<p><strong>ಕೂಡಲಸಂಗಮ: </strong>ಮಲಪ್ರಭಾ ನದಿ ಸಂಪೂರ್ಣ ಬತ್ತಿದೆ. ನದಿ ತೀರದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಶೇಂಗಾ, ಕಬ್ಬು ಮೊದಲಾದ ಬೆಳೆ ಒಣಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.<br /> ಹುನಗುಂದ ತಾಲ್ಲೂಕಿನ ನಿಂಬಲಗುಂದಿ, ಕಳ್ಳಿಗುಡ್ಡ, ಐಹೊಳೆ, ಕಮತಗಿ, ರಾಮತಾಳ, ಹಿರೇಮಾಗಿ, ಚಿಕ್ಕಮಾಗಿ, ಖೈರವಾಡಗಿ, ಪಾಪಥನಾಳ, ಮಳಗಾವಿ, ಗಂಜಿಹಾಳ, ನಂದನೂರ ಗ್ರಾಮಗಳ ರೈತರು ಕೃಷಿಗೆ ಮಲಪ್ರಭೆಯನ್ನೇ ಅವಲಂಬಿಸಿದ್ದಾರೆ. <br /> <br /> ಕಳೆದ ನಾಲ್ಕು ವರ್ಷಗಳಿಂದ ರೈತರು ಅತಿವೃಷ್ಟಿ ಎದುರಿಸಿದ್ದಾರೆ. ಇದರಿಂದಾಗಿ ಬೆಳೆದು ನಿಂತ ಬೆಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ಹಾನಿ ಅನುಭವಿಸಿದ್ದಾರೆ. ಆದರೆ ಈ ವರ್ಷ ಬರಗಾಲ ಎದುರಾಗಿದೆ. <br /> <br /> ಹಳ್ಳಕೊಳ್ಳದ ಜತೆಗೆ ನದಿಯೂ ಬತ್ತಿ ಹೋಗಿದೆ. ನದಿ ದಂಡೆಯ ರೈತರು ಪಂಪ್ಸೆಟ್ ಅಳವಡಿಸಿ ಕೃಷಿ ಮಾಡುತ್ತಿದ್ದರು. ಇದೀಗ ನೀರು ಇಲ್ಲದ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನದಿಯಲ್ಲಿ ನೀರಿಲ್ಲದ ಕಾರಣ ಜಾನುವಾರುಗಳೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. <br /> <br /> ಸವದತ್ತಿ ತಾಲ್ಲೂಕಿನ ನವಿಲು ತೀರ್ಥ ಜಲಾಶಯದಿಂದ ಸ್ವಲ್ಪ ನೀರು ಹರಿಯ ಬಿಟ್ಟರೆ ನದಿ ದಂಡೆಯ ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆಯಾದರೂ ನೀಗಿಸಬಹುದು ಎಂದು ರೈತರು ಹೇಳುತ್ತಲೇ ಇದ್ದಾರೆ. ಆದರೆ ನದಿಗೆ ನೀರು ಹರಿದು ಬಂದಿಲ್ಲ.<br /> <br /> <strong>ಆರಂಭಗೊಳ್ಳದ ಬರ ಕಾಮಗಾರಿ : </strong>ಸರಕಾರ ಹುನಗುಂದ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಹಲವು ತಿಂಗಳಾದರೂ ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನ ಗೊಳಿಸಲಾಗುತ್ತಿರುವ ಮಹತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಹೊರತು ಪಡಿಸಿದರೆ ದುಡಿಯವ ಕೈಗಳಿಗೆ ಕೆಲಸ ದೊರೆಯುತ್ತಿಲ್ಲ.<br /> <br /> ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೆಲಸಗಾರರ ನೋಂದಣಿಯಲ್ಲಾದ <br /> ದೋಷಗಳಿಂದಾಗಿ ಗ್ರಾಮಸ್ಥರು ಕೆಲಸಲಿದ್ದರೆ ಪರದಾಡುವಂತಾಗಿದೆ. ಸ್ಥಳೀಯ ಸಂಸ್ಥೆಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಅವರು ಕೆಲಸ ಅರಿಸಿ ಗುಳೆ ಹೊರಡುವುದು ಶುರುವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ: </strong>ಮಲಪ್ರಭಾ ನದಿ ಸಂಪೂರ್ಣ ಬತ್ತಿದೆ. ನದಿ ತೀರದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಶೇಂಗಾ, ಕಬ್ಬು ಮೊದಲಾದ ಬೆಳೆ ಒಣಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.<br /> ಹುನಗುಂದ ತಾಲ್ಲೂಕಿನ ನಿಂಬಲಗುಂದಿ, ಕಳ್ಳಿಗುಡ್ಡ, ಐಹೊಳೆ, ಕಮತಗಿ, ರಾಮತಾಳ, ಹಿರೇಮಾಗಿ, ಚಿಕ್ಕಮಾಗಿ, ಖೈರವಾಡಗಿ, ಪಾಪಥನಾಳ, ಮಳಗಾವಿ, ಗಂಜಿಹಾಳ, ನಂದನೂರ ಗ್ರಾಮಗಳ ರೈತರು ಕೃಷಿಗೆ ಮಲಪ್ರಭೆಯನ್ನೇ ಅವಲಂಬಿಸಿದ್ದಾರೆ. <br /> <br /> ಕಳೆದ ನಾಲ್ಕು ವರ್ಷಗಳಿಂದ ರೈತರು ಅತಿವೃಷ್ಟಿ ಎದುರಿಸಿದ್ದಾರೆ. ಇದರಿಂದಾಗಿ ಬೆಳೆದು ನಿಂತ ಬೆಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ಹಾನಿ ಅನುಭವಿಸಿದ್ದಾರೆ. ಆದರೆ ಈ ವರ್ಷ ಬರಗಾಲ ಎದುರಾಗಿದೆ. <br /> <br /> ಹಳ್ಳಕೊಳ್ಳದ ಜತೆಗೆ ನದಿಯೂ ಬತ್ತಿ ಹೋಗಿದೆ. ನದಿ ದಂಡೆಯ ರೈತರು ಪಂಪ್ಸೆಟ್ ಅಳವಡಿಸಿ ಕೃಷಿ ಮಾಡುತ್ತಿದ್ದರು. ಇದೀಗ ನೀರು ಇಲ್ಲದ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನದಿಯಲ್ಲಿ ನೀರಿಲ್ಲದ ಕಾರಣ ಜಾನುವಾರುಗಳೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. <br /> <br /> ಸವದತ್ತಿ ತಾಲ್ಲೂಕಿನ ನವಿಲು ತೀರ್ಥ ಜಲಾಶಯದಿಂದ ಸ್ವಲ್ಪ ನೀರು ಹರಿಯ ಬಿಟ್ಟರೆ ನದಿ ದಂಡೆಯ ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆಯಾದರೂ ನೀಗಿಸಬಹುದು ಎಂದು ರೈತರು ಹೇಳುತ್ತಲೇ ಇದ್ದಾರೆ. ಆದರೆ ನದಿಗೆ ನೀರು ಹರಿದು ಬಂದಿಲ್ಲ.<br /> <br /> <strong>ಆರಂಭಗೊಳ್ಳದ ಬರ ಕಾಮಗಾರಿ : </strong>ಸರಕಾರ ಹುನಗುಂದ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಹಲವು ತಿಂಗಳಾದರೂ ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನ ಗೊಳಿಸಲಾಗುತ್ತಿರುವ ಮಹತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಹೊರತು ಪಡಿಸಿದರೆ ದುಡಿಯವ ಕೈಗಳಿಗೆ ಕೆಲಸ ದೊರೆಯುತ್ತಿಲ್ಲ.<br /> <br /> ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೆಲಸಗಾರರ ನೋಂದಣಿಯಲ್ಲಾದ <br /> ದೋಷಗಳಿಂದಾಗಿ ಗ್ರಾಮಸ್ಥರು ಕೆಲಸಲಿದ್ದರೆ ಪರದಾಡುವಂತಾಗಿದೆ. ಸ್ಥಳೀಯ ಸಂಸ್ಥೆಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಅವರು ಕೆಲಸ ಅರಿಸಿ ಗುಳೆ ಹೊರಡುವುದು ಶುರುವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>