<p>ಕೃಷ್ಣರಾಜಪುರ: ಇಲ್ಲಿನ ಬಿಎಂಟಿಸಿ ನಿಲ್ದಾಣದಿಂದ 150ಕ್ಕೂ ಹೆಚ್ಚು ಬಸ್ಸುಗಳು ಕೇಂದ್ರ ನಿಲ್ದಾಣಗಳ ಕಡೆಗೆ ಹೊರಡುತ್ತವೆ. ಆದರೆ, ನಿಲ್ದಾಣದ ಆವರಣದಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ಜತೆಗೆ ಸಂಚಾರ ನಿಯಂತ್ರಕರ ಕೊಠಡಿಗೂ ಹತ್ತು ದಿನಗಳಿಂದ ಬೀಗ ಜಡಿದಿರುವುದು ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.<br /> <br /> `ಯಾವ ಬಸ್ಸು ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎನ್ನುವುದರ ಬಗ್ಗೆ ನಮಗೆ ಅರಿವಿಲ್ಲ. ಓದು ಬರಹವೂ ಗೊತ್ತಿಲ್ಲ. ಮಾಹಿತಿ ನೀಡುವವರೂ ಇಲ್ಲ. ಹೀಗಾಗಿ ಬೀಗ ಜಡಿದಿರುವ ಕೊಠಡಿ ಕಾಯುವ ಪರಿಸ್ಥಿತಿ ಎದುರಾಗಿದೆ~ ಎಂದು ತರಕಾರಿ ಮಾರುವ ಸುವರ್ಣಮ್ಮ ದೂರಿದರು.<br /> <br /> `ಆವರಣದಲ್ಲಿ ಶೌಚಾಲಯದ ಕೊರತೆ ಇದೆ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಬಿಸಿಲು ಮಳೆಯಲ್ಲೂ ಆವರಣದಲ್ಲಿಯೇ ಬಸ್ಸಿಗಾಗಿ ಎದುರು ನೋಡುವ ದಾರುಣ ಪರಿಸ್ಥಿತಿ ಒದಗಿದೆ. ಈಗ ಬಸ್ ಸಂಚಾರದ ಬಗ್ಗೆ ನಮಗೆ ಮಾಹಿತಿ ನೀಡುವವರೂ ಇಲ್ಲದೆ ತ್ರಿಶಂಕು ಸ್ಥಿತಿಯಾಗಿದೆ~ ಎಂದು ಪ್ರಯಾಣಿಕ ವೇಣುಗೋಪಾಲ್ ದೂರಿದರು.<br /> <br /> `ಸ್ಥಳೀಯ ಬಸ್ ನಿಲ್ದಾಣಕ್ಕೆ ಹೋಲಿಸಿದರೆ ನಮ್ಮ ಗ್ರಾಮಾಂತರ ಪ್ರದೇಶದ ಬಸ್ ನಿಲ್ದಾಣ ಎಷ್ಟೋ ಮೇಲು. ಸುಸಜ್ಜಿತವಾದ ಕೊಠಡಿ ಇದ್ದು ನಮಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ~ ಎಂದು ರಾಮನಗರದ ಅನಂತಯ್ಯ ಅವರು ನುಡಿದರು.<br /> <br /> ಅವ್ಯವಸ್ಥೆಯ ಬಗ್ಗೆ ಹೆಸರು ಬಹಿರಂಗಪಡಿಸಲು ಬಯಸದ ನಿರ್ವಾಹಕರೊಬ್ಬರು, `ವಿದ್ಯಾರ್ಥಿಗಳಿಗೆ ಪಾಸ್ ನೀಡುವ ಕೌಂಟರುಗಳಿಗೆ ಇಲ್ಲಿ ಕೆಲಸ ಮಾಡುವ ಇಬ್ಬರು ಸಂಚಾರ ನಿಯಂತ್ರಕರನ್ನು ವರ್ಗಾಯಿಸಲಾಗಿದೆ. ಇದರಿಂದ ನಿಯಂತ್ರಕರ ಕೊಠಡಿಗೆ ಬೀಗ ಜಡಿಯಲಾಗಿದೆ. ಈ ಅವ್ಯವಸ್ಥೆ ಎಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ~ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೃಷ್ಣರಾಜಪುರ: ಇಲ್ಲಿನ ಬಿಎಂಟಿಸಿ ನಿಲ್ದಾಣದಿಂದ 150ಕ್ಕೂ ಹೆಚ್ಚು ಬಸ್ಸುಗಳು ಕೇಂದ್ರ ನಿಲ್ದಾಣಗಳ ಕಡೆಗೆ ಹೊರಡುತ್ತವೆ. ಆದರೆ, ನಿಲ್ದಾಣದ ಆವರಣದಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ಜತೆಗೆ ಸಂಚಾರ ನಿಯಂತ್ರಕರ ಕೊಠಡಿಗೂ ಹತ್ತು ದಿನಗಳಿಂದ ಬೀಗ ಜಡಿದಿರುವುದು ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.<br /> <br /> `ಯಾವ ಬಸ್ಸು ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎನ್ನುವುದರ ಬಗ್ಗೆ ನಮಗೆ ಅರಿವಿಲ್ಲ. ಓದು ಬರಹವೂ ಗೊತ್ತಿಲ್ಲ. ಮಾಹಿತಿ ನೀಡುವವರೂ ಇಲ್ಲ. ಹೀಗಾಗಿ ಬೀಗ ಜಡಿದಿರುವ ಕೊಠಡಿ ಕಾಯುವ ಪರಿಸ್ಥಿತಿ ಎದುರಾಗಿದೆ~ ಎಂದು ತರಕಾರಿ ಮಾರುವ ಸುವರ್ಣಮ್ಮ ದೂರಿದರು.<br /> <br /> `ಆವರಣದಲ್ಲಿ ಶೌಚಾಲಯದ ಕೊರತೆ ಇದೆ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಬಿಸಿಲು ಮಳೆಯಲ್ಲೂ ಆವರಣದಲ್ಲಿಯೇ ಬಸ್ಸಿಗಾಗಿ ಎದುರು ನೋಡುವ ದಾರುಣ ಪರಿಸ್ಥಿತಿ ಒದಗಿದೆ. ಈಗ ಬಸ್ ಸಂಚಾರದ ಬಗ್ಗೆ ನಮಗೆ ಮಾಹಿತಿ ನೀಡುವವರೂ ಇಲ್ಲದೆ ತ್ರಿಶಂಕು ಸ್ಥಿತಿಯಾಗಿದೆ~ ಎಂದು ಪ್ರಯಾಣಿಕ ವೇಣುಗೋಪಾಲ್ ದೂರಿದರು.<br /> <br /> `ಸ್ಥಳೀಯ ಬಸ್ ನಿಲ್ದಾಣಕ್ಕೆ ಹೋಲಿಸಿದರೆ ನಮ್ಮ ಗ್ರಾಮಾಂತರ ಪ್ರದೇಶದ ಬಸ್ ನಿಲ್ದಾಣ ಎಷ್ಟೋ ಮೇಲು. ಸುಸಜ್ಜಿತವಾದ ಕೊಠಡಿ ಇದ್ದು ನಮಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ~ ಎಂದು ರಾಮನಗರದ ಅನಂತಯ್ಯ ಅವರು ನುಡಿದರು.<br /> <br /> ಅವ್ಯವಸ್ಥೆಯ ಬಗ್ಗೆ ಹೆಸರು ಬಹಿರಂಗಪಡಿಸಲು ಬಯಸದ ನಿರ್ವಾಹಕರೊಬ್ಬರು, `ವಿದ್ಯಾರ್ಥಿಗಳಿಗೆ ಪಾಸ್ ನೀಡುವ ಕೌಂಟರುಗಳಿಗೆ ಇಲ್ಲಿ ಕೆಲಸ ಮಾಡುವ ಇಬ್ಬರು ಸಂಚಾರ ನಿಯಂತ್ರಕರನ್ನು ವರ್ಗಾಯಿಸಲಾಗಿದೆ. ಇದರಿಂದ ನಿಯಂತ್ರಕರ ಕೊಠಡಿಗೆ ಬೀಗ ಜಡಿಯಲಾಗಿದೆ. ಈ ಅವ್ಯವಸ್ಥೆ ಎಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ~ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>