<p>ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಾದ್ಯಂತ ವಿದ್ಯುತ್ ಪೂರೈಕೆ ಸಂಸ್ಥೆಗಳು (ಎಸ್ಕಾಂ) ಆರ್ಥಿಕ ಮುಗ್ಗಟ್ಟಿನಲ್ಲಿವೆ. 2010ರಲ್ಲಿ ದೇಶದ ಎಲ್ಲ ಎಸ್ಕಾಂಗಳ ಒಟ್ಟು ನಷ್ಟ 1.16 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.<br /> <br /> ಕರ್ನಾಟಕವೊಂದರಲ್ಲಿಯೇ ಈ ನಷ್ಟದ ಮೊತ್ತ ಎಂಟು ಸಾವಿರ ಕೋಟಿ ರೂಪಾಯಿ. ಈ ನಷ್ಟವನ್ನು ನಿವಾರಿಸಿಕೊಳ್ಳಲು ರಾಜ್ಯಸರ್ಕಾರಗಳ ನಿಯಂತ್ರಣದ ಹಂಗಿಲ್ಲದೆ ಸ್ವತಂತ್ರವಾಗಿ ವಿದ್ಯುತ್ ದರ ಏರಿಸಲು ಅವಕಾಶ ನೀಡಬೇಕೆಂಬುದು ಎಸ್ಕಾಂಗಳ ಬಹುದಿನದ ಬೇಡಿಕೆ.<br /> <br /> ಕೇಂದ್ರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿರುವ ಕೇಂದ್ರ ಇಂಧನ ಸಚಿವಾಲಯ, ಎಸ್ಕಾಂಗಳ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಇಂಗಿತವನ್ನು ನೀಡಿದೆ. ಹನ್ನೆರಡನೇ ಪಂಚವಾರ್ಷಿಕ ಯೋಜನೆ ಕರಡು ವರದಿಯಲ್ಲಿ ಕೇಂದ್ರ ಸರ್ಕಾರ ಈ ಪ್ರಸ್ತಾವವನ್ನು ಮಾಡಿದೆ. <br /> <br /> ಈಗಿನ ವ್ಯವಸ್ಥೆಯ ಪ್ರಕಾರ ರಾಜ್ಯದ ಎಸ್ಕಾಂಗಳು ವಿದ್ಯುತ್ ದರ ಏರಿಕೆಯ ಪ್ರಸ್ತಾವವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಆಯೋಗ, ಸಾರ್ವಜನಿಕರ ಅಭಿಪ್ರಾಯ ಪಡೆದು ನಿರ್ದಿಷ್ಟ ಪ್ರಮಾಣದಲ್ಲಿ ದರ ಏರಿಕೆಗೆ ಅನುಮತಿ ನೀಡುತ್ತದೆ.<br /> <br /> ಅದರ ನಂತರ ಎಸ್ಕಾಂ ರಾಜ್ಯ ಸರ್ಕಾರದ ಅನುಮತಿ ಪಡೆದು ದರ ಏರಿಕೆ ಮಾಡುತ್ತದೆ. `ರಾಜ್ಯ ಸರ್ಕಾರಗಳು ರಾಜಕೀಯ ಕಾರಣಕ್ಕಾಗಿ ವಿದ್ಯುತ್ ದರವನ್ನು ಏರಿಸಲು ಅವಕಾಶ ನೀಡದೆ ಇರುವುದರಿಂದ ನಾವು ನಷ್ಟ ಅನುಭವಿಸಬೇಕಾಗಿ ಬಂದಿದೆ~ ಎನ್ನುವುದು ಎಸ್ಕಾಂಗಳ ದೂರು.<br /> <br /> ಯಾವುದೇ ಸಂಸ್ಥೆ ಇಷ್ಟೊಂದು ಪ್ರಮಾಣದ ನಷ್ಟವನ್ನು ಕಟ್ಟಿಕೊಂಡು ಬದುಕುಳಿಯುವುದು ಕಷ್ಟವಾದ ಕಾರಣ ಅದರ ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇ ಬೇಕು.</p>.<p>ಆದರೆ ಇದಕ್ಕಾಗಿ ಪ್ರತಿ ಬಾರಿ ವಿದ್ಯುತ್ ದರ ಹೆಚ್ಚಿಸುವ ಮೂಲಕ ಬಳಕೆದಾರರ ತಲೆ ಮೇಲೆ ಹೊರೆ ಹೊರಿಸುವುದು ಎಷ್ಟು ಸರಿ ಎನ್ನುವುದು ಪ್ರಶ್ನೆ. ಎಸ್ಕಾಂಗಳ ನಷ್ಟಕ್ಕೆ ಮೊದಲ ಕಾರಣ- ರಾಜ್ಯಸರ್ಕಾರಗಳು ಬಾಕಿ ಉಳಿಸಿಕೊಂಡಿರುವ ಸಹಾಯಧನ. <br /> <br /> ಈ ಸಮಸ್ಯೆಯನ್ನು ಹೇಗೆ ಇತ್ಯರ್ಥ ಮಾಡಿಕೊಳ್ಳಬೇಕೆಂಬುದು ಸರ್ಕಾರ ಮತ್ತು ಎಸ್ಕಾಂಗಳಿಗೆ ಬಿಟ್ಟ ವಿಚಾರ, ಅದನ್ನು ಅವರು ಮಾಡಿಕೊಳ್ಳಲಿ. ಎರಡನೇ ಕಾರಣ- ವಿದ್ಯುತ್ ಸಾಗಾಣಿಕೆಯಲ್ಲಿನ ನಷ್ಟ ಮತ್ತು ವಿದ್ಯುತ್ ಕಳ್ಳತನ. ಇದು ಎಸ್ಕಾಂಗಳ ಅದಕ್ಷತೆಯ ಫಲ.<br /> <br /> ಅದನ್ನು ಸುಧಾರಣಾ ಕ್ರಮಗಳ ಮೂಲಕ ಎಸ್ಕಾಂಗಳೇ ಸರಿಪಡಿಸಿಕೊಳ್ಳಬೇಕು. ಇದರ ಬದಲಿಗೆ ಸರ್ಕಾರ ಮತ್ತು ಎಸ್ಕಾಂಗಳು ತಮ್ಮ ಪಾಪದ ಫಲವನ್ನು ಬಳಕೆದಾರರು ಅನುಭವಿಸಬೇಕು ಎಂದು ಹೇಳುವುದು ತಾಂತ್ರಿಕವಾಗಿ ತಪ್ಪು ಮಾತ್ರವಲ್ಲ, ಜನವಿರೋಧಿ ಕ್ರಮವೂ ಹೌದು.<br /> <br /> ವಿದ್ಯುತ್ ದರ ಏರಿಕೆಯಲ್ಲಿ ಸರ್ಕಾರಗಳ ನಿಯಂತ್ರಣ ತಪ್ಪಿಸಬೇಕೆನ್ನುವ ಪ್ರಸ್ತಾವದ ಹಿಂದೆ ದುರುದ್ದೇಶದ ಅನುಮಾನ ಕೂಡಾ ಇದೆ. ಈಗಾಗಲೇ ಬಹಳಷ್ಟು ನಗರಗಳಲ್ಲಿ ವಿದ್ಯುತ್ ಪೂರೈಕೆಯ ಹೊಣೆಯನ್ನು ರಾಜ್ಯ ಸರ್ಕಾರಗಳು ಖಾಸಗಿಯವರಿಗೆ ಒಪ್ಪಿಸಿವೆ. <br /> <br /> ಮುಂದಿನ ದಿನಗಳಲ್ಲಿ ಸರ್ಕಾರ ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಒಪ್ಪಿಸಿದರೂ ಅಚ್ಚರಿ ಇಲ್ಲ. ಇಂತಹ ಖಾಸಗಿ ಎಸ್ಕಾಂಗಳ ಕೈಗೆ ವಿದ್ಯುತ್ ದರ ಏರಿಕೆಯ ಅನಿಯಂತ್ರಿತ ಅಧಿಕಾರ ಕೊಟ್ಟರೆ ಬಳಕೆದಾರರನ್ನು ರಕ್ಷಿಸುವವರು ಯಾರು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಾದ್ಯಂತ ವಿದ್ಯುತ್ ಪೂರೈಕೆ ಸಂಸ್ಥೆಗಳು (ಎಸ್ಕಾಂ) ಆರ್ಥಿಕ ಮುಗ್ಗಟ್ಟಿನಲ್ಲಿವೆ. 2010ರಲ್ಲಿ ದೇಶದ ಎಲ್ಲ ಎಸ್ಕಾಂಗಳ ಒಟ್ಟು ನಷ್ಟ 1.16 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.<br /> <br /> ಕರ್ನಾಟಕವೊಂದರಲ್ಲಿಯೇ ಈ ನಷ್ಟದ ಮೊತ್ತ ಎಂಟು ಸಾವಿರ ಕೋಟಿ ರೂಪಾಯಿ. ಈ ನಷ್ಟವನ್ನು ನಿವಾರಿಸಿಕೊಳ್ಳಲು ರಾಜ್ಯಸರ್ಕಾರಗಳ ನಿಯಂತ್ರಣದ ಹಂಗಿಲ್ಲದೆ ಸ್ವತಂತ್ರವಾಗಿ ವಿದ್ಯುತ್ ದರ ಏರಿಸಲು ಅವಕಾಶ ನೀಡಬೇಕೆಂಬುದು ಎಸ್ಕಾಂಗಳ ಬಹುದಿನದ ಬೇಡಿಕೆ.<br /> <br /> ಕೇಂದ್ರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿರುವ ಕೇಂದ್ರ ಇಂಧನ ಸಚಿವಾಲಯ, ಎಸ್ಕಾಂಗಳ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಇಂಗಿತವನ್ನು ನೀಡಿದೆ. ಹನ್ನೆರಡನೇ ಪಂಚವಾರ್ಷಿಕ ಯೋಜನೆ ಕರಡು ವರದಿಯಲ್ಲಿ ಕೇಂದ್ರ ಸರ್ಕಾರ ಈ ಪ್ರಸ್ತಾವವನ್ನು ಮಾಡಿದೆ. <br /> <br /> ಈಗಿನ ವ್ಯವಸ್ಥೆಯ ಪ್ರಕಾರ ರಾಜ್ಯದ ಎಸ್ಕಾಂಗಳು ವಿದ್ಯುತ್ ದರ ಏರಿಕೆಯ ಪ್ರಸ್ತಾವವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಆಯೋಗ, ಸಾರ್ವಜನಿಕರ ಅಭಿಪ್ರಾಯ ಪಡೆದು ನಿರ್ದಿಷ್ಟ ಪ್ರಮಾಣದಲ್ಲಿ ದರ ಏರಿಕೆಗೆ ಅನುಮತಿ ನೀಡುತ್ತದೆ.<br /> <br /> ಅದರ ನಂತರ ಎಸ್ಕಾಂ ರಾಜ್ಯ ಸರ್ಕಾರದ ಅನುಮತಿ ಪಡೆದು ದರ ಏರಿಕೆ ಮಾಡುತ್ತದೆ. `ರಾಜ್ಯ ಸರ್ಕಾರಗಳು ರಾಜಕೀಯ ಕಾರಣಕ್ಕಾಗಿ ವಿದ್ಯುತ್ ದರವನ್ನು ಏರಿಸಲು ಅವಕಾಶ ನೀಡದೆ ಇರುವುದರಿಂದ ನಾವು ನಷ್ಟ ಅನುಭವಿಸಬೇಕಾಗಿ ಬಂದಿದೆ~ ಎನ್ನುವುದು ಎಸ್ಕಾಂಗಳ ದೂರು.<br /> <br /> ಯಾವುದೇ ಸಂಸ್ಥೆ ಇಷ್ಟೊಂದು ಪ್ರಮಾಣದ ನಷ್ಟವನ್ನು ಕಟ್ಟಿಕೊಂಡು ಬದುಕುಳಿಯುವುದು ಕಷ್ಟವಾದ ಕಾರಣ ಅದರ ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇ ಬೇಕು.</p>.<p>ಆದರೆ ಇದಕ್ಕಾಗಿ ಪ್ರತಿ ಬಾರಿ ವಿದ್ಯುತ್ ದರ ಹೆಚ್ಚಿಸುವ ಮೂಲಕ ಬಳಕೆದಾರರ ತಲೆ ಮೇಲೆ ಹೊರೆ ಹೊರಿಸುವುದು ಎಷ್ಟು ಸರಿ ಎನ್ನುವುದು ಪ್ರಶ್ನೆ. ಎಸ್ಕಾಂಗಳ ನಷ್ಟಕ್ಕೆ ಮೊದಲ ಕಾರಣ- ರಾಜ್ಯಸರ್ಕಾರಗಳು ಬಾಕಿ ಉಳಿಸಿಕೊಂಡಿರುವ ಸಹಾಯಧನ. <br /> <br /> ಈ ಸಮಸ್ಯೆಯನ್ನು ಹೇಗೆ ಇತ್ಯರ್ಥ ಮಾಡಿಕೊಳ್ಳಬೇಕೆಂಬುದು ಸರ್ಕಾರ ಮತ್ತು ಎಸ್ಕಾಂಗಳಿಗೆ ಬಿಟ್ಟ ವಿಚಾರ, ಅದನ್ನು ಅವರು ಮಾಡಿಕೊಳ್ಳಲಿ. ಎರಡನೇ ಕಾರಣ- ವಿದ್ಯುತ್ ಸಾಗಾಣಿಕೆಯಲ್ಲಿನ ನಷ್ಟ ಮತ್ತು ವಿದ್ಯುತ್ ಕಳ್ಳತನ. ಇದು ಎಸ್ಕಾಂಗಳ ಅದಕ್ಷತೆಯ ಫಲ.<br /> <br /> ಅದನ್ನು ಸುಧಾರಣಾ ಕ್ರಮಗಳ ಮೂಲಕ ಎಸ್ಕಾಂಗಳೇ ಸರಿಪಡಿಸಿಕೊಳ್ಳಬೇಕು. ಇದರ ಬದಲಿಗೆ ಸರ್ಕಾರ ಮತ್ತು ಎಸ್ಕಾಂಗಳು ತಮ್ಮ ಪಾಪದ ಫಲವನ್ನು ಬಳಕೆದಾರರು ಅನುಭವಿಸಬೇಕು ಎಂದು ಹೇಳುವುದು ತಾಂತ್ರಿಕವಾಗಿ ತಪ್ಪು ಮಾತ್ರವಲ್ಲ, ಜನವಿರೋಧಿ ಕ್ರಮವೂ ಹೌದು.<br /> <br /> ವಿದ್ಯುತ್ ದರ ಏರಿಕೆಯಲ್ಲಿ ಸರ್ಕಾರಗಳ ನಿಯಂತ್ರಣ ತಪ್ಪಿಸಬೇಕೆನ್ನುವ ಪ್ರಸ್ತಾವದ ಹಿಂದೆ ದುರುದ್ದೇಶದ ಅನುಮಾನ ಕೂಡಾ ಇದೆ. ಈಗಾಗಲೇ ಬಹಳಷ್ಟು ನಗರಗಳಲ್ಲಿ ವಿದ್ಯುತ್ ಪೂರೈಕೆಯ ಹೊಣೆಯನ್ನು ರಾಜ್ಯ ಸರ್ಕಾರಗಳು ಖಾಸಗಿಯವರಿಗೆ ಒಪ್ಪಿಸಿವೆ. <br /> <br /> ಮುಂದಿನ ದಿನಗಳಲ್ಲಿ ಸರ್ಕಾರ ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಒಪ್ಪಿಸಿದರೂ ಅಚ್ಚರಿ ಇಲ್ಲ. ಇಂತಹ ಖಾಸಗಿ ಎಸ್ಕಾಂಗಳ ಕೈಗೆ ವಿದ್ಯುತ್ ದರ ಏರಿಕೆಯ ಅನಿಯಂತ್ರಿತ ಅಧಿಕಾರ ಕೊಟ್ಟರೆ ಬಳಕೆದಾರರನ್ನು ರಕ್ಷಿಸುವವರು ಯಾರು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>