<p><strong>ಬೆಂಗಳೂರು: </strong>ವಿ.ಕೆ. ಗಿರೀಶ್ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಎಂಇಜಿ ತಂಡ ಸಿ. ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.<br /> <br /> ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಂಇಜಿ 1-0 ರಲ್ಲಿ ಎಚ್ಎಎಲ್ ವಿರುದ್ಧ ಜಯ ಸಾಧಿಸಿತು. ಪಂದ್ಯದ 90ನೇ ನಿಮಿಷದಲ್ಲಿ ಹೆಡರ್ ಮೂಲಕ ಚೆಂಡನ್ನು ಆಕರ್ಷಕ ರೀತಿ ಯಲ್ಲಿ ಗುರಿ ಸೇರಿಸಿದ ಗಿರೀಶ್ ಎಂಇಜಿ ಗೆಲುವಿನ ರೂವಾರಿ ಎನಿಸಿಕೊಂಡರು.<br /> <br /> ಪಂದ್ಯದ ಇಂಜುರಿ ಅವಧಿಯಲ್ಲಿ (90+2) ಎಚ್ಎಎಲ್ಗೆ ಪೆನಾಲ್ಟಿ ಕಿಕ್ ಅವಕಾಶ ಲಭಿಸಿತು. ಎಂಇಜಿ ತಂಡದ ಸುಮನ್ ಕುಮಾರ್ ಚೆಂಡನ್ನು ಕೈಯಿಂದ ತಡೆದದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು.<br /> <br /> ಆದರೆ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಮುರಳಿ ಒದ್ದ ಚೆಂಡು ಗೋಲುಕಂಬಕ್ಕೆ ಬಡಿದು ಹೊರಕ್ಕೆ ಹೋಯಿತು. ಎಂಇಜಿ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರೆ, ಎಚ್ಎಎಲ್ ತಂಡದವರು ನಿರಾಸೆಯೊಂದಿಗೆ ಅಂಗಳ ತೊರೆದರು.<br /> <br /> ಎಸ್ಎಐಗೆ ಪ್ರಶಸ್ತಿ: ‘ಎ’ ಡಿವಿಷನ್ ತಂಡಗಳಿಗಾಗಿ ನಡೆದ ಪ್ರಸನ್ನಕುಮಾರ್ ಸ್ಮಾರಕ ಟೂರ್ನಿಯ ಕಿರೀಟವನ್ನು ಎಸ್ಎಐ ಗೆದ್ದುಕೊಂಡಿತು.<br /> ಭಾನುವಾರ ನಡೆದ ಫೈನಲ್ನಲ್ಲಿ ಎಸ್ಎಐ 2-1 ಗೋಲುಗಳಿಂದ ಡಿವೈಇಎಸ್ ತಂಡವನ್ನು ಮಣಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಿ.ಕೆ. ಗಿರೀಶ್ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಎಂಇಜಿ ತಂಡ ಸಿ. ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.<br /> <br /> ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಂಇಜಿ 1-0 ರಲ್ಲಿ ಎಚ್ಎಎಲ್ ವಿರುದ್ಧ ಜಯ ಸಾಧಿಸಿತು. ಪಂದ್ಯದ 90ನೇ ನಿಮಿಷದಲ್ಲಿ ಹೆಡರ್ ಮೂಲಕ ಚೆಂಡನ್ನು ಆಕರ್ಷಕ ರೀತಿ ಯಲ್ಲಿ ಗುರಿ ಸೇರಿಸಿದ ಗಿರೀಶ್ ಎಂಇಜಿ ಗೆಲುವಿನ ರೂವಾರಿ ಎನಿಸಿಕೊಂಡರು.<br /> <br /> ಪಂದ್ಯದ ಇಂಜುರಿ ಅವಧಿಯಲ್ಲಿ (90+2) ಎಚ್ಎಎಲ್ಗೆ ಪೆನಾಲ್ಟಿ ಕಿಕ್ ಅವಕಾಶ ಲಭಿಸಿತು. ಎಂಇಜಿ ತಂಡದ ಸುಮನ್ ಕುಮಾರ್ ಚೆಂಡನ್ನು ಕೈಯಿಂದ ತಡೆದದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು.<br /> <br /> ಆದರೆ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಮುರಳಿ ಒದ್ದ ಚೆಂಡು ಗೋಲುಕಂಬಕ್ಕೆ ಬಡಿದು ಹೊರಕ್ಕೆ ಹೋಯಿತು. ಎಂಇಜಿ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರೆ, ಎಚ್ಎಎಲ್ ತಂಡದವರು ನಿರಾಸೆಯೊಂದಿಗೆ ಅಂಗಳ ತೊರೆದರು.<br /> <br /> ಎಸ್ಎಐಗೆ ಪ್ರಶಸ್ತಿ: ‘ಎ’ ಡಿವಿಷನ್ ತಂಡಗಳಿಗಾಗಿ ನಡೆದ ಪ್ರಸನ್ನಕುಮಾರ್ ಸ್ಮಾರಕ ಟೂರ್ನಿಯ ಕಿರೀಟವನ್ನು ಎಸ್ಎಐ ಗೆದ್ದುಕೊಂಡಿತು.<br /> ಭಾನುವಾರ ನಡೆದ ಫೈನಲ್ನಲ್ಲಿ ಎಸ್ಎಐ 2-1 ಗೋಲುಗಳಿಂದ ಡಿವೈಇಎಸ್ ತಂಡವನ್ನು ಮಣಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>