<p><strong>ಬೆಂಗಳೂರು: </strong> ಇಲ್ಲಿಗೆ ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸೆ. 3ರಂದು ಅನು ಎಂಬ ಸಿಂಹವು ಜನ್ಮ ನೀಡಿದ್ದ ನಾಲ್ಕು ಮರಿಗಳು ಹಸಿವು ತಾಳಲಾರದೇ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ಸುಮಾರು 13 ವರ್ಷ ವಯೋಮಾನದ ಅನುಗೆ ಇದು ಮೂರನೇ ಹೆರಿಗೆಯಾಗಿತ್ತು. ಅನುಗೆ ವಯಸ್ಸಾದ ಹಿನ್ನೆಲೆಯಲ್ಲಿ ಈ ಮರಿಗಳಿಗೆ ಹಾಲು ನೀಡುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಆ ಮರಿಗಳಿಗೆ ಬೇರೆ ಹಾಲನ್ನು ನೀಡಿದ್ದರು. ತಾಯಿಯ ಹಾಲನ್ನು ಕುಡಿದರಷ್ಟೇ ಉಳಿಯಬಹುದಾಗಿದ್ದ ಮರಿಗಳು, ತಾಯಿ ಸಿಂಹವು ಹಾಲು ನೀಡಲು ಅಸಮರ್ಥವಾದ ಹಿನ್ನೆಲೆಯಲ್ಲಿ ಪ್ರತಿ 12 ಗಂಟೆಗಳ ಅವಧಿಯಲ್ಲಿ (ಸೆ.8ರವರೆಗೆ) ಮೂರು ಮರಿಗಳು ಸಾವನ್ನಪ್ಪಿದವು.<br /> <br /> ಇದಕ್ಕೂ ಮುನ್ನ ಸೆ.3ರಂದೇ ಒಂದು ಮರಿಯು ಜನನವಾದ ಸ್ವಲ್ಪ ಹೊತ್ತಿನಲ್ಲಿಯೇ ಮರಣ ಹೊಂದಿತ್ತು ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಸಿಂಹಕ್ಕೆ ಸಾಕಷ್ಟು ವಯಸ್ಸಾದ ಹಿನ್ನೆಲೆಯಲ್ಲಿ ಅದು ತಾಯ್ತನದ ಗುಣಗಳನ್ನು ಕಳೆದುಕೊಂಡಿತ್ತು. ಹೆರಿಗೆಯ ನಂತರ ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಗಿಣ್ಣು ಹಾಲನ್ನೂ ಈ ಸಿಂಹ ನೀಡಿರಲಿಲ್ಲ. ಹಲವು ಬಾರಿ ವಯಸ್ಸಾದ ಆನೆಗಳಲ್ಲಿಯೂ ಈ ರೀತಿ ಆಗುವುದಿದೆ ಎಂದು ರಾಜು ತಿಳಿಸಿದರು. ಅನುವಿಗೆ ಇದಕ್ಕೂ ಮುಂಚೆ ಎರಡು ಬಾರಿ ಹೆರಿಗೆಯಾಗಿದೆ. ಆಗ ಜನಿಸಿದ್ದ ಏಳೂ ಸಿಂಹಗಳು ಆರೋಗ್ಯವಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> ಇಲ್ಲಿಗೆ ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸೆ. 3ರಂದು ಅನು ಎಂಬ ಸಿಂಹವು ಜನ್ಮ ನೀಡಿದ್ದ ನಾಲ್ಕು ಮರಿಗಳು ಹಸಿವು ತಾಳಲಾರದೇ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ಸುಮಾರು 13 ವರ್ಷ ವಯೋಮಾನದ ಅನುಗೆ ಇದು ಮೂರನೇ ಹೆರಿಗೆಯಾಗಿತ್ತು. ಅನುಗೆ ವಯಸ್ಸಾದ ಹಿನ್ನೆಲೆಯಲ್ಲಿ ಈ ಮರಿಗಳಿಗೆ ಹಾಲು ನೀಡುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಆ ಮರಿಗಳಿಗೆ ಬೇರೆ ಹಾಲನ್ನು ನೀಡಿದ್ದರು. ತಾಯಿಯ ಹಾಲನ್ನು ಕುಡಿದರಷ್ಟೇ ಉಳಿಯಬಹುದಾಗಿದ್ದ ಮರಿಗಳು, ತಾಯಿ ಸಿಂಹವು ಹಾಲು ನೀಡಲು ಅಸಮರ್ಥವಾದ ಹಿನ್ನೆಲೆಯಲ್ಲಿ ಪ್ರತಿ 12 ಗಂಟೆಗಳ ಅವಧಿಯಲ್ಲಿ (ಸೆ.8ರವರೆಗೆ) ಮೂರು ಮರಿಗಳು ಸಾವನ್ನಪ್ಪಿದವು.<br /> <br /> ಇದಕ್ಕೂ ಮುನ್ನ ಸೆ.3ರಂದೇ ಒಂದು ಮರಿಯು ಜನನವಾದ ಸ್ವಲ್ಪ ಹೊತ್ತಿನಲ್ಲಿಯೇ ಮರಣ ಹೊಂದಿತ್ತು ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಸಿಂಹಕ್ಕೆ ಸಾಕಷ್ಟು ವಯಸ್ಸಾದ ಹಿನ್ನೆಲೆಯಲ್ಲಿ ಅದು ತಾಯ್ತನದ ಗುಣಗಳನ್ನು ಕಳೆದುಕೊಂಡಿತ್ತು. ಹೆರಿಗೆಯ ನಂತರ ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಗಿಣ್ಣು ಹಾಲನ್ನೂ ಈ ಸಿಂಹ ನೀಡಿರಲಿಲ್ಲ. ಹಲವು ಬಾರಿ ವಯಸ್ಸಾದ ಆನೆಗಳಲ್ಲಿಯೂ ಈ ರೀತಿ ಆಗುವುದಿದೆ ಎಂದು ರಾಜು ತಿಳಿಸಿದರು. ಅನುವಿಗೆ ಇದಕ್ಕೂ ಮುಂಚೆ ಎರಡು ಬಾರಿ ಹೆರಿಗೆಯಾಗಿದೆ. ಆಗ ಜನಿಸಿದ್ದ ಏಳೂ ಸಿಂಹಗಳು ಆರೋಗ್ಯವಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>