<p><strong>ಬೆಂಗಳೂರು:</strong> `ವಿಶ್ವವಿದ್ಯಾಲಯಗಳು ಕೇವಲ ಕೆಲವೇ ವಿಷಯಗಳಿಗೆ ಪ್ರತ್ಯೇಕವಾಗುತ್ತಿರುವ ಕ್ರಮ ಸರಿಯಲ್ಲ~ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ವೇದ ಪ್ರಕಾಶ್ ಅಭಿಪ್ರಾಯಪಟ್ಟರು.<br /> <br /> ನಾಗರಬಾವಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ವಿಶ್ವವಿದ್ಯಾಲಯಗಳು ಎಲ್ಲ ಜ್ಞಾನಗಳನ್ನು ಒಳಗೊಳ್ಳಬೇಕು. ಎಲ್ಲ ವಿಷಯಗಳಲ್ಲಿಯೂ ಅಭ್ಯಾಸ ಹಾಗೂ ಸಂಶೋಧನೆಗೆ ಎಲ್ಲ ವಿಶ್ವವಿದ್ಯಾಲಯಗಳೂ ಮುಕ್ತವಾಗಿರಬೇಕು. <br /> <br /> ಆದರೆ ಇಂದು ವಿಷಯವಾರು ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿವೆ. ಕೃಷಿ ವಿಶ್ವವಿದ್ಯಾಲಯಗಳು ಕೃಷಿ ವಿಷಯದಲ್ಲಿಯೇ ಅಧ್ಯಯನ ನಡೆಸುವುದರಿಂದ ವಿಜ್ಞಾನದ ಇತರೆ ವಿಷಯ ಅವಗಣನೆಯಾಗುತ್ತಿದೆ. ಒಂದೊಂದು ವಿಷಯಗಳ ಬಗ್ಗೆ ಪ್ರತ್ಯೇಕಗೊಳ್ಳುವುದರಿಂದ ವಿ.ವಿಗಳಲ್ಲಿ ಸಮಗ್ರ ಅಧ್ಯಯನ ಸಾಧ್ಯವಿಲ್ಲ~ ಎಂದರು.<br /> <br /> `ಇಂದಿಗೂ ಭಾರತವು ಶೈಕ್ಷಣಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಮುಖ್ಯ ಸ್ಥಾನದಲ್ಲಿದೆ. ರಾಷ್ಟ್ರದ ವಿಶ್ವವಿದ್ಯಾಲಯಗಳು ಜ್ಞಾನಮೂಲವಾದ, ಮೌಲ್ಯಯುತ ಶಿಕ್ಷಣವನ್ನು ಹಂಚಲು ಹೆಚ್ಚು ಗಮನ ನೀಡಬೇಕು. ಜ್ಞಾನದ ಸಮರ್ಪಕ ಪ್ರಸಾರ ಎಲ್ಲ ವಿಶ್ವವಿದ್ಯಾಲಯಗಳ ಧ್ಯೇಯವಾಗಬೇಕು~ ಎಂದರು.<br /> <br /> `12ನೇ ಪಂಚ ವಾರ್ಷಿಕ ಯೋಜನೆಯಲ್ಲಿ 1.84 ಲಕ್ಷ ಕೋಟಿ ರೂಪಾಯಿಗಳನ್ನು ಉನ್ನತ ಶಿಕ್ಷಣಕ್ಕಾಗಿ ಮೀಸಲಿಡಲು ವಿಶ್ವವಿದ್ಯಾಲಯ ಧನಸಹಾಯ ಆಯೋ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರತಿ ವರ್ಷ 40 ಲಕ್ಷ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದ ವ್ಯಾಪ್ತಿಗೆ ತರುವ ಗುರಿ ಇದೆ~ ಎಂದರು.<br /> <br /> `ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತ್ಯೇಕಿಸಬೇಕು ಎಂಬ ಪ್ರಸ್ತಾವ ಕೇಳಿ ಬರುತ್ತಿದೆ. ವಿಶ್ವವಿದ್ಯಾಲಯವನ್ನು ಪ್ರತ್ಯೇಕಗೊಳಿಸುವುದು ಕಾಲೇಜುಗಳ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಲಿದೆ~ ಎಂದರು. <br /> 28 ರಾಜ್ಯಗಳ 350 ವಿದ್ಯಾಸಂಸ್ಥೆಗಳಿಗೆ ನ್ಯಾಕ್ ಮಾನ್ಯತಾ ಪ್ರಮಾಣ ಪತ್ರ ವಿತರಿಸಲಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ವಿಶ್ವವಿದ್ಯಾಲಯಗಳು ಕೇವಲ ಕೆಲವೇ ವಿಷಯಗಳಿಗೆ ಪ್ರತ್ಯೇಕವಾಗುತ್ತಿರುವ ಕ್ರಮ ಸರಿಯಲ್ಲ~ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ವೇದ ಪ್ರಕಾಶ್ ಅಭಿಪ್ರಾಯಪಟ್ಟರು.<br /> <br /> ನಾಗರಬಾವಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ವಿಶ್ವವಿದ್ಯಾಲಯಗಳು ಎಲ್ಲ ಜ್ಞಾನಗಳನ್ನು ಒಳಗೊಳ್ಳಬೇಕು. ಎಲ್ಲ ವಿಷಯಗಳಲ್ಲಿಯೂ ಅಭ್ಯಾಸ ಹಾಗೂ ಸಂಶೋಧನೆಗೆ ಎಲ್ಲ ವಿಶ್ವವಿದ್ಯಾಲಯಗಳೂ ಮುಕ್ತವಾಗಿರಬೇಕು. <br /> <br /> ಆದರೆ ಇಂದು ವಿಷಯವಾರು ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿವೆ. ಕೃಷಿ ವಿಶ್ವವಿದ್ಯಾಲಯಗಳು ಕೃಷಿ ವಿಷಯದಲ್ಲಿಯೇ ಅಧ್ಯಯನ ನಡೆಸುವುದರಿಂದ ವಿಜ್ಞಾನದ ಇತರೆ ವಿಷಯ ಅವಗಣನೆಯಾಗುತ್ತಿದೆ. ಒಂದೊಂದು ವಿಷಯಗಳ ಬಗ್ಗೆ ಪ್ರತ್ಯೇಕಗೊಳ್ಳುವುದರಿಂದ ವಿ.ವಿಗಳಲ್ಲಿ ಸಮಗ್ರ ಅಧ್ಯಯನ ಸಾಧ್ಯವಿಲ್ಲ~ ಎಂದರು.<br /> <br /> `ಇಂದಿಗೂ ಭಾರತವು ಶೈಕ್ಷಣಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಮುಖ್ಯ ಸ್ಥಾನದಲ್ಲಿದೆ. ರಾಷ್ಟ್ರದ ವಿಶ್ವವಿದ್ಯಾಲಯಗಳು ಜ್ಞಾನಮೂಲವಾದ, ಮೌಲ್ಯಯುತ ಶಿಕ್ಷಣವನ್ನು ಹಂಚಲು ಹೆಚ್ಚು ಗಮನ ನೀಡಬೇಕು. ಜ್ಞಾನದ ಸಮರ್ಪಕ ಪ್ರಸಾರ ಎಲ್ಲ ವಿಶ್ವವಿದ್ಯಾಲಯಗಳ ಧ್ಯೇಯವಾಗಬೇಕು~ ಎಂದರು.<br /> <br /> `12ನೇ ಪಂಚ ವಾರ್ಷಿಕ ಯೋಜನೆಯಲ್ಲಿ 1.84 ಲಕ್ಷ ಕೋಟಿ ರೂಪಾಯಿಗಳನ್ನು ಉನ್ನತ ಶಿಕ್ಷಣಕ್ಕಾಗಿ ಮೀಸಲಿಡಲು ವಿಶ್ವವಿದ್ಯಾಲಯ ಧನಸಹಾಯ ಆಯೋ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರತಿ ವರ್ಷ 40 ಲಕ್ಷ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದ ವ್ಯಾಪ್ತಿಗೆ ತರುವ ಗುರಿ ಇದೆ~ ಎಂದರು.<br /> <br /> `ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತ್ಯೇಕಿಸಬೇಕು ಎಂಬ ಪ್ರಸ್ತಾವ ಕೇಳಿ ಬರುತ್ತಿದೆ. ವಿಶ್ವವಿದ್ಯಾಲಯವನ್ನು ಪ್ರತ್ಯೇಕಗೊಳಿಸುವುದು ಕಾಲೇಜುಗಳ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಲಿದೆ~ ಎಂದರು. <br /> 28 ರಾಜ್ಯಗಳ 350 ವಿದ್ಯಾಸಂಸ್ಥೆಗಳಿಗೆ ನ್ಯಾಕ್ ಮಾನ್ಯತಾ ಪ್ರಮಾಣ ಪತ್ರ ವಿತರಿಸಲಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>