತೊಡಗಿಕೊಳ್ಳಲು ಸಾಧ್ಯ ಎಂಬುದು ಅವರ ಬಲವಾದ ವಾದ. `ಮಿಲನ~ದಲ್ಲಿ ಪುನೀತ್ ಅವರೊಂದಿಗೆ ಕಾಣಿಸಿಕೊಂಡಿದ್ದ ಪಾರ್ವತಿ ಅವರಿಗೆ ಈಗ ಡಾ.ರಾಜ್ ಕುಟುಂಬದ ಮತ್ತೊಬ್ಬ ಸದಸ್ಯರ ಜತೆಗೆ ನಟಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆಯಂತೆ. <br /> <br /> `ಶಿವರಾಜ್ ಕುಮಾರ್ ಒಬ್ಬ ಅನುಭವಿ ನಟ. ಅವರು ಪಾತ್ರವನ್ನು ಅನುಭವಿಸಿ ನಟಿಸುತ್ತಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. <br /> <br /> `ಮಿಲನ~ ಹಾಗೂ `...ಮಂಜೂ ಬರಲಿ~ ಚಿತ್ರಗಳಲ್ಲಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಒತ್ತು ದೊರೆಯಿತು ಎನ್ನುವ ಅವರಿಗೆ ವಿಭಿನ್ನ ಪಾತ್ರಗಳು ಬಹಳ ಇಷ್ಟ. ಅಂತಹ ಅವಕಾಶಗಳು ಕನ್ನಡ ಚಿತ್ರರಂಗದಿಂದ ಹೆಚ್ಚು ಹೆಚ್ಚು ದೊರೆಯುವಂತಾಗಲಿ ಎಂಬ ಬಯಕೆಯೊಂದಿಗೆ ಅವರು ಮಾತು ಪೂರ್ಣಗೊಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಯಶಸ್ಸಿನ ಸೂತ್ರಗಳಾವುವು?~ ಎಂಬ ತೀಕ್ಷ್ಣ ಪ್ರಶ್ನೆ ಎತ್ತಿದರು ಮಲಯಾಳಂ ಚಿತ್ರರಂಗದ ಕುಡಿ ಪಾರ್ವತಿ ಮೆನನ್. ಸೋಲು ಗೆಲುವುಗಳ ಬಗ್ಗೆ ಅವರಿಗೆ ಭಯವಿಲ್ಲ. ಗಲ್ಲಾಪೆಟ್ಟಿಗೆ ಯಶಸ್ಸಿಗಿಂತಲೂ ಅವರಿಗೆ ಪ್ರೇಕ್ಷಕರ ಪ್ರೀತಿ ಮುಖ್ಯ.<br /> <br /> ಮೈ ತೋರಿಸುವುದಕ್ಕಿಂತಲೂ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಅಭಿನಯಿಸುವುದು ಮುಖ್ಯ. `ಮಿಲನ~, `ಮಳೆ ಬರಲಿ ಮಂಜೂ ಇರಲಿ~ ಹಾಗೂ `ಪೃಥ್ವಿ~ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದ ಅವರಿಗೆ ಈಗ `ಅಂದರ್ ಬಾಹರ್~ನಲ್ಲಿ ನಟಿಸುವ ಅವಕಾಶ.<br /> <br /> ನಟ ಶಿವರಾಜ್ಕುಮಾರ್ ಪತ್ನಿಯಾಗಿ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ವೈರುಧ್ಯಗಳನ್ನು ಚಿತ್ರಿಸುವ ಜತೆಗೆ ಕೌಟುಂಬಿಕ ಸಂಬಂಧಗಳನ್ನು ಗಾಢವಾಗಿ ಕಟ್ಟಿಕೊಡುವ ಚಿತ್ರವಂತೆ ಇದು.<br /> </p>.<p>ಚಿತ್ರದಲ್ಲಿ ಅವರ ಮೇಕಪ್ ಮಾಗಿದೆ. ಪ್ರೇಯಸಿಯಾಗಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದ ಆಕೆಯ ಪಾಲಿಗೆ ಇದೊಂದು ವಿಭಿನ್ನ ಪಾತ್ರ. ಗೃಹಿಣಿಗೆ ತಕ್ಕಂಥ ಮೇಕಪ್ ಚಿತ್ರದಲ್ಲಿದೆ. <br /> <br /> ಉತ್ತಮ ಕಥೆ ಇರುವ ಕಾರಣ ಅವರು ಪಾತ್ರವನ್ನು ಸಲೀಸಾಗಿ ಒಪ್ಪಿದ್ದಾರೆ. ಇಲ್ಲಿ ಅವರದು ಕೇವಲ ಬಂದು ಹೋಗುವ ಪಾತ್ರ ಅಲ್ಲವಂತೆ. ಕತೆಯುದ್ದಕ್ಕೂ ಅವರು ಕಾಣಿಸಿಕೊಳ್ಳುವರಂತೆ. `ಅಂದರ್ ಬಾಹರ್~ ತಮಗೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಲಿದೆ ಎಂಬ ಆಶಯ ಅವರಲ್ಲಿದೆ. <br /> <br /> ಒಂದು ಚಿತ್ರವನ್ನು ಪೂರ್ಣಗೊಳಿಸಿದ ನಂತರವೇ ಮತ್ತೊಂದರತ್ತ ಗಮನ ಹರಿಸುವ ಅವರು ಕಂಡದ್ದನ್ನೆಲ್ಲ ಒಪ್ಪುವವರಲ್ಲ. ಹೀಗಾಗಿ ಬಂದ ಅನೇಕ ಅವಕಾಶಗಳನ್ನು ಅಲ್ಲಗಳೆದಿದ್ದಾರೆ.<br /> <br /> `ಒಂದೇ ಬಾರಿಗೆ ಐದಾರು ಚಿತ್ರಗಳಲ್ಲಿ ನಟಿಸುವುದು; ಯಾವುದರಲ್ಲೂ ತನ್ಮಯಳಾಗಿ ತೊಡಗಿಸಿಕೊಳ್ಳದೇ ಹೊಗುವುದು ನನಗಿಷ್ಟವಿಲ್ಲ. ಒಂದೇ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡಬೇಕು. <br /> <br /> ಅದು ದುಡ್ಡು ಹಾಕಿದವರಿಗೂ ಪಾತ್ರಕ್ಕೆ ಆಯ್ಕೆ ಮಾಡಿದವರಿಗೂ ಮೆಚ್ಚುಗೆಯಾಗಬೇಕು~ ಎಂಬ ನೀತಿಪಾಠ ಅವರಿಂದ. ಅಂದರ್ ಬಾಹರ್ ಪೂರ್ಣಗೊಂಡ ಬಳಿಕ ಅವರು ಮಲಯಾಳಂ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. <br /> <br /> ಅದಾದ ಬಳಿಕ ಅದೇ ಭಾಷೆಯ ಮತ್ತೊಂದು ಚಿತ್ರ. ಎರಡೂ ಅವರಿಗೆ ಮಹತ್ವದ ಚಿತ್ರಗಳು. ಮಾತು ತಮಿಳು ಚಿತ್ರರಂಗದತ್ತ ಹೊರಳಿತು. `ಪೂ~ ಅವರು ಅಭಿನಯಿಸಿದ ತಮಿಳು ಚಿತ್ರ. ಆ ಬಳಿಕ ಅಲ್ಲಿಂದ ಬಂದ ಎರಡು ಅವಕಾಶಗಳನ್ನು ಅವರು ನಿರಾಕರಿಸಿದರು.<br /> <br /> ಒಂದು ಚಿತ್ರದಲ್ಲಿ `ಪೂ~ನಂಥದ್ದೇ ಪಾತ್ರದಲ್ಲಿ ಅಭಿನಯಿಸಬೇಕಾಗಿತ್ತು. ಮತ್ತೊಂದರಲ್ಲಿ ಅದಕ್ಕೆ ತದ್ವಿರುದ್ಧವಾದ, ಗ್ಲಾಮರ್ ತುಂಬಿ ತುಳುಕುವ ಪಾತ್ರ. ಹೀಗಾಗಿಯೇ ಎರಡಕ್ಕೂ ಗುಡ್ ಬೈ ಹೇಳಿದರು. <br /> <br /> ಈ ಮಧ್ಯೆ ಅವರ ಕನ್ನಡ ಬಹಳಷ್ಟು ಪಳಗಿದೆ. ಕಂಠಪಾಠ ಒಪ್ಪಿಸುವುದಷ್ಟೇ ಅನ್ಯಭಾಷೆಯ ಕಲಾವಿದರ ಕೆಲಸವಾಗಬಾರದು ಎಂದು ಬಲವಾಗಿ ನಂಬಿರುವ ಅವರು ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಯುತ್ತಿದ್ದಾರೆ. <br /> <br /> ಇದಕ್ಕೆ ಸ್ಫೂರ್ತಿ ನೀಡಿದ್ದು `...ಮಂಜೂ ಇರಲಿ~ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್. ಪಾತ್ರಕ್ಕೆ ದನಿ ನೀಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿದಾಗ ವಿಜಯಲಕ್ಷ್ಮಿ ಸಹಾಯಕ್ಕೆ ಬಂದರು. <br /> <br /> ಹಿಂದಿ ಇಂಗ್ಲಿಷ್ನಲ್ಲಿ ಮಾತನಾಡುವ ಬದಲು ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಿದರು. ಮಲಯಾಳಂ ಮರೆತೇ ಹೋಗುವಷ್ಟು ಕನ್ನಡದಲ್ಲಿ ಮಾತನಾಡಿದರು. ಈಗ ಚಿತ್ರಗಳಿಗೆ ಸ್ವತಃ ಡಬ್ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿದೆ. <br /> <br /> ಅಂದಹಾಗೆ ಪಾರ್ವತಿ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳದೇ ಇರಲು ಇದೂ ಒಂದು ಕಾರಣ. ಮೊದಲು ಓದು. ನಂತರ ವೃತ್ತಿ ಪ್ರವೃತ್ತಿ ಎನ್ನುತ್ತಾರೆ ಅವರು. ಸಾಹಿತ್ಯದ ವಿದ್ಯಾರ್ಥಿಯಾಗಿರುವುದು ಉದ್ಯಮದಲ್ಲಿ ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. <br /> <br /> ಬೇರೆ ಬೇರೆ ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಳ್ಳಲು ಅವಕಾಶ ದೊರೆತಿದೆಯಂತೆ.<br /> <br /> ಕಲಾವಿದರು ಸಂಶೋಧಕರೂ ಆಗಿರಬೇಕು. ಆಗ ಮಾತ್ರ ಚಿತ್ರದಲ್ಲಿ ಜೀವಂತವಾಗಿ ತೊಡಗಿಕೊಳ್ಳಲು ಸಾಧ್ಯ ಎಂಬುದು ಅವರ ಬಲವಾದ ವಾದ. `ಮಿಲನ~ದಲ್ಲಿ ಪುನೀತ್ ಅವರೊಂದಿಗೆ ಕಾಣಿಸಿಕೊಂಡಿದ್ದ ಪಾರ್ವತಿ ಅವರಿಗೆ ಈಗ ಡಾ.ರಾಜ್ ಕುಟುಂಬದ ಮತ್ತೊಬ್ಬ ಸದಸ್ಯರ ಜತೆಗೆ ನಟಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆಯಂತೆ. <br /> <br /> `ಶಿವರಾಜ್ ಕುಮಾರ್ ಒಬ್ಬ ಅನುಭವಿ ನಟ. ಅವರು ಪಾತ್ರವನ್ನು ಅನುಭವಿಸಿ ನಟಿಸುತ್ತಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. <br /> <br /> `ಮಿಲನ~ ಹಾಗೂ `...ಮಂಜೂ ಬರಲಿ~ ಚಿತ್ರಗಳಲ್ಲಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಒತ್ತು ದೊರೆಯಿತು ಎನ್ನುವ ಅವರಿಗೆ ವಿಭಿನ್ನ ಪಾತ್ರಗಳು ಬಹಳ ಇಷ್ಟ. ಅಂತಹ ಅವಕಾಶಗಳು ಕನ್ನಡ ಚಿತ್ರರಂಗದಿಂದ ಹೆಚ್ಚು ಹೆಚ್ಚು ದೊರೆಯುವಂತಾಗಲಿ ಎಂಬ ಬಯಕೆಯೊಂದಿಗೆ ಅವರು ಮಾತು ಪೂರ್ಣಗೊಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>