<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಬೆಳಗೊಳ ಸಮೀಪದ ಬಲಮುರಿ ಬಳಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.<br /> <br /> ಬಲಮುರಿ ಒಡ್ಡಿಗೆ ಅನತಿ ದೂರದಲ್ಲಿರುವ ಬಿ.ಎಸ್.ಸುಬ್ಬೇಗೌಡ ಅವರ ಜಮೀನಿನ ಬಳಿ ಈ ಹಾವು ಕಂಡು ಬಂದಿದೆ. ಬತ್ತದ ಕೊಯ್ಲು ಮಾಡುತ್ತಿದ್ದ ಕೃಷಿ ಕಾರ್ಮಿಕರಿಗೆ ಈ ಹಾವು ಗೋಚರಿಸಿದೆ. ಕಾವೇರಿ ನದಿಯ ಸಣ್ಣ ತೊರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಹೆಬ್ಬಾವು ಸಿಕ್ಕಿಕೊಂಡಿತ್ತು. ಸುಮಾರು 20 ಕೆ.ಜಿ ತೂಕ ಇರುವ ಹಾವನ್ನು ಬಲಮುರಿಯಲ್ಲಿ ವ್ಯಾಪಾರ ಮಾಡುವ ದೇವರಾಜು, ಜಗದೀಶ ಇತರರು ರಕ್ಷಿಸಿದ್ದಾರೆ.<br /> <br /> ಈ ಹೆಬ್ಬಾವನ್ನು ಸುತ್ತಮುತ್ತಲ ಜಮೀನುಗಳ ರೈತರು ಹಾಗೂ ಬಲಮುರಿ ವಿಹಾರ ತಾಣಕ್ಕೆ ಬಂದಿದ್ದ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದರು. ಸುಮಾರು ಎರಡು ತಾಸು ಕಾಲ ಬಲಮುರಿಯಲ್ಲಿ ಈ ಹಾವನ್ನು ಇಟ್ಟುಕೊಳ್ಳಲಾಗಿತ್ತು. ಯುವಕರು ಹಾವನ್ನು ಕೈಯಲ್ಲಿ ಎತ್ತಿ ಹಿಡಿದು ಖುಷಿಪಟ್ಟರು. ಸಮೀಪ ಭಂಭಂ ಆಶ್ರಮದ ಅರಣ್ಯದಲ್ಲಿ ಹೆಬ್ಬಾವು ಬಿಟ್ಟು ಬಂದಿದ್ದೇವೆ ಎಂದು ಬೆಳಗೊಳ ರವಿಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಬೆಳಗೊಳ ಸಮೀಪದ ಬಲಮುರಿ ಬಳಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.<br /> <br /> ಬಲಮುರಿ ಒಡ್ಡಿಗೆ ಅನತಿ ದೂರದಲ್ಲಿರುವ ಬಿ.ಎಸ್.ಸುಬ್ಬೇಗೌಡ ಅವರ ಜಮೀನಿನ ಬಳಿ ಈ ಹಾವು ಕಂಡು ಬಂದಿದೆ. ಬತ್ತದ ಕೊಯ್ಲು ಮಾಡುತ್ತಿದ್ದ ಕೃಷಿ ಕಾರ್ಮಿಕರಿಗೆ ಈ ಹಾವು ಗೋಚರಿಸಿದೆ. ಕಾವೇರಿ ನದಿಯ ಸಣ್ಣ ತೊರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಹೆಬ್ಬಾವು ಸಿಕ್ಕಿಕೊಂಡಿತ್ತು. ಸುಮಾರು 20 ಕೆ.ಜಿ ತೂಕ ಇರುವ ಹಾವನ್ನು ಬಲಮುರಿಯಲ್ಲಿ ವ್ಯಾಪಾರ ಮಾಡುವ ದೇವರಾಜು, ಜಗದೀಶ ಇತರರು ರಕ್ಷಿಸಿದ್ದಾರೆ.<br /> <br /> ಈ ಹೆಬ್ಬಾವನ್ನು ಸುತ್ತಮುತ್ತಲ ಜಮೀನುಗಳ ರೈತರು ಹಾಗೂ ಬಲಮುರಿ ವಿಹಾರ ತಾಣಕ್ಕೆ ಬಂದಿದ್ದ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದರು. ಸುಮಾರು ಎರಡು ತಾಸು ಕಾಲ ಬಲಮುರಿಯಲ್ಲಿ ಈ ಹಾವನ್ನು ಇಟ್ಟುಕೊಳ್ಳಲಾಗಿತ್ತು. ಯುವಕರು ಹಾವನ್ನು ಕೈಯಲ್ಲಿ ಎತ್ತಿ ಹಿಡಿದು ಖುಷಿಪಟ್ಟರು. ಸಮೀಪ ಭಂಭಂ ಆಶ್ರಮದ ಅರಣ್ಯದಲ್ಲಿ ಹೆಬ್ಬಾವು ಬಿಟ್ಟು ಬಂದಿದ್ದೇವೆ ಎಂದು ಬೆಳಗೊಳ ರವಿಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>