<p>ಬ್ರಹ್ಮಾವರ: ಕೊರಗ ಸಮುದಾಯ ಅತ್ಯಂತ ಮುಗ್ಧ ಸಮಾಜ. ಸ್ವಾತಂತ್ರ್ಯಾ ನಂತರ ದೇಶ ಅಭಿವೃದ್ಧಿ ಹೊಂದಿದರೂ ಹಲವು ಕಟ್ಟುಪಾಡುಗಳಿಂದ ಜನರಲ್ಲಿ ತಾರತಮ್ಯ ಜೀವಂತವಾಗಿದ್ದು, ಈ ಎಲ್ಲಾ ತಾರತಮ್ಯವನ್ನು ಪ್ರತಿಭಟಿಸುವ ಮನೋಭಾವ ಜನರಲ್ಲಿ ಬೆಳೆಯಬೇಕು ಎಂದು ಉದ್ಯಮಿ ಪ್ರಮೋದ್ ಮಧ್ವರಾಜ್ ಹೇಳಿದರು.<br /> <br /> ವಾರಂಬಳ್ಳಿ ತೆಂಕುಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಕೊರಗಜ್ಜ ಕಲಾತಂಡಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.<br /> <br /> ಹಿರಿಯರಾದ ನಾರಾಯಣ ಮಾಸ್ಟರ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಬ್ಯಾಂಡ್ ಸೆಟ್ಗಳು ಹುಟ್ಟಿಕೊಂಡು ಜನರನ್ನು ಮರಳು ಮಾಡುತ್ತಿವೆ. ಆದರೆ ಶತಮಾನದಷ್ಟು ಹಳೆಯದಾದ ಡೋಲಿನಿಂದ ಹೊರಹೊಮ್ಮುವ ನಾದ ಬೇರೆ ಯಾವುದೇ ವಾದ್ಯಕ್ಕೂ ಸಾಟಿಯಲ್ಲ ಎಂದು ಹೇಳಿದರು.<br /> <br /> ಉದ್ಯಮಿ ರಾಜೇಶ್ ಶೆಟ್ಟಿ ಬಿರ್ತಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಾರಾಯಣ, ಶ್ಯಾಂರಾಜ್ ಬಿರ್ತಿ, ರವಿಚಂದ್ರ ಕಪ್ಪೆಟ್ಟು, ಜತ್ತ ಕೊರಗ, ಬಚ್ಚ ಕೊರಗ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ಕೊರಗ ಸಮುದಾಯ ಅತ್ಯಂತ ಮುಗ್ಧ ಸಮಾಜ. ಸ್ವಾತಂತ್ರ್ಯಾ ನಂತರ ದೇಶ ಅಭಿವೃದ್ಧಿ ಹೊಂದಿದರೂ ಹಲವು ಕಟ್ಟುಪಾಡುಗಳಿಂದ ಜನರಲ್ಲಿ ತಾರತಮ್ಯ ಜೀವಂತವಾಗಿದ್ದು, ಈ ಎಲ್ಲಾ ತಾರತಮ್ಯವನ್ನು ಪ್ರತಿಭಟಿಸುವ ಮನೋಭಾವ ಜನರಲ್ಲಿ ಬೆಳೆಯಬೇಕು ಎಂದು ಉದ್ಯಮಿ ಪ್ರಮೋದ್ ಮಧ್ವರಾಜ್ ಹೇಳಿದರು.<br /> <br /> ವಾರಂಬಳ್ಳಿ ತೆಂಕುಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಕೊರಗಜ್ಜ ಕಲಾತಂಡಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.<br /> <br /> ಹಿರಿಯರಾದ ನಾರಾಯಣ ಮಾಸ್ಟರ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಬ್ಯಾಂಡ್ ಸೆಟ್ಗಳು ಹುಟ್ಟಿಕೊಂಡು ಜನರನ್ನು ಮರಳು ಮಾಡುತ್ತಿವೆ. ಆದರೆ ಶತಮಾನದಷ್ಟು ಹಳೆಯದಾದ ಡೋಲಿನಿಂದ ಹೊರಹೊಮ್ಮುವ ನಾದ ಬೇರೆ ಯಾವುದೇ ವಾದ್ಯಕ್ಕೂ ಸಾಟಿಯಲ್ಲ ಎಂದು ಹೇಳಿದರು.<br /> <br /> ಉದ್ಯಮಿ ರಾಜೇಶ್ ಶೆಟ್ಟಿ ಬಿರ್ತಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಾರಾಯಣ, ಶ್ಯಾಂರಾಜ್ ಬಿರ್ತಿ, ರವಿಚಂದ್ರ ಕಪ್ಪೆಟ್ಟು, ಜತ್ತ ಕೊರಗ, ಬಚ್ಚ ಕೊರಗ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>