<p><strong>ದಾವಣಗೆರೆ:</strong> ಸಮೀಪದ ತೊಳಹುಣಸೆಯ ಶಿವಗಂಗೋತ್ರಿಯ ಎಸ್ಪಿಎಸ್ಎಸ್ಇಎಂಆರ್ ಸ್ಕೂಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿಬಿಎಸ್ಇ ಕ್ಲಸ್ಟರ್ 7ರ ಫುಟ್ಬಾಲ್ ಟೂರ್ನಿಯಲ್ಲಿ ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.<br /> <br /> ಅತ್ಯಂತ ರೋಚಕ ಕಾದಾಟ ಕಂಡ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡ ವಿಜಾಪುರದ ಸೈನಿಕ್ ಸ್ಕೂಲ್ ತಂಡವನ್ನು 3-0 ಅಂತರದಲ್ಲಿ ಸೋಲಿಸಿತು.<br /> <br /> ಸೆಮಿಫೈನಲ್ ಪಂದ್ಯದಲ್ಲಿ ವಿಜಾಪುರದ ಸೈನಿಕ್ ಸ್ಕೂಲ್ ತಂಡ ಬೆಂಗಳೂರಿನ ಜೈನ್ ಇಂಟರ್ ನ್ಯಾಷನಲ್ ಸ್ಕೂಲ್ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೆಶಿಸಿತು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡವು ದಕ್ಷಿಣ ಬೆಂಗಳೂರಿನ ಡಿಪಿಎಸ್ ತಂಡದ ವಿರುದ್ಧ 8-0 ಅಂತರದ ಭರ್ಜರಿ ಜಯದೊಂದಿಗೆ ಫೈನಲ್ಗೆ ಪ್ರವೇಶ ಪಡೆಯಿತು.<br /> <br /> ಈ ಟೂರ್ನಿಯಲ್ಲಿ ಬೆಂಗಳೂರಿನ ಜೈನ್ ಇಂಟರ್ ನ್ಯಾಷನಲ್ ಸ್ಕೂಲ್ನ ಕ್ರೀಡಾಪಟು ಕ್ಯಾಮಿಲೊ ಆ್ಯಂಡ್ರೆಸ್ ಉತ್ತಮ ಕ್ರೀಡಾಪಟು ಆಗಿ ಆಯ್ಕೆಯಾದರು. ಮುಂಡಗೋಡಿನ ಸೆಂಟ್ರಲ್ ಸ್ಕೂಲ್ನ ಕರ್ಮಾ ಲೆಂಗ್ಡೆನ್ ಟೂರ್ನಿಯಲ್ಲಿ 8 ಗೋಲುಗಳನ್ನು ಬಾರಿಸುವ ಮೂಲಕ ಹೆಚ್ಚಿನ ಗೋಲುಗಳ ಸರದಾರರಾಗಿ ಆಯ್ಕೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಸಮೀಪದ ತೊಳಹುಣಸೆಯ ಶಿವಗಂಗೋತ್ರಿಯ ಎಸ್ಪಿಎಸ್ಎಸ್ಇಎಂಆರ್ ಸ್ಕೂಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿಬಿಎಸ್ಇ ಕ್ಲಸ್ಟರ್ 7ರ ಫುಟ್ಬಾಲ್ ಟೂರ್ನಿಯಲ್ಲಿ ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.<br /> <br /> ಅತ್ಯಂತ ರೋಚಕ ಕಾದಾಟ ಕಂಡ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡ ವಿಜಾಪುರದ ಸೈನಿಕ್ ಸ್ಕೂಲ್ ತಂಡವನ್ನು 3-0 ಅಂತರದಲ್ಲಿ ಸೋಲಿಸಿತು.<br /> <br /> ಸೆಮಿಫೈನಲ್ ಪಂದ್ಯದಲ್ಲಿ ವಿಜಾಪುರದ ಸೈನಿಕ್ ಸ್ಕೂಲ್ ತಂಡ ಬೆಂಗಳೂರಿನ ಜೈನ್ ಇಂಟರ್ ನ್ಯಾಷನಲ್ ಸ್ಕೂಲ್ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೆಶಿಸಿತು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡವು ದಕ್ಷಿಣ ಬೆಂಗಳೂರಿನ ಡಿಪಿಎಸ್ ತಂಡದ ವಿರುದ್ಧ 8-0 ಅಂತರದ ಭರ್ಜರಿ ಜಯದೊಂದಿಗೆ ಫೈನಲ್ಗೆ ಪ್ರವೇಶ ಪಡೆಯಿತು.<br /> <br /> ಈ ಟೂರ್ನಿಯಲ್ಲಿ ಬೆಂಗಳೂರಿನ ಜೈನ್ ಇಂಟರ್ ನ್ಯಾಷನಲ್ ಸ್ಕೂಲ್ನ ಕ್ರೀಡಾಪಟು ಕ್ಯಾಮಿಲೊ ಆ್ಯಂಡ್ರೆಸ್ ಉತ್ತಮ ಕ್ರೀಡಾಪಟು ಆಗಿ ಆಯ್ಕೆಯಾದರು. ಮುಂಡಗೋಡಿನ ಸೆಂಟ್ರಲ್ ಸ್ಕೂಲ್ನ ಕರ್ಮಾ ಲೆಂಗ್ಡೆನ್ ಟೂರ್ನಿಯಲ್ಲಿ 8 ಗೋಲುಗಳನ್ನು ಬಾರಿಸುವ ಮೂಲಕ ಹೆಚ್ಚಿನ ಗೋಲುಗಳ ಸರದಾರರಾಗಿ ಆಯ್ಕೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>