<p><strong>ಬೆಂಗಳೂರು: </strong>ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ಬಾಗ್ನಲ್ಲಿ ಆಯೋಜಿ ಸಿರುವ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಜನರು ಮುಗಿಬಿದ್ದರು.<br /> <br /> ಭಾನುವಾರ 85 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು, ₹ 46 ಲಕ್ಷ ಸಂಗ್ರಹವಾಗಿದೆ. ಕಳೆದ ಎಂಟು ದಿನಗಳಿಗೆ ಹೋಲಿ ಸಿದರೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಾಲ್ಬಾಗ್ಗೆ ಭೇಟಿ ನೀಡಿ ದ್ದಾರೆ. ಆಗಸ್ಟ್ 7ರಂದು 40 ಸಾವಿರ, 13ರಂದು 49 ಸಾವಿರ ಮಂದಿ ಭೇಟಿ ನೀಡಿದ್ದರು. <br /> <br /> ಬೆಳಿಗ್ಗೆ 12ರವರೆಗೆ ವಿರಳವಾಗಿದ್ದ ಜನರು ಬಳಿಕ ಹೆಚ್ಚಾದರು. ಸಂಜೆ 4 ಗಂಟೆಯವರೆಗೆ ಜನದಟ್ಟಣೆ ಕಂಡು ಬಂದಿತು. ಗಾಜಿನ ಮನೆಯಲ್ಲಿ ನಿರ್ಮಿ ಸಿದ್ದ ‘ಸಂಸತ್ ಭವನ’ವನ್ನು ನೋಡಲು ಜನರು ಮುಗಿಬಿದ್ದರು. ಇದ ರಿಂದ ನೂಕುನುಗ್ಗಲು ಉಂಟಾಗಿತ್ತು.<br /> <br /> ಸಂಸತ್ ಭವನದ ಸೌಂದರ್ಯಕ್ಕೆ ಮನಸೋತ ಜನರು ಅದರ ಜತೆ ನಿಂತು ಫೋಟೋ ತೆಗೆಸಿಕೊಳ್ಳಲು ದುಂಬಾಲು ಬಿದ್ದರು. ಯುವಕ, ಯುವತಿಯರು, ಹಿರಿಯರೆನ್ನದೆ ಎಲ್ಲರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.<br /> <br /> ‘ಸಂಜೆ 4ರ ಬಳಿಕ ಎರಡು ಬಾರಿ ಮಳೆ ಬಂದಿದ್ದರಿಂದ ಜನರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಯಿತು. ಆದರೂ, ಕಳೆದ ಎಂಟು ದಿನಗಳಿಗೆ ಹೋಲಿಸಿದರೆ ಭಾನುವಾರ ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರ ಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಲಾಲ್ಬಾಗ್ ಆವರಣದಲ್ಲಿ ನಿರ್ಮಿಸಿ ರುವ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು. ತಿಂಡಿ–ತಿನಿಸುಗಳ ಮಳಿಗೆ ಗಳ ಮುಂದೆ ಜನರು ಜಮಾಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ಬಾಗ್ನಲ್ಲಿ ಆಯೋಜಿ ಸಿರುವ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಜನರು ಮುಗಿಬಿದ್ದರು.<br /> <br /> ಭಾನುವಾರ 85 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು, ₹ 46 ಲಕ್ಷ ಸಂಗ್ರಹವಾಗಿದೆ. ಕಳೆದ ಎಂಟು ದಿನಗಳಿಗೆ ಹೋಲಿ ಸಿದರೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಾಲ್ಬಾಗ್ಗೆ ಭೇಟಿ ನೀಡಿ ದ್ದಾರೆ. ಆಗಸ್ಟ್ 7ರಂದು 40 ಸಾವಿರ, 13ರಂದು 49 ಸಾವಿರ ಮಂದಿ ಭೇಟಿ ನೀಡಿದ್ದರು. <br /> <br /> ಬೆಳಿಗ್ಗೆ 12ರವರೆಗೆ ವಿರಳವಾಗಿದ್ದ ಜನರು ಬಳಿಕ ಹೆಚ್ಚಾದರು. ಸಂಜೆ 4 ಗಂಟೆಯವರೆಗೆ ಜನದಟ್ಟಣೆ ಕಂಡು ಬಂದಿತು. ಗಾಜಿನ ಮನೆಯಲ್ಲಿ ನಿರ್ಮಿ ಸಿದ್ದ ‘ಸಂಸತ್ ಭವನ’ವನ್ನು ನೋಡಲು ಜನರು ಮುಗಿಬಿದ್ದರು. ಇದ ರಿಂದ ನೂಕುನುಗ್ಗಲು ಉಂಟಾಗಿತ್ತು.<br /> <br /> ಸಂಸತ್ ಭವನದ ಸೌಂದರ್ಯಕ್ಕೆ ಮನಸೋತ ಜನರು ಅದರ ಜತೆ ನಿಂತು ಫೋಟೋ ತೆಗೆಸಿಕೊಳ್ಳಲು ದುಂಬಾಲು ಬಿದ್ದರು. ಯುವಕ, ಯುವತಿಯರು, ಹಿರಿಯರೆನ್ನದೆ ಎಲ್ಲರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.<br /> <br /> ‘ಸಂಜೆ 4ರ ಬಳಿಕ ಎರಡು ಬಾರಿ ಮಳೆ ಬಂದಿದ್ದರಿಂದ ಜನರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಯಿತು. ಆದರೂ, ಕಳೆದ ಎಂಟು ದಿನಗಳಿಗೆ ಹೋಲಿಸಿದರೆ ಭಾನುವಾರ ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರ ಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಲಾಲ್ಬಾಗ್ ಆವರಣದಲ್ಲಿ ನಿರ್ಮಿಸಿ ರುವ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು. ತಿಂಡಿ–ತಿನಿಸುಗಳ ಮಳಿಗೆ ಗಳ ಮುಂದೆ ಜನರು ಜಮಾಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>