<p><strong>ವಾಷಿಂಗ್ಟನ್ (ಪಿಟಿಐ)</strong>: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ‘ಅಲೆ’ ಕೆಲಸ ಮಾಡಿದೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಮುಂಬರುವ ಚುನಾವಣೆಯಲ್ಲಿ ಇದೇ ರೀತಿ ಸಾಧನೆ ಮುಂದುವರೆಯುತ್ತದೆ ಎಂಬ ಖಾತ್ರಿಯಿಲ್ಲ ಎಂದು ಅಮೆರಿಕದ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಭಾರತದಲ್ಲಿ ನಡೆಯುವ ಚುನಾವಣೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಈ ತಜ್ಞರು, ಬಿಜೆಪಿ ಜಯ ಸಾಧಿಸಿರುವುದಕ್ಕೆ ಮೋದಿ ಅಂಶವೊಂದೇ ಕಾರಣವಲ್ಲ ಎಂದಿದ್ದಾರೆ. ಹಾಗೆಯೇ ‘ಆಮ್ ಆದ್ಮಿ ಪಕ್ಷ’ದ ಸಾಧನೆ ಆಶ್ಚರ್ಯ ಮೂಡಿಸಿದೆ ಎಂದೂ ಹೇಳಿದ್ದಾರೆ.<br /> <br /> ‘ಫಲಿತಾಂಶ ಬಂದ ನಾಲ್ಕೂ ರಾಜ್ಯಗಳಲ್ಲಿ ಯಾವಾಗಲೂ ಬಿಜೆಪಿ ಮಾತ್ರ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. 2003ರಲ್ಲಿ ಇದೇ ತೆರನಾಗಿ ಬಂದಿದ್ದ ಚುನಾಣಾ ಫಲಿತಾಂಶವೇ ಇದಕ್ಕೆ ಸಾಕ್ಷಿ. ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಿಜೆಪಿ ಎಷ್ಟು ಲೋಕಸಭೆ ಸ್ಥಾನ ಗೆಲ್ಲಲಿದೆ ಎಂಬುದರ ಮೇಲೆ ನಿಜವಾಗಲೂ ಬಿಜೆಪಿ ಅಲೆ ಇದೆಯೇ ಎನ್ನುವುದು ನಿರ್ಧಾರವಾಗಲಿದೆ.<br /> <br /> ಏಕೆಂದರೆ ಹಿಂದಿನ ಎರಡು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಈ ನಾಲ್ಕು ರಾಜ್ಯಗಳ ಒಟ್ಟು ಸ್ಥಾನಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿತ್ತು’ ಎಂದು ಮ್ಯಾಕ್ಲಾರ್ಟಿ ಅಸೋಸಿಯೇಟ್ಸ್ನ ದಕ್ಷಿಣ ಏಷ್ಯಾ ನಿರ್ದೇಶಕ ರಿಚರ್ಡ್ ಎಂ. ರೊಸೊ ಹೇಳಿದ್ದಾರೆ.<br /> <br /> ‘ಕೆಲ ತಿಂಗಳಲ್ಲಿ ಮೋದಿ, ರಾಹುಲ್ ಈ ರಾಜ್ಯಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದು, ತಮ್ಮ ಪರ ಅಲೆ ಸೃಷ್ಟಿಸಿದ್ದಾರೆ ಎನ್ನುವುದನ್ನು ಪುಷ್ಟಿ ಇಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್ (ಪಿಟಿಐ)</strong>: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ‘ಅಲೆ’ ಕೆಲಸ ಮಾಡಿದೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಮುಂಬರುವ ಚುನಾವಣೆಯಲ್ಲಿ ಇದೇ ರೀತಿ ಸಾಧನೆ ಮುಂದುವರೆಯುತ್ತದೆ ಎಂಬ ಖಾತ್ರಿಯಿಲ್ಲ ಎಂದು ಅಮೆರಿಕದ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಭಾರತದಲ್ಲಿ ನಡೆಯುವ ಚುನಾವಣೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಈ ತಜ್ಞರು, ಬಿಜೆಪಿ ಜಯ ಸಾಧಿಸಿರುವುದಕ್ಕೆ ಮೋದಿ ಅಂಶವೊಂದೇ ಕಾರಣವಲ್ಲ ಎಂದಿದ್ದಾರೆ. ಹಾಗೆಯೇ ‘ಆಮ್ ಆದ್ಮಿ ಪಕ್ಷ’ದ ಸಾಧನೆ ಆಶ್ಚರ್ಯ ಮೂಡಿಸಿದೆ ಎಂದೂ ಹೇಳಿದ್ದಾರೆ.<br /> <br /> ‘ಫಲಿತಾಂಶ ಬಂದ ನಾಲ್ಕೂ ರಾಜ್ಯಗಳಲ್ಲಿ ಯಾವಾಗಲೂ ಬಿಜೆಪಿ ಮಾತ್ರ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. 2003ರಲ್ಲಿ ಇದೇ ತೆರನಾಗಿ ಬಂದಿದ್ದ ಚುನಾಣಾ ಫಲಿತಾಂಶವೇ ಇದಕ್ಕೆ ಸಾಕ್ಷಿ. ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಿಜೆಪಿ ಎಷ್ಟು ಲೋಕಸಭೆ ಸ್ಥಾನ ಗೆಲ್ಲಲಿದೆ ಎಂಬುದರ ಮೇಲೆ ನಿಜವಾಗಲೂ ಬಿಜೆಪಿ ಅಲೆ ಇದೆಯೇ ಎನ್ನುವುದು ನಿರ್ಧಾರವಾಗಲಿದೆ.<br /> <br /> ಏಕೆಂದರೆ ಹಿಂದಿನ ಎರಡು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಈ ನಾಲ್ಕು ರಾಜ್ಯಗಳ ಒಟ್ಟು ಸ್ಥಾನಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿತ್ತು’ ಎಂದು ಮ್ಯಾಕ್ಲಾರ್ಟಿ ಅಸೋಸಿಯೇಟ್ಸ್ನ ದಕ್ಷಿಣ ಏಷ್ಯಾ ನಿರ್ದೇಶಕ ರಿಚರ್ಡ್ ಎಂ. ರೊಸೊ ಹೇಳಿದ್ದಾರೆ.<br /> <br /> ‘ಕೆಲ ತಿಂಗಳಲ್ಲಿ ಮೋದಿ, ರಾಹುಲ್ ಈ ರಾಜ್ಯಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದು, ತಮ್ಮ ಪರ ಅಲೆ ಸೃಷ್ಟಿಸಿದ್ದಾರೆ ಎನ್ನುವುದನ್ನು ಪುಷ್ಟಿ ಇಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>