<p>ಸುರತ್ಕಲ್: ಬಂದರು ಖಾಸಗಿಕರಣ ವಿರೋಧಿಸಿ ಎನ್ಎಂಪಿಟಿ ಕಾರ್ಮಿಕರು ಎಚ್ಎಂಎಸ್, ಇಂಟಕ್, ಬಿಎಂಎಸ್ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ಧಿಡೀರ್ ಪ್ರತಿಭಟನೆ ನಡೆಸಿದರು.<br /> <br /> ಲಾಭದಲ್ಲಿರುವ ಬಂದರನ್ನು ಖಾಸಗಿಯವರಿಗೆ ಹಸ್ತಾಂತರಿಸುವುದನ್ನು ಕಾರ್ಮಿಕರು ವಿರೋಧಿಸಿದರು. ಇದರಿಂದ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯುಂಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಕಾರ್ಮಿಕ ಸಂಘಟನೆಗಳು ವಿರೋಧಿಸಿದರೂ ಸರ್ಕಾರ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿವೆ ಎಂದು ಅವರು ದೂರಿದ್ದಾರೆ<br /> <br /> ಎನ್ಎಂಪಿಟಿ, ತೂತುಕುಡಿ, ಗೋವಾ ಸೇರಿದಂತೆ ಪ್ರಮುಖ ಬಂದರುಗಳ ಕಾರ್ಮಿಕರು ಖಾಸಗಿಕರಣಕ್ಕೆ ಬಲವಾಗಿ ವಿರೋಧಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ನಡೆದ ನೌಕಾಯಾನ ಇಲಾಖೆ ಸಭೆಯಲ್ಲೂ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು. ಆದರೂ ಸರ್ಕಾರ ಕಾರ್ಮಿಕರ ವಿರೋಧದ ನಡುವೆಯೂ ಖಾಸಗಿರಕರಣಕ್ಕೆ ಮುಂದಾಗಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತ್ತು.<br /> <br /> ಶುಕ್ರವಾರ ಕೇಂದ್ರ ನೌಕಾಯಾನ ಕಾರ್ಯದರ್ಶಿ ಕೆ.ಮೋಹನದಾಸ್ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತಾ ದರೂ ಕೊನೆ ಕ್ಷಣದಲ್ಲಿ ರದ್ದು ಗೊಂಡಿರು ವುದರಿಂದ ಕಾರ್ಮಿಕ ಸಂಘಟನೆಗಳು ಮನವಿ ನೀಡುವ ನಿರ್ಧಾರದಿಂದ ಹಿಂದೆ ಸರಿಯ ಬೇಕಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರತ್ಕಲ್: ಬಂದರು ಖಾಸಗಿಕರಣ ವಿರೋಧಿಸಿ ಎನ್ಎಂಪಿಟಿ ಕಾರ್ಮಿಕರು ಎಚ್ಎಂಎಸ್, ಇಂಟಕ್, ಬಿಎಂಎಸ್ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ಧಿಡೀರ್ ಪ್ರತಿಭಟನೆ ನಡೆಸಿದರು.<br /> <br /> ಲಾಭದಲ್ಲಿರುವ ಬಂದರನ್ನು ಖಾಸಗಿಯವರಿಗೆ ಹಸ್ತಾಂತರಿಸುವುದನ್ನು ಕಾರ್ಮಿಕರು ವಿರೋಧಿಸಿದರು. ಇದರಿಂದ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯುಂಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಕಾರ್ಮಿಕ ಸಂಘಟನೆಗಳು ವಿರೋಧಿಸಿದರೂ ಸರ್ಕಾರ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿವೆ ಎಂದು ಅವರು ದೂರಿದ್ದಾರೆ<br /> <br /> ಎನ್ಎಂಪಿಟಿ, ತೂತುಕುಡಿ, ಗೋವಾ ಸೇರಿದಂತೆ ಪ್ರಮುಖ ಬಂದರುಗಳ ಕಾರ್ಮಿಕರು ಖಾಸಗಿಕರಣಕ್ಕೆ ಬಲವಾಗಿ ವಿರೋಧಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ನಡೆದ ನೌಕಾಯಾನ ಇಲಾಖೆ ಸಭೆಯಲ್ಲೂ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು. ಆದರೂ ಸರ್ಕಾರ ಕಾರ್ಮಿಕರ ವಿರೋಧದ ನಡುವೆಯೂ ಖಾಸಗಿರಕರಣಕ್ಕೆ ಮುಂದಾಗಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತ್ತು.<br /> <br /> ಶುಕ್ರವಾರ ಕೇಂದ್ರ ನೌಕಾಯಾನ ಕಾರ್ಯದರ್ಶಿ ಕೆ.ಮೋಹನದಾಸ್ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತಾ ದರೂ ಕೊನೆ ಕ್ಷಣದಲ್ಲಿ ರದ್ದು ಗೊಂಡಿರು ವುದರಿಂದ ಕಾರ್ಮಿಕ ಸಂಘಟನೆಗಳು ಮನವಿ ನೀಡುವ ನಿರ್ಧಾರದಿಂದ ಹಿಂದೆ ಸರಿಯ ಬೇಕಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>