<p><strong>ಚಿತ್ರದುರ್ಗ:</strong> ‘ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ವಿಶ್ವವಿದ್ಯಾಲಯಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ ’ ಎಂದು ಖ್ಯಾತ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.<br /> <br /> ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ನಡೆದ ವಿಭಾಗವಾರು ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದಾಗ, ಇಂಥದ್ದೊಂದು ಅಭಿಪ್ರಾಯ ಹೊಂದಿದ್ದರು. <br /> <br /> ಬೋಧನಾಂಗ ಮತ್ತು ಸಂಶೋಧನಾಂಗ ಕೂಡಿ ಮಾಡುವ ಕೆಲಸವನ್ನು ಪ್ರಸಾರಾಂಗ ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತದೆ’ ಎಂದು ಹೇಳಿದ್ದರು. ಆದರೆ ಇವತ್ತಿನ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟದ ಸಂಶೋಧನೆ ಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು.<br /> <br /> ರಾಜ್ಯದಲ್ಲಿ ಸಂಶೋಧನೆ ಕುರಿತು ಮಾತನಾಡುವವಾಗ ಉತ್ತರ ಕರ್ನಾಟಕದಲ್ಲಿ ಎಂ.ಎಂ.ಕಲ್ಬುರ್ಗಿ, ದಕ್ಷಿಣ ಕರ್ನಾಟಕದಲ್ಲಿ ಚಿದಾನಂದ ಮೂರ್ತಿ ಧಾರವಾಡ ವ್ಯಾಪ್ತಿಯಲ್ಲಿ ಎಸ್.ಷಟ್ಟರ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಇವರೆಲ್ಲ ಬದ್ಧತೆ ಹೊಂದಿದ ಸಂಶೋಧಕರು.<br /> <br /> ಈ ಮಹನೀಯರ ಸಂಶೋಧನೆಗಳನ್ನು ಪಂಥ, ಸಿದ್ಧಾಂತ, ಧೋರಣೆ ಆಧಾರದಲ್ಲಿ ವಿಭಾಗಿಸಿ, ತಿರಸ್ಕರಿಸುವ ಬದಲಿಗೆ, ಸಂಶೋಧನೆಗಳ ಸಾಧಕ–ಬಾದಕಗಳನ್ನು ಪ್ರಶ್ನಿಸುವ ಗುಣವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ ಅವರು, ಆ ಮೂಲಕ ಇಂಥವರ ಸಂತಾನ ಹೆಚ್ಚುತ್ತಾ ಹೋಗಬೇಕು’ ಎಂದು ಅಭಿಪ್ರಾಯಪಟ್ಟರು.<br /> <br /> ‘ಪ್ರಸಾರಂಗ ಎನ್ನುವುದು ಖಾಸಗಿಯವರ ಪಾಲಾಗಬಾರದು. ಅದನ್ನು ವಿಶ್ವವಿದ್ಯಾಲಯಗಳೇ ನಡೆಸಬೇಕು. ಹಿಂದೆ ಮೈಸೂರು ವಿವಿಯಲ್ಲಿ ಒಂದು , ಎರಡು ರೂಪಾಯಿಗೆಲ್ಲ ಅಂಗೈ ಅಗಲದ 60 – 70 ಪುಟದ ಪುಸ್ತಕಗಳು ಓದಲು ಸಿಗುತ್ತಿದ್ದವು. ಅವು ನಮ್ಮ ಅರಿವಿನ ಜ್ಞಾನ ವಿಸ್ತರಣೆಯ ಪ್ರತೀಕಗಳಾಗಿದ್ದವು. ಇತ್ತೀಚೆಗೆ ಇ–ಬುಕ್, ಕಂಪ್ಯೂಟರ್, ಇಂಟರ್ನೆಟ್ನಿಂದಾಗಿ ಪುಸ್ತಕ ಸಂಸ್ಕೃತಿಯೂ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.<br /> <br /> ‘ತಂತ್ರಜ್ಞಾನಗಳು ಎಷ್ಟೇ ಬೆಳೆದಿದ್ದರೂ, ಶೇ 10ರಷ್ಟು ಮಂದಿಗೆ ಮಾತ್ರ ಇ–ಬುಕ್ ತಲುಪುತ್ತಿದೆ. ಉಳಿದ ಶೇ 90ರಷ್ಟು ಮಂದಿ ಪುಸ್ತಕಗಳ ಮೇಲೆ ಅವಲಂಬಿತರಾಗಿದ್ದಾರೆ. ಅಂಥ ವರ್ಗದವರಿಗಾಗಿ ವಿಶ್ವ ವಿದ್ಯಾಲಯದ ಪ್ರಸಾರಂಗಗಳು ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ಕೊಡುವ ಕೆಲಸ ಮಾಡಬೇಕಿದೆ. ಹಾಗೆಯೇ ಈ ವರ್ಗಕ್ಕೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.<br /> <br /> ‘ಎಷ್ಟೇ ವಿಶ್ವ ವಿದ್ಯಾಲಯಗಳು, ಅಧ್ಯಯನ ಕೇಂದ್ರಗಳು ತೆರೆದುಕೊಂಡರೂ, ಇವತ್ತಿನ ಜನಸಂಖ್ಯಾ ಸ್ಫೋಟಕ್ಕೆ ಜ್ಞಾನ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಕ್ಷರ ವಂಚಿತರಿಗೆ ವಿದ್ಯೆ ದೊರೆಯಬಾರದೆಂಬ ಮನಸ್ಥಿತಿ ಹೊಂದಿರುವವರು ಮಾತ್ರ, ಅಧ್ಯಯನ ಕೇಂದ್ರಗಳನ್ನು ನಾಯಿಕೊಡೆ ಎಂದು ಮೂದಲಿಸುತ್ತಾರೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.<br /> <br /> ಕಲಾ ಕಾಲೇಜಿನಲ್ಲಿ ವಾರದಿಂದ ನಡೆಯುತ್ತಿರುವ ವಿಚಾರ ಸಂಕಿರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಇಂಥ ಕಾರ್ಯಕ್ರಮಗಳು ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ನಡೆಯಲು ಸಾಧ್ಯ’ ಎಂದು ಹೇಳಿದರು. ಇಂಥ ಸಮುದಾಯದ ಮೈಂಡ್ಸೆಟ್ಗಳು ಸಂಕುಚಿತವಾಗಿರುವುದರಿಂದ ಇಂಥ ಯೋಜನೆಗಳೂ ಬರುತ್ತವೆ’ ಎಂದರು.<br /> <br /> ಉಪನ್ಯಾಸಗಳ ಬಗ್ಗೆ ಮಾತನಾಡಿದ ಅವರು, ‘ತಜ್ಞರೊಬ್ಬರಿಂದ ಒಂದು ಗಂಟೆ ಉಪನ್ಯಾಸ ಕೇಳುವುದು, ಒಂದು ಪುಸ್ತಕವನ್ನು ಒಂದು ವರ್ಷ ಓದಿ ಅರ್ಥಮಾಡಿಕೊಂಡು ಜ್ಞಾನ ಪಡೆಯುವುದಕ್ಕೆ ಸಮವಾಗಿರುತ್ತದೆ’ ಎಂದು ಉದಾಹರಣೆ ನೀಡಿದರು.<br /> <br /> ಕಾಲೇಜಿನ ಪ್ರಾಂಶುಪಾಲ ಪ್ರೊ, ಲಿಂಗಯ್ಯ ಮಾತನಾಡಿ, ‘ಈ ವಿಭಾಗವಾರು ವಿಚಾರ ಸಂಕಿರಣ ವಿದ್ಯಾರ್ಥಿಗಳಲ್ಲಿನ ಜ್ಞಾನ ದಿಗಂತವನ್ನು ವಿಸ್ತರಿಸುವುದಕ್ಕಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಉಪನ್ಯಾಸ ಕೇಳಿದ ನಂತರ ಆ ವಿಚಾರಗಳನ್ನು ನಿತ್ಯದ ಪಠ್ಯಗಳ ಜೊತೆಗೆ ತಳಕು ಹಾಕಿಕೊಂಡು ಓದಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಹ ಕಾರ್ಯದರ್ಶಿ ಮಧುಸೂದನ್ ‘ಸರ್ಕಾರ ನೀಡಿರುವ ಹಣ ಖರ್ಚು ಮಾಡುವುದಕ್ಕಾಗಿ ನಾವು ಉಪನ್ಯಾಸ ಏರ್ಪಡಿಸಿಲ್ಲ. ಹಾಗೆಯೇ ಉಪನ್ಯಾಸಗಳಲ್ಲಿ ನೀಡಿರುವ ವಿಚಾರಗಳು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿಕೊಳ್ಳುವ ಅಗತ್ಯವಿಲ್ಲ.<br /> <br /> ಪಠ್ಯದ ಜೊತೆಗೆ, ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಲು ಉಪನ್ಯಾಸದ ವಿಚಾರಗಳು ನೆರವಾಗುತ್ತವೆ’ ಎಂದರು.ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕರಿಯಪ್ಪ ಮಾಳಿಗೆ ಅವರು ಪ್ರೊ. ಎಸ್. ಜಿ.ಸಿದ್ದರಾಮಯ್ಯ ಅವರನ್ನು ಪರಿಚಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ವಿಶ್ವವಿದ್ಯಾಲಯಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ ’ ಎಂದು ಖ್ಯಾತ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.<br /> <br /> ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ನಡೆದ ವಿಭಾಗವಾರು ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದಾಗ, ಇಂಥದ್ದೊಂದು ಅಭಿಪ್ರಾಯ ಹೊಂದಿದ್ದರು. <br /> <br /> ಬೋಧನಾಂಗ ಮತ್ತು ಸಂಶೋಧನಾಂಗ ಕೂಡಿ ಮಾಡುವ ಕೆಲಸವನ್ನು ಪ್ರಸಾರಾಂಗ ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತದೆ’ ಎಂದು ಹೇಳಿದ್ದರು. ಆದರೆ ಇವತ್ತಿನ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟದ ಸಂಶೋಧನೆ ಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು.<br /> <br /> ರಾಜ್ಯದಲ್ಲಿ ಸಂಶೋಧನೆ ಕುರಿತು ಮಾತನಾಡುವವಾಗ ಉತ್ತರ ಕರ್ನಾಟಕದಲ್ಲಿ ಎಂ.ಎಂ.ಕಲ್ಬುರ್ಗಿ, ದಕ್ಷಿಣ ಕರ್ನಾಟಕದಲ್ಲಿ ಚಿದಾನಂದ ಮೂರ್ತಿ ಧಾರವಾಡ ವ್ಯಾಪ್ತಿಯಲ್ಲಿ ಎಸ್.ಷಟ್ಟರ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಇವರೆಲ್ಲ ಬದ್ಧತೆ ಹೊಂದಿದ ಸಂಶೋಧಕರು.<br /> <br /> ಈ ಮಹನೀಯರ ಸಂಶೋಧನೆಗಳನ್ನು ಪಂಥ, ಸಿದ್ಧಾಂತ, ಧೋರಣೆ ಆಧಾರದಲ್ಲಿ ವಿಭಾಗಿಸಿ, ತಿರಸ್ಕರಿಸುವ ಬದಲಿಗೆ, ಸಂಶೋಧನೆಗಳ ಸಾಧಕ–ಬಾದಕಗಳನ್ನು ಪ್ರಶ್ನಿಸುವ ಗುಣವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ ಅವರು, ಆ ಮೂಲಕ ಇಂಥವರ ಸಂತಾನ ಹೆಚ್ಚುತ್ತಾ ಹೋಗಬೇಕು’ ಎಂದು ಅಭಿಪ್ರಾಯಪಟ್ಟರು.<br /> <br /> ‘ಪ್ರಸಾರಂಗ ಎನ್ನುವುದು ಖಾಸಗಿಯವರ ಪಾಲಾಗಬಾರದು. ಅದನ್ನು ವಿಶ್ವವಿದ್ಯಾಲಯಗಳೇ ನಡೆಸಬೇಕು. ಹಿಂದೆ ಮೈಸೂರು ವಿವಿಯಲ್ಲಿ ಒಂದು , ಎರಡು ರೂಪಾಯಿಗೆಲ್ಲ ಅಂಗೈ ಅಗಲದ 60 – 70 ಪುಟದ ಪುಸ್ತಕಗಳು ಓದಲು ಸಿಗುತ್ತಿದ್ದವು. ಅವು ನಮ್ಮ ಅರಿವಿನ ಜ್ಞಾನ ವಿಸ್ತರಣೆಯ ಪ್ರತೀಕಗಳಾಗಿದ್ದವು. ಇತ್ತೀಚೆಗೆ ಇ–ಬುಕ್, ಕಂಪ್ಯೂಟರ್, ಇಂಟರ್ನೆಟ್ನಿಂದಾಗಿ ಪುಸ್ತಕ ಸಂಸ್ಕೃತಿಯೂ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.<br /> <br /> ‘ತಂತ್ರಜ್ಞಾನಗಳು ಎಷ್ಟೇ ಬೆಳೆದಿದ್ದರೂ, ಶೇ 10ರಷ್ಟು ಮಂದಿಗೆ ಮಾತ್ರ ಇ–ಬುಕ್ ತಲುಪುತ್ತಿದೆ. ಉಳಿದ ಶೇ 90ರಷ್ಟು ಮಂದಿ ಪುಸ್ತಕಗಳ ಮೇಲೆ ಅವಲಂಬಿತರಾಗಿದ್ದಾರೆ. ಅಂಥ ವರ್ಗದವರಿಗಾಗಿ ವಿಶ್ವ ವಿದ್ಯಾಲಯದ ಪ್ರಸಾರಂಗಗಳು ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ಕೊಡುವ ಕೆಲಸ ಮಾಡಬೇಕಿದೆ. ಹಾಗೆಯೇ ಈ ವರ್ಗಕ್ಕೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.<br /> <br /> ‘ಎಷ್ಟೇ ವಿಶ್ವ ವಿದ್ಯಾಲಯಗಳು, ಅಧ್ಯಯನ ಕೇಂದ್ರಗಳು ತೆರೆದುಕೊಂಡರೂ, ಇವತ್ತಿನ ಜನಸಂಖ್ಯಾ ಸ್ಫೋಟಕ್ಕೆ ಜ್ಞಾನ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಕ್ಷರ ವಂಚಿತರಿಗೆ ವಿದ್ಯೆ ದೊರೆಯಬಾರದೆಂಬ ಮನಸ್ಥಿತಿ ಹೊಂದಿರುವವರು ಮಾತ್ರ, ಅಧ್ಯಯನ ಕೇಂದ್ರಗಳನ್ನು ನಾಯಿಕೊಡೆ ಎಂದು ಮೂದಲಿಸುತ್ತಾರೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.<br /> <br /> ಕಲಾ ಕಾಲೇಜಿನಲ್ಲಿ ವಾರದಿಂದ ನಡೆಯುತ್ತಿರುವ ವಿಚಾರ ಸಂಕಿರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಇಂಥ ಕಾರ್ಯಕ್ರಮಗಳು ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ನಡೆಯಲು ಸಾಧ್ಯ’ ಎಂದು ಹೇಳಿದರು. ಇಂಥ ಸಮುದಾಯದ ಮೈಂಡ್ಸೆಟ್ಗಳು ಸಂಕುಚಿತವಾಗಿರುವುದರಿಂದ ಇಂಥ ಯೋಜನೆಗಳೂ ಬರುತ್ತವೆ’ ಎಂದರು.<br /> <br /> ಉಪನ್ಯಾಸಗಳ ಬಗ್ಗೆ ಮಾತನಾಡಿದ ಅವರು, ‘ತಜ್ಞರೊಬ್ಬರಿಂದ ಒಂದು ಗಂಟೆ ಉಪನ್ಯಾಸ ಕೇಳುವುದು, ಒಂದು ಪುಸ್ತಕವನ್ನು ಒಂದು ವರ್ಷ ಓದಿ ಅರ್ಥಮಾಡಿಕೊಂಡು ಜ್ಞಾನ ಪಡೆಯುವುದಕ್ಕೆ ಸಮವಾಗಿರುತ್ತದೆ’ ಎಂದು ಉದಾಹರಣೆ ನೀಡಿದರು.<br /> <br /> ಕಾಲೇಜಿನ ಪ್ರಾಂಶುಪಾಲ ಪ್ರೊ, ಲಿಂಗಯ್ಯ ಮಾತನಾಡಿ, ‘ಈ ವಿಭಾಗವಾರು ವಿಚಾರ ಸಂಕಿರಣ ವಿದ್ಯಾರ್ಥಿಗಳಲ್ಲಿನ ಜ್ಞಾನ ದಿಗಂತವನ್ನು ವಿಸ್ತರಿಸುವುದಕ್ಕಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಉಪನ್ಯಾಸ ಕೇಳಿದ ನಂತರ ಆ ವಿಚಾರಗಳನ್ನು ನಿತ್ಯದ ಪಠ್ಯಗಳ ಜೊತೆಗೆ ತಳಕು ಹಾಕಿಕೊಂಡು ಓದಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಹ ಕಾರ್ಯದರ್ಶಿ ಮಧುಸೂದನ್ ‘ಸರ್ಕಾರ ನೀಡಿರುವ ಹಣ ಖರ್ಚು ಮಾಡುವುದಕ್ಕಾಗಿ ನಾವು ಉಪನ್ಯಾಸ ಏರ್ಪಡಿಸಿಲ್ಲ. ಹಾಗೆಯೇ ಉಪನ್ಯಾಸಗಳಲ್ಲಿ ನೀಡಿರುವ ವಿಚಾರಗಳು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿಕೊಳ್ಳುವ ಅಗತ್ಯವಿಲ್ಲ.<br /> <br /> ಪಠ್ಯದ ಜೊತೆಗೆ, ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಲು ಉಪನ್ಯಾಸದ ವಿಚಾರಗಳು ನೆರವಾಗುತ್ತವೆ’ ಎಂದರು.ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕರಿಯಪ್ಪ ಮಾಳಿಗೆ ಅವರು ಪ್ರೊ. ಎಸ್. ಜಿ.ಸಿದ್ದರಾಮಯ್ಯ ಅವರನ್ನು ಪರಿಚಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>