<p><strong>ನವದೆಹಲಿ (ಐಎಎನ್ಎಸ್): </strong>ರಾಷ್ಟ್ರದ ರಾಜಧಾನಿಯ ಹೊರವಲಯದಲ್ಲಿರುವ ಬಪ್ರೋಲಾ ಗ್ರಾಮದಲ್ಲಿ ಭಾನುವಾರ ದಿನವಿಡೀ ಹಬ್ಬದ ವಾತಾವರಣ. ಕಾರಣ ಈ ಊರಿನ ಹೆಮ್ಮೆಯ ಪುತ್ರ ಸುಶೀಲ್ ಕುಮಾರ್ ಅವರ ಬೆಳ್ಳಿಯ ಸಾಧನೆ.<br /> <br /> ಬೆಳಿಗ್ಗೆಯಿಂದಲೇ ಗ್ರಾಮದ ಜನರು ಪ್ರಾರ್ಥಿಸಲು ಶುರು ಮಾಡಿದ್ದರು. ತಾಯಿ ಕಮಲಾ ದೇವಿ ಉಪವಾಸಕ್ಕೆ ಮೊರೆ ಹೋಗಿದ್ದರು. ತಂದೆ ದಿವಾನ್ ಸಿಂಗ್ ಅವರು ಸುಶೀಲ್ ಅಭಿಮಾನಿಗಳೊಂದಿಗೆ ಮಾತಿನಲ್ಲಿ ನಿರತರಾಗಿದ್ದರು. ಅವರ ನಿವಾಸದ ಮುಂದೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜೊತೆಗೆ ಮಾಧ್ಯಮದವರೂ ಆಗಮಿಸಿದ್ದರು.<br /> <br /> ಪ್ರತಿ ಸುತ್ತಿನಲ್ಲಿ ಸುಶೀಲ್ ಗೆಲ್ಲುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಕೆಲವರು ಡ್ರಮ್ ಬಾರಿಸಿ ತಮ್ಮ ಖುಷಿ ವ್ಯಕ್ತಪಡಿಸುತ್ತಿದ್ದರು. ಅವರಿಗೆಲ್ಲಾ ಸುಶೀಲ್ ತಾಯಿ ಕಮಲಾ ಸಿಹಿ ತಿಂಡಿ ವಿತರಿಸುತ್ತಿದ್ದರು.<br /> <br /> ಆದರೆ ಚಿನ್ನದ ಸಾಧನೆ ಮಾಡಲು ಸಾಧ್ಯವಾಗದ್ದಕ್ಕೆ ತಂದೆ ದಿವಾನ್ ಅವರಿಗೆ ಕೊಂಚ ಬೇಸರ. `ನನಗೆ ಸಿಟ್ಟು ಬಂದಿದೆ. ಏನು ಹೇಳಲೂ ನನಗೆ ಸಾಧ್ಯವಾಗುತ್ತಿಲ್ಲ. ಸುಶೀಲ್ ಚಿನ್ನದ ಪದಕವನ್ನೇ ಗೆಲ್ಲಬೇಕಿತ್ತು. ಅದೇಕೆ ತಪ್ಪಿ ಹೋಯಿತು ನನಗೆ ಗೊತ್ತಿಲ್ಲ~ ಎಂದು ಅವರು ನುಡಿದರು.<br /> <br /> 14ನೇ ವಯಸ್ಸಿನಲ್ಲಿ ಸುಶೀಲ್ ಅಭ್ಯಾಸ ಮಾಡಲು ಶುರು ಮಾಡಿದ್ದ ಛತ್ರಶಾಲಾ ಕ್ರೀಡಾಂಗಣದಲ್ಲಿಯೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಯುವ ಕುಸ್ತಿಪಟುಗಳು ಕುಣಿದು ಕುಪ್ಪಳಿಸಿದರು. ಆರಂಭದ ದಿನಗಳಲ್ಲಿ ಇದೇ ಕ್ರೀಡಾಂಗಣದ ಮಣ್ಣಿನ ಅಖಾಡಾದಲ್ಲಿ ಸುಶೀಲ್ ಅಭ್ಯಾಸ ನಡೆಸಿ ಈ ಮಟ್ಟ ತಲುಪಿದ್ದಾರೆ. ಸುಶೀಲ್ ಸೇರಿದಂತೆ 20 ಕುಸ್ತಿಪಟುಗಳು ಹಾಸ್ಟೆಲ್ನ ಒಂದೇ ಕೊಠಡಿಯಲ್ಲಿ ಇದ್ದು ಅಭ್ಯಾಸ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್): </strong>ರಾಷ್ಟ್ರದ ರಾಜಧಾನಿಯ ಹೊರವಲಯದಲ್ಲಿರುವ ಬಪ್ರೋಲಾ ಗ್ರಾಮದಲ್ಲಿ ಭಾನುವಾರ ದಿನವಿಡೀ ಹಬ್ಬದ ವಾತಾವರಣ. ಕಾರಣ ಈ ಊರಿನ ಹೆಮ್ಮೆಯ ಪುತ್ರ ಸುಶೀಲ್ ಕುಮಾರ್ ಅವರ ಬೆಳ್ಳಿಯ ಸಾಧನೆ.<br /> <br /> ಬೆಳಿಗ್ಗೆಯಿಂದಲೇ ಗ್ರಾಮದ ಜನರು ಪ್ರಾರ್ಥಿಸಲು ಶುರು ಮಾಡಿದ್ದರು. ತಾಯಿ ಕಮಲಾ ದೇವಿ ಉಪವಾಸಕ್ಕೆ ಮೊರೆ ಹೋಗಿದ್ದರು. ತಂದೆ ದಿವಾನ್ ಸಿಂಗ್ ಅವರು ಸುಶೀಲ್ ಅಭಿಮಾನಿಗಳೊಂದಿಗೆ ಮಾತಿನಲ್ಲಿ ನಿರತರಾಗಿದ್ದರು. ಅವರ ನಿವಾಸದ ಮುಂದೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜೊತೆಗೆ ಮಾಧ್ಯಮದವರೂ ಆಗಮಿಸಿದ್ದರು.<br /> <br /> ಪ್ರತಿ ಸುತ್ತಿನಲ್ಲಿ ಸುಶೀಲ್ ಗೆಲ್ಲುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಕೆಲವರು ಡ್ರಮ್ ಬಾರಿಸಿ ತಮ್ಮ ಖುಷಿ ವ್ಯಕ್ತಪಡಿಸುತ್ತಿದ್ದರು. ಅವರಿಗೆಲ್ಲಾ ಸುಶೀಲ್ ತಾಯಿ ಕಮಲಾ ಸಿಹಿ ತಿಂಡಿ ವಿತರಿಸುತ್ತಿದ್ದರು.<br /> <br /> ಆದರೆ ಚಿನ್ನದ ಸಾಧನೆ ಮಾಡಲು ಸಾಧ್ಯವಾಗದ್ದಕ್ಕೆ ತಂದೆ ದಿವಾನ್ ಅವರಿಗೆ ಕೊಂಚ ಬೇಸರ. `ನನಗೆ ಸಿಟ್ಟು ಬಂದಿದೆ. ಏನು ಹೇಳಲೂ ನನಗೆ ಸಾಧ್ಯವಾಗುತ್ತಿಲ್ಲ. ಸುಶೀಲ್ ಚಿನ್ನದ ಪದಕವನ್ನೇ ಗೆಲ್ಲಬೇಕಿತ್ತು. ಅದೇಕೆ ತಪ್ಪಿ ಹೋಯಿತು ನನಗೆ ಗೊತ್ತಿಲ್ಲ~ ಎಂದು ಅವರು ನುಡಿದರು.<br /> <br /> 14ನೇ ವಯಸ್ಸಿನಲ್ಲಿ ಸುಶೀಲ್ ಅಭ್ಯಾಸ ಮಾಡಲು ಶುರು ಮಾಡಿದ್ದ ಛತ್ರಶಾಲಾ ಕ್ರೀಡಾಂಗಣದಲ್ಲಿಯೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಯುವ ಕುಸ್ತಿಪಟುಗಳು ಕುಣಿದು ಕುಪ್ಪಳಿಸಿದರು. ಆರಂಭದ ದಿನಗಳಲ್ಲಿ ಇದೇ ಕ್ರೀಡಾಂಗಣದ ಮಣ್ಣಿನ ಅಖಾಡಾದಲ್ಲಿ ಸುಶೀಲ್ ಅಭ್ಯಾಸ ನಡೆಸಿ ಈ ಮಟ್ಟ ತಲುಪಿದ್ದಾರೆ. ಸುಶೀಲ್ ಸೇರಿದಂತೆ 20 ಕುಸ್ತಿಪಟುಗಳು ಹಾಸ್ಟೆಲ್ನ ಒಂದೇ ಕೊಠಡಿಯಲ್ಲಿ ಇದ್ದು ಅಭ್ಯಾಸ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>