<p>ತುಮಕೂರು: ಜಿಲ್ಲೆಗೆ ಶುಕ್ರವಾರ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್ ನೇತೃತ್ವದಲ್ಲಿ ಭೇಟಿ ನೀಡಿದ ಸಚಿವರ ತಂಡ `ಬರ ಪರಿಹಾರ ಕಾಮಗಾರಿ~ಗಳನ್ನು ಮಾತ್ರ ಪರಿಶೀಲಿಸಿತು. ಬರದಲ್ಲಿ ನಲುಗಿದ್ದ ಜನರ ಭಾವನೆ ಅರಿಯುವಲ್ಲಿ ವಿಫಲವಾಯಿತು.<br /> <br /> ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ತುಂಬಾಡಿ, ವೀರನಗರ, ಬೆಲ್ಲದಮಡು, ದೊಡ್ಡೇರಿ ಗ್ರಾಮಗಳಲ್ಲಿ ಸಚಿವರನ್ನು ಭೇಟಿ ಮಾಡಲು ಜನತೆ ಕಾದು ನಿಂತಿದ್ದರು. ಆದರೆ ಜನಪ್ರತಿನಿಧಿಗಳು ಅವರ ಬಳಿ ಹೋಗಲೇ ಇಲ್ಲ. <br /> <br /> `ಇವತ್ತು ಮಿನಿಸ್ಟ್ರು ಬರ್ತಾರೆ ಅಂತ್ಲೇ ಇರ್ಬೇಕು, ಮೊನ್ನೆ ತಾನೆ ಡಿಸಿ- ಎಸಿ ಬಂದು ಪೈಪ್ಗಳು ಹಾಕಿಸಿದ್ರು. ಇವ್ರ ಕಣ್ಣಿಗೆ ದೂಳು ಬೀಳ್ಬಾರ್ದು ಅಂತ ರಸ್ತೆಗೆಲ್ಲಾ ನೀರು ಹಾಕಿಸಿದ್ದಾರೆ. ನಮ್ಮಂಥವ್ರ ಹತ್ರ ಹೋಗೋಕೂ ಬಿಡಲ್ಲ. ಬೆಂಗಳೂರಿಂದ ಇಲ್ಲೆತನ್ಕ ಎಸಿ ಕಾರಲ್ಲಿ ಬಂದು- ಹೋದ್ರೆ ಯಾರಿಗೇನು ಲಾಭ?~ ಎಂದು ವೀರನಗರದ ಪಿ.ಎನ್.ನಾರಾಯಣಪ್ಪ `ಪ್ರಜಾವಾಣಿ~ ಎದುರು ಅಳಲು ತೋಡಿಕೊಂಡರು.<br /> <br /> ಬೆಲ್ಲದಮಡು ಗ್ರಾಮದಲ್ಲಿ ಸಚಿವರಿಗಾಗಿ ಕಾದು ನಿಂತಿದ್ದ ಗ್ರಾಮಸ್ಥರು, ಮೇವಿನ ವ್ಯವಸ್ಥೆ ಮಾಡಿ ಜಾನುವಾರುಗಳನ್ನು ಉಳಿಸಿಕೊಡಬೇಕೆಂದು ಅಂಗಲಾಚಿದರು. <br /> <br /> ಅನೇಕ ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿ ಕೊರೆಸಿದ್ದ ಬೋರ್ವೆಲ್ಗೆ ಗುರುವಾರವಷ್ಟೇ ಗುತ್ತಿಗೆದಾರರು ರೂ. 1.5 ಲಕ್ಷ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂಬ ನಾಮಫಲಕ ಹಾಕಲಾಗಿದೆ. <br /> ಜನರ ವಿರೋಧಕ್ಕೆ ಹೆದರಿ ರಾತ್ರೋರಾತ್ರಿ ನಾಮಫಲಕ ಕಿತ್ತು ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದರು.<br /> ಈ ಮಾತಿಗೆ ಕಿವಿಗೊಡಲು ಸಚಿವರು ಅಲ್ಲಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಜಿಲ್ಲೆಗೆ ಶುಕ್ರವಾರ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್ ನೇತೃತ್ವದಲ್ಲಿ ಭೇಟಿ ನೀಡಿದ ಸಚಿವರ ತಂಡ `ಬರ ಪರಿಹಾರ ಕಾಮಗಾರಿ~ಗಳನ್ನು ಮಾತ್ರ ಪರಿಶೀಲಿಸಿತು. ಬರದಲ್ಲಿ ನಲುಗಿದ್ದ ಜನರ ಭಾವನೆ ಅರಿಯುವಲ್ಲಿ ವಿಫಲವಾಯಿತು.<br /> <br /> ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ತುಂಬಾಡಿ, ವೀರನಗರ, ಬೆಲ್ಲದಮಡು, ದೊಡ್ಡೇರಿ ಗ್ರಾಮಗಳಲ್ಲಿ ಸಚಿವರನ್ನು ಭೇಟಿ ಮಾಡಲು ಜನತೆ ಕಾದು ನಿಂತಿದ್ದರು. ಆದರೆ ಜನಪ್ರತಿನಿಧಿಗಳು ಅವರ ಬಳಿ ಹೋಗಲೇ ಇಲ್ಲ. <br /> <br /> `ಇವತ್ತು ಮಿನಿಸ್ಟ್ರು ಬರ್ತಾರೆ ಅಂತ್ಲೇ ಇರ್ಬೇಕು, ಮೊನ್ನೆ ತಾನೆ ಡಿಸಿ- ಎಸಿ ಬಂದು ಪೈಪ್ಗಳು ಹಾಕಿಸಿದ್ರು. ಇವ್ರ ಕಣ್ಣಿಗೆ ದೂಳು ಬೀಳ್ಬಾರ್ದು ಅಂತ ರಸ್ತೆಗೆಲ್ಲಾ ನೀರು ಹಾಕಿಸಿದ್ದಾರೆ. ನಮ್ಮಂಥವ್ರ ಹತ್ರ ಹೋಗೋಕೂ ಬಿಡಲ್ಲ. ಬೆಂಗಳೂರಿಂದ ಇಲ್ಲೆತನ್ಕ ಎಸಿ ಕಾರಲ್ಲಿ ಬಂದು- ಹೋದ್ರೆ ಯಾರಿಗೇನು ಲಾಭ?~ ಎಂದು ವೀರನಗರದ ಪಿ.ಎನ್.ನಾರಾಯಣಪ್ಪ `ಪ್ರಜಾವಾಣಿ~ ಎದುರು ಅಳಲು ತೋಡಿಕೊಂಡರು.<br /> <br /> ಬೆಲ್ಲದಮಡು ಗ್ರಾಮದಲ್ಲಿ ಸಚಿವರಿಗಾಗಿ ಕಾದು ನಿಂತಿದ್ದ ಗ್ರಾಮಸ್ಥರು, ಮೇವಿನ ವ್ಯವಸ್ಥೆ ಮಾಡಿ ಜಾನುವಾರುಗಳನ್ನು ಉಳಿಸಿಕೊಡಬೇಕೆಂದು ಅಂಗಲಾಚಿದರು. <br /> <br /> ಅನೇಕ ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿ ಕೊರೆಸಿದ್ದ ಬೋರ್ವೆಲ್ಗೆ ಗುರುವಾರವಷ್ಟೇ ಗುತ್ತಿಗೆದಾರರು ರೂ. 1.5 ಲಕ್ಷ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂಬ ನಾಮಫಲಕ ಹಾಕಲಾಗಿದೆ. <br /> ಜನರ ವಿರೋಧಕ್ಕೆ ಹೆದರಿ ರಾತ್ರೋರಾತ್ರಿ ನಾಮಫಲಕ ಕಿತ್ತು ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದರು.<br /> ಈ ಮಾತಿಗೆ ಕಿವಿಗೊಡಲು ಸಚಿವರು ಅಲ್ಲಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>