<p><strong>ಗಂಗಾವತಿ: </strong>ಮುರಾರಿನಗರ, ಲಕ್ಷ್ಮಿಕ್ಯಾಂಪ್ ಮೊದಲಾದ ವಾರ್ಡ್ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮೂರು ಇಂಚು ಗಾತ್ರದ ಮುಖ್ಯ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಘಟನೆ<br /> ಸತ್ಕಾರ ವಸತಿ ನಿಯಲದ ಬಳಿ ಗುರುವಾರ ಸಂಭವಿಸಿದೆ.<br /> <br /> ವಸತಿ ನಿಲಯದ ಬಳಿ ಇರುವ ಬಸ್ನಿಲ್ದಾಣ ರಸ್ತೆಯಿಂದ ಲಕ್ಷ್ಮಿ ಆಂಜನೇಯ ದೇವಸ್ಥಾನಕ್ಕೆ ತಿರುವು ಪಡೆದುಕೊಳ್ಳುವ ರಸ್ತೆ ಬದಿಯ ಚರಂಡಿ ಸಮೀಪದ ಕುಡಿಯುವ ನೀರಿನ ಪೈಪ್ ಒಡೆದು ಗಂಟೆಯಾದರೂ ನಗರಸಭೆ ಸಿಬ್ಬಂದಿ ತಕ್ಷಣಕ್ಕೆ ಸ್ಪಂದಿಸಲಿಲ್ಲ. <br /> <br /> ಪರಿಣಾಮ ಸಾವಿರಾರು ಲೀಟರ್ ಪ್ರಮಾಣದಷ್ಟು ಕುಡಿಯುವ ನೀರು ವ್ಯರ್ಥವಾಗಿ ಒಡೆದ ಪೈಪನಿಂದ ಕಾರಂಜಿಯಂತೆ ಚಿಮ್ಮಿ ಚರಂಡಿ ಪಾಲಾಯಿತು. ನಗರಸಭೆಯ ಒಂದಿಬ್ಬರು ಎಂಜಿನಿಯರ್ಗಳು ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದರೂ ಕೂಡ ಪೋಲಾಗುತ್ತಿದ್ದ ನೀರು ತಡೆಯುವಲ್ಲಿ ವಿಫಲರಾದರು. <br /> <br /> ಪೈಪ್ ಒಡೆದ ಸುದ್ದಿ ಕೇಳಿ ಜನರು ನೆರೆದು ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ತಕ್ಷಣ ಸಿಬ್ಬಂದಿಯನ್ನು ಕರೆಯಿಸಲು ಒತ್ತಾಯಿಸುತ್ತಿದ್ದರು. ಆದರೆ ಎಂಜಿನಿಯರ್ಗಳ ದೂರವಾಣಿ ಕರೆಗೆ ಸ್ಪಂದನೆ ದೊರೆತದ್ದು ಸುಮಾರು 40 ನಿಮಿಷಗಳ ಬಳಿಕವಷ್ಟೆ.<br /> <br /> <strong>ಜೆಸಿಬಿಯ ಕೆಲಸ:</strong><br /> <br /> ಆಗಾಗ ಮಳೆ ಸುರಿಯುತ್ತಿರುವುದರಿಂದ ನಗರದ ಚರಂಡಿ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ನೈರ್ಮಲ್ಯ ವಿಭಾಗದ ಸಿಬ್ಬಂದಿ ಬುಧವಾರದಿಂದ ವಾಹನಗಳ ಸಮೇತ ಕಾರ್ಯಾಚರಣೆಗೆ ಇಳಿದಿದೆ. <br /> <br /> ಬುಧವಾರ ಸಂಜೆ ಸತ್ಕಾರ ಲಾಡ್ಜ್ ಬಳಿ ಚರಂಡಿಗೆ ಅಡ್ಡಹಾಕಿದ್ದ ಬೃಹತ್ ಕಲ್ಲುಗಳನ್ನು ಕಿತ್ತುವ ಸಂದರ್ಭದಲ್ಲಿ ಜೆಸಿಬಿಯ ಕೈಗೆ ಸಿಕ್ಕ ಕುಡಿಯುವ ನೀರಿನ ಪೈಪ್ ಸಿಕ್ಕಿದೆ. ಕ್ಷಣಾರ್ಧದಲ್ಲಿ ತುಂಡಾಗಿದೆ. ಆದರೆ ಈ ವಿಷಯವನ್ನು ಜೆಸಿಬಿ ಚಾಲಕ ಮೇಲಧಿಕಾರಿಯ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.<br /> <br /> ಯಥಾರೀತಿ ನೀರುಗಂಟಿಗಳು ಗುರುವಾರ ಮುರಾರಿನಗರ, ಲಕ್ಷ್ಮಿಕ್ಯಾಂಪ್ ವಾರ್ಡ್ಗಳಿಗೆ ನೀರು ಬಿಟ್ಟಿದ್ದಾರೆ. ಪರಿಣಾಮ ಒಡೆದ ಪೈಪಿನಿಂದ ಅಪಾರ ಪ್ರಮಾಣದ ನೀರು ಪೋಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳಾದ ಅಬ್ದುಲ್ ವಹಾಬ್ ಮುಲ್ಲಾ, ಮಸ್ಕಿ ಮಲ್ಲಿಕಾರ್ಜುನ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಮುರಾರಿನಗರ, ಲಕ್ಷ್ಮಿಕ್ಯಾಂಪ್ ಮೊದಲಾದ ವಾರ್ಡ್ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮೂರು ಇಂಚು ಗಾತ್ರದ ಮುಖ್ಯ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಘಟನೆ<br /> ಸತ್ಕಾರ ವಸತಿ ನಿಯಲದ ಬಳಿ ಗುರುವಾರ ಸಂಭವಿಸಿದೆ.<br /> <br /> ವಸತಿ ನಿಲಯದ ಬಳಿ ಇರುವ ಬಸ್ನಿಲ್ದಾಣ ರಸ್ತೆಯಿಂದ ಲಕ್ಷ್ಮಿ ಆಂಜನೇಯ ದೇವಸ್ಥಾನಕ್ಕೆ ತಿರುವು ಪಡೆದುಕೊಳ್ಳುವ ರಸ್ತೆ ಬದಿಯ ಚರಂಡಿ ಸಮೀಪದ ಕುಡಿಯುವ ನೀರಿನ ಪೈಪ್ ಒಡೆದು ಗಂಟೆಯಾದರೂ ನಗರಸಭೆ ಸಿಬ್ಬಂದಿ ತಕ್ಷಣಕ್ಕೆ ಸ್ಪಂದಿಸಲಿಲ್ಲ. <br /> <br /> ಪರಿಣಾಮ ಸಾವಿರಾರು ಲೀಟರ್ ಪ್ರಮಾಣದಷ್ಟು ಕುಡಿಯುವ ನೀರು ವ್ಯರ್ಥವಾಗಿ ಒಡೆದ ಪೈಪನಿಂದ ಕಾರಂಜಿಯಂತೆ ಚಿಮ್ಮಿ ಚರಂಡಿ ಪಾಲಾಯಿತು. ನಗರಸಭೆಯ ಒಂದಿಬ್ಬರು ಎಂಜಿನಿಯರ್ಗಳು ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದರೂ ಕೂಡ ಪೋಲಾಗುತ್ತಿದ್ದ ನೀರು ತಡೆಯುವಲ್ಲಿ ವಿಫಲರಾದರು. <br /> <br /> ಪೈಪ್ ಒಡೆದ ಸುದ್ದಿ ಕೇಳಿ ಜನರು ನೆರೆದು ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ತಕ್ಷಣ ಸಿಬ್ಬಂದಿಯನ್ನು ಕರೆಯಿಸಲು ಒತ್ತಾಯಿಸುತ್ತಿದ್ದರು. ಆದರೆ ಎಂಜಿನಿಯರ್ಗಳ ದೂರವಾಣಿ ಕರೆಗೆ ಸ್ಪಂದನೆ ದೊರೆತದ್ದು ಸುಮಾರು 40 ನಿಮಿಷಗಳ ಬಳಿಕವಷ್ಟೆ.<br /> <br /> <strong>ಜೆಸಿಬಿಯ ಕೆಲಸ:</strong><br /> <br /> ಆಗಾಗ ಮಳೆ ಸುರಿಯುತ್ತಿರುವುದರಿಂದ ನಗರದ ಚರಂಡಿ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ನೈರ್ಮಲ್ಯ ವಿಭಾಗದ ಸಿಬ್ಬಂದಿ ಬುಧವಾರದಿಂದ ವಾಹನಗಳ ಸಮೇತ ಕಾರ್ಯಾಚರಣೆಗೆ ಇಳಿದಿದೆ. <br /> <br /> ಬುಧವಾರ ಸಂಜೆ ಸತ್ಕಾರ ಲಾಡ್ಜ್ ಬಳಿ ಚರಂಡಿಗೆ ಅಡ್ಡಹಾಕಿದ್ದ ಬೃಹತ್ ಕಲ್ಲುಗಳನ್ನು ಕಿತ್ತುವ ಸಂದರ್ಭದಲ್ಲಿ ಜೆಸಿಬಿಯ ಕೈಗೆ ಸಿಕ್ಕ ಕುಡಿಯುವ ನೀರಿನ ಪೈಪ್ ಸಿಕ್ಕಿದೆ. ಕ್ಷಣಾರ್ಧದಲ್ಲಿ ತುಂಡಾಗಿದೆ. ಆದರೆ ಈ ವಿಷಯವನ್ನು ಜೆಸಿಬಿ ಚಾಲಕ ಮೇಲಧಿಕಾರಿಯ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.<br /> <br /> ಯಥಾರೀತಿ ನೀರುಗಂಟಿಗಳು ಗುರುವಾರ ಮುರಾರಿನಗರ, ಲಕ್ಷ್ಮಿಕ್ಯಾಂಪ್ ವಾರ್ಡ್ಗಳಿಗೆ ನೀರು ಬಿಟ್ಟಿದ್ದಾರೆ. ಪರಿಣಾಮ ಒಡೆದ ಪೈಪಿನಿಂದ ಅಪಾರ ಪ್ರಮಾಣದ ನೀರು ಪೋಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳಾದ ಅಬ್ದುಲ್ ವಹಾಬ್ ಮುಲ್ಲಾ, ಮಸ್ಕಿ ಮಲ್ಲಿಕಾರ್ಜುನ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>