<p><strong>ಬೆಂಗಳೂರು:</strong> ನಾರಾಯಣ ನೇತ್ರಾಲಯವು ಅಶೋಕನಗರದಲ್ಲಿ ತನ್ನ ಮೂರನೇ ಬೃಹತ್ ಚಿಕಿತ್ಸಾಲಯವನ್ನು ಬುಧವಾರ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಕಣ್ಣಿನ ಕ್ಯಾನ್ಸರ್ನಿಂದ ಬಳಲುವ ಬಡ ಮಕ್ಕಳಿಗೆ ಸಂಪೂರ್ಣ ಉಚಿತ ನೇತ್ರ ಚಿಕಿತ್ಸೆ ನೀಡುವುದಾಗಿ ಘೋಷಿಸಲಾಯಿತು.<br /> <br /> ನಾರಾಯಣ ನೇತ್ರಾಲಯದಿಂದ ಚಿಕಿತ್ಸೆ ಪಡೆದು ದೃಷ್ಟಿ ಪಡೆದುಕೊಂಡ ಮಕ್ಕಳಾದ ಹೆಲೆನ್, ಮೊಹಿದ್ದೀನ್ ಮತ್ತು ರಕ್ಷಿತಾ ರಿಬ್ಬನ್ ಕತ್ತರಿಸುವ ಮೂಲಕ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.<br /> <br /> ನಂತರ ಮಾತನಾಡಿದ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ, `ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಂದ ಬಂದ ಮಕ್ಕಳಿಗೆ ಹಣಕಾಸಿನ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಬಾರದು ಎನ್ನುವುದು ನನ್ನ ಆಶಯ~ ಎಂದು ಅವರು ನುಡಿದರು.<br /> <br /> `ರೆಟಿನೋಬ್ಲಾಸ್ಟೊಮ ಎಂಬುದು ಮಕ್ಕಳನ್ನು ಕಾಡುವ ಕಣ್ಣಿನ ಕ್ಯಾನ್ಸರ್. ಇದು ಉಂಟಾಗುವುದು ರೆಟಿನೋಬಾಸ್ಟೊಮ ಎಂಬ ವಂಶವಾಹಿಯ ತೀವ್ರ ಬೆಳವಣಿಗೆಯಿಂದ. ಇದಕ್ಕೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ. ಮಕ್ಕಳಲ್ಲಿ ಕಾಡುವ ಮೂರನೇ ಅತಿದೊಡ್ಡ ಕ್ಯಾನ್ಸರ್ ಆಗಿದೆ~ ಎಂದು ಅವರು ಹೇಳಿದರು.<br /> <br /> `ನೇತ್ರ ಕ್ಯಾನ್ಸರ್ನ ಚಿಕಿತ್ಸೆಯ ಅವಧಿ 2ರಿಂದ 4 ವರ್ಷ. ಚಿಕಿತ್ಸಾ ವೆಚ್ಚ ರೂ. 2 ಲಕ್ಷಕ್ಕೂ ಹೆಚ್ಚು. ಬಡ ಮಕ್ಕಳಿಗೆ ನೂರಕ್ಕೆ ನೂರರಷ್ಟು ಉಚಿತವಾಗಿ ಚಿಕಿತ್ಸೆಯನ್ನು ಕೊಡಲಾಗುವುದು~ ಎಂದು ಅವರು ವಾಗ್ದಾನ ನೀಡಿದರು.<br /> <br /> ಪ್ರಾರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದು ದೃಷ್ಟಿ ಪಡೆದುಕೊಂಡ ಹೇಮಂತ್ (8 ವರ್ಷ), ಎಸ್.ಬಿ.ನವೀನ್ (20), ನಾರಾಯಣಪ್ಪ (65) ಮೊದಲಾದವರು ಉಪಸ್ಥಿತರಿದ್ದರು. ಇವೆರೆಲ್ಲರಿಗೂ ನಾರಾಯಣ ನೇತ್ರಾಲಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾರಾಯಣ ನೇತ್ರಾಲಯವು ಅಶೋಕನಗರದಲ್ಲಿ ತನ್ನ ಮೂರನೇ ಬೃಹತ್ ಚಿಕಿತ್ಸಾಲಯವನ್ನು ಬುಧವಾರ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಕಣ್ಣಿನ ಕ್ಯಾನ್ಸರ್ನಿಂದ ಬಳಲುವ ಬಡ ಮಕ್ಕಳಿಗೆ ಸಂಪೂರ್ಣ ಉಚಿತ ನೇತ್ರ ಚಿಕಿತ್ಸೆ ನೀಡುವುದಾಗಿ ಘೋಷಿಸಲಾಯಿತು.<br /> <br /> ನಾರಾಯಣ ನೇತ್ರಾಲಯದಿಂದ ಚಿಕಿತ್ಸೆ ಪಡೆದು ದೃಷ್ಟಿ ಪಡೆದುಕೊಂಡ ಮಕ್ಕಳಾದ ಹೆಲೆನ್, ಮೊಹಿದ್ದೀನ್ ಮತ್ತು ರಕ್ಷಿತಾ ರಿಬ್ಬನ್ ಕತ್ತರಿಸುವ ಮೂಲಕ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.<br /> <br /> ನಂತರ ಮಾತನಾಡಿದ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ, `ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಂದ ಬಂದ ಮಕ್ಕಳಿಗೆ ಹಣಕಾಸಿನ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಬಾರದು ಎನ್ನುವುದು ನನ್ನ ಆಶಯ~ ಎಂದು ಅವರು ನುಡಿದರು.<br /> <br /> `ರೆಟಿನೋಬ್ಲಾಸ್ಟೊಮ ಎಂಬುದು ಮಕ್ಕಳನ್ನು ಕಾಡುವ ಕಣ್ಣಿನ ಕ್ಯಾನ್ಸರ್. ಇದು ಉಂಟಾಗುವುದು ರೆಟಿನೋಬಾಸ್ಟೊಮ ಎಂಬ ವಂಶವಾಹಿಯ ತೀವ್ರ ಬೆಳವಣಿಗೆಯಿಂದ. ಇದಕ್ಕೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ. ಮಕ್ಕಳಲ್ಲಿ ಕಾಡುವ ಮೂರನೇ ಅತಿದೊಡ್ಡ ಕ್ಯಾನ್ಸರ್ ಆಗಿದೆ~ ಎಂದು ಅವರು ಹೇಳಿದರು.<br /> <br /> `ನೇತ್ರ ಕ್ಯಾನ್ಸರ್ನ ಚಿಕಿತ್ಸೆಯ ಅವಧಿ 2ರಿಂದ 4 ವರ್ಷ. ಚಿಕಿತ್ಸಾ ವೆಚ್ಚ ರೂ. 2 ಲಕ್ಷಕ್ಕೂ ಹೆಚ್ಚು. ಬಡ ಮಕ್ಕಳಿಗೆ ನೂರಕ್ಕೆ ನೂರರಷ್ಟು ಉಚಿತವಾಗಿ ಚಿಕಿತ್ಸೆಯನ್ನು ಕೊಡಲಾಗುವುದು~ ಎಂದು ಅವರು ವಾಗ್ದಾನ ನೀಡಿದರು.<br /> <br /> ಪ್ರಾರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದು ದೃಷ್ಟಿ ಪಡೆದುಕೊಂಡ ಹೇಮಂತ್ (8 ವರ್ಷ), ಎಸ್.ಬಿ.ನವೀನ್ (20), ನಾರಾಯಣಪ್ಪ (65) ಮೊದಲಾದವರು ಉಪಸ್ಥಿತರಿದ್ದರು. ಇವೆರೆಲ್ಲರಿಗೂ ನಾರಾಯಣ ನೇತ್ರಾಲಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>