<p><strong>ಗಜೇಂದ್ರಗಡ:</strong> ಕಷ್ಟಪಟ್ಟು ಬೆಳೆದ ಬಾಳೆ ಫಸಲು ಪಡೆದು ಸಂಭ್ರಮಿಸಬೇಕಿದ್ದ ತಾಲ್ಲೂಕಿನ ಬಾಳೆ ಬೆಳೆಗಾರರನ್ನು ಬೆಳೆಗೆ ಅಂಟಿಕೊಂಡ `ಬೆಂಕಿ ರೋಗ' ಸಂಕಷ್ಟಕ್ಕೆ ದೂಡಿದೆ.<br /> <br /> 2007ರಿಂದೀಚೆಗೆ ಪ್ರಥಮ ಬಾರಿಗೆ ಬಾಳೆ ಬೆಳೆದು ನಿರೀಕ್ಷೆಗೂ ಮೀರಿ ಆದಾಯ ನೀಡಿ ಬೆಳೆಗಾರರ ವಿಶ್ವಾಸ ಹೆಚ್ಚಿಸಿತ್ತು. ಪ್ರಸಕ್ತ ವರ್ಷವೂ ಉತ್ತಮ ಫಸಲು ಕೈಸೇರುತ್ತದೆ ಎಂಬ ನಂಬಿಕೆಯಲ್ಲಿದ್ದ ಬಾಳೆ ಬೆಳೆಗಾರರಿಗೆ `ಬೆಂಕಿ ರೋಗ' ತೀವ್ರ ನಿರಾಸೆಯನ್ನುಂಟು ಮಾಡಿದ್ದು, ಬಾಳೆ ಬೆಳೆದ ತಪ್ಪಿಗಾಗಿ ರೈತರು ಕೈಕೈಹಿಸುಕಿ ಕೊಳ್ಳುವಂತಾಗಿದೆ.<br /> <br /> ದುಬಾರಿ ನಿರ್ವಹಣೆ: ತಾಲ್ಲೂಕಿನಲ್ಲಿ 526 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಬಾಳೆ ಬೆಳೆಯುವವರು 1.8 ಮೀ, 1.8 ಅಂತರದಲ್ಲಿ ಪ್ರತಿ ಎಕರೆಗೆ 1200 ತಗ್ಗುಗಳನ್ನು ತೆಗೆಯಬೇಕು.<br /> <br /> ಸಸಿ ನೆಟ್ಟ ದಿನದಿಂದ ಆರು ತಿಂಗಳ ವರೆಗೆ ಸಕಾಲಕ್ಕೆ ಕೊಟ್ಟಿಗೆ ಗೊಬ್ಬರ, ಕಳೆ (ಕಸ) ತೆರವುಗೊಳಿಸುವಿಕೆ, ನೀರುಣಿಸುವುದು ಹೀಗೆ ಪ್ರತಿಯೊಂದನ್ನು ಚಾಚೂ ತಪ್ಪದೆ ನಿರ್ವಹಿ ಸಬೇಕು. ಅಂದಾಗ ಮಾತ್ರ ಸಸಿ ನೆಟ್ಟ ಏಳನೇ ತಿಂಗಳಿಗೆ ಬೆಳೆ ಫಸಲು ನೀಡುತ್ತದೆ. ಇವೆಲ್ಲವುಗಳ ಮಧ್ಯೆ ಎಕರೆ ಬಾಳೆ ಬೆಳೆಯಲು 70 ರಿಂದ 80 ಸಾವಿರ ರೂಪಾಯಿ ಖರ್ಚಾಗುತ್ತದೆ.<br /> <br /> <strong>ಬಂಗಾರದ ಬೆಳೆ:</strong> ಬೆಳೆಗೆ ಅನುಸರಿಸಬೇಕಾದ ಎಲ್ಲ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿ ಸಿದರೆ ತಿಂಗಳಿಗೆ ಎರಡು ಬಾರಿ ಕಟಾವ್ ಮಾಡ ಬಹುದಾಗಿದೆ. ಬೆಳೆ ಉತ್ತಮವಾಗಿದ್ದರೆ ಎಕರೆ ಯೊಂದಕ್ಕೆ ಪ್ರತಿ ಬಾರಿ 5 ರಿಂದ 6 ಕ್ವಿಂಟಲ್ ಬಾಳೆ ಪಡೆಯಬಹುದು. ಬೆಳೆಗೆ ಯಾವುದೇ ಕೀಟ ಬಾಧೆ ಅಂಟಿಕೊಳ್ಳದಿದ್ದರೆ ವರ್ಷವಿಡೀ ಫಲ ನೀಡುವ ಬಾಳೆ ಬೆಳೆಗಾರರ ಪಾಲಿಗೆ ಬಂಗಾರದ ಬೆಳೆಯೇ ಸರಿ.<br /> <br /> ತಾಲ್ಲೂಕಿನಾದ್ಯಂತ ಬಹುತೇಕ ಕ್ಯಾವೆಂಡಿಷ್ (ಪಚ್ಚ ಬಾಳೆ)ಯನ್ನೇ ವ್ಯಾಪಕವಾಗಿ ಬೆಳೆಯಲಾಗಿದೆ. ಈ ತಳಿ ಹೆಚ್ಚು ಗಾಳಿ ಮತ್ತು ಉಷ್ಣ ವಾತಾವರಣವನ್ನು ಸಹಿಸಬಲ್ಲದ್ದಾಗಿದೆ. ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ತುದಿಯಲ್ಲಿ ಬಾಗಿರುತ್ತದೆ. ತಿರುಳು ಮೃದುವಾಗಿದ್ದು, ಸಿಹಿ ಯಾಗಿರುತ್ತದೆ. ಚನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳಿರುತ್ತವೆ. ಈ ತಳಿ ಪನಾಮ ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ ಬೆಳೆಗಾರ ಅಮರಪ್ಪ ಕರಟಗೇರಿ.<br /> <br /> `ಇದು ರಫ್ತು ಮಾಡಲು ಅನುಕೂಲಕರ ತಳಿ. ಸ್ಥಳೀಯ ಮಾರುಕಟ್ಟೆಯಲ್ಲಿಯೇ 110 ರೂಪಾಯಿಗೆ ಒಂದು ಗೊನೆ ಮಾರಾಟ ವಾಗುತ್ತಿದೆ. ಕಳೆದ ವರ್ಷ 580 ಗೊನೆಗಳಿಂದ 63,800 ರೂಪಾಯಿ ಮೊತ್ತ ವಾರ್ಷಿಕ ಆದಾಯ ಬಂದಿತ್ತು. ಈ ವರ್ಷ ಒಂದು ಲಕ್ಷ ರೂಪಾಯಿಗೂ ಅಧಿಕ ಫಸಲು ನಿರೀಕ್ಷಿಸಿದ್ದೇವು. ಆದರೆ, ಬೆಂಕಿ ರೋಗದಿಂದ ಪ್ರಸಕ್ತ ವರ್ಷ ಬೆಳೆಗೆ ಮಾಡಿದ ಖರ್ಚು ಸಹ ಕೈಗೆಟುಕಲಿಲ್ಲ ಎಂದು ಸಂಗಪ್ಪ ಮಾರಿಹಾಳ ಕಣ್ಣೀರಿಟ್ಟರು.<br /> <br /> ರೋಗದ ಲಕ್ಷಣಗಳು: ಪ್ರಸ್ತುತ `ಬೆಂಕಿ ರೋಗ' ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಬಾಳೆ ಎಲೆಯಲ್ಲಿ ಮೊದಲು ಚುಕ್ಕೆ ಕಾಣಿಸುತ್ತದೆ. ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ನಿಧಾನವಾಗಿ ಎಲೆ ಸುಟ್ಟಂತಾಗುತ್ತದೆ. ನಂತದ ಹಳದಿ ಬಣ್ಣಕ್ಕೆ ತಿರುಗಿ, ಬಾಗಿ ಸುಳಿ ಮತ್ತು ಗಿಡಸಂಪೂರ್ಣ ನಾಶವಾಗುತ್ತದೆ.<br /> <br /> ಯಾವುದಾ ದರೂ ಒಂದು ಗಿಡಕ್ಕೆ ಬೆಂಕಿ ರೋಗ ಅಂಟಿ ಕೊಂಡರೂ ಸಾಕು. ಗಾಳಿ ಮತ್ತು ನೀರಿನ ಮೂಲಕ ಇಡೀ ತೋಟಕ್ಕೆ ಹರಡುತ್ತದೆ. ಹೀಗಾಗಿ ಬೇರೆ ರೈತರು ರೋಗ ಪೀಡಿತ ಬಾಳೆ ತೋಟದಲ್ಲಿ ಹೆಜ್ಜೆ ಇಡಲಿಕ್ಕೂ ಹಿಂದೂ-ಮುಂದು ನೋಡು ತ್ತಿದ್ದಾರೆ. ಅಲ್ಲಿಂದ ತಮ್ಮ ತೋಟ ಗಳಿಗೆ ಅಂಟಿ ದರೆ ಏನು? ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.<br /> <br /> ರೋಗ ನಿಯಂತ್ರಣ ಕ್ರಮ: ತಾಲ್ಲೂಕಿನ ಬಾಳೆ ಬೆಳೆಗೆ ತಗುಲಿರುವ `ಬೆಂಕಿ ರೋಗ' ಅಥವಾ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಕಾರ್ಬನ್ ಡೈಜಿಂ ಅಥವಾ ಬ್ರ್ಯಾಟಿನಿಯಂ ರಾಸಾಯನಿಕವನ್ನು 1 ಲೀಟರ ನೀರಿನಲ್ಲಿ 2 ರಿಂದ 3 ಗ್ರಾಂ ಬೆರೆಯಿಸಿ, ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ರೋಗ ಕಾಣಿಸಿಕೊಂಡ ತಕ್ಷಣ ಹತೋಟಿ ಕ್ರಮ ಅನುಸರಿಸುವುದು ಸೂಕ್ತ ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಅಮೋಗಿ ಹಿರೇಕುರ `ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ:</strong> ಕಷ್ಟಪಟ್ಟು ಬೆಳೆದ ಬಾಳೆ ಫಸಲು ಪಡೆದು ಸಂಭ್ರಮಿಸಬೇಕಿದ್ದ ತಾಲ್ಲೂಕಿನ ಬಾಳೆ ಬೆಳೆಗಾರರನ್ನು ಬೆಳೆಗೆ ಅಂಟಿಕೊಂಡ `ಬೆಂಕಿ ರೋಗ' ಸಂಕಷ್ಟಕ್ಕೆ ದೂಡಿದೆ.<br /> <br /> 2007ರಿಂದೀಚೆಗೆ ಪ್ರಥಮ ಬಾರಿಗೆ ಬಾಳೆ ಬೆಳೆದು ನಿರೀಕ್ಷೆಗೂ ಮೀರಿ ಆದಾಯ ನೀಡಿ ಬೆಳೆಗಾರರ ವಿಶ್ವಾಸ ಹೆಚ್ಚಿಸಿತ್ತು. ಪ್ರಸಕ್ತ ವರ್ಷವೂ ಉತ್ತಮ ಫಸಲು ಕೈಸೇರುತ್ತದೆ ಎಂಬ ನಂಬಿಕೆಯಲ್ಲಿದ್ದ ಬಾಳೆ ಬೆಳೆಗಾರರಿಗೆ `ಬೆಂಕಿ ರೋಗ' ತೀವ್ರ ನಿರಾಸೆಯನ್ನುಂಟು ಮಾಡಿದ್ದು, ಬಾಳೆ ಬೆಳೆದ ತಪ್ಪಿಗಾಗಿ ರೈತರು ಕೈಕೈಹಿಸುಕಿ ಕೊಳ್ಳುವಂತಾಗಿದೆ.<br /> <br /> ದುಬಾರಿ ನಿರ್ವಹಣೆ: ತಾಲ್ಲೂಕಿನಲ್ಲಿ 526 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಬಾಳೆ ಬೆಳೆಯುವವರು 1.8 ಮೀ, 1.8 ಅಂತರದಲ್ಲಿ ಪ್ರತಿ ಎಕರೆಗೆ 1200 ತಗ್ಗುಗಳನ್ನು ತೆಗೆಯಬೇಕು.<br /> <br /> ಸಸಿ ನೆಟ್ಟ ದಿನದಿಂದ ಆರು ತಿಂಗಳ ವರೆಗೆ ಸಕಾಲಕ್ಕೆ ಕೊಟ್ಟಿಗೆ ಗೊಬ್ಬರ, ಕಳೆ (ಕಸ) ತೆರವುಗೊಳಿಸುವಿಕೆ, ನೀರುಣಿಸುವುದು ಹೀಗೆ ಪ್ರತಿಯೊಂದನ್ನು ಚಾಚೂ ತಪ್ಪದೆ ನಿರ್ವಹಿ ಸಬೇಕು. ಅಂದಾಗ ಮಾತ್ರ ಸಸಿ ನೆಟ್ಟ ಏಳನೇ ತಿಂಗಳಿಗೆ ಬೆಳೆ ಫಸಲು ನೀಡುತ್ತದೆ. ಇವೆಲ್ಲವುಗಳ ಮಧ್ಯೆ ಎಕರೆ ಬಾಳೆ ಬೆಳೆಯಲು 70 ರಿಂದ 80 ಸಾವಿರ ರೂಪಾಯಿ ಖರ್ಚಾಗುತ್ತದೆ.<br /> <br /> <strong>ಬಂಗಾರದ ಬೆಳೆ:</strong> ಬೆಳೆಗೆ ಅನುಸರಿಸಬೇಕಾದ ಎಲ್ಲ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿ ಸಿದರೆ ತಿಂಗಳಿಗೆ ಎರಡು ಬಾರಿ ಕಟಾವ್ ಮಾಡ ಬಹುದಾಗಿದೆ. ಬೆಳೆ ಉತ್ತಮವಾಗಿದ್ದರೆ ಎಕರೆ ಯೊಂದಕ್ಕೆ ಪ್ರತಿ ಬಾರಿ 5 ರಿಂದ 6 ಕ್ವಿಂಟಲ್ ಬಾಳೆ ಪಡೆಯಬಹುದು. ಬೆಳೆಗೆ ಯಾವುದೇ ಕೀಟ ಬಾಧೆ ಅಂಟಿಕೊಳ್ಳದಿದ್ದರೆ ವರ್ಷವಿಡೀ ಫಲ ನೀಡುವ ಬಾಳೆ ಬೆಳೆಗಾರರ ಪಾಲಿಗೆ ಬಂಗಾರದ ಬೆಳೆಯೇ ಸರಿ.<br /> <br /> ತಾಲ್ಲೂಕಿನಾದ್ಯಂತ ಬಹುತೇಕ ಕ್ಯಾವೆಂಡಿಷ್ (ಪಚ್ಚ ಬಾಳೆ)ಯನ್ನೇ ವ್ಯಾಪಕವಾಗಿ ಬೆಳೆಯಲಾಗಿದೆ. ಈ ತಳಿ ಹೆಚ್ಚು ಗಾಳಿ ಮತ್ತು ಉಷ್ಣ ವಾತಾವರಣವನ್ನು ಸಹಿಸಬಲ್ಲದ್ದಾಗಿದೆ. ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ತುದಿಯಲ್ಲಿ ಬಾಗಿರುತ್ತದೆ. ತಿರುಳು ಮೃದುವಾಗಿದ್ದು, ಸಿಹಿ ಯಾಗಿರುತ್ತದೆ. ಚನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳಿರುತ್ತವೆ. ಈ ತಳಿ ಪನಾಮ ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ ಬೆಳೆಗಾರ ಅಮರಪ್ಪ ಕರಟಗೇರಿ.<br /> <br /> `ಇದು ರಫ್ತು ಮಾಡಲು ಅನುಕೂಲಕರ ತಳಿ. ಸ್ಥಳೀಯ ಮಾರುಕಟ್ಟೆಯಲ್ಲಿಯೇ 110 ರೂಪಾಯಿಗೆ ಒಂದು ಗೊನೆ ಮಾರಾಟ ವಾಗುತ್ತಿದೆ. ಕಳೆದ ವರ್ಷ 580 ಗೊನೆಗಳಿಂದ 63,800 ರೂಪಾಯಿ ಮೊತ್ತ ವಾರ್ಷಿಕ ಆದಾಯ ಬಂದಿತ್ತು. ಈ ವರ್ಷ ಒಂದು ಲಕ್ಷ ರೂಪಾಯಿಗೂ ಅಧಿಕ ಫಸಲು ನಿರೀಕ್ಷಿಸಿದ್ದೇವು. ಆದರೆ, ಬೆಂಕಿ ರೋಗದಿಂದ ಪ್ರಸಕ್ತ ವರ್ಷ ಬೆಳೆಗೆ ಮಾಡಿದ ಖರ್ಚು ಸಹ ಕೈಗೆಟುಕಲಿಲ್ಲ ಎಂದು ಸಂಗಪ್ಪ ಮಾರಿಹಾಳ ಕಣ್ಣೀರಿಟ್ಟರು.<br /> <br /> ರೋಗದ ಲಕ್ಷಣಗಳು: ಪ್ರಸ್ತುತ `ಬೆಂಕಿ ರೋಗ' ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಬಾಳೆ ಎಲೆಯಲ್ಲಿ ಮೊದಲು ಚುಕ್ಕೆ ಕಾಣಿಸುತ್ತದೆ. ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ನಿಧಾನವಾಗಿ ಎಲೆ ಸುಟ್ಟಂತಾಗುತ್ತದೆ. ನಂತದ ಹಳದಿ ಬಣ್ಣಕ್ಕೆ ತಿರುಗಿ, ಬಾಗಿ ಸುಳಿ ಮತ್ತು ಗಿಡಸಂಪೂರ್ಣ ನಾಶವಾಗುತ್ತದೆ.<br /> <br /> ಯಾವುದಾ ದರೂ ಒಂದು ಗಿಡಕ್ಕೆ ಬೆಂಕಿ ರೋಗ ಅಂಟಿ ಕೊಂಡರೂ ಸಾಕು. ಗಾಳಿ ಮತ್ತು ನೀರಿನ ಮೂಲಕ ಇಡೀ ತೋಟಕ್ಕೆ ಹರಡುತ್ತದೆ. ಹೀಗಾಗಿ ಬೇರೆ ರೈತರು ರೋಗ ಪೀಡಿತ ಬಾಳೆ ತೋಟದಲ್ಲಿ ಹೆಜ್ಜೆ ಇಡಲಿಕ್ಕೂ ಹಿಂದೂ-ಮುಂದು ನೋಡು ತ್ತಿದ್ದಾರೆ. ಅಲ್ಲಿಂದ ತಮ್ಮ ತೋಟ ಗಳಿಗೆ ಅಂಟಿ ದರೆ ಏನು? ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.<br /> <br /> ರೋಗ ನಿಯಂತ್ರಣ ಕ್ರಮ: ತಾಲ್ಲೂಕಿನ ಬಾಳೆ ಬೆಳೆಗೆ ತಗುಲಿರುವ `ಬೆಂಕಿ ರೋಗ' ಅಥವಾ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಕಾರ್ಬನ್ ಡೈಜಿಂ ಅಥವಾ ಬ್ರ್ಯಾಟಿನಿಯಂ ರಾಸಾಯನಿಕವನ್ನು 1 ಲೀಟರ ನೀರಿನಲ್ಲಿ 2 ರಿಂದ 3 ಗ್ರಾಂ ಬೆರೆಯಿಸಿ, ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ರೋಗ ಕಾಣಿಸಿಕೊಂಡ ತಕ್ಷಣ ಹತೋಟಿ ಕ್ರಮ ಅನುಸರಿಸುವುದು ಸೂಕ್ತ ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಅಮೋಗಿ ಹಿರೇಕುರ `ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>