<p><strong>ಬಳ್ಳಾರಿ: </strong>ಪ್ರೇಮಿಸಿ, ಅಂತರ್ಜಾತಿ ವಿವಾಹವಾದರೆ ಸಮಾಜ ಅದನ್ನು ಅನೈತಿಕ ಸಂಬಂಧ ಎಂಬಂತೆ ನೋಡುತ್ತಿರುವುದು ಬೇಸರದ ಸಂಗತಿ ಎಂದು ಸಾಹಿತಿ ಡಾ. ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.<br /> ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ `ಸಾಹಿತಿ ದಂಪತಿಯೊಂದಿಗೆ ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `20 ವರ್ಷಗಳ ಹಿಂದೆ ಪ್ರೇಮ ವಿವಾಹವಾದ ನಾವು ಅನೈತಿಕ ಸಂಬಂಧ ಹೊಂದಿದವರು ಎಂಬ ರೀತಿ ನೋಡಲಾಗುತ್ತಿತ್ತು, ಅಂಥದ್ದೇ ಪರಿಸ್ಥಿತಿ ಈಗಲೂ ಮುಂದುವರಿದಿರುವುದು ವಿಷಾದದ ಸಂಗತಿ ಎಂದು ಹೇಳಿದರು.<br /> <br /> ಜಾತಿ ಲೆಕ್ಕಾಚಾರ, ಅಹಂಕಾರದಿಂದಾಗಿ ಮರ್ಯಾದೆ ಹತ್ಯೆಗಳು ಹೆಚ್ಚಾಗುತ್ತಿವೆ. ಜಾತಿ ಬೇರೆ ಎಂಬ ಕಾರಣಕ್ಕೆ ಬೆಳೆಸಿದ ಮಕ್ಕಳನ್ನೇ ಕೊಲ್ಲುವ ಪರಿಸ್ಥಿತಿ ಇದೆ. ಪ್ರೀತಿಯ ಮೇಲೆ ಹಲ್ಲೆ ನಡೆಯುತ್ತಿರುವುದಕ್ಕೆ ಮೂಲಭೂತವಾದ ಕಾರಣ ಎಂದು ತಿಳಿಸಿದರು.<br /> <br /> `ಜಾಗತೀಕರಣದಿಂದಾಗಿ ನಮ್ಮತನ, ವಿಶ್ವಾಸ ಕಾಣೆಯಾಗುತ್ತಿದೆ. ಪ್ರೀತಿ ಮಾರಾಟದ ವಸ್ತುವಾಗಿದ್ದು, ಸಿನಿಮಾ, ಧಾರವಾಹಿಗಳಲ್ಲಿ ಪ್ರೀತಿಯನ್ನು ಹಣ ಗಳಿಕೆಗಾಗಿ ಬಳಸಿಕೊಳ್ಳಲಾಗುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಅಂತರ್ಜಾತಿ ವಿವಾಹವಾದಾಗ ಎದುರಿಸಿದ ಪರಿಸ್ಥಿತಿ ವಿವರಿಸಿದ ಸಾಹಿತಿ ಡಾ. ಎಂ.ಡಿ. ಒಕ್ಕುಂದ, ಜಾಗತೀಕರಣದ ಹೊಡೆತದಲ್ಲಿ ಸಂಬಂಧಗಳು ಕಳೆದುಹೋಗುತ್ತಿವೆ ಎಂದರು.<br /> <br /> ಕಸಾಪ ಗೌರವ ಕಾರ್ಯದರ್ಶಿ ಕೋ.ವೆಂ. ರಾಮಕೃಷ್ಣಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಬಾದಾಮಿ ಶಿವಲಿಂಗ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ, ಕಲ್ಲಕಂಬ ಪಂಪಾಪತಿ ಉಪಸ್ಥಿತರಿದ್ದರು.<br /> ಸಿದ್ದರಾಮ ಕಲ್ಮಠ ಸ್ವಾಗತಿಸಿದರು. ರೇವಣ್ಣ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯಶ್ರೀ ಹೂಗಾರ ಪ್ರಾರ್ಥಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಪ್ರೇಮಿಸಿ, ಅಂತರ್ಜಾತಿ ವಿವಾಹವಾದರೆ ಸಮಾಜ ಅದನ್ನು ಅನೈತಿಕ ಸಂಬಂಧ ಎಂಬಂತೆ ನೋಡುತ್ತಿರುವುದು ಬೇಸರದ ಸಂಗತಿ ಎಂದು ಸಾಹಿತಿ ಡಾ. ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.<br /> ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ `ಸಾಹಿತಿ ದಂಪತಿಯೊಂದಿಗೆ ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `20 ವರ್ಷಗಳ ಹಿಂದೆ ಪ್ರೇಮ ವಿವಾಹವಾದ ನಾವು ಅನೈತಿಕ ಸಂಬಂಧ ಹೊಂದಿದವರು ಎಂಬ ರೀತಿ ನೋಡಲಾಗುತ್ತಿತ್ತು, ಅಂಥದ್ದೇ ಪರಿಸ್ಥಿತಿ ಈಗಲೂ ಮುಂದುವರಿದಿರುವುದು ವಿಷಾದದ ಸಂಗತಿ ಎಂದು ಹೇಳಿದರು.<br /> <br /> ಜಾತಿ ಲೆಕ್ಕಾಚಾರ, ಅಹಂಕಾರದಿಂದಾಗಿ ಮರ್ಯಾದೆ ಹತ್ಯೆಗಳು ಹೆಚ್ಚಾಗುತ್ತಿವೆ. ಜಾತಿ ಬೇರೆ ಎಂಬ ಕಾರಣಕ್ಕೆ ಬೆಳೆಸಿದ ಮಕ್ಕಳನ್ನೇ ಕೊಲ್ಲುವ ಪರಿಸ್ಥಿತಿ ಇದೆ. ಪ್ರೀತಿಯ ಮೇಲೆ ಹಲ್ಲೆ ನಡೆಯುತ್ತಿರುವುದಕ್ಕೆ ಮೂಲಭೂತವಾದ ಕಾರಣ ಎಂದು ತಿಳಿಸಿದರು.<br /> <br /> `ಜಾಗತೀಕರಣದಿಂದಾಗಿ ನಮ್ಮತನ, ವಿಶ್ವಾಸ ಕಾಣೆಯಾಗುತ್ತಿದೆ. ಪ್ರೀತಿ ಮಾರಾಟದ ವಸ್ತುವಾಗಿದ್ದು, ಸಿನಿಮಾ, ಧಾರವಾಹಿಗಳಲ್ಲಿ ಪ್ರೀತಿಯನ್ನು ಹಣ ಗಳಿಕೆಗಾಗಿ ಬಳಸಿಕೊಳ್ಳಲಾಗುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಅಂತರ್ಜಾತಿ ವಿವಾಹವಾದಾಗ ಎದುರಿಸಿದ ಪರಿಸ್ಥಿತಿ ವಿವರಿಸಿದ ಸಾಹಿತಿ ಡಾ. ಎಂ.ಡಿ. ಒಕ್ಕುಂದ, ಜಾಗತೀಕರಣದ ಹೊಡೆತದಲ್ಲಿ ಸಂಬಂಧಗಳು ಕಳೆದುಹೋಗುತ್ತಿವೆ ಎಂದರು.<br /> <br /> ಕಸಾಪ ಗೌರವ ಕಾರ್ಯದರ್ಶಿ ಕೋ.ವೆಂ. ರಾಮಕೃಷ್ಣಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಬಾದಾಮಿ ಶಿವಲಿಂಗ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ, ಕಲ್ಲಕಂಬ ಪಂಪಾಪತಿ ಉಪಸ್ಥಿತರಿದ್ದರು.<br /> ಸಿದ್ದರಾಮ ಕಲ್ಮಠ ಸ್ವಾಗತಿಸಿದರು. ರೇವಣ್ಣ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯಶ್ರೀ ಹೂಗಾರ ಪ್ರಾರ್ಥಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>