<p>ಆದಾಯ ತೆರಿಗೆ ಮಿತಿಗಿಂತ ಕಡಿಮೆ ವರಮಾನ ಇರುವ ಸಣ್ಣ ಉದ್ದಿಮೆದಾರರು `ಕಾಯಂ ಖಾತೆ ಸಂಖ್ಯೆ~ (ಪ್ಯಾನ್) ಹೊಂದಿರುವುದು ಕಡ್ಡಾಯ ಎಂಬ ಆದಾಯ ತೆರಿಗೆ ಕಾಯ್ದೆಯ ಸಂಬಂಧಿತ ಕಲಮನ್ನು ಅನೂರ್ಜಿತಗೊಳಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.<br /> <br /> 1961ರ ಈ ಕಾಯ್ದೆಯ 206 ಎಎ ಕಲಮನ್ನು ರದ್ದು ಮಾಡಿರುವ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು, `ಪ್ಯಾನ್~ ನೀಡುವಂತೆ ಬ್ಯಾಂಕ್ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಇಂತಹ ಉದ್ದಿಮೆದಾರರಿಗೆ ಒತ್ತಾಯ ಮಾಡಬಾರದು ಎಂದು ಹೇಳಿದ್ದಾರೆ.<br /> <br /> 2010ರ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಜಾರಿಗೆ ಬಂದ 206 ಎಎ ಕಲಮಿನ ರದ್ದತಿಗೆ ಕೋರಿ ಕೌಶಲ್ಯ ಬಾಯಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. `ಇಂತಹ ಉದ್ದಿಮೆದಾರರು ಕೂಡ `ಪ್ಯಾನ್~ ಹೊಂದುವುದು ಕಡ್ಡಾಯ. ಅದನ್ನು ಹೊಂದದೇ ಇದ್ದರೆ ಅವರು ಬ್ಯಾಂಕ್ಗಳಲ್ಲಿ ಇಡುವ ಠೇವಣಿ ಹಣಕ್ಕೆ ಅನುಗುಣವಾಗಿ ಆದಾಯ ತೆರಿಗೆ ಕಡಿತಗೊಳಿಸಲಾಗುವುದು~ ಎಂದು ಈ ಕಲಮಿನಲ್ಲಿ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.<br /> <br /> ತಾವು ಉಳಿತಾಯ ಮಾಡಿದ್ದ ಹಣವನ್ನು ಹೆಚ್ಚು ಬಡ್ಡಿಯ ಆಸೆಯಿಂದ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಠೇವಣಿಯಾಗಿ ಇಡಲು ಅರ್ಜಿದಾರರು ಮುಂದಾಗಿದ್ದರು. ಆದರೆ ಆಗ ಸಂಸ್ಥೆಗಳು `ಪ್ಯಾನ್~ ಕಾರ್ಡ್ ಕೇಳಿದವು. ಇದು ಸರಿಯಲ್ಲ ಎನ್ನುವುದು ಅವರ ವಾದ.<br /> <br /> ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ. `ಕಡಿಮೆ ಆದಾಯವುಳ್ಳ ವ್ಯಕ್ತಿಗಳಿಗೆ ಈ ರೀತಿ ಕಡ್ಡಾಯ ಹೇರಿದರೆ ಅವರು ಹಣ ಉಳಿತಾಯ ಮಾಡದೆ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇದೆ. ಹೆಚ್ಚು ಜನರನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಬೇಕು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಿರುವುದು ಸತ್ಯ. ಆದರೆ ಸಣ್ಣ ಉದ್ದಿಮೆದಾರರನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಿರುವುದು ಸರಿಯಲ್ಲ~ ಎಂದು ಆದೇಶದಲ್ಲಿ ಅವರು ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆದಾಯ ತೆರಿಗೆ ಮಿತಿಗಿಂತ ಕಡಿಮೆ ವರಮಾನ ಇರುವ ಸಣ್ಣ ಉದ್ದಿಮೆದಾರರು `ಕಾಯಂ ಖಾತೆ ಸಂಖ್ಯೆ~ (ಪ್ಯಾನ್) ಹೊಂದಿರುವುದು ಕಡ್ಡಾಯ ಎಂಬ ಆದಾಯ ತೆರಿಗೆ ಕಾಯ್ದೆಯ ಸಂಬಂಧಿತ ಕಲಮನ್ನು ಅನೂರ್ಜಿತಗೊಳಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.<br /> <br /> 1961ರ ಈ ಕಾಯ್ದೆಯ 206 ಎಎ ಕಲಮನ್ನು ರದ್ದು ಮಾಡಿರುವ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು, `ಪ್ಯಾನ್~ ನೀಡುವಂತೆ ಬ್ಯಾಂಕ್ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಇಂತಹ ಉದ್ದಿಮೆದಾರರಿಗೆ ಒತ್ತಾಯ ಮಾಡಬಾರದು ಎಂದು ಹೇಳಿದ್ದಾರೆ.<br /> <br /> 2010ರ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಜಾರಿಗೆ ಬಂದ 206 ಎಎ ಕಲಮಿನ ರದ್ದತಿಗೆ ಕೋರಿ ಕೌಶಲ್ಯ ಬಾಯಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. `ಇಂತಹ ಉದ್ದಿಮೆದಾರರು ಕೂಡ `ಪ್ಯಾನ್~ ಹೊಂದುವುದು ಕಡ್ಡಾಯ. ಅದನ್ನು ಹೊಂದದೇ ಇದ್ದರೆ ಅವರು ಬ್ಯಾಂಕ್ಗಳಲ್ಲಿ ಇಡುವ ಠೇವಣಿ ಹಣಕ್ಕೆ ಅನುಗುಣವಾಗಿ ಆದಾಯ ತೆರಿಗೆ ಕಡಿತಗೊಳಿಸಲಾಗುವುದು~ ಎಂದು ಈ ಕಲಮಿನಲ್ಲಿ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.<br /> <br /> ತಾವು ಉಳಿತಾಯ ಮಾಡಿದ್ದ ಹಣವನ್ನು ಹೆಚ್ಚು ಬಡ್ಡಿಯ ಆಸೆಯಿಂದ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಠೇವಣಿಯಾಗಿ ಇಡಲು ಅರ್ಜಿದಾರರು ಮುಂದಾಗಿದ್ದರು. ಆದರೆ ಆಗ ಸಂಸ್ಥೆಗಳು `ಪ್ಯಾನ್~ ಕಾರ್ಡ್ ಕೇಳಿದವು. ಇದು ಸರಿಯಲ್ಲ ಎನ್ನುವುದು ಅವರ ವಾದ.<br /> <br /> ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ. `ಕಡಿಮೆ ಆದಾಯವುಳ್ಳ ವ್ಯಕ್ತಿಗಳಿಗೆ ಈ ರೀತಿ ಕಡ್ಡಾಯ ಹೇರಿದರೆ ಅವರು ಹಣ ಉಳಿತಾಯ ಮಾಡದೆ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇದೆ. ಹೆಚ್ಚು ಜನರನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಬೇಕು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಿರುವುದು ಸತ್ಯ. ಆದರೆ ಸಣ್ಣ ಉದ್ದಿಮೆದಾರರನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಿರುವುದು ಸರಿಯಲ್ಲ~ ಎಂದು ಆದೇಶದಲ್ಲಿ ಅವರು ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>