<p><strong>ರೋಣ:</strong> ರೈತರ ಉತ್ಫನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಗ್ರಾಹಕರಿಗೆ ಕಾಯಿಪಲ್ಲೆ, ದವಸ ಧಾನ್ಯಗಳು ಸಿಗುವ ವ್ಯವಸ್ಥೆಯಾಗಿ ರೂಪಗೊಂಡ ಗ್ರಾಮೀಣ ಸಂತೆ ಈಗ ಪಾಳುಬಿದ್ದಿದೆ.ಲಕ್ಷಾಂತರ ವೆಚ್ಚದಲ್ಲಿ ರೋಣ ತಾಲ್ಲೂಕಿನಲ್ಲಿ ನಿರ್ಮಿಸಲಾಗಿರುವ ಗ್ರಾಮೀಣ ಸಂತೆಯತ್ತ ವ್ಯಾಪಾರಿಗಳು, ರೈತರು ಹಾಗೂ ಗ್ರಾಹಕರು ಸುಳಿಯದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. <br /> <br /> <strong>ಎಲ್ಲಿವೆ ಸಂತೆಗಳು </strong> <br /> ತಾಲ್ಲೂಕಿನ ಮುಶಿಗೇರಿ, ಬೆಳವಣಕಿ, ಯಾವಗಲ್ಲ ಮತ್ತು ಅಬ್ಬಿಗೇರಿ ಗ್ರಾಮಗಳಲ್ಲಿ ತಲಾ 12ರಿಂದ 15ಲಕ್ಷ ಖರ್ಚು ಮಾಡಿ ಕಟ್ಟಿದ ಗ್ರಾಮೀಣ ಸಂತೆ ಮಾರುಕಟ್ಟೆ ಪ್ರಯೋಜನಕ್ಕೆ ಬಾರದೆ ವರ್ಷಗಳೇ ಕಳೆದಿವೆ.<br /> <br /> ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಸಂತೆ ಪ್ರದೇಶ ನಿರ್ಲಕ್ಷ್ಯಕ್ಕೆ ಒಳಗಾಗಿ ಜಾನುವಾರು ಮತ್ತು ನಿರ್ಗಗತಿಕರಿಗೆ ಆಶ್ರಯ ತಾಣಗಳಾಗಿವೆ. ಅಬ್ಬಿಗೇರಿ ಮತ್ತು ಬೆಳವಣಕಿಯ ಗ್ರಾಮೀಣ ಸಂತೆ ಮಾರುಕಟ್ಟೆಗಳನ್ನು ಕಟ್ಟಿಸಿದ್ದಾದರೂ ಏಕೆ ? ಇಲ್ಲೇನು ಅಂಥ ವಹಿವಾಟು ನಡೆಯುತ್ತದೆ ? ಎಂಬ ಪ್ರಶ್ನೆ ಗ್ರಾಮಸ್ಥರದ್ದು. <br /> <br /> <strong>ಸೌಲಭ್ಯಗಳ ಕೊರತೆ <br /> </strong>ಇಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಮಳೆ-ಗಾಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಶೌಚಾಲಯ, ಕುಡಿಯುವ ನೀರು ಇಲ್ಲ. ಹಾಗಾಗಿ ಅವುಗಳ ಉಪಯೋಗ ಸರಿಯಾಗಿ ಆಗುತ್ತಿಲ್ಲ. <br /> <br /> <strong>ಸಂತೆಗಳು ನಡೆಯುತ್ತಿಲ್ಲ </strong><br /> ಬೆಳವಣಕಿಯಲ್ಲಿ ಬುಧವಾರ, ಅಬ್ಬಿಗೇರಿಯಲ್ಲಿ ಸೋಮವಾರ, ಮುಶಿಗೇರಿಯಲ್ಲಿ ಮಂಗಳವಾರ ಹೀಗೆ ಸಂತೆಗೆ ದಿನ ನಿಗದಿ ಪಡಿಸಲಾಗಿದೆ. ಆದರೂ ಈ ಸ್ಥಳಗಳಲ್ಲಿ ಸಂತೆ ನಡೆಯುವುದಿಲ್ಲ. <br /> <br /> ಎಪಿಎಂಸಿ, ಗ್ರಾಮೀಣ ಸಂತೆ ಮಾರು ಕಟ್ಟೆಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಸಂತೆ ನಡೆಯುವಂತೆ ಅಧಿಕಾರಿಗಳು ಕ್ರಮ ಕೈಕೊಳ್ಳಬೇಕು. ಈ ಕುರಿತು ಗ್ರಾ.ಪಂ.ಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. <br /> <br /> <strong>ಎಪಿಎಂಸಿ ಅಧ್ಯಕ್ಷರ ಅಭಿಪ್ರಾಯ</strong><br /> ಗ್ರಾಮೀಣ ಸಂತೆಗಳ ಉಪ ಯೋಗವನ್ನು ಜನತೆಗೆ ದೊರಕಿ ಸುವುದು ಸ್ಥಳೀಯ ಗ್ರಾ.ಪಂ.ಗಳ ಜವಾ ಬ್ದಾರಿ ಎಂದು ತಿಳಿಸಿದರು.ಅಲ್ಲದೆ, ಜನತೆ ಮತ್ತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದವಸ ಧಾನ್ಯ ಸಂರಕ್ಷಿಸಲು ಗೋದಾಮು ನಿರ್ಮಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಣ:</strong> ರೈತರ ಉತ್ಫನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಗ್ರಾಹಕರಿಗೆ ಕಾಯಿಪಲ್ಲೆ, ದವಸ ಧಾನ್ಯಗಳು ಸಿಗುವ ವ್ಯವಸ್ಥೆಯಾಗಿ ರೂಪಗೊಂಡ ಗ್ರಾಮೀಣ ಸಂತೆ ಈಗ ಪಾಳುಬಿದ್ದಿದೆ.ಲಕ್ಷಾಂತರ ವೆಚ್ಚದಲ್ಲಿ ರೋಣ ತಾಲ್ಲೂಕಿನಲ್ಲಿ ನಿರ್ಮಿಸಲಾಗಿರುವ ಗ್ರಾಮೀಣ ಸಂತೆಯತ್ತ ವ್ಯಾಪಾರಿಗಳು, ರೈತರು ಹಾಗೂ ಗ್ರಾಹಕರು ಸುಳಿಯದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. <br /> <br /> <strong>ಎಲ್ಲಿವೆ ಸಂತೆಗಳು </strong> <br /> ತಾಲ್ಲೂಕಿನ ಮುಶಿಗೇರಿ, ಬೆಳವಣಕಿ, ಯಾವಗಲ್ಲ ಮತ್ತು ಅಬ್ಬಿಗೇರಿ ಗ್ರಾಮಗಳಲ್ಲಿ ತಲಾ 12ರಿಂದ 15ಲಕ್ಷ ಖರ್ಚು ಮಾಡಿ ಕಟ್ಟಿದ ಗ್ರಾಮೀಣ ಸಂತೆ ಮಾರುಕಟ್ಟೆ ಪ್ರಯೋಜನಕ್ಕೆ ಬಾರದೆ ವರ್ಷಗಳೇ ಕಳೆದಿವೆ.<br /> <br /> ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಸಂತೆ ಪ್ರದೇಶ ನಿರ್ಲಕ್ಷ್ಯಕ್ಕೆ ಒಳಗಾಗಿ ಜಾನುವಾರು ಮತ್ತು ನಿರ್ಗಗತಿಕರಿಗೆ ಆಶ್ರಯ ತಾಣಗಳಾಗಿವೆ. ಅಬ್ಬಿಗೇರಿ ಮತ್ತು ಬೆಳವಣಕಿಯ ಗ್ರಾಮೀಣ ಸಂತೆ ಮಾರುಕಟ್ಟೆಗಳನ್ನು ಕಟ್ಟಿಸಿದ್ದಾದರೂ ಏಕೆ ? ಇಲ್ಲೇನು ಅಂಥ ವಹಿವಾಟು ನಡೆಯುತ್ತದೆ ? ಎಂಬ ಪ್ರಶ್ನೆ ಗ್ರಾಮಸ್ಥರದ್ದು. <br /> <br /> <strong>ಸೌಲಭ್ಯಗಳ ಕೊರತೆ <br /> </strong>ಇಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಮಳೆ-ಗಾಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಶೌಚಾಲಯ, ಕುಡಿಯುವ ನೀರು ಇಲ್ಲ. ಹಾಗಾಗಿ ಅವುಗಳ ಉಪಯೋಗ ಸರಿಯಾಗಿ ಆಗುತ್ತಿಲ್ಲ. <br /> <br /> <strong>ಸಂತೆಗಳು ನಡೆಯುತ್ತಿಲ್ಲ </strong><br /> ಬೆಳವಣಕಿಯಲ್ಲಿ ಬುಧವಾರ, ಅಬ್ಬಿಗೇರಿಯಲ್ಲಿ ಸೋಮವಾರ, ಮುಶಿಗೇರಿಯಲ್ಲಿ ಮಂಗಳವಾರ ಹೀಗೆ ಸಂತೆಗೆ ದಿನ ನಿಗದಿ ಪಡಿಸಲಾಗಿದೆ. ಆದರೂ ಈ ಸ್ಥಳಗಳಲ್ಲಿ ಸಂತೆ ನಡೆಯುವುದಿಲ್ಲ. <br /> <br /> ಎಪಿಎಂಸಿ, ಗ್ರಾಮೀಣ ಸಂತೆ ಮಾರು ಕಟ್ಟೆಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಸಂತೆ ನಡೆಯುವಂತೆ ಅಧಿಕಾರಿಗಳು ಕ್ರಮ ಕೈಕೊಳ್ಳಬೇಕು. ಈ ಕುರಿತು ಗ್ರಾ.ಪಂ.ಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. <br /> <br /> <strong>ಎಪಿಎಂಸಿ ಅಧ್ಯಕ್ಷರ ಅಭಿಪ್ರಾಯ</strong><br /> ಗ್ರಾಮೀಣ ಸಂತೆಗಳ ಉಪ ಯೋಗವನ್ನು ಜನತೆಗೆ ದೊರಕಿ ಸುವುದು ಸ್ಥಳೀಯ ಗ್ರಾ.ಪಂ.ಗಳ ಜವಾ ಬ್ದಾರಿ ಎಂದು ತಿಳಿಸಿದರು.ಅಲ್ಲದೆ, ಜನತೆ ಮತ್ತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದವಸ ಧಾನ್ಯ ಸಂರಕ್ಷಿಸಲು ಗೋದಾಮು ನಿರ್ಮಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>