<p><strong>ಶಿವಮೊಗ್ಗ:</strong> ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಉತ್ತಮ ಆಡಳಿತ ನೀಡಿದ್ದರು. ಕೆಲವು ವಿರೋಧಿಗಳಿಂದ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಅವರಿಗೆ ಹೈಕಮಾಂಡ್ ಆದಷ್ಟು ಬೇಗ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.<br /> <br /> ನಗರದಲ್ಲಿ ಗುರುವಾರ ಭೇಟಿ ಯಾದ ಸುದ್ದಿಗಾರರ ಜತೆ ಮಾತನಾ ಡಿದ ಅವರು, ಈಗಾಗಲೇ ನ್ಯಾಯಾಲ ಯದಲ್ಲಿನ ಅವರ ಮೇಲಿನ ಪ್ರಕರ ಣದ ಒಂದು ತೀರ್ಪು ಹೊರಬಂದಿದೆ. ಹಾಗಾಗಿ, ಕೇಂದ್ರದ ನಾಯಕರು ಆದಷ್ಟು ಬೇಗ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದರು. <br /> <br /> ಯಡಿಯೂರಪ್ಪ ಅವರಿಗೆ ಅವರ ವಿರೋಧಿಗಳಿಂದ ಅನ್ಯಾಯವಾಗಿದೆ. ಅವರಿಗೆ ಸೂಕ್ತ ಸ್ಥಾನಮಾನಕ್ಕೆ ನಾನೂ ಭಗವಂತನಲ್ಲಿ ಪ್ರಾರ್ಥಿ ಸುತ್ತೇನೆ. ಹೈಕಮಾಂಡ್ ಎಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅಲ್ಲಿಯವರೆಗೂ ಯಡಿಯೂರಪ್ಪ ಕಾಯಬೇಕು ಎಂದರು.<br /> <br /> ಯಡಿಯೂರಪ್ಪ ಅವರಿಗೆ ಆಡಳಿತ ದಲ್ಲಿ ಸಾಕಷ್ಟು ಅನುಭವವಿದೆ. ಈ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶ ಗಳ ಅಧ್ಯಯನ ನಡೆಸಲು ತೆರಳಿ ದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿ ಸುವುದು ಸರಿಯಲ್ಲ ಎಂದ ಅವರು, ಅವರು ಏಕೆ ಪ್ರವಾಸ ಮಾಡ ಬಾರದು? ಎಂದು ಮರು ಪ್ರಶ್ನೆ ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಉತ್ತಮ ಆಡಳಿತ ನೀಡಿದ್ದರು. ಕೆಲವು ವಿರೋಧಿಗಳಿಂದ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಅವರಿಗೆ ಹೈಕಮಾಂಡ್ ಆದಷ್ಟು ಬೇಗ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.<br /> <br /> ನಗರದಲ್ಲಿ ಗುರುವಾರ ಭೇಟಿ ಯಾದ ಸುದ್ದಿಗಾರರ ಜತೆ ಮಾತನಾ ಡಿದ ಅವರು, ಈಗಾಗಲೇ ನ್ಯಾಯಾಲ ಯದಲ್ಲಿನ ಅವರ ಮೇಲಿನ ಪ್ರಕರ ಣದ ಒಂದು ತೀರ್ಪು ಹೊರಬಂದಿದೆ. ಹಾಗಾಗಿ, ಕೇಂದ್ರದ ನಾಯಕರು ಆದಷ್ಟು ಬೇಗ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದರು. <br /> <br /> ಯಡಿಯೂರಪ್ಪ ಅವರಿಗೆ ಅವರ ವಿರೋಧಿಗಳಿಂದ ಅನ್ಯಾಯವಾಗಿದೆ. ಅವರಿಗೆ ಸೂಕ್ತ ಸ್ಥಾನಮಾನಕ್ಕೆ ನಾನೂ ಭಗವಂತನಲ್ಲಿ ಪ್ರಾರ್ಥಿ ಸುತ್ತೇನೆ. ಹೈಕಮಾಂಡ್ ಎಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅಲ್ಲಿಯವರೆಗೂ ಯಡಿಯೂರಪ್ಪ ಕಾಯಬೇಕು ಎಂದರು.<br /> <br /> ಯಡಿಯೂರಪ್ಪ ಅವರಿಗೆ ಆಡಳಿತ ದಲ್ಲಿ ಸಾಕಷ್ಟು ಅನುಭವವಿದೆ. ಈ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶ ಗಳ ಅಧ್ಯಯನ ನಡೆಸಲು ತೆರಳಿ ದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿ ಸುವುದು ಸರಿಯಲ್ಲ ಎಂದ ಅವರು, ಅವರು ಏಕೆ ಪ್ರವಾಸ ಮಾಡ ಬಾರದು? ಎಂದು ಮರು ಪ್ರಶ್ನೆ ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>