<p><strong>ಬಂಗಾರಪೇಟೆ: </strong>ಇಲ್ಲಿನ ಆರೋಗ್ಯ ಇಲಾಖೆ ಪ್ರಕಾರ ದಾಸರಹೊಸಹಳ್ಳಿಯ ಆರೋಗ್ಯ ಉಪಕೇಂದ್ರ ಈಗಲೂ ಸುಸ್ಥಿತಿಯಲ್ಲಿದೆ. ಇದಕ್ಕಾಗಿ ಪ್ರತಿವರ್ಷ ಹಣ ಬಿಡುಗಡೆ ಯಾಗುತ್ತದೆ. ಆದರೆ ಆರೋಗ್ಯ ಉಪ ಕೇಂದ್ರ ಕಟ್ಟಡ ಯಾವುದಕ್ಕೂ ಉಪಯೋಗಬಾರದೆ ಪಾಳುಬಿದ್ದ ಸ್ಥಿತಿಯಲ್ಲಿ ಇದೆ. ಪರಿಣಾಮ ಇಲ್ಲಿನ ಗ್ರಾಮಸ್ಥರು ಆರೋಗ್ಯ ಸೇವೆಯಿಂದ ವಂಚಿತರು.<br /> <br /> ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿ ಸ್ಥಾಪಿಸಿದ ಕೇಂದ್ರ ಇರುವುದು ಬೆಮಲ್ನಗರದ ಸಮೀಪದ ದಾಸರಹೊಸಹಳ್ಳಿ ಗ್ರಾಮದಲ್ಲಿ.<br /> <br /> ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಉಪಕೇಂದ್ರ ಶಾಶ್ವತವಾಗಿ ಕಾರ್ಯನಿರ್ವಹಣೆ ಇಲ್ಲದಂತಾಗಿದೆ. <br /> <br /> ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಥಾಪಿಸಿದ ಆರೋಗ್ಯ ಕೇಂದ್ರ ಸುಮಾರು 6 ವರ್ಷಗಳ ಹಿಂದೆ ಮುಚ್ಚಿದಂತಾಗಿದೆ. ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಗ್ಯ ಸಹಾಯಕಿಯರು ಬೇರೆಡೆಗೆ ಹೊರಟ ಮೇಲೆ ಉಪಕೇಂದ್ರ ಅನುಪಯುಕ್ತವಾಗಿದೆ.<br /> <br /> ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ ಸಾಧನಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋದರು. <br /> ದುರುಪಯೋಗ: ಈ ಆರೋಗ್ಯ ಕೇಂದ್ರದ ಕೆಲಸ ನಿಂತು ವರ್ಷಗಳು ಕಳೆದರು ಪ್ರತಿ ವರ್ಷ ಮೂಲ ಸೌಕರ್ಯ ಕಲ್ಪಿಸಲು ಆರೋಗ್ಯ ಇಲಾಖೆ ಕೇಂದ್ರದ ನಿರ್ವಹಣೆಗೆ ಹಣ ಬಿಡುಗಡೆ ಮಾಡುತ್ತಲೇ ಇದೆ. <br /> `ದೊಡ್ಡಚಿನ್ನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಈ ಕೇಂದ್ರಕ್ಕೆ ಆರೋಗ್ಯ ಸಹಾಯಕಿಯರು ಬರುವುದೇ ಅಪರೂಪ. <br /> <br /> ಯಾವಾಗಲೋ ಒಮ್ಮೆ ಬರುತ್ತಾರೆ. ಮರದ ಕೆಳಗೆ ಕುಳಿತುಕೊಂಡು ಕಷ್ಟಸುಖ ಮಾತನಾಡಿಕೊಂಡು ಹೋಗುತ್ತಾರೆ~ ಎನ್ನುತ್ತಾರೆ ಗ್ರಾಮದ ನಿವಾಸಿ ಮುರಳಿ. <br /> <br /> `ಪ್ರತಿ ವರ್ಷ ಅಧಿಕಾರಿಗಳು ಇಲ್ಲಿಗೆ ಬಂದು ಕಟ್ಟಡದ ಸುತ್ತ ಹರಡಿರುವ ಕಸ ಮತ್ತಿತರ ತ್ಯಾಜ್ಯ ವಸ್ತು ತೆಗೆಯಲು ಹೇಳುತ್ತಾರೆ. ನಂತರ ಪರಿಶೀಲನೆ ಮುಗಿದ ಮೇಲೆ ಈ ಕಡೆ ಯಾರೂ ಇತ್ತ ತಲೆ ಹಾಕುವುದಿಲ್ಲ~ ಎಂದು ವಿವರಿಸುತ್ತಾರೆ ಗ್ರಾಮದ ನಾರಾಯಣಸ್ವಾಮಿ. <br /> <br /> ಗ್ರಾಮಸ್ಥರರಿಗಾಗಿ ಸ್ಥಾಪಿಸಿದ ಆರೋಗ್ಯ ಕೇಂದ್ರವನ್ನು ಈಗ ದಾಸರಹೊಸಹಳ್ಳಿಯಿಂದ ಅಜ್ಜಪಲ್ಲಿ ಗ್ರಾಮಕ್ಕೆ ವರ್ಗಾವಣೆ ಮಾಡುತ್ತಿರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. <br /> <br /> `ಅಜ್ಜಪಲ್ಲಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಬೇಕು. ಆದರೆ ಮುಚ್ಚಿರುವ ದಾಸರಹೊಸಹಳ್ಳಿ ಉಪಕೇಂದ್ರ ದುರಸ್ತಿ ಗೊಳಿಸದೆ ಹಣ ದುರುಪಯೋಗ ಮಾಡಿಕೊಂಡಿರುವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ~ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ ಅವರು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ: </strong>ಇಲ್ಲಿನ ಆರೋಗ್ಯ ಇಲಾಖೆ ಪ್ರಕಾರ ದಾಸರಹೊಸಹಳ್ಳಿಯ ಆರೋಗ್ಯ ಉಪಕೇಂದ್ರ ಈಗಲೂ ಸುಸ್ಥಿತಿಯಲ್ಲಿದೆ. ಇದಕ್ಕಾಗಿ ಪ್ರತಿವರ್ಷ ಹಣ ಬಿಡುಗಡೆ ಯಾಗುತ್ತದೆ. ಆದರೆ ಆರೋಗ್ಯ ಉಪ ಕೇಂದ್ರ ಕಟ್ಟಡ ಯಾವುದಕ್ಕೂ ಉಪಯೋಗಬಾರದೆ ಪಾಳುಬಿದ್ದ ಸ್ಥಿತಿಯಲ್ಲಿ ಇದೆ. ಪರಿಣಾಮ ಇಲ್ಲಿನ ಗ್ರಾಮಸ್ಥರು ಆರೋಗ್ಯ ಸೇವೆಯಿಂದ ವಂಚಿತರು.<br /> <br /> ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿ ಸ್ಥಾಪಿಸಿದ ಕೇಂದ್ರ ಇರುವುದು ಬೆಮಲ್ನಗರದ ಸಮೀಪದ ದಾಸರಹೊಸಹಳ್ಳಿ ಗ್ರಾಮದಲ್ಲಿ.<br /> <br /> ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಉಪಕೇಂದ್ರ ಶಾಶ್ವತವಾಗಿ ಕಾರ್ಯನಿರ್ವಹಣೆ ಇಲ್ಲದಂತಾಗಿದೆ. <br /> <br /> ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಥಾಪಿಸಿದ ಆರೋಗ್ಯ ಕೇಂದ್ರ ಸುಮಾರು 6 ವರ್ಷಗಳ ಹಿಂದೆ ಮುಚ್ಚಿದಂತಾಗಿದೆ. ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಗ್ಯ ಸಹಾಯಕಿಯರು ಬೇರೆಡೆಗೆ ಹೊರಟ ಮೇಲೆ ಉಪಕೇಂದ್ರ ಅನುಪಯುಕ್ತವಾಗಿದೆ.<br /> <br /> ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ ಸಾಧನಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋದರು. <br /> ದುರುಪಯೋಗ: ಈ ಆರೋಗ್ಯ ಕೇಂದ್ರದ ಕೆಲಸ ನಿಂತು ವರ್ಷಗಳು ಕಳೆದರು ಪ್ರತಿ ವರ್ಷ ಮೂಲ ಸೌಕರ್ಯ ಕಲ್ಪಿಸಲು ಆರೋಗ್ಯ ಇಲಾಖೆ ಕೇಂದ್ರದ ನಿರ್ವಹಣೆಗೆ ಹಣ ಬಿಡುಗಡೆ ಮಾಡುತ್ತಲೇ ಇದೆ. <br /> `ದೊಡ್ಡಚಿನ್ನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಈ ಕೇಂದ್ರಕ್ಕೆ ಆರೋಗ್ಯ ಸಹಾಯಕಿಯರು ಬರುವುದೇ ಅಪರೂಪ. <br /> <br /> ಯಾವಾಗಲೋ ಒಮ್ಮೆ ಬರುತ್ತಾರೆ. ಮರದ ಕೆಳಗೆ ಕುಳಿತುಕೊಂಡು ಕಷ್ಟಸುಖ ಮಾತನಾಡಿಕೊಂಡು ಹೋಗುತ್ತಾರೆ~ ಎನ್ನುತ್ತಾರೆ ಗ್ರಾಮದ ನಿವಾಸಿ ಮುರಳಿ. <br /> <br /> `ಪ್ರತಿ ವರ್ಷ ಅಧಿಕಾರಿಗಳು ಇಲ್ಲಿಗೆ ಬಂದು ಕಟ್ಟಡದ ಸುತ್ತ ಹರಡಿರುವ ಕಸ ಮತ್ತಿತರ ತ್ಯಾಜ್ಯ ವಸ್ತು ತೆಗೆಯಲು ಹೇಳುತ್ತಾರೆ. ನಂತರ ಪರಿಶೀಲನೆ ಮುಗಿದ ಮೇಲೆ ಈ ಕಡೆ ಯಾರೂ ಇತ್ತ ತಲೆ ಹಾಕುವುದಿಲ್ಲ~ ಎಂದು ವಿವರಿಸುತ್ತಾರೆ ಗ್ರಾಮದ ನಾರಾಯಣಸ್ವಾಮಿ. <br /> <br /> ಗ್ರಾಮಸ್ಥರರಿಗಾಗಿ ಸ್ಥಾಪಿಸಿದ ಆರೋಗ್ಯ ಕೇಂದ್ರವನ್ನು ಈಗ ದಾಸರಹೊಸಹಳ್ಳಿಯಿಂದ ಅಜ್ಜಪಲ್ಲಿ ಗ್ರಾಮಕ್ಕೆ ವರ್ಗಾವಣೆ ಮಾಡುತ್ತಿರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. <br /> <br /> `ಅಜ್ಜಪಲ್ಲಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಬೇಕು. ಆದರೆ ಮುಚ್ಚಿರುವ ದಾಸರಹೊಸಹಳ್ಳಿ ಉಪಕೇಂದ್ರ ದುರಸ್ತಿ ಗೊಳಿಸದೆ ಹಣ ದುರುಪಯೋಗ ಮಾಡಿಕೊಂಡಿರುವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ~ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ ಅವರು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>