<p><strong>ಬೆಂಗಳೂರು: </strong> ಉತ್ತರಪ್ರದೇಶ ಮೂಲದ ಯುವತಿಯೊಂದಿಗೆ ಅನು ಚಿತವಾಗಿ ವರ್ತಿಸಿದ ಆರೋಪ ಎದು ರಿಸುತ್ತಿರುವ ಬಿಎಂ ಟಿಸಿ ಬಸ್ ಚಾಲಕ ಸಿದ್ದಾರ್ಥ್ ಸೇರಿದಂತೆ ಮೂರು ಮಂದಿಯನ್ನು ಸೇವೆಯಿಂದ ಅಮಾನತು ಮಾಡಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.<br /> <br /> ‘ಪ್ರಕರಣ ಸಂಬಂಧ ಚಾಲಕ ಸಿದ್ದಾರ್ಥ್, ಪೀಣ್ಯ ಡಿಪೊ ಸಂಚಾರ ನಿರೀಕ್ಷಕ ಪುಟ್ಟರಾಜು ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಪರ ಮೇಶ್ವರಯ್ಯ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> ‘ಸಿದ್ದಾರ್ಥ್ನ ದುರ್ವತನೆಯಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಯ ಉತ್ತರ ವಿಭಾ ಗೀಯ ನಿಯಂತ್ರಣಾಧಿಕಾರಿ ಅವ ರಿಂದ ಇಲಾಖಾ ತನಿಖೆ ಮಾಡಿ ಸಲಾಗುತ್ತಿದೆ’ ಎಂದು ಹೇಳಿದ್ದಾರೆ.<br /> <br /> ‘ಘಟನಾ ದಿನವಾದ ಮಾ. 13ರಂದು ಮಧ್ಯಾಹ್ನ 2 ಗಂಟೆಗೆ ಸಿದ್ದಾರ್ಥ್ ಡಿಪೊದಿಂದ ಬಸ್ ತೆಗೆದುಕೊಂಡು ಹೋಗಿದ್ದ. ರಾತ್ರಿ 10 ಗಂಟೆಗೆ ಆತನ ಪಾಳಿಯ ಅವಧಿ ಕೊನೆಗೊಳ್ಳಬೇಕಿತ್ತು. ಆದರೆ, ರಾತ್ರಿ 12.15ಕ್ಕೆ ಮೆಜೆಸ್ಟಿಕ್ನಿಂದ ಬನಶಂಕರಿ ಮಾರ್ಗವಾಗಿ ಕುಮಾರ ಸ್ವಾಮಿ ಲೇಔಟ್ಗೆ ಹೋಗಬೇಕಿದ್ದ ಬೇರೊಂದು ಬಸ್ ಅನಿವಾರ್ಯ ಕಾರಣದಿಂದ ಬರಲಿಲ್ಲ. ಈ ವೇಳೆ ಬನಶಂಕರಿ ಕಡೆಗೆ ಹೋಗಲು ಸುಮಾರು 45 ಮಂದಿ ಪ್ರಯಾಣಿ ಕರು ಮೆಜೆಸ್ಟಿಕ್ನಲ್ಲಿ ಕಾಯುತ್ತಿದ್ದರು.<br /> <br /> ಹೀಗಾಗಿ ಪರ ಮೇಶ್ವರಯ್ಯ ಅವರು ಸಿದ್ದಾರ್ಥ್ನ ಕೆಲಸದ ಅವಧಿ ಮುಗಿದಿದ್ದರೂ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವಂತೆ ಸೂಚಿಸಿ ಆತ ನನ್ನು ಆ ಮಾರ್ಗಕ್ಕೆ ಕಳುಹಿ ಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.<br /> <br /> ‘ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪಾಳಿಯ ಬಸ್ಗಳಿಗೆ ಚಾಲಕರ ಜತೆ ಕಡ್ಡಾಯ ವಾಗಿ ನಿರ್ವಾಹಕರನ್ನು ಕಳುಹಿಸ ಬೇಕೆಂದು 2013ರ ಡಿಸೆಂಬರ್ನಲ್ಲಿ ಆದೇಶ ಹೊರಡಿಸಲಾಗಿತ್ತು. ಆ ಆದೇಶವನ್ನು ಪಾಲಿಸದ ಪರಮೇ ಶ್ವರಯ್ಯ ಅವರು ನಿರ್ವಾಹಕನಿಲ್ಲದೆ ಚಾಲಕ ಸಿದ್ದಾರ್ಥ್ನನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿ ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಪರ್ವೇಜ್ ತಿಳಿಸಿದ್ದಾರೆ.</p>.<p><strong>ಹಿಂದೆಯೂ ದೂರು</strong><br /> ‘ಸಿದ್ದಾರ್ಥ್ ಈ ಹಿಂದೆ ನಿರ್ವಾ ಹಕಿಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದ. ಈ ಸಂಬಂಧ ನಿರ್ವಾ ಹಕಿ ದೂರು ನೀಡಿದ್ದರು. ಆ ದೂರು ಆಧರಿಸಿ ಆತನ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸ ಲಾಗಿತ್ತು. ಆದರೆ, ತನಿಖೆ ಆರಂಭಿ ಸುತ್ತಿದ್ದಂತೆ ನಿರ್ವಾಹಕಿ ದೂರು ಹಿಂಪಡೆದಿದ್ದರು. ಇದರಿಂದಾಗಿ ಇಲಾಖಾ ತನಿಖೆಯನ್ನು ಕೈಬಿಡ ಲಾಗಿತ್ತು. ಇದೀಗ ಆ ಪ್ರಕರಣದ ಬಗ್ಗೆಯೂ ತನಿಖೆ ಮಾಡಲಾಗುತ್ತದೆ’ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಸಿದ್ದಾರ್ಥ್ 2008ರಲ್ಲಿ ಸಂಸ್ಥೆಗೆ ಸೇರಿದ್ದ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> ಉತ್ತರಪ್ರದೇಶ ಮೂಲದ ಯುವತಿಯೊಂದಿಗೆ ಅನು ಚಿತವಾಗಿ ವರ್ತಿಸಿದ ಆರೋಪ ಎದು ರಿಸುತ್ತಿರುವ ಬಿಎಂ ಟಿಸಿ ಬಸ್ ಚಾಲಕ ಸಿದ್ದಾರ್ಥ್ ಸೇರಿದಂತೆ ಮೂರು ಮಂದಿಯನ್ನು ಸೇವೆಯಿಂದ ಅಮಾನತು ಮಾಡಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.<br /> <br /> ‘ಪ್ರಕರಣ ಸಂಬಂಧ ಚಾಲಕ ಸಿದ್ದಾರ್ಥ್, ಪೀಣ್ಯ ಡಿಪೊ ಸಂಚಾರ ನಿರೀಕ್ಷಕ ಪುಟ್ಟರಾಜು ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಪರ ಮೇಶ್ವರಯ್ಯ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> ‘ಸಿದ್ದಾರ್ಥ್ನ ದುರ್ವತನೆಯಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಯ ಉತ್ತರ ವಿಭಾ ಗೀಯ ನಿಯಂತ್ರಣಾಧಿಕಾರಿ ಅವ ರಿಂದ ಇಲಾಖಾ ತನಿಖೆ ಮಾಡಿ ಸಲಾಗುತ್ತಿದೆ’ ಎಂದು ಹೇಳಿದ್ದಾರೆ.<br /> <br /> ‘ಘಟನಾ ದಿನವಾದ ಮಾ. 13ರಂದು ಮಧ್ಯಾಹ್ನ 2 ಗಂಟೆಗೆ ಸಿದ್ದಾರ್ಥ್ ಡಿಪೊದಿಂದ ಬಸ್ ತೆಗೆದುಕೊಂಡು ಹೋಗಿದ್ದ. ರಾತ್ರಿ 10 ಗಂಟೆಗೆ ಆತನ ಪಾಳಿಯ ಅವಧಿ ಕೊನೆಗೊಳ್ಳಬೇಕಿತ್ತು. ಆದರೆ, ರಾತ್ರಿ 12.15ಕ್ಕೆ ಮೆಜೆಸ್ಟಿಕ್ನಿಂದ ಬನಶಂಕರಿ ಮಾರ್ಗವಾಗಿ ಕುಮಾರ ಸ್ವಾಮಿ ಲೇಔಟ್ಗೆ ಹೋಗಬೇಕಿದ್ದ ಬೇರೊಂದು ಬಸ್ ಅನಿವಾರ್ಯ ಕಾರಣದಿಂದ ಬರಲಿಲ್ಲ. ಈ ವೇಳೆ ಬನಶಂಕರಿ ಕಡೆಗೆ ಹೋಗಲು ಸುಮಾರು 45 ಮಂದಿ ಪ್ರಯಾಣಿ ಕರು ಮೆಜೆಸ್ಟಿಕ್ನಲ್ಲಿ ಕಾಯುತ್ತಿದ್ದರು.<br /> <br /> ಹೀಗಾಗಿ ಪರ ಮೇಶ್ವರಯ್ಯ ಅವರು ಸಿದ್ದಾರ್ಥ್ನ ಕೆಲಸದ ಅವಧಿ ಮುಗಿದಿದ್ದರೂ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವಂತೆ ಸೂಚಿಸಿ ಆತ ನನ್ನು ಆ ಮಾರ್ಗಕ್ಕೆ ಕಳುಹಿ ಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.<br /> <br /> ‘ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪಾಳಿಯ ಬಸ್ಗಳಿಗೆ ಚಾಲಕರ ಜತೆ ಕಡ್ಡಾಯ ವಾಗಿ ನಿರ್ವಾಹಕರನ್ನು ಕಳುಹಿಸ ಬೇಕೆಂದು 2013ರ ಡಿಸೆಂಬರ್ನಲ್ಲಿ ಆದೇಶ ಹೊರಡಿಸಲಾಗಿತ್ತು. ಆ ಆದೇಶವನ್ನು ಪಾಲಿಸದ ಪರಮೇ ಶ್ವರಯ್ಯ ಅವರು ನಿರ್ವಾಹಕನಿಲ್ಲದೆ ಚಾಲಕ ಸಿದ್ದಾರ್ಥ್ನನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿ ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಪರ್ವೇಜ್ ತಿಳಿಸಿದ್ದಾರೆ.</p>.<p><strong>ಹಿಂದೆಯೂ ದೂರು</strong><br /> ‘ಸಿದ್ದಾರ್ಥ್ ಈ ಹಿಂದೆ ನಿರ್ವಾ ಹಕಿಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದ. ಈ ಸಂಬಂಧ ನಿರ್ವಾ ಹಕಿ ದೂರು ನೀಡಿದ್ದರು. ಆ ದೂರು ಆಧರಿಸಿ ಆತನ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸ ಲಾಗಿತ್ತು. ಆದರೆ, ತನಿಖೆ ಆರಂಭಿ ಸುತ್ತಿದ್ದಂತೆ ನಿರ್ವಾಹಕಿ ದೂರು ಹಿಂಪಡೆದಿದ್ದರು. ಇದರಿಂದಾಗಿ ಇಲಾಖಾ ತನಿಖೆಯನ್ನು ಕೈಬಿಡ ಲಾಗಿತ್ತು. ಇದೀಗ ಆ ಪ್ರಕರಣದ ಬಗ್ಗೆಯೂ ತನಿಖೆ ಮಾಡಲಾಗುತ್ತದೆ’ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಸಿದ್ದಾರ್ಥ್ 2008ರಲ್ಲಿ ಸಂಸ್ಥೆಗೆ ಸೇರಿದ್ದ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>