<p><strong>ಮಂಗಳೂರು: </strong>ರಾಜ್ಯ ಮಟ್ಟದಲ್ಲಿ ಫಿಸಿಯೊಥೆರಪಿ ಕೌನ್ಸಿಲ್ ಸ್ಥಾಪಿಸುವಂತೆ ಭಾರತ ಕ್ರೀಡಾ ಮತ್ತು ದೈಹಿಕ ಕ್ಷಮತೆ ತರಬೇತುದಾರರ ಫೆಡರೇಷನ್ (ಎಸ್ಎಫ್ಟಿಎಫ್ಐ) ಅಧ್ಯಕ್ಷ ಮತ್ತು ಸದಸ್ಯರು ಶನಿವಾರ ನಗರಕ್ಕೆ ಆಗಮಿಸಿದ್ದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದರು.<br /> <br /> ರಾಜ್ಯದಲ್ಲಿ ಫಿಸಿಯೊಥೆರಪಿ ಕೋರ್ಸ್ಗಳನ್ನು ಏಕರೂಪಕ್ಕೆ ತರಲು ಪ್ರತ್ಯೇಕ ಫಿಸಿಯೊಥೆರಪಿ ಕೌನ್ಸಿಲ್ ಸ್ಥಾಪಿಸುವ ಅಗತ್ಯವಿದೆ ಎಂದು ಸದಸ್ಯರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮತ್ತು ಆರೋಗ್ಯ ಸಚಿವಾಲಯದ ಜತೆ ಚರ್ಚಿಸಿ ಮುಂಬರುವ ಅಧಿವೇಶನದಲ್ಲಿ ಕೌನ್ಸಿಲ್ ರಚನೆಗೆ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದರು.<br /> <br /> ದೇಶದ ಹಲವು ರಾಜ್ಯಗಳು ಪ್ರತ್ಯೇಕ ಫಿಸಿಯೊಥೆರಪಿ ಕೌನ್ಸಿಲ್ಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೂ ಇದರ ಅಗತ್ಯವಿದೆ. ಇದರಿಂದ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಉದ್ಯೋಗಾವಕಾಶವೂ ದೊರೆಯುತ್ತದೆ ಎಂದು ಹೇಳಿದರು.<br /> <br /> ಫೆಡರೇಷನ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ರಾಜ್ಯ ಸಂಚಾಲಕ ಎ.ಸುರೇಶಬಾಬು ರೆಡ್ಡಿ, ಖೇತನ್ ಭಾತಿಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನವಿತಾ ಪೆರೀರ, ಮುಹಮದ್ ಸುಹೇಲ್, ವೈಶಾಲಿ ಶ್ರೀಜಿತ್, ಮೆರಿಲ್ ಜೆ.ಕೊಲಾಕೊ ಇದ್ದರು.<br /> <br /> <strong>ಸುಷ್ಮಾ, ಮೊಯಿಲಿ ಜತೆ ಭೇಟಿ: </strong>ಎಸ್ಎಫ್ಟಿಎಫ್ಐ ಸದಸ್ಯರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ರಾಜ್ಯ ಮಟ್ಟದಲ್ಲಿ ಫಿಸಿಯೊಥೆರಪಿ ಕೌನ್ಸಿಲ್ ಸ್ಥಾಪಿಸುವಂತೆ ಭಾರತ ಕ್ರೀಡಾ ಮತ್ತು ದೈಹಿಕ ಕ್ಷಮತೆ ತರಬೇತುದಾರರ ಫೆಡರೇಷನ್ (ಎಸ್ಎಫ್ಟಿಎಫ್ಐ) ಅಧ್ಯಕ್ಷ ಮತ್ತು ಸದಸ್ಯರು ಶನಿವಾರ ನಗರಕ್ಕೆ ಆಗಮಿಸಿದ್ದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದರು.<br /> <br /> ರಾಜ್ಯದಲ್ಲಿ ಫಿಸಿಯೊಥೆರಪಿ ಕೋರ್ಸ್ಗಳನ್ನು ಏಕರೂಪಕ್ಕೆ ತರಲು ಪ್ರತ್ಯೇಕ ಫಿಸಿಯೊಥೆರಪಿ ಕೌನ್ಸಿಲ್ ಸ್ಥಾಪಿಸುವ ಅಗತ್ಯವಿದೆ ಎಂದು ಸದಸ್ಯರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮತ್ತು ಆರೋಗ್ಯ ಸಚಿವಾಲಯದ ಜತೆ ಚರ್ಚಿಸಿ ಮುಂಬರುವ ಅಧಿವೇಶನದಲ್ಲಿ ಕೌನ್ಸಿಲ್ ರಚನೆಗೆ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದರು.<br /> <br /> ದೇಶದ ಹಲವು ರಾಜ್ಯಗಳು ಪ್ರತ್ಯೇಕ ಫಿಸಿಯೊಥೆರಪಿ ಕೌನ್ಸಿಲ್ಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೂ ಇದರ ಅಗತ್ಯವಿದೆ. ಇದರಿಂದ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಉದ್ಯೋಗಾವಕಾಶವೂ ದೊರೆಯುತ್ತದೆ ಎಂದು ಹೇಳಿದರು.<br /> <br /> ಫೆಡರೇಷನ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ರಾಜ್ಯ ಸಂಚಾಲಕ ಎ.ಸುರೇಶಬಾಬು ರೆಡ್ಡಿ, ಖೇತನ್ ಭಾತಿಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನವಿತಾ ಪೆರೀರ, ಮುಹಮದ್ ಸುಹೇಲ್, ವೈಶಾಲಿ ಶ್ರೀಜಿತ್, ಮೆರಿಲ್ ಜೆ.ಕೊಲಾಕೊ ಇದ್ದರು.<br /> <br /> <strong>ಸುಷ್ಮಾ, ಮೊಯಿಲಿ ಜತೆ ಭೇಟಿ: </strong>ಎಸ್ಎಫ್ಟಿಎಫ್ಐ ಸದಸ್ಯರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>