<p><strong>ಶೃಂಗೇರಿ :</strong>ವೈಶಾಖ ಶುಕ್ಲ ಪಂಚಮಿ ಶಂಕರರ ಜಯಂತಿಯ ಮಾರನೇ ದಿನವಾದ ವೈಶಾಖ ಶುಕ್ಲ ಷಷ್ಠಿಯಂದು ಪ್ರತೀ ವರ್ಷ ಶೃಂಗೇರಿಯಲ್ಲಿ ಆದಿ ಶಂಕರರ ಮಹಾರಥೋತ್ಸವ ನಡೆಯಲಿ ರುವುದಾಗಿ ಭಾರತಿ ತೀರ್ಥ ಸ್ವಾಮೀಜಿ ಘೋಷಿಸಿದರು.ಶ್ರೀಗಳು ಬುಧವಾರ ಶಾರದಾ ಪೀಠದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಆದಿ ಶಂಕರರ ಆಲಯದ ಪ್ರತಿಷ್ಠಾಪನಾ ಕುಂಭಾಭಿಷೇಕ ನೆರವೇರಿಸಿ ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು.<br /> <br /> ಆದಿ ಶಂಕರ ಜೀವನ ಹಾಗೂ ಸಂದೇ ಶವನ್ನು ವಿವರಿಸಿದ ಶ್ರೀಗಳು ಆದಿ ಶಂಕ ರರು, ಕೇವಲ 32 ವರ್ಷಗಳ ಅಲ್ಪಾ ವಧಿಯಲ್ಲಿ ಮಹತ್ ಸಾಧನೆಗೈದು ಜಗತ್ತಿಗೆ ಹೊಸ ಬೆಳಕನ್ನು ತೋರಿಸಿದರು ಎಂದರು.ಇದೇ ಸಂದರ್ಭದಲ್ಲಿ ಆದಿ ಶಂಕರರ ಆಲಯದ ನಿಮಾತೃ ಶಂಕರ ಸ್ಥಪತಿ ಗಳನ್ನು ಸನ್ಮಾನಿಸಿ ಶ್ರೀಮಠದ ಆಸ್ಥಾನ ವಿದ್ವಾನ್ ಗೌರವ ಪದವಿ ನೀಡಿದರು.ಉದ್ಯಮಿ ಆದಿಕೇಶವಲು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಕೆ. ದಿವಾಕರ್, ಶಾಸಕ ಡಿ.ಎನ್. ಜೀವರಾಜ್, ಸಂಸದ ವಿಶ್ವನಾಥ್, ಐಎಎಸ್ ಅಧಿಕಾರಿ ರಾಮಸ್ವಾಮಿ, ಶಿವಗಂಗಾ, ಎಡೆತೊರೆ ಹಳದೀಪುರ ಮಠ ಸ್ವಾಮೀಜಿ ಇದ್ದರು. <br /> <br /> ಆಡಳಿತಾಧಿಕಾರಿ ಡಾ.ವಿ.ಆರ್. ಗೌರೀಶಂಕರ್ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಸಾವಿರಾರು ಭಕ್ತರ ಸಮ್ಮುಖ ದಲ್ಲಿ ಮಹಾಕುಂಭಾಭಿಷೇಕ ನೆರವೇರಿಸಿ ದ ಶ್ರೀಗಳು ಶಂಕರರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಶ್ರೀಮಠದ ಆವರಣದಲ್ಲಿ ಪ್ರತಿಷ್ಠಾಪನಾ ಕುಂಭಾಭಿಷೇಕದ ಅಂಗವಾಗಿ ನಡೆಯು ತ್ತಿರುವ ಅತಿರುದ್ರಮಹಾಯಾಗದ ಪುರ್ಣಾಹುತಿ ನಡೆಯಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ :</strong>ವೈಶಾಖ ಶುಕ್ಲ ಪಂಚಮಿ ಶಂಕರರ ಜಯಂತಿಯ ಮಾರನೇ ದಿನವಾದ ವೈಶಾಖ ಶುಕ್ಲ ಷಷ್ಠಿಯಂದು ಪ್ರತೀ ವರ್ಷ ಶೃಂಗೇರಿಯಲ್ಲಿ ಆದಿ ಶಂಕರರ ಮಹಾರಥೋತ್ಸವ ನಡೆಯಲಿ ರುವುದಾಗಿ ಭಾರತಿ ತೀರ್ಥ ಸ್ವಾಮೀಜಿ ಘೋಷಿಸಿದರು.ಶ್ರೀಗಳು ಬುಧವಾರ ಶಾರದಾ ಪೀಠದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಆದಿ ಶಂಕರರ ಆಲಯದ ಪ್ರತಿಷ್ಠಾಪನಾ ಕುಂಭಾಭಿಷೇಕ ನೆರವೇರಿಸಿ ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು.<br /> <br /> ಆದಿ ಶಂಕರ ಜೀವನ ಹಾಗೂ ಸಂದೇ ಶವನ್ನು ವಿವರಿಸಿದ ಶ್ರೀಗಳು ಆದಿ ಶಂಕ ರರು, ಕೇವಲ 32 ವರ್ಷಗಳ ಅಲ್ಪಾ ವಧಿಯಲ್ಲಿ ಮಹತ್ ಸಾಧನೆಗೈದು ಜಗತ್ತಿಗೆ ಹೊಸ ಬೆಳಕನ್ನು ತೋರಿಸಿದರು ಎಂದರು.ಇದೇ ಸಂದರ್ಭದಲ್ಲಿ ಆದಿ ಶಂಕರರ ಆಲಯದ ನಿಮಾತೃ ಶಂಕರ ಸ್ಥಪತಿ ಗಳನ್ನು ಸನ್ಮಾನಿಸಿ ಶ್ರೀಮಠದ ಆಸ್ಥಾನ ವಿದ್ವಾನ್ ಗೌರವ ಪದವಿ ನೀಡಿದರು.ಉದ್ಯಮಿ ಆದಿಕೇಶವಲು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಕೆ. ದಿವಾಕರ್, ಶಾಸಕ ಡಿ.ಎನ್. ಜೀವರಾಜ್, ಸಂಸದ ವಿಶ್ವನಾಥ್, ಐಎಎಸ್ ಅಧಿಕಾರಿ ರಾಮಸ್ವಾಮಿ, ಶಿವಗಂಗಾ, ಎಡೆತೊರೆ ಹಳದೀಪುರ ಮಠ ಸ್ವಾಮೀಜಿ ಇದ್ದರು. <br /> <br /> ಆಡಳಿತಾಧಿಕಾರಿ ಡಾ.ವಿ.ಆರ್. ಗೌರೀಶಂಕರ್ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಸಾವಿರಾರು ಭಕ್ತರ ಸಮ್ಮುಖ ದಲ್ಲಿ ಮಹಾಕುಂಭಾಭಿಷೇಕ ನೆರವೇರಿಸಿ ದ ಶ್ರೀಗಳು ಶಂಕರರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಶ್ರೀಮಠದ ಆವರಣದಲ್ಲಿ ಪ್ರತಿಷ್ಠಾಪನಾ ಕುಂಭಾಭಿಷೇಕದ ಅಂಗವಾಗಿ ನಡೆಯು ತ್ತಿರುವ ಅತಿರುದ್ರಮಹಾಯಾಗದ ಪುರ್ಣಾಹುತಿ ನಡೆಯಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>