<p><strong>ಬನಹಟ್ಟಿ (ಬಾಗಲಕೋಟೆ ಜಿಲ್ಲೆ):</strong> ಉತ್ತರ ಭಾರತ ಪ್ರವಾಸಕ್ಕೆಂದು ತೆರಳಿದ್ದ ಬನಹಟ್ಟಿಯ ಮಾಹೇಶ್ವರಿ ಸಮಾಜದ ಐವರು ಮತ್ತು ಅವರ ಸಂಬಂಧಿಕರು ಹಾಗೂ ಪ್ರಭು ಕರಲಟ್ಟಿ ದಂಪತಿ ಸೇರಿದಂತೆ ಒಟ್ಟು 17 ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.<br /> <br /> ಲಡ್ಡಾ ಕುಟುಂಬ ಹಾಗೂ ಪ್ರಭು ಕರಲಟ್ಟಿ ಕುಟುಂಬದ ಸದಸ್ಯರು ಜೂನ್ 15 ರಂದು ದೆಹಲಿಯಿಂದ ಉತ್ತರಾಖಂಡದ ಬದರಿನಾಥ ಮತ್ತು ಯಮುನೋತ್ರಿ ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ಪ್ರವಾಹದಿಂದಾಗಿ ರಸ್ತೆ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.<br /> <br /> ಬದರಿನಾಥದಿಂದ ಸುಮಾರು 20 ಕಿ.ಮೀ. ದೂರದ ಪಾಂಡೇಶ್ವರ ಎಂಬ ಪ್ರದೇಶದಲ್ಲಿ ನಂದಲಾಲ ಲಡ್ಡಾ ಮತ್ತು ಅವರ ಕುಟುಂಬದ ಏಳು ಸದಸ್ಯರು, ಪ್ರಭು ಕರಲಟ್ಟಿ ಕುಟುಂಬದ ಮೂವರು ಸದಸ್ಯರು ಉತ್ತರ ಕಾಶಿಯಲ್ಲಿ ಹಾಗೂ ಯಮುನೋತ್ರಿಯಲ್ಲಿ ಭಗವಾನದಾಸ ಲಡ್ಡಾ ಕುಟುಂಬದ ಸದಸ್ಯರು ಅತಂತ್ರ ಸ್ಥಿತಿಯಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬನಹಟ್ಟಿ (ಬಾಗಲಕೋಟೆ ಜಿಲ್ಲೆ):</strong> ಉತ್ತರ ಭಾರತ ಪ್ರವಾಸಕ್ಕೆಂದು ತೆರಳಿದ್ದ ಬನಹಟ್ಟಿಯ ಮಾಹೇಶ್ವರಿ ಸಮಾಜದ ಐವರು ಮತ್ತು ಅವರ ಸಂಬಂಧಿಕರು ಹಾಗೂ ಪ್ರಭು ಕರಲಟ್ಟಿ ದಂಪತಿ ಸೇರಿದಂತೆ ಒಟ್ಟು 17 ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.<br /> <br /> ಲಡ್ಡಾ ಕುಟುಂಬ ಹಾಗೂ ಪ್ರಭು ಕರಲಟ್ಟಿ ಕುಟುಂಬದ ಸದಸ್ಯರು ಜೂನ್ 15 ರಂದು ದೆಹಲಿಯಿಂದ ಉತ್ತರಾಖಂಡದ ಬದರಿನಾಥ ಮತ್ತು ಯಮುನೋತ್ರಿ ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ಪ್ರವಾಹದಿಂದಾಗಿ ರಸ್ತೆ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.<br /> <br /> ಬದರಿನಾಥದಿಂದ ಸುಮಾರು 20 ಕಿ.ಮೀ. ದೂರದ ಪಾಂಡೇಶ್ವರ ಎಂಬ ಪ್ರದೇಶದಲ್ಲಿ ನಂದಲಾಲ ಲಡ್ಡಾ ಮತ್ತು ಅವರ ಕುಟುಂಬದ ಏಳು ಸದಸ್ಯರು, ಪ್ರಭು ಕರಲಟ್ಟಿ ಕುಟುಂಬದ ಮೂವರು ಸದಸ್ಯರು ಉತ್ತರ ಕಾಶಿಯಲ್ಲಿ ಹಾಗೂ ಯಮುನೋತ್ರಿಯಲ್ಲಿ ಭಗವಾನದಾಸ ಲಡ್ಡಾ ಕುಟುಂಬದ ಸದಸ್ಯರು ಅತಂತ್ರ ಸ್ಥಿತಿಯಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>