<p>ಬಸವಕಲ್ಯಾಣ: ಇಲ್ಲಿನ ಬಸವೇಶ್ವರ ಚಿತ್ರಕಲಾ ಕಾಲೇಜಿನಲ್ಲಿ ಸೋಮವಾರ 18 ನೇ ವಾರ್ಷಿಕೋತ್ಸವ ಅಂಗವಾಗಿ ಚಿತ್ರಕಲಾ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಒಳಗೊಂಡ ಕಲಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.<br /> <br /> ಹಿರಿಯ ಚಿತ್ರಕಲಾವಿದ ಬಸವರಾಜ ಮುಗಳಿ ಉದ್ಘಾಟಿಸಿದರು. ಹುಲಸೂರ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಕಲಾವಿದರ ಬದುಕು ಶೋಚನೀಯವಾಗಿದೆ. ಆದ್ದರಿಂದ ಸರ್ಕಾರ ಮತ್ತು ಸಾರ್ವಜನಿಕರಿಂದ ಇವರಿಗೆ ಸಹಕಾರ ದೊರೆಯಬೆಕು ಎಂದರು.<br /> <br /> ತ್ರಿಪುರಾಂತ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. <br /> ಕಲಾವಿದರಾದ ಬಸವರಾಜ ಕುರಿ ಬೆಂಗಳೂರು, ಶ್ರೀಧರ ಚವ್ಹಾಣ ವಿಜಾಪುರ, ಸತೀಶ ವಲ್ಲೇಪುರೆ, ಪತ್ರಕರ್ತ ಮುಕುಂದ ನಿಂಬಾಳಕರ್, ಸಾಹಿತಿ ವಿಶ್ವನಾಥ ಮುಕ್ತಾ ಅವರನ್ನು ಸನ್ಮಾನಿಸಲಾಯಿತು. ಆದರ್ಶ ವಿದ್ಯಾರ್ಥಿಗಳೆಂದು ಅನಿಲಕುಮಾರ ಅಳ್ಳೆ, ಜ್ಯೋತಿ ಜಾಧವ ಅವರನ್ನು ಸತ್ಕರಿಸಲಾಯಿತು.<br /> <br /> ಪ್ರಾಚಾರ್ಯ ಪ್ರಭುಲಿಂಗಯ್ಯ ಟಂಕಸಾಲಿಮಠ ಸ್ವಾಗತಿಸಿದರು. ಅಶೋಕಕುಮಾರ ನಿರೂಪಿಸಿದರು. ಕಲ್ಯಾಣರಾವ ಮದರಗಾಂವಕರ್ ವಂದಿಸಿದರು.<br /> <br /> ಇದಕ್ಕೂ ಮೊದಲು ಕಲಾ ಪ್ರಾತ್ಯಕ್ಷಿಕೆ ನಡೆಯಿತು. ಕಲಾವಿದ ಶ್ರೀಧರ ಚವ್ಹಾಣ ಉದ್ಘಾಟಿಸಿದರು. ಕಲೆ ಸಮಾಜಮುಖಿ ಆಗಿರಬೇಕು. ಮೂರ್ತ, ಅಮೂರ್ತಗಳ ಕಲ್ಪನೆ ಕಲಾವಿದನಿಗೆ ಬೇಕು. ಬಣ್ಣ ಮತ್ತು ನೆರಳು ಬೆಳಕಿನ ಮಹತ್ವ ತಿಳಿದಿರಬೇಕು ಎಂದು ಹೇಳಿದರು.<br /> <br /> ಅಭಿನವ ರುದ್ರಮುನಿ ಶಿವಾಚಾರ್ಯರು, ಪ್ರಭುಲಿಂಗಯ್ಯ ಟಂಕಸಾಲಿಮಠ, ಮಲ್ಲಿಕಾರ್ಜುನ ಹಲಿಂಗೆ, ತಾರಾಸಿಂಗ ರಾಠೋಡ, ಎಂ.ಬಿ.ಅಶೋಕಕುಮಾರ, ಬಸವರಾಜ ಕುರಿ ಉಪಸ್ಥಿತರಿದ್ದರು. ಮೂರು ದಿನಗಳವರೆಗೆ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕಲಾಕೃತಿಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಇಲ್ಲಿನ ಬಸವೇಶ್ವರ ಚಿತ್ರಕಲಾ ಕಾಲೇಜಿನಲ್ಲಿ ಸೋಮವಾರ 18 ನೇ ವಾರ್ಷಿಕೋತ್ಸವ ಅಂಗವಾಗಿ ಚಿತ್ರಕಲಾ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಒಳಗೊಂಡ ಕಲಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.<br /> <br /> ಹಿರಿಯ ಚಿತ್ರಕಲಾವಿದ ಬಸವರಾಜ ಮುಗಳಿ ಉದ್ಘಾಟಿಸಿದರು. ಹುಲಸೂರ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಕಲಾವಿದರ ಬದುಕು ಶೋಚನೀಯವಾಗಿದೆ. ಆದ್ದರಿಂದ ಸರ್ಕಾರ ಮತ್ತು ಸಾರ್ವಜನಿಕರಿಂದ ಇವರಿಗೆ ಸಹಕಾರ ದೊರೆಯಬೆಕು ಎಂದರು.<br /> <br /> ತ್ರಿಪುರಾಂತ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. <br /> ಕಲಾವಿದರಾದ ಬಸವರಾಜ ಕುರಿ ಬೆಂಗಳೂರು, ಶ್ರೀಧರ ಚವ್ಹಾಣ ವಿಜಾಪುರ, ಸತೀಶ ವಲ್ಲೇಪುರೆ, ಪತ್ರಕರ್ತ ಮುಕುಂದ ನಿಂಬಾಳಕರ್, ಸಾಹಿತಿ ವಿಶ್ವನಾಥ ಮುಕ್ತಾ ಅವರನ್ನು ಸನ್ಮಾನಿಸಲಾಯಿತು. ಆದರ್ಶ ವಿದ್ಯಾರ್ಥಿಗಳೆಂದು ಅನಿಲಕುಮಾರ ಅಳ್ಳೆ, ಜ್ಯೋತಿ ಜಾಧವ ಅವರನ್ನು ಸತ್ಕರಿಸಲಾಯಿತು.<br /> <br /> ಪ್ರಾಚಾರ್ಯ ಪ್ರಭುಲಿಂಗಯ್ಯ ಟಂಕಸಾಲಿಮಠ ಸ್ವಾಗತಿಸಿದರು. ಅಶೋಕಕುಮಾರ ನಿರೂಪಿಸಿದರು. ಕಲ್ಯಾಣರಾವ ಮದರಗಾಂವಕರ್ ವಂದಿಸಿದರು.<br /> <br /> ಇದಕ್ಕೂ ಮೊದಲು ಕಲಾ ಪ್ರಾತ್ಯಕ್ಷಿಕೆ ನಡೆಯಿತು. ಕಲಾವಿದ ಶ್ರೀಧರ ಚವ್ಹಾಣ ಉದ್ಘಾಟಿಸಿದರು. ಕಲೆ ಸಮಾಜಮುಖಿ ಆಗಿರಬೇಕು. ಮೂರ್ತ, ಅಮೂರ್ತಗಳ ಕಲ್ಪನೆ ಕಲಾವಿದನಿಗೆ ಬೇಕು. ಬಣ್ಣ ಮತ್ತು ನೆರಳು ಬೆಳಕಿನ ಮಹತ್ವ ತಿಳಿದಿರಬೇಕು ಎಂದು ಹೇಳಿದರು.<br /> <br /> ಅಭಿನವ ರುದ್ರಮುನಿ ಶಿವಾಚಾರ್ಯರು, ಪ್ರಭುಲಿಂಗಯ್ಯ ಟಂಕಸಾಲಿಮಠ, ಮಲ್ಲಿಕಾರ್ಜುನ ಹಲಿಂಗೆ, ತಾರಾಸಿಂಗ ರಾಠೋಡ, ಎಂ.ಬಿ.ಅಶೋಕಕುಮಾರ, ಬಸವರಾಜ ಕುರಿ ಉಪಸ್ಥಿತರಿದ್ದರು. ಮೂರು ದಿನಗಳವರೆಗೆ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕಲಾಕೃತಿಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>