<p>ಸಾಮಾಜಿಕ ಬದಲಾವಣೆಗಾಗಿ ಎಂಟು ಶತಮಾನಗಳ ಹಿಂದೆಯೇ ಪ್ರಯತ್ನಿಸಿದ `ದೇಹವೇ ದೇಗುಲ...~ ಎಂದಿದ್ದ ಜಗಜ್ಯೋತಿ ಬಸವಣ್ಣ ಸ್ಥಾವರದ ವಿರೋಧಿ ಆಗಿದ್ದರು. ಆದರೂ ಎಲ್ಲೆಡೆ ಇವರ ದೇವಾಲಯಗಳಿವೆ. ಈ ಪೈಕಿ ಬಸವಾದಿ ಶರಣರ ಕಾಯಕಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಪ್ರಮುಖವಾಗಿದೆ. <br /> <br /> ಇದೇ ಸ್ಥಳದಲ್ಲಿ ಅಣ್ಣ ಬಸವಣ್ಣನವರು ಧ್ಯಾನ ಮಾಡಿದ್ದರು. ಹೀಗಾಗಿ ಇದು ಪವಿತ್ರ ಸ್ಥಾನ. ಆದರೆ ದೇವಸ್ಥಾನದ ಕಟ್ಟಡ ಇತ್ತೀಚಿನದು. ದೂರದೂರದ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಾರೆ. <br /> <br /> ದೊಡ್ಡ ಮಠದಂತಿರುವ ದೇವಸ್ಥಾನಕ್ಕೆ ಎತ್ತರದ ಗೋಪುರ ಇದೆ. ಗರ್ಭಗೃಹದಲ್ಲಿ ಬಸವಣ್ಣನವರು ಆಸನದ ಮೇಲೆ ಕುಳಿತಿರುವ ಹಿತ್ತಾಳೆಯ ಆಕರ್ಷಕ ಮೂರ್ತಿ ಇದೆ. ಅದರ ಎದುರಿಗೆ ಇಷ್ಟಲಿಂಗಾರ್ಚನೆ ಮಾಡುತ್ತಿರುವ ಇನ್ನೊಂದು ಶಿಲಾ ಮೂರ್ತಿಯೂ ಇದೆ. <br /> <br /> ಬೃಹತ್ ಸಭಾಮಂಟಪ, ಆಕರ್ಷಕ ಮುಖ್ಯದ್ವಾರ ಇದೆ. ಸಭಾ ಮಂಟಪದ ಗೋಡೆಯಲ್ಲಿ ಈಚೆಗೆ ಶರಣರ ತೈಲಚಿತ್ರಗಳನ್ನು ಬಿಡಿಸಿ ದೇವಸ್ಥಾನದ ಆಕರ್ಷಣೆ ಹೆಚ್ಚಿಸಲಾಗಿದೆ.<br /> ಪ್ರತಿವರ್ಷ ಅಕ್ಷಯ ತದಿಗೆಯಿಂದ (ಬಸವ ಜಯಂತಿ ದಿನದಿಂದ) ಮೂರು ದಿನ ಇಲ್ಲಿ ಬೃಹತ್ ಜಾತ್ರೆ ನಡೆಯುತ್ತದೆ. <br /> <br /> ಮೊದಲ ದಿನ ತೊಟ್ಟಿಲಿಗೆ ಹಾಕುವುದು, ಕೊನೆಯ ದಿನ ಮಧ್ಯರಾತ್ರಿ ರಥೋತ್ಸವ ಇರುತ್ತದೆ. ಈ ಎರಡೂ ದಿನ ಪಲ್ಲಕ್ಕಿ ಮತ್ತು ಎತ್ತರದ ನಂದಿಕೋಲುಗಳ ಮೆರವಣಿಗೆ ಎಲ್ಲರನ್ನೂ ಸೆಳೆಯುತ್ತದೆ. <br /> <br /> ಇಲ್ಲಿ ನಿತ್ಯವೂ ಪೂಜೆ, ಅಭಿಷೇಕ, ರುದ್ರಪೂಜೆ ನಡೆಯುತ್ತದೆ. ಆದರೆ ಯಾವುದೇ ಸೇವಾ ಶುಲ್ಕ ಇಲ್ಲ. ಭಕ್ತರ ವಾಸ್ತವ್ಯಕ್ಕೆ ದೇವಸ್ಥಾನದ ಸಮೀಪದಲ್ಲಿ ಈಚೆಗೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಭವ್ಯ ಅತಿಥಿಗೃಹ ಕಟ್ಟಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾಜಿಕ ಬದಲಾವಣೆಗಾಗಿ ಎಂಟು ಶತಮಾನಗಳ ಹಿಂದೆಯೇ ಪ್ರಯತ್ನಿಸಿದ `ದೇಹವೇ ದೇಗುಲ...~ ಎಂದಿದ್ದ ಜಗಜ್ಯೋತಿ ಬಸವಣ್ಣ ಸ್ಥಾವರದ ವಿರೋಧಿ ಆಗಿದ್ದರು. ಆದರೂ ಎಲ್ಲೆಡೆ ಇವರ ದೇವಾಲಯಗಳಿವೆ. ಈ ಪೈಕಿ ಬಸವಾದಿ ಶರಣರ ಕಾಯಕಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಪ್ರಮುಖವಾಗಿದೆ. <br /> <br /> ಇದೇ ಸ್ಥಳದಲ್ಲಿ ಅಣ್ಣ ಬಸವಣ್ಣನವರು ಧ್ಯಾನ ಮಾಡಿದ್ದರು. ಹೀಗಾಗಿ ಇದು ಪವಿತ್ರ ಸ್ಥಾನ. ಆದರೆ ದೇವಸ್ಥಾನದ ಕಟ್ಟಡ ಇತ್ತೀಚಿನದು. ದೂರದೂರದ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಾರೆ. <br /> <br /> ದೊಡ್ಡ ಮಠದಂತಿರುವ ದೇವಸ್ಥಾನಕ್ಕೆ ಎತ್ತರದ ಗೋಪುರ ಇದೆ. ಗರ್ಭಗೃಹದಲ್ಲಿ ಬಸವಣ್ಣನವರು ಆಸನದ ಮೇಲೆ ಕುಳಿತಿರುವ ಹಿತ್ತಾಳೆಯ ಆಕರ್ಷಕ ಮೂರ್ತಿ ಇದೆ. ಅದರ ಎದುರಿಗೆ ಇಷ್ಟಲಿಂಗಾರ್ಚನೆ ಮಾಡುತ್ತಿರುವ ಇನ್ನೊಂದು ಶಿಲಾ ಮೂರ್ತಿಯೂ ಇದೆ. <br /> <br /> ಬೃಹತ್ ಸಭಾಮಂಟಪ, ಆಕರ್ಷಕ ಮುಖ್ಯದ್ವಾರ ಇದೆ. ಸಭಾ ಮಂಟಪದ ಗೋಡೆಯಲ್ಲಿ ಈಚೆಗೆ ಶರಣರ ತೈಲಚಿತ್ರಗಳನ್ನು ಬಿಡಿಸಿ ದೇವಸ್ಥಾನದ ಆಕರ್ಷಣೆ ಹೆಚ್ಚಿಸಲಾಗಿದೆ.<br /> ಪ್ರತಿವರ್ಷ ಅಕ್ಷಯ ತದಿಗೆಯಿಂದ (ಬಸವ ಜಯಂತಿ ದಿನದಿಂದ) ಮೂರು ದಿನ ಇಲ್ಲಿ ಬೃಹತ್ ಜಾತ್ರೆ ನಡೆಯುತ್ತದೆ. <br /> <br /> ಮೊದಲ ದಿನ ತೊಟ್ಟಿಲಿಗೆ ಹಾಕುವುದು, ಕೊನೆಯ ದಿನ ಮಧ್ಯರಾತ್ರಿ ರಥೋತ್ಸವ ಇರುತ್ತದೆ. ಈ ಎರಡೂ ದಿನ ಪಲ್ಲಕ್ಕಿ ಮತ್ತು ಎತ್ತರದ ನಂದಿಕೋಲುಗಳ ಮೆರವಣಿಗೆ ಎಲ್ಲರನ್ನೂ ಸೆಳೆಯುತ್ತದೆ. <br /> <br /> ಇಲ್ಲಿ ನಿತ್ಯವೂ ಪೂಜೆ, ಅಭಿಷೇಕ, ರುದ್ರಪೂಜೆ ನಡೆಯುತ್ತದೆ. ಆದರೆ ಯಾವುದೇ ಸೇವಾ ಶುಲ್ಕ ಇಲ್ಲ. ಭಕ್ತರ ವಾಸ್ತವ್ಯಕ್ಕೆ ದೇವಸ್ಥಾನದ ಸಮೀಪದಲ್ಲಿ ಈಚೆಗೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಭವ್ಯ ಅತಿಥಿಗೃಹ ಕಟ್ಟಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>