<p><span style="font-size: 26px;"><strong>ಬೆಳಗಾವಿ:</strong> ನಗರದ ಕ್ಯಾಂಪ್ ಪ್ರದೇಶ ದಲ್ಲಿರುವ ಬೆನನ್ಸ್ಮಿಥ್ ಫೈನ್ ಆರ್ಟ್ಸ್ ಕಾಲೇಜನ್ನು ಬೇರೆ ಕಡೆಗೆ ಸ್ಥಳಾಂತರ ಗೊಳಿಸುತ್ತಿರುವುದನ್ನು ವಿರೋಧಿಸಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.</span><br /> <br /> ಕಾಲೇಜಿನ ಪ್ರಾಚಾರ್ಯ ಅನಿಲ್ ಪ್ರಕಾಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಎದುರು ಧರಣಿ ನಡೆಸಿ, ಆಡಳಿತ ಮಂಡಳಿಯ ಕಿರುಕುಳದ ವಿರುದ್ಧ ಘೋಷಣೆಗಳನ್ನು ಕೂಗಿದರು.<br /> <br /> ಸಂಸ್ಥೆಯು ನಡೆಸುತ್ತಿರುವ ಪ್ರೌಢ ಶಾಲೆಯಲ್ಲಿ ಹೆಚ್ಚುವರಿ ತರಗತಿಗಳನ್ನು ತೆರೆಯುವ ಸಲುವಾಗಿ ಕಾಲೇಜನ್ನು ಆಡಳಿತ ಮಂಡಳಿಯು ಸ್ಥಳಾಂತರಿಸಲು ಮುಂದಾಗಿದೆ. ಇದರಿಂದ ಕಾಲೇಜಿಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.<br /> <br /> `ಫೈನ್ ಆರ್ಟ್ಸ್ ಕಾಲೇಜು ಈ ಸ್ಥಳದಲ್ಲಿ ಕಳೆದ 4 ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ, ಆಡಳಿತ ಮಂಡಳಿಯು ಇದೀಗ ಕಾಲೇಜನ್ನು ಸ್ಥಳಾಂತರಿಸಲು ಮುಂದಾ ಗಿದ್ದು, ವಿದ್ಯಾರ್ಥಿಗಳು ಇದನ್ನು ವಿರೋಧಿಸುತ್ತಿದ್ದಾರೆ. ಆಡಳಿತ ಮಂಡಳಿಯು ಕ್ರಮೇಣ ಕಾಲೇಜಿನ ಸ್ಥಳವನ್ನು ಅತಿಕ್ರಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ.<br /> <br /> ಮಿಷನ್ ಕಂಪೌಂಡ್ನ ಬಾಲಕರ ಹಾಸ್ಟೇಲ್ನಲ್ಲಿ ಕಾಲೇಜಿಗೆ ಸ್ಥಳವನ್ನು ನಿಗದಿ ಪಡಿಸಲಾಗಿದೆ. ಆದರೆ, ಇಲ್ಲಿ ಅತಿ ಕಡಿಮೆ ಸ್ಥಳಾವಕಾಶ ಇದೆ. ಮೂಲ ಸೌಲಭ್ಯದ ಕೊರತೆ ಇದೆ. ಅಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲ. ಅಲ್ಲದೇ ಆ ಸ್ಥಳದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇದೆ' ಎಂದು ಕಾಲೇಜಿನ ಉಪನ್ಯಾಸಕ ಅರೊನ್ ಅನಿಲ್ ಪ್ರಕಾಶ ತಿಳಿಸಿದರು.<br /> <br /> ಆಡಳಿತ ಮಂಡಳಿಯ ಸದಸ್ಯ ರೆವರೆಂಡ್ ಎಚ್.ಎಸ್. ಸೊಲೊಮನ್ ಹಾಗೂ ಪೊಲೀಸರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವಂತೆ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.<br /> <br /> ಕಾಲೇಜನ್ನು ಸ್ಥಳಾಂತರಗೊಳಿಸುವ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.<br /> <br /> <strong>ಸಮಾವೇಶ 7ರಂದು</strong><br /> ಕೊಪ್ಪಳ: ಚೇತನಾ ಅಸೋಸಿಯೇಟ್ಸ್ನ ಆಶ್ರಯದಲ್ಲಿ ಜು. 7ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ಲಿಂಗಾಯತ ವಧು- ವರರ ಮತ್ತು ಪಾಲಕರ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.<br /> <br /> ಮಹಾರಾಷ್ಟ್ರ ಮಂಡಳ, ಎನ್.ಎಂ.ಆರ್.ಸ್ಕ್ಯಾನ್ ಸೆಂಟರ್ ಹತ್ತಿರ, ಕೋರ್ಟ್ ಸರ್ಕಲ್, ಕ್ಲಬ್ ರಸ್ತೆ, ಹುಬ್ಬಳ್ಳಿ- ಈ ವಿಳಾಸದಲ್ಲಿ ಸಮಾವೇಶ ನಡೆಯುವುದು. ಸಮಾವೇಶ ಕುರಿತ ಹೆಚ್ಚಿನ ಮಾಹಿತಿಗೆ ಮೊ: 98451- 57329 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಬೆಳಗಾವಿ:</strong> ನಗರದ ಕ್ಯಾಂಪ್ ಪ್ರದೇಶ ದಲ್ಲಿರುವ ಬೆನನ್ಸ್ಮಿಥ್ ಫೈನ್ ಆರ್ಟ್ಸ್ ಕಾಲೇಜನ್ನು ಬೇರೆ ಕಡೆಗೆ ಸ್ಥಳಾಂತರ ಗೊಳಿಸುತ್ತಿರುವುದನ್ನು ವಿರೋಧಿಸಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.</span><br /> <br /> ಕಾಲೇಜಿನ ಪ್ರಾಚಾರ್ಯ ಅನಿಲ್ ಪ್ರಕಾಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಎದುರು ಧರಣಿ ನಡೆಸಿ, ಆಡಳಿತ ಮಂಡಳಿಯ ಕಿರುಕುಳದ ವಿರುದ್ಧ ಘೋಷಣೆಗಳನ್ನು ಕೂಗಿದರು.<br /> <br /> ಸಂಸ್ಥೆಯು ನಡೆಸುತ್ತಿರುವ ಪ್ರೌಢ ಶಾಲೆಯಲ್ಲಿ ಹೆಚ್ಚುವರಿ ತರಗತಿಗಳನ್ನು ತೆರೆಯುವ ಸಲುವಾಗಿ ಕಾಲೇಜನ್ನು ಆಡಳಿತ ಮಂಡಳಿಯು ಸ್ಥಳಾಂತರಿಸಲು ಮುಂದಾಗಿದೆ. ಇದರಿಂದ ಕಾಲೇಜಿಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.<br /> <br /> `ಫೈನ್ ಆರ್ಟ್ಸ್ ಕಾಲೇಜು ಈ ಸ್ಥಳದಲ್ಲಿ ಕಳೆದ 4 ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ, ಆಡಳಿತ ಮಂಡಳಿಯು ಇದೀಗ ಕಾಲೇಜನ್ನು ಸ್ಥಳಾಂತರಿಸಲು ಮುಂದಾ ಗಿದ್ದು, ವಿದ್ಯಾರ್ಥಿಗಳು ಇದನ್ನು ವಿರೋಧಿಸುತ್ತಿದ್ದಾರೆ. ಆಡಳಿತ ಮಂಡಳಿಯು ಕ್ರಮೇಣ ಕಾಲೇಜಿನ ಸ್ಥಳವನ್ನು ಅತಿಕ್ರಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ.<br /> <br /> ಮಿಷನ್ ಕಂಪೌಂಡ್ನ ಬಾಲಕರ ಹಾಸ್ಟೇಲ್ನಲ್ಲಿ ಕಾಲೇಜಿಗೆ ಸ್ಥಳವನ್ನು ನಿಗದಿ ಪಡಿಸಲಾಗಿದೆ. ಆದರೆ, ಇಲ್ಲಿ ಅತಿ ಕಡಿಮೆ ಸ್ಥಳಾವಕಾಶ ಇದೆ. ಮೂಲ ಸೌಲಭ್ಯದ ಕೊರತೆ ಇದೆ. ಅಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲ. ಅಲ್ಲದೇ ಆ ಸ್ಥಳದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇದೆ' ಎಂದು ಕಾಲೇಜಿನ ಉಪನ್ಯಾಸಕ ಅರೊನ್ ಅನಿಲ್ ಪ್ರಕಾಶ ತಿಳಿಸಿದರು.<br /> <br /> ಆಡಳಿತ ಮಂಡಳಿಯ ಸದಸ್ಯ ರೆವರೆಂಡ್ ಎಚ್.ಎಸ್. ಸೊಲೊಮನ್ ಹಾಗೂ ಪೊಲೀಸರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವಂತೆ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.<br /> <br /> ಕಾಲೇಜನ್ನು ಸ್ಥಳಾಂತರಗೊಳಿಸುವ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.<br /> <br /> <strong>ಸಮಾವೇಶ 7ರಂದು</strong><br /> ಕೊಪ್ಪಳ: ಚೇತನಾ ಅಸೋಸಿಯೇಟ್ಸ್ನ ಆಶ್ರಯದಲ್ಲಿ ಜು. 7ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ಲಿಂಗಾಯತ ವಧು- ವರರ ಮತ್ತು ಪಾಲಕರ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.<br /> <br /> ಮಹಾರಾಷ್ಟ್ರ ಮಂಡಳ, ಎನ್.ಎಂ.ಆರ್.ಸ್ಕ್ಯಾನ್ ಸೆಂಟರ್ ಹತ್ತಿರ, ಕೋರ್ಟ್ ಸರ್ಕಲ್, ಕ್ಲಬ್ ರಸ್ತೆ, ಹುಬ್ಬಳ್ಳಿ- ಈ ವಿಳಾಸದಲ್ಲಿ ಸಮಾವೇಶ ನಡೆಯುವುದು. ಸಮಾವೇಶ ಕುರಿತ ಹೆಚ್ಚಿನ ಮಾಹಿತಿಗೆ ಮೊ: 98451- 57329 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>