<p>ಬೆಂಗಳೂರು: ಆಡಳಿತಾರೂಢ ಬಿಜೆಪಿಯ ಈಗಿನ ಪರಿಸ್ಥಿತಿ ಒಂದು ರೀತಿ `ರೋಗಿ ಬಯಸಿದ್ದೂ ಹಾಲು- ಅನ್ನ, ವೈದ್ಯ ಹೇಳಿದ್ದೂ ಹಾಲು- ಅನ್ನ~ ಎನ್ನುವಂತೆ ಆಗಿದೆ.<br /> <br /> ಮಾಜಿ ಸಚಿವ ಬಿ.ಶ್ರೀರಾಮುಲು ಅವರ ರಾಜೀನಾಮೆ `ಬೆದರಿಕೆ~ ನಂತರ ಕಂಗಾಲಾಗಿದ್ದ ಬಿಜೆಪಿಗೆ ಜನಾರ್ದನ ರೆಡ್ಡಿ ಅವರ ಬಂಧನ ಒಳಗೊಳಗೆ ಖುಷಿ ತಂದುಕೊಟ್ಟಿದೆ.<br /> <br /> ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಸಂಪುಟಕ್ಕೆ ತೆಗೆದುಕೊಳ್ಳದ ಬಿಜೆಪಿ ಕ್ರಮ ಬಳ್ಳಾರಿಯ ರೆಡ್ಡಿ ಸಹೋದರರ ಅಸಮಾಧಾನ ಹೆಚ್ಚಾಗಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲೇ ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಅತಂತ್ರಗೊಳಿಸುವ ಲೆಕ್ಕಾಚಾರವನ್ನೂ ಅವರು ಹಾಕಿಕೊಂಡಿದ್ದರು.<br /> <br /> ಇದರ ಒಂದು ಭಾಗವಾಗಿ ಭಾನುವಾರ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಹೇಳಿದರು. ಮಡಿಕೇರಿಗೆ ತೆರಳಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರವನ್ನೂ ನೀಡಿದರು.<br /> <br /> ಅದನ್ನು ಅಂಗೀಕಾರ ಮಾಡಬೇಕೊ ಬೇಡವೊ ಎನ್ನುವ ಒತ್ತಡದಲ್ಲಿರುವಾಗಲೇ ಅತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಬಂಧನವಾಗಿದೆ. ಹೀಗಾಗಿ ಶ್ರೀರಾಮುಲು ಅವರ ಸ್ವಾಭಿಮಾನ ಯಾತ್ರೆಗೆ ಪ್ರಾರಂಭದಲ್ಲೆ ಪೆಟ್ಟುಬಿದ್ದಿದೆ.<br /> <br /> ಸರ್ಕಾರ ಉಳಿಸಿಕೊಳ್ಳುವ ಒಂದೇ ಕಾರಣದಿಂದ ಮನಸ್ಸಿಲ್ಲದಿದ್ದರೂ ಬಿಜೆಪಿಯ ಮುಖಂಡರು ಬಳ್ಳಾರಿಯ ರೆಡ್ಡಿಗಳನ್ನು ಮನವೊಲಿಸುವ ಕಸರತ್ತಿಗೆ ಕೈಹಾಕಿದರು. ಕೆಲವರು ಹಲವು ಸುತ್ತಿನ ಮಾತುಕತೆ ಕೂಡ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಆಡಳಿತಾರೂಢ ಬಿಜೆಪಿಯ ಈಗಿನ ಪರಿಸ್ಥಿತಿ ಒಂದು ರೀತಿ `ರೋಗಿ ಬಯಸಿದ್ದೂ ಹಾಲು- ಅನ್ನ, ವೈದ್ಯ ಹೇಳಿದ್ದೂ ಹಾಲು- ಅನ್ನ~ ಎನ್ನುವಂತೆ ಆಗಿದೆ.<br /> <br /> ಮಾಜಿ ಸಚಿವ ಬಿ.ಶ್ರೀರಾಮುಲು ಅವರ ರಾಜೀನಾಮೆ `ಬೆದರಿಕೆ~ ನಂತರ ಕಂಗಾಲಾಗಿದ್ದ ಬಿಜೆಪಿಗೆ ಜನಾರ್ದನ ರೆಡ್ಡಿ ಅವರ ಬಂಧನ ಒಳಗೊಳಗೆ ಖುಷಿ ತಂದುಕೊಟ್ಟಿದೆ.<br /> <br /> ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಸಂಪುಟಕ್ಕೆ ತೆಗೆದುಕೊಳ್ಳದ ಬಿಜೆಪಿ ಕ್ರಮ ಬಳ್ಳಾರಿಯ ರೆಡ್ಡಿ ಸಹೋದರರ ಅಸಮಾಧಾನ ಹೆಚ್ಚಾಗಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲೇ ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಅತಂತ್ರಗೊಳಿಸುವ ಲೆಕ್ಕಾಚಾರವನ್ನೂ ಅವರು ಹಾಕಿಕೊಂಡಿದ್ದರು.<br /> <br /> ಇದರ ಒಂದು ಭಾಗವಾಗಿ ಭಾನುವಾರ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಹೇಳಿದರು. ಮಡಿಕೇರಿಗೆ ತೆರಳಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರವನ್ನೂ ನೀಡಿದರು.<br /> <br /> ಅದನ್ನು ಅಂಗೀಕಾರ ಮಾಡಬೇಕೊ ಬೇಡವೊ ಎನ್ನುವ ಒತ್ತಡದಲ್ಲಿರುವಾಗಲೇ ಅತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಬಂಧನವಾಗಿದೆ. ಹೀಗಾಗಿ ಶ್ರೀರಾಮುಲು ಅವರ ಸ್ವಾಭಿಮಾನ ಯಾತ್ರೆಗೆ ಪ್ರಾರಂಭದಲ್ಲೆ ಪೆಟ್ಟುಬಿದ್ದಿದೆ.<br /> <br /> ಸರ್ಕಾರ ಉಳಿಸಿಕೊಳ್ಳುವ ಒಂದೇ ಕಾರಣದಿಂದ ಮನಸ್ಸಿಲ್ಲದಿದ್ದರೂ ಬಿಜೆಪಿಯ ಮುಖಂಡರು ಬಳ್ಳಾರಿಯ ರೆಡ್ಡಿಗಳನ್ನು ಮನವೊಲಿಸುವ ಕಸರತ್ತಿಗೆ ಕೈಹಾಕಿದರು. ಕೆಲವರು ಹಲವು ಸುತ್ತಿನ ಮಾತುಕತೆ ಕೂಡ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>