<p><strong>ಕಮಲನಗರ: </strong>ಗ್ರಾಮೀಣ ಜನತೆಗೆ ದೇಶ ವಿದೇಶಗಳ ಪ್ರಚಲಿತ ವಿದ್ಯಮಾನಗಳ ಪರಿಚಯವಾಗಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜ್ಞಾನ ಸಂಪಾದನೆಗೆ ಅಕ್ಷರ ಸಂಪತ್ತು ಸಹಕಾರಿಯಾಗಬೇಕೆಂಬ ಸದುದ್ದೇಶದಿಂದ ಸರ್ಕಾರ ಹಳ್ಳಿ ಹಳ್ಳಿಗಳಿಗೆ ಗ್ರಂಥಾಲಯವನ್ನು ಒದಗಿಸಿದೆ.<br /> <br /> ಆದರೆ ಔರಾದ್ ತಾಲ್ಲೂಕಿನ ಕಮಲನಗರ ವ್ಯಾಪ್ತಿಯಲ್ಲಿರುವ ತೋರಣಾ, ಡೋಣಗಾಂವ (ಎಂ), ಠಾಣಾಕುಶನೂರ್, ಮುಧೋಳ್ ಹಾಗೂ ಸೋನಾಳ ಗ್ರಾಮಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳು ಕಳೆದ ಹಲವು ವರ್ಷಗಳಿಂದ ತೆರೆಯದಿರುವುದರಿಂದ ಅಲ್ಲಿಯ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. <br /> <br /> ಆರಂಭದಲ್ಲಿ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಗ್ರಂಥಾಲಯಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸದ ಕಾರಣ ಕಳೆದ ವರ್ಷ ಏಪ್ರಿಲ್ನಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನಕ್ಕೆ ಸೇರಿಸಲಾಯಿತು ಎನ್ನಲಾಗಿದೆ. ಹೀಗಿದ್ದರೂ ಗ್ರಂಥಾಲಯಗಳ ಸುಧಾರಣೆ ಸಾಧ್ಯವಾಗಿಲ್ಲ. <br /> <br /> ಸಮೀಪದ ತೋರಣಾ ಗ್ರಾಮದಲ್ಲಿರುವ ಗ್ರಂಥಾಲಯದ ಬಾಗಿಲು ಕಳೆದ 15 ವರ್ಷಗಳಿಂದ ಮುಚ್ಚಿದೆ. ಹೀಗಾಗಿ ಇಲ್ಲಿಯ ಪುಸ್ತಕ ಪ್ರೇಮಿಗಳು ಜ್ಞಾನಾರ್ಜನೆ ಹಾಗೂ ನಿರಂತರ ಕಲಿಕೆಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. <br /> <br /> ದಿನಪತ್ರಿಕೆಗಳು, ನಿಯತಕಾಲಿಕೆಗಳು, ಹೊಸ ಪುಸ್ತಕಗಳು, ಕಾದಂಬರಿಗಳನ್ನು ಓದುವ ಆಸೆ ಸಾಕಷ್ಟಿದ್ದರೂ. ಗ್ರಂಥಾಲಯ ಸದಾ ಮುಚ್ಚಿರುತ್ತದೆ. ಗ್ರಂಥಾಲಯ ಮೇಲ್ವಿಚಾರಕರು ಬಾಗಿಲನ್ನೇ ತೆರೆಯುವುದಿಲ್ಲ ಎಂಬ ಅಸಮಾಧಾನ ಸ್ಥಳೀಯ ಯುವಕರಾದ ಸಚಿನ್ ಬೇಂಬ್ರೆ, ಅರವಿಂದ್ ಕನಶೆಟ್ಟೆ, ಮುಸ್ತಾಫಾ ಶೇಕ್ ಅವರದ್ದು.<br /> <br /> ಗ್ರಂಥಾಲಯ ಸದಾ ತೆರೆದಿರಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜಹಂಸ್ ಶೆಟಕಾರ್ ಹತಾಶೆಯಿಂದ ತಿಳಿಸಿದ್ದಾರೆ. <br /> <br /> ವ್ಯಾಪ್ತಿಯ ಡೋಣಗಾಂವ (ಎಂ), ಸೋನಾಳ, ಠಾಣಾಕುಶನೂರ್, ಮುಧೋಳ್ ಗ್ರಾಮಗಳಲ್ಲಿರುವ ಗ್ರಂಥಾಲಯಗಳ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಇಲ್ಲಿಯು ಇದೇ ರಾಗ, ಅದೇ ಹಾಡು. <br /> <br /> ಗ್ರಾಮೀಣ ಸಮುದಾಯಕ್ಕೆ ಶೈಕ್ಷಣಿಕ, ಸಾಂಸ್ಕೃತಿಕ ಮಾಹಿತಿ ನೀಡುವ ಹಾಗೂ ಬಿಡುವಿನ ವೇಳೆಯಲ್ಲಿ ಮನೋಲ್ಲಾಸಿತ ಕ್ರಿಯೆಗಳಲ್ಲಿ ತೊಡಗಿಸುವ ಸದುದ್ದೇಶದಿಂದ ಆರಂಭಿಸಿದ ಗ್ರಂಥಾಲಯಗಳ ಪರಿಸ್ಥಿತಿ ಅಧೋಗತಿ ಆಗಿರುವುದರಿಂದ ಸರ್ಕಾರದ ಘನ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.<br /> <br /> ಗ್ರಂಥಾಲಯ ವರ್ಷದ ಎಲ್ಲ ದಿನಗಳಲ್ಲೂ ತೆರೆದಿರಬೇಕು. ನಾವು ಬಯಸುವ ಎಲ್ಲ ಪುಸ್ತಕಗಳು, ಪತ್ರಿಕೆಗಳು ಗ್ರಂಥಾಲಯದಲ್ಲಿ ಲಭ್ಯವಾಗಬೇಕು. ಅಂದಾಗ ಮಾತ್ರ ಹಳ್ಳಿಯಲ್ಲಿರುವ ನಮಗೆ ದಿಲ್ಲಿಯ ವಿಷಯ ತಿಳಿಯಲು ಸಾಧ್ಯ ಎಂಬುದು ಈ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರ ಒಮ್ಮತದ ಅಭಿಪ್ರಾಯವಾಗಿದೆ.<br /> <br /> ಜನಸಾಮಾನ್ಯರ ವಿಶ್ವವಿದ್ಯಾಲಯ ಎಂದು ಕರೆಯಲಾಗುವ ಗ್ರಂಥಾಲಯಗಳು, ಜ್ಞಾನ ಪ್ರಸಾರದ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು. ಹಳ್ಳಿ ಜನತೆಯ ಜ್ಞಾನ ದಾಹವನ್ನು ತೀರಿಸಬೇಕು ಎಂಬುದು ಪ್ರಜ್ಞಾವಂತರ ಆಶಯವಾಗಿದೆ.<br /> <br /> ಜನತೆಯ ಆಶೋತ್ತರಗಳಿಗೆ ಸ್ಫಂದಿಸಿ, ಮುಚ್ಚಿದ ಗ್ರಂಥಾಲಯಗಳನ್ನು ಕೂಡಲೇ ತೆರೆಯಲು ಸಂಬಂಧಪಟ್ಟ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಅಷ್ಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ: </strong>ಗ್ರಾಮೀಣ ಜನತೆಗೆ ದೇಶ ವಿದೇಶಗಳ ಪ್ರಚಲಿತ ವಿದ್ಯಮಾನಗಳ ಪರಿಚಯವಾಗಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜ್ಞಾನ ಸಂಪಾದನೆಗೆ ಅಕ್ಷರ ಸಂಪತ್ತು ಸಹಕಾರಿಯಾಗಬೇಕೆಂಬ ಸದುದ್ದೇಶದಿಂದ ಸರ್ಕಾರ ಹಳ್ಳಿ ಹಳ್ಳಿಗಳಿಗೆ ಗ್ರಂಥಾಲಯವನ್ನು ಒದಗಿಸಿದೆ.<br /> <br /> ಆದರೆ ಔರಾದ್ ತಾಲ್ಲೂಕಿನ ಕಮಲನಗರ ವ್ಯಾಪ್ತಿಯಲ್ಲಿರುವ ತೋರಣಾ, ಡೋಣಗಾಂವ (ಎಂ), ಠಾಣಾಕುಶನೂರ್, ಮುಧೋಳ್ ಹಾಗೂ ಸೋನಾಳ ಗ್ರಾಮಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳು ಕಳೆದ ಹಲವು ವರ್ಷಗಳಿಂದ ತೆರೆಯದಿರುವುದರಿಂದ ಅಲ್ಲಿಯ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. <br /> <br /> ಆರಂಭದಲ್ಲಿ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಗ್ರಂಥಾಲಯಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸದ ಕಾರಣ ಕಳೆದ ವರ್ಷ ಏಪ್ರಿಲ್ನಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನಕ್ಕೆ ಸೇರಿಸಲಾಯಿತು ಎನ್ನಲಾಗಿದೆ. ಹೀಗಿದ್ದರೂ ಗ್ರಂಥಾಲಯಗಳ ಸುಧಾರಣೆ ಸಾಧ್ಯವಾಗಿಲ್ಲ. <br /> <br /> ಸಮೀಪದ ತೋರಣಾ ಗ್ರಾಮದಲ್ಲಿರುವ ಗ್ರಂಥಾಲಯದ ಬಾಗಿಲು ಕಳೆದ 15 ವರ್ಷಗಳಿಂದ ಮುಚ್ಚಿದೆ. ಹೀಗಾಗಿ ಇಲ್ಲಿಯ ಪುಸ್ತಕ ಪ್ರೇಮಿಗಳು ಜ್ಞಾನಾರ್ಜನೆ ಹಾಗೂ ನಿರಂತರ ಕಲಿಕೆಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. <br /> <br /> ದಿನಪತ್ರಿಕೆಗಳು, ನಿಯತಕಾಲಿಕೆಗಳು, ಹೊಸ ಪುಸ್ತಕಗಳು, ಕಾದಂಬರಿಗಳನ್ನು ಓದುವ ಆಸೆ ಸಾಕಷ್ಟಿದ್ದರೂ. ಗ್ರಂಥಾಲಯ ಸದಾ ಮುಚ್ಚಿರುತ್ತದೆ. ಗ್ರಂಥಾಲಯ ಮೇಲ್ವಿಚಾರಕರು ಬಾಗಿಲನ್ನೇ ತೆರೆಯುವುದಿಲ್ಲ ಎಂಬ ಅಸಮಾಧಾನ ಸ್ಥಳೀಯ ಯುವಕರಾದ ಸಚಿನ್ ಬೇಂಬ್ರೆ, ಅರವಿಂದ್ ಕನಶೆಟ್ಟೆ, ಮುಸ್ತಾಫಾ ಶೇಕ್ ಅವರದ್ದು.<br /> <br /> ಗ್ರಂಥಾಲಯ ಸದಾ ತೆರೆದಿರಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜಹಂಸ್ ಶೆಟಕಾರ್ ಹತಾಶೆಯಿಂದ ತಿಳಿಸಿದ್ದಾರೆ. <br /> <br /> ವ್ಯಾಪ್ತಿಯ ಡೋಣಗಾಂವ (ಎಂ), ಸೋನಾಳ, ಠಾಣಾಕುಶನೂರ್, ಮುಧೋಳ್ ಗ್ರಾಮಗಳಲ್ಲಿರುವ ಗ್ರಂಥಾಲಯಗಳ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಇಲ್ಲಿಯು ಇದೇ ರಾಗ, ಅದೇ ಹಾಡು. <br /> <br /> ಗ್ರಾಮೀಣ ಸಮುದಾಯಕ್ಕೆ ಶೈಕ್ಷಣಿಕ, ಸಾಂಸ್ಕೃತಿಕ ಮಾಹಿತಿ ನೀಡುವ ಹಾಗೂ ಬಿಡುವಿನ ವೇಳೆಯಲ್ಲಿ ಮನೋಲ್ಲಾಸಿತ ಕ್ರಿಯೆಗಳಲ್ಲಿ ತೊಡಗಿಸುವ ಸದುದ್ದೇಶದಿಂದ ಆರಂಭಿಸಿದ ಗ್ರಂಥಾಲಯಗಳ ಪರಿಸ್ಥಿತಿ ಅಧೋಗತಿ ಆಗಿರುವುದರಿಂದ ಸರ್ಕಾರದ ಘನ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.<br /> <br /> ಗ್ರಂಥಾಲಯ ವರ್ಷದ ಎಲ್ಲ ದಿನಗಳಲ್ಲೂ ತೆರೆದಿರಬೇಕು. ನಾವು ಬಯಸುವ ಎಲ್ಲ ಪುಸ್ತಕಗಳು, ಪತ್ರಿಕೆಗಳು ಗ್ರಂಥಾಲಯದಲ್ಲಿ ಲಭ್ಯವಾಗಬೇಕು. ಅಂದಾಗ ಮಾತ್ರ ಹಳ್ಳಿಯಲ್ಲಿರುವ ನಮಗೆ ದಿಲ್ಲಿಯ ವಿಷಯ ತಿಳಿಯಲು ಸಾಧ್ಯ ಎಂಬುದು ಈ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರ ಒಮ್ಮತದ ಅಭಿಪ್ರಾಯವಾಗಿದೆ.<br /> <br /> ಜನಸಾಮಾನ್ಯರ ವಿಶ್ವವಿದ್ಯಾಲಯ ಎಂದು ಕರೆಯಲಾಗುವ ಗ್ರಂಥಾಲಯಗಳು, ಜ್ಞಾನ ಪ್ರಸಾರದ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು. ಹಳ್ಳಿ ಜನತೆಯ ಜ್ಞಾನ ದಾಹವನ್ನು ತೀರಿಸಬೇಕು ಎಂಬುದು ಪ್ರಜ್ಞಾವಂತರ ಆಶಯವಾಗಿದೆ.<br /> <br /> ಜನತೆಯ ಆಶೋತ್ತರಗಳಿಗೆ ಸ್ಫಂದಿಸಿ, ಮುಚ್ಚಿದ ಗ್ರಂಥಾಲಯಗಳನ್ನು ಕೂಡಲೇ ತೆರೆಯಲು ಸಂಬಂಧಪಟ್ಟ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಅಷ್ಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>