<p>ಚಂಡೀಗಡ (ಪಿಟಿಐ): 15 ದಿನಗಳಲ್ಲಿ ಎರಡು ಬೆದರಿಕೆ ಕರೆಗಳು ಬಂದಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಬರ್ಟ್ ವಾದ್ರಾ ಮತ್ತು ಡಿಎಲ್ಎಫ್ ಭೂ ಹಗರಣದ ತನಿಖೆಗೆ ಆದೇಶಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಆಪಾದಿಸಿದ್ದಾರೆ.<br /> <br /> ಈ ಮಧ್ಯೆ ಶುಕ್ರವಾರ ರಾತ್ರಿ ಹರಿಯಾಣ ಪೊಲೀಸರು ಬೆದರಿಕೆ ಕರೆ ಮಾಡಿದ್ದ ಒಬ್ಬನನ್ನು ಬಂಧಿಸಿದ್ದಾರೆ. ದೂರವಾಣಿ ಕರೆಗಳನ್ನು ಪರಿಶೀಲನೆ ಮಾಡಿದ ನಂತರ ಉಮೈದ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪಂಚಕುಲಾ ವಿಭಾಗದ ಡಿಸಿಪಿ ಪರುಲ್ ಕುಶ್ ಜೈನ್ ತಿಳಿಸಿದ್ದಾರೆ.<br /> <br /> ಹರಿಯಾಣ ಗೃಹ ಮಂಡಳಿಯ ಆಡಳಿತಾಧಿಕಾರಿಯಾಗಿದ್ದಾಗ ಖೇಮ್ಕಾ ಅವರು ಉಮೈದ್ ಸಿಂಗ್ನನ್ನು ಸೇವೆಯಿಂದ ವಜಾ ಮಾಡಿದ್ದರು. ಸಿಂಗ್ ಗುಡಗಾಂವ್ ನಿವಾಸಿಯಾಗಿದ್ದು, ಅಲ್ಲಿಯೇ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜೈನ್ ತಿಳಿಸಿದ್ದಾರೆ.<br /> <br /> ಇದಕ್ಕೂ ಮೊದಲು ಹೇಳಿಕೆ ನೀಡಿರುವ ಖೇಮ್ಕಾ ಅವರು, `ಪೊಲೀಸರು ದೂರವಾಣಿ ಕರೆಗಳನ್ನು ಪರಿಶೀಲಿಸಲು ವಿಳಂಬ ಮಾಡಿ ವೃತ್ತಿಪರತೆ ಪಾಲಿಸುವುದರಲ್ಲಿ ವಿಫಲರಾಗಿದ್ದಾರೆ~ ಎಂದು ಆಪಾದಿಸಿದ್ದರು.<br /> <br /> ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವಂತೆ ಕೋರುತ್ತೀರಾ ಎಂದು ಕೇಳಿದಾಗ, ಭದ್ರತೆ ಪಡೆಯುವುದರಿಂದ ಇಂತಹ ಬೆದರಿಕೆ ಕರೆಗಳು ನಿಲ್ಲುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಖೇಮ್ಕಾ ತಿಳಿಸಿದ್ದಾರೆ.<br /> <br /> ಖೇಮ್ಕಾ ದೂರು ನೀಡಿದ ನಂತರ ಪೊಲೀಸರು ಐಪಿಸಿ ಕಲಂ 506 (ಕ್ರಿಮಿನಲ್ ಬೆದರಿಕೆ) ಮತ್ತು ಕಲಂ 509 (ಮಹಿಳೆಯ ಮರ್ಯಾದೆಗೆ ಧಕ್ಕೆ ತರುವ ಕೃತ್ಯ) ಪ್ರಕಾರ ಎಫ್ಐಆರ್ ದಾಖಲಿಸಿದ್ದಾರೆ. ನಂತರ ಸೈಬರ್ ತಜ್ಞರ ನೆರವಿನಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.<br /> <br /> ಕರೆ ಮಾಡಿದ ವ್ಯಕ್ತಿಯು ತೀರಾ ಕೆಟ್ಟ ಭಾಷೆ ಬಳಸಿದ್ದ ಎಂದು ಪಂಚಕುಲಾ ಪೊಲೀಸ್ ಠಾಣೆಯ ಅಧಿಕಾರಿ ನುಪೂರ್ ಬಿಷ್ಣೋಯಿ ಹೇಳಿದ್ದಾರೆ.<br /> <br /> ಖೇಮ್ಕಾ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕೆರೆ ಬಂದಿದೆ ಎಂದು 15 ದಿನಗಳ ಹಿಂದೆಯೇ ಖೇಮ್ಕಾ ಅವರ ಸ್ನೇಹಿತ ಮತ್ತು ಖ್ಯಾತ ವಕೀಲ ಅನುಪಮ್ ಗುಪ್ತ ತಿಳಿಸಿದ್ದರು.<br /> <br /> ವಾದ್ರಾ ಮತ್ತು ಡಿಎಲ್ಎಫ್ ಭೂ ಹಗರಣ ಬಹಿರಂಗಗೊಂಡ ನಂತರ ಈ ಭೂ ವ್ಯವಹಾರದ ತನಿಖೆ ನಡೆಸುವಂತೆ ಖೇಮ್ಕಾ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು. <br /> <br /> ಈ ಹಿನ್ನೆಲೆಯಲ್ಲಿ ಭೂ ಹಿಡುವಳಿ ಮತ್ತು ಭೂ ದಾಖಲೆಯ ಮಹಾ ನಿರ್ದೇಶಕ ಸ್ಥಾನದಿಂದ ಅವರನ್ನು ಹರಿಯಾಣ ಬೀಜ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಲಾಗಿದೆ.<br /> <br /> ನಂತರ ಹರಿಯಾಣದ ನಾಲ್ವರು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ, ವಾದ್ರಾ ಯಾವುದೇ ರೀತಿಯ ಭೂ ಅವ್ಯವಹಾರ ನಡೆಸಿಲ್ಲ ಎಂದು ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಂಡೀಗಡ (ಪಿಟಿಐ): 15 ದಿನಗಳಲ್ಲಿ ಎರಡು ಬೆದರಿಕೆ ಕರೆಗಳು ಬಂದಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಬರ್ಟ್ ವಾದ್ರಾ ಮತ್ತು ಡಿಎಲ್ಎಫ್ ಭೂ ಹಗರಣದ ತನಿಖೆಗೆ ಆದೇಶಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಆಪಾದಿಸಿದ್ದಾರೆ.<br /> <br /> ಈ ಮಧ್ಯೆ ಶುಕ್ರವಾರ ರಾತ್ರಿ ಹರಿಯಾಣ ಪೊಲೀಸರು ಬೆದರಿಕೆ ಕರೆ ಮಾಡಿದ್ದ ಒಬ್ಬನನ್ನು ಬಂಧಿಸಿದ್ದಾರೆ. ದೂರವಾಣಿ ಕರೆಗಳನ್ನು ಪರಿಶೀಲನೆ ಮಾಡಿದ ನಂತರ ಉಮೈದ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪಂಚಕುಲಾ ವಿಭಾಗದ ಡಿಸಿಪಿ ಪರುಲ್ ಕುಶ್ ಜೈನ್ ತಿಳಿಸಿದ್ದಾರೆ.<br /> <br /> ಹರಿಯಾಣ ಗೃಹ ಮಂಡಳಿಯ ಆಡಳಿತಾಧಿಕಾರಿಯಾಗಿದ್ದಾಗ ಖೇಮ್ಕಾ ಅವರು ಉಮೈದ್ ಸಿಂಗ್ನನ್ನು ಸೇವೆಯಿಂದ ವಜಾ ಮಾಡಿದ್ದರು. ಸಿಂಗ್ ಗುಡಗಾಂವ್ ನಿವಾಸಿಯಾಗಿದ್ದು, ಅಲ್ಲಿಯೇ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜೈನ್ ತಿಳಿಸಿದ್ದಾರೆ.<br /> <br /> ಇದಕ್ಕೂ ಮೊದಲು ಹೇಳಿಕೆ ನೀಡಿರುವ ಖೇಮ್ಕಾ ಅವರು, `ಪೊಲೀಸರು ದೂರವಾಣಿ ಕರೆಗಳನ್ನು ಪರಿಶೀಲಿಸಲು ವಿಳಂಬ ಮಾಡಿ ವೃತ್ತಿಪರತೆ ಪಾಲಿಸುವುದರಲ್ಲಿ ವಿಫಲರಾಗಿದ್ದಾರೆ~ ಎಂದು ಆಪಾದಿಸಿದ್ದರು.<br /> <br /> ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವಂತೆ ಕೋರುತ್ತೀರಾ ಎಂದು ಕೇಳಿದಾಗ, ಭದ್ರತೆ ಪಡೆಯುವುದರಿಂದ ಇಂತಹ ಬೆದರಿಕೆ ಕರೆಗಳು ನಿಲ್ಲುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಖೇಮ್ಕಾ ತಿಳಿಸಿದ್ದಾರೆ.<br /> <br /> ಖೇಮ್ಕಾ ದೂರು ನೀಡಿದ ನಂತರ ಪೊಲೀಸರು ಐಪಿಸಿ ಕಲಂ 506 (ಕ್ರಿಮಿನಲ್ ಬೆದರಿಕೆ) ಮತ್ತು ಕಲಂ 509 (ಮಹಿಳೆಯ ಮರ್ಯಾದೆಗೆ ಧಕ್ಕೆ ತರುವ ಕೃತ್ಯ) ಪ್ರಕಾರ ಎಫ್ಐಆರ್ ದಾಖಲಿಸಿದ್ದಾರೆ. ನಂತರ ಸೈಬರ್ ತಜ್ಞರ ನೆರವಿನಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.<br /> <br /> ಕರೆ ಮಾಡಿದ ವ್ಯಕ್ತಿಯು ತೀರಾ ಕೆಟ್ಟ ಭಾಷೆ ಬಳಸಿದ್ದ ಎಂದು ಪಂಚಕುಲಾ ಪೊಲೀಸ್ ಠಾಣೆಯ ಅಧಿಕಾರಿ ನುಪೂರ್ ಬಿಷ್ಣೋಯಿ ಹೇಳಿದ್ದಾರೆ.<br /> <br /> ಖೇಮ್ಕಾ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕೆರೆ ಬಂದಿದೆ ಎಂದು 15 ದಿನಗಳ ಹಿಂದೆಯೇ ಖೇಮ್ಕಾ ಅವರ ಸ್ನೇಹಿತ ಮತ್ತು ಖ್ಯಾತ ವಕೀಲ ಅನುಪಮ್ ಗುಪ್ತ ತಿಳಿಸಿದ್ದರು.<br /> <br /> ವಾದ್ರಾ ಮತ್ತು ಡಿಎಲ್ಎಫ್ ಭೂ ಹಗರಣ ಬಹಿರಂಗಗೊಂಡ ನಂತರ ಈ ಭೂ ವ್ಯವಹಾರದ ತನಿಖೆ ನಡೆಸುವಂತೆ ಖೇಮ್ಕಾ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು. <br /> <br /> ಈ ಹಿನ್ನೆಲೆಯಲ್ಲಿ ಭೂ ಹಿಡುವಳಿ ಮತ್ತು ಭೂ ದಾಖಲೆಯ ಮಹಾ ನಿರ್ದೇಶಕ ಸ್ಥಾನದಿಂದ ಅವರನ್ನು ಹರಿಯಾಣ ಬೀಜ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಲಾಗಿದೆ.<br /> <br /> ನಂತರ ಹರಿಯಾಣದ ನಾಲ್ವರು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ, ವಾದ್ರಾ ಯಾವುದೇ ರೀತಿಯ ಭೂ ಅವ್ಯವಹಾರ ನಡೆಸಿಲ್ಲ ಎಂದು ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>