<p>ನವದೆಹಲಿ (ಪಿಟಿಐ): ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾದ ಶೇಕಡಾ 90ರಷ್ಟು ವಿಷಯಗಳನ್ನು ಆರಂಭದ ಹಂತದಲ್ಲೇ ಕೈಬಿಡಲಾಗಿದೆ ಎಂಬುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿಕೆ ನೀಡುವುದರೊಂದಿಗೆ ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದ ಭಾರತದ ಮಹಾ ಲೇಖಪಾಲ (ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ - ಸಿಎಜಿ) ವರದಿಯ ಕರಡು ಪ್ರತಿ ವಿಚಾರವನ್ನು ಸರ್ಕಾರ ಶನಿವಾರ ಗೌಣಗೊಳಿಸಿತು.<br /> <br /> ~ಸಚಿವಾಲಯಗಳಿಂದ ಟಿಪ್ಪಣಿ ಪಡೆದ ಬಳಿಕ, ಮಹಾಲೇಖಪಾಲ ವರದಿಯಲ್ಲಿ ಪ್ರಸ್ತಾಪಿಸಲಾದ ಶೇಕಡಾ 90ರಷ್ಟು ವಿಷಯಗಳನ್ನು ಕೈಬಿಡಲಾಗಿದೆ. ಇದು ಕಳೆದ 150 ವರ್ಷಗಳಿಂದ ಅನುಸರಿಸಲಾಗುತ್ತಿರುವ ಸಾಮಾನ್ಯ ವಿಧಾನ~ ಎಂದು ಹಣಕಾಸು ಸಚಿವರು ಇಲ್ಲಿನ ನಡೆದ ಫಿಕ್ಕಿ ಸಭೆಯೊಂದರಲ್ಲಿ ತಿಳಿಸಿದರು.<br /> <br /> ~ಮಹಾಲೇಖಪಾಲವು ಬ್ರಿಟಿಷರ ಕಾಲದಲ್ಲೇ ರೂಪಿಸಲಾದ ಸಾಂವಿಧಾನಿಕ ಸಂಸ್ಥೆ. ಸರ್ಕಾರದ ತಪ್ಪುಗಳನ್ನು ಪತ್ತೆ ಹಚ್ಚುವುದೇ ಇದರ ಕೆಲಸ~ ಎಂದು ಮುಖರ್ಜಿ ನುಡಿದರು.<br /> <br /> ~ಸರ್ಕಾರದ ತಪ್ಪುಗಳನ್ನು ಪತ್ತೆ ಹಚ್ಚುವುದೇ ಮಹಾಲೇಖಪಾಲದ ಕೆಲಸ ಹೊರತು ಸರ್ಕಾರವು ಒಳ್ಳೆಯ ಕೆಲಸ ಮಾಡುತ್ತಿದೆ ಎಂಬುದಾಗಿ ಪ್ರಮಾಣ ಪತ್ರ ನೀಡುವುದು ಅದರ ಕೆಲಸವಲ್ಲ ಎಂದು ಸಾರಿ ಹೇಳಿದ್ದೇನೆ. ಯಾಕೆ .. ಅನಗತ್ಯವಾಗಿ ಇದನ್ನು ಉದ್ರೇಕಿಸಲಾಗುತ್ತಿದೆ?~ ಎಂದು ಪ್ರಶ್ನಿಸಿದ ಪ್ರಣವ್, ~ಮಹಾಲೇಖಪಾಲ ವರದಿಯಲ್ಲಿ ಅಕ್ರಮಗಳ ವಿಚಾರ ಬಂದರೆ ಹೊಸದೇನಿದೆ? ಇವುಗಳನ್ನು ಸಂಸತ್ತು ನೋಡಿಕೊಳ್ಳುತ್ತದೆ~ ಎಂದು ಹೇಳಿದರು.<br /> <br /> ಮಹಾಲೇಖಪಾಲ ಕರಡು ವರದಿಯನ್ನು ಉಲ್ಲೇಖಿಸಿದ ಹಣಕಾಸು ಸಚಿವರು ~ಕೆಲವು ಪತ್ರಿಕೆಗಳು ಕಲ್ಲಿದ್ದಲು ಗಣಿ ಹಂಚಿಕೆಯ ಪರಿಣಾಮವಾಗಿ ಸರ್ಕಾರಿ ಬೊಕ್ಕಸಕ್ಕೆ 10 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂಬುದಾಗಿ ಕೆಲವು ಪತ್ರಿಕೆಗಳು ವರದಿ ಮಾಡಿವೆ. ವಿಷಯ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಪತ್ರಿಕೆಯಲ್ಲಿ ಬಂದ ವರದಿ ದಾರಿತಪ್ಪಿಸುವಂತಹುದು ಎಂಬುದಾಗಿ ಮಹಾಲೇಖಪಾಲರು ಬರೆದ ಸ್ಪಷ್ಟನೆಯ ಪತ್ರವನ್ನೂ ಪ್ರಧಾನ ಮಂತ್ರಿಗಳ ಸಚಿವಾಲಯ ಬಿಡುಗಡೆ ಮಾಡಿದೆ~ ಎಂದು ವಿವರಿಸಿದರು.<br /> <br /> ಮಹಾಲೇಖಪಾಲ ವರದಿಗಳನ್ನು ತರಿಸಿಕೊಂಡು ಪರಾಮರ್ಶಿಸಬೇಕಾದ್ದು ಸಂಸತ್ತಿನ ಕೆಲಸ. ವಾಸ್ತವಾಂಶ ಏನೆಂದರೆ ಅದು ವರದಿಯೇ ಅಲ್ಲ, ಮಹಾಲೇಖಪಾಲ ಇನ್ನೂ ತನ್ನ ವರದಿಯನ್ನು ಅಂತಿಮಗೊಳಿಸಿಯೇ ಇಲ್ಲ ಎಂದು ಮುಖರ್ಜಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾದ ಶೇಕಡಾ 90ರಷ್ಟು ವಿಷಯಗಳನ್ನು ಆರಂಭದ ಹಂತದಲ್ಲೇ ಕೈಬಿಡಲಾಗಿದೆ ಎಂಬುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿಕೆ ನೀಡುವುದರೊಂದಿಗೆ ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದ ಭಾರತದ ಮಹಾ ಲೇಖಪಾಲ (ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ - ಸಿಎಜಿ) ವರದಿಯ ಕರಡು ಪ್ರತಿ ವಿಚಾರವನ್ನು ಸರ್ಕಾರ ಶನಿವಾರ ಗೌಣಗೊಳಿಸಿತು.<br /> <br /> ~ಸಚಿವಾಲಯಗಳಿಂದ ಟಿಪ್ಪಣಿ ಪಡೆದ ಬಳಿಕ, ಮಹಾಲೇಖಪಾಲ ವರದಿಯಲ್ಲಿ ಪ್ರಸ್ತಾಪಿಸಲಾದ ಶೇಕಡಾ 90ರಷ್ಟು ವಿಷಯಗಳನ್ನು ಕೈಬಿಡಲಾಗಿದೆ. ಇದು ಕಳೆದ 150 ವರ್ಷಗಳಿಂದ ಅನುಸರಿಸಲಾಗುತ್ತಿರುವ ಸಾಮಾನ್ಯ ವಿಧಾನ~ ಎಂದು ಹಣಕಾಸು ಸಚಿವರು ಇಲ್ಲಿನ ನಡೆದ ಫಿಕ್ಕಿ ಸಭೆಯೊಂದರಲ್ಲಿ ತಿಳಿಸಿದರು.<br /> <br /> ~ಮಹಾಲೇಖಪಾಲವು ಬ್ರಿಟಿಷರ ಕಾಲದಲ್ಲೇ ರೂಪಿಸಲಾದ ಸಾಂವಿಧಾನಿಕ ಸಂಸ್ಥೆ. ಸರ್ಕಾರದ ತಪ್ಪುಗಳನ್ನು ಪತ್ತೆ ಹಚ್ಚುವುದೇ ಇದರ ಕೆಲಸ~ ಎಂದು ಮುಖರ್ಜಿ ನುಡಿದರು.<br /> <br /> ~ಸರ್ಕಾರದ ತಪ್ಪುಗಳನ್ನು ಪತ್ತೆ ಹಚ್ಚುವುದೇ ಮಹಾಲೇಖಪಾಲದ ಕೆಲಸ ಹೊರತು ಸರ್ಕಾರವು ಒಳ್ಳೆಯ ಕೆಲಸ ಮಾಡುತ್ತಿದೆ ಎಂಬುದಾಗಿ ಪ್ರಮಾಣ ಪತ್ರ ನೀಡುವುದು ಅದರ ಕೆಲಸವಲ್ಲ ಎಂದು ಸಾರಿ ಹೇಳಿದ್ದೇನೆ. ಯಾಕೆ .. ಅನಗತ್ಯವಾಗಿ ಇದನ್ನು ಉದ್ರೇಕಿಸಲಾಗುತ್ತಿದೆ?~ ಎಂದು ಪ್ರಶ್ನಿಸಿದ ಪ್ರಣವ್, ~ಮಹಾಲೇಖಪಾಲ ವರದಿಯಲ್ಲಿ ಅಕ್ರಮಗಳ ವಿಚಾರ ಬಂದರೆ ಹೊಸದೇನಿದೆ? ಇವುಗಳನ್ನು ಸಂಸತ್ತು ನೋಡಿಕೊಳ್ಳುತ್ತದೆ~ ಎಂದು ಹೇಳಿದರು.<br /> <br /> ಮಹಾಲೇಖಪಾಲ ಕರಡು ವರದಿಯನ್ನು ಉಲ್ಲೇಖಿಸಿದ ಹಣಕಾಸು ಸಚಿವರು ~ಕೆಲವು ಪತ್ರಿಕೆಗಳು ಕಲ್ಲಿದ್ದಲು ಗಣಿ ಹಂಚಿಕೆಯ ಪರಿಣಾಮವಾಗಿ ಸರ್ಕಾರಿ ಬೊಕ್ಕಸಕ್ಕೆ 10 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂಬುದಾಗಿ ಕೆಲವು ಪತ್ರಿಕೆಗಳು ವರದಿ ಮಾಡಿವೆ. ವಿಷಯ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಪತ್ರಿಕೆಯಲ್ಲಿ ಬಂದ ವರದಿ ದಾರಿತಪ್ಪಿಸುವಂತಹುದು ಎಂಬುದಾಗಿ ಮಹಾಲೇಖಪಾಲರು ಬರೆದ ಸ್ಪಷ್ಟನೆಯ ಪತ್ರವನ್ನೂ ಪ್ರಧಾನ ಮಂತ್ರಿಗಳ ಸಚಿವಾಲಯ ಬಿಡುಗಡೆ ಮಾಡಿದೆ~ ಎಂದು ವಿವರಿಸಿದರು.<br /> <br /> ಮಹಾಲೇಖಪಾಲ ವರದಿಗಳನ್ನು ತರಿಸಿಕೊಂಡು ಪರಾಮರ್ಶಿಸಬೇಕಾದ್ದು ಸಂಸತ್ತಿನ ಕೆಲಸ. ವಾಸ್ತವಾಂಶ ಏನೆಂದರೆ ಅದು ವರದಿಯೇ ಅಲ್ಲ, ಮಹಾಲೇಖಪಾಲ ಇನ್ನೂ ತನ್ನ ವರದಿಯನ್ನು ಅಂತಿಮಗೊಳಿಸಿಯೇ ಇಲ್ಲ ಎಂದು ಮುಖರ್ಜಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>