<p><strong>ಬೆಂಗಳೂರು:</strong> `ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಬಿಬಿಎಂಪಿ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಪಾಲಿಕೆಯ ಅಭಿವೃದ್ಧಿ ಕಾರ್ಯ, ಆರ್ಥಿಕ ಸ್ಥಿತಿ ಹಾಗೂ ಸಾಲದ ಬಗ್ಗೆ ಬಿಜೆಪಿ ಆಡಳಿತ ಶ್ವೇತಪತ್ರ ಹೊರಡಿಸಬೇಕು~ ಎಂದು ಬಿಬಿಎಂಪಿ ಜೆಡಿಎಸ್ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.<br /> <br /> ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, `ರೂ 3500 ಕೋಟಿಗಿಂತಲೂ ಹೆಚ್ಚಿನ ಸಾಲ ಮಾಡಿ ನಗರದ ತೆರಿಗೆದಾರರ ಮೇಲೆ ಸಾಲದ ಹೊರೆ ಹಾಕಿರುವುದು ಬಿಜೆಪಿಯ ಸಾಧನೆ. ಸುಳ್ಳು ಹೇಳಿಕೆ ನೀಡಿ ನಗರದ ಜನತೆಯ ದಿಕ್ಕು ತಪ್ಪಿಸಲಾಗುತ್ತಿದೆ~ ಎಂದು ಟೀಕಿಸಿದರು. <br /> <br /> `ರಾಜ್ಯದಲ್ಲಿ ಯಡಿಯೂರಪ್ಪ ಬಣ, ಸದಾನಂದ ಗೌಡ ಬಣ, ಈಶ್ವರಪ್ಪ ಬಣ ಎಂಬ ಬಣಗಳಿದ್ದಂತೆ ಬಿಬಿಎಂಪಿಯಲ್ಲೂ ಮೇಯರ್ ಬಣ, ಉಪಮೇಯರ್ ಬಣ ಹುಟ್ಟಿಕೊಂಡು ನಗರದ ಅಭಿವೃದ್ಧಿಗೆ ತೊಡಕಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿಲ್ಲ. 2010-11ನೇ ಸಾಲಿನಲ್ಲಿ ರೂ 8,840 ಕೋಟಿಯ ಬಜೆಟ್ ಮಂಡಿಸಲಾಗಿತ್ತು. ಇದರಲ್ಲಿ ಕಾರ್ಯಗತವಾದುದು ಶೇ 37 ಮಾತ್ರ. 2011-12ರಲ್ಲಿ 9,138 ಕೋಟಿಯ ಬಜೆಟ್ ಮಂಡಿಸಲಾಯಿತು. ಇಲ್ಲಿ ಘೋಷಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ಈಗ ಟೆಂಡರ್ ಕರೆಯಲಾಗುತ್ತಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಸಾಧನೆ ಶೂನ್ಯ~ ಎಂದು ದೂರಿದರು. <br /> <br /> `ಉಪಮೇಯರ್ ಹರೀಶ್ ಅವರು ಒಂದು ವರ್ಷದ ಅಧಿಕಾರ ಅವಧಿಯ ಸಾಧನೆಯ ಕಿರುಹೊತ್ತಿಗೆ ತಂದಿರುವುದು ಹಾಸ್ಯಾಸ್ಪದ. ಕೆಎಂಸಿ ಕಾಯ್ದೆ ಪ್ರಕಾರ ಉಪಮೇಯರ್ಗೆ ಈ ಅಧಿಕಾರ ಇಲ್ಲ. ಅವರಿಗೆ ಆಡಳಿತ ವರದಿ ಮಂಡಿಸುವ ಅಧಿಕಾರ ಮಾತ್ರ ಇದೆ. ಭ್ರಷ್ಟಾಚಾರಗಳು ಬಯಲಿಗೆ ಬರುತ್ತವೆ ಎಂಬ ಭೀತಿಯಿಂದ ತಮ್ಮ ಅಧಿಕಾರ ಚಲಾಯಿಸದೆ ಪಲಾಯನ ಮಾಡಿದ್ದಾರೆ~ ಎಂದು ಪದ್ಮನಾಭ ರೆಡ್ಡಿ ಲೇವಡಿ ಮಾಡಿದರು. <br /> <br /> `ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಲ್ಲಿ ಬಿಜೆಪಿ ಆಡಳಿತ ವಿಫಲವಾಗಿದೆ~ ಎಂದು ಆರೋಪಿಸಿದರು. `ಬಿಬಿಎಂಪಿಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಹಣ ದುರುಪಯೋಗ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು~ ಎಂದರು. <br /> <br /> `ಜಾಹೀರಾತು ಹಗರಣದಿಂದ ಪಾಲಿಕೆಗೆ ಪ್ರತಿವರ್ಷ ನೂರಾರು ಕೋಟಿ ಆದಾಯ ತಪ್ಪಿ ಹೋಗುತ್ತಿದೆ. 2,500ಕ್ಕೂ ಹೆಚ್ಚು ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಕಸ ಗುತ್ತಿಗೆ ಅವಧಿ ಮುಗಿದು ಮೂರು ವರ್ಷಗಳು ಕಳೆದಿವು. ಹೊಸದಾಗಿ ಗುತ್ತಿಗೆ ಕರೆದಿಲ್ಲ. <br /> <br /> ಅನಧಿಕೃತ ಒಎಫ್ಸಿ ಕೇಬಲ್ಗಳನ್ನು ಕತ್ತರಿಸಿ ಹಾಕಲಾಗುವುದು ಎಂದು ಪಾಲಿಕೆ ಸಭೆಯಲ್ಲಿ ಮೇಯರ್ ಘೋಷಿಸಿದ್ದರು. ಈ ನಡುವೆ ಒಎಫ್ಸಿ ಕೇಬಲ್ ಮಾಲೀಕರ ಜತೆ ಬಿಜೆಪಿ ಆಡಳಿತ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಬಿಬಿಎಂಪಿಗೆ ಸಾವಿರಾರು ಕೋಟಿ ಆದಾಯ ಕೈ ತಪ್ಪಿ ಹೋಗಿದೆ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಬಿಬಿಎಂಪಿ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಪಾಲಿಕೆಯ ಅಭಿವೃದ್ಧಿ ಕಾರ್ಯ, ಆರ್ಥಿಕ ಸ್ಥಿತಿ ಹಾಗೂ ಸಾಲದ ಬಗ್ಗೆ ಬಿಜೆಪಿ ಆಡಳಿತ ಶ್ವೇತಪತ್ರ ಹೊರಡಿಸಬೇಕು~ ಎಂದು ಬಿಬಿಎಂಪಿ ಜೆಡಿಎಸ್ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.<br /> <br /> ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, `ರೂ 3500 ಕೋಟಿಗಿಂತಲೂ ಹೆಚ್ಚಿನ ಸಾಲ ಮಾಡಿ ನಗರದ ತೆರಿಗೆದಾರರ ಮೇಲೆ ಸಾಲದ ಹೊರೆ ಹಾಕಿರುವುದು ಬಿಜೆಪಿಯ ಸಾಧನೆ. ಸುಳ್ಳು ಹೇಳಿಕೆ ನೀಡಿ ನಗರದ ಜನತೆಯ ದಿಕ್ಕು ತಪ್ಪಿಸಲಾಗುತ್ತಿದೆ~ ಎಂದು ಟೀಕಿಸಿದರು. <br /> <br /> `ರಾಜ್ಯದಲ್ಲಿ ಯಡಿಯೂರಪ್ಪ ಬಣ, ಸದಾನಂದ ಗೌಡ ಬಣ, ಈಶ್ವರಪ್ಪ ಬಣ ಎಂಬ ಬಣಗಳಿದ್ದಂತೆ ಬಿಬಿಎಂಪಿಯಲ್ಲೂ ಮೇಯರ್ ಬಣ, ಉಪಮೇಯರ್ ಬಣ ಹುಟ್ಟಿಕೊಂಡು ನಗರದ ಅಭಿವೃದ್ಧಿಗೆ ತೊಡಕಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿಲ್ಲ. 2010-11ನೇ ಸಾಲಿನಲ್ಲಿ ರೂ 8,840 ಕೋಟಿಯ ಬಜೆಟ್ ಮಂಡಿಸಲಾಗಿತ್ತು. ಇದರಲ್ಲಿ ಕಾರ್ಯಗತವಾದುದು ಶೇ 37 ಮಾತ್ರ. 2011-12ರಲ್ಲಿ 9,138 ಕೋಟಿಯ ಬಜೆಟ್ ಮಂಡಿಸಲಾಯಿತು. ಇಲ್ಲಿ ಘೋಷಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ಈಗ ಟೆಂಡರ್ ಕರೆಯಲಾಗುತ್ತಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಸಾಧನೆ ಶೂನ್ಯ~ ಎಂದು ದೂರಿದರು. <br /> <br /> `ಉಪಮೇಯರ್ ಹರೀಶ್ ಅವರು ಒಂದು ವರ್ಷದ ಅಧಿಕಾರ ಅವಧಿಯ ಸಾಧನೆಯ ಕಿರುಹೊತ್ತಿಗೆ ತಂದಿರುವುದು ಹಾಸ್ಯಾಸ್ಪದ. ಕೆಎಂಸಿ ಕಾಯ್ದೆ ಪ್ರಕಾರ ಉಪಮೇಯರ್ಗೆ ಈ ಅಧಿಕಾರ ಇಲ್ಲ. ಅವರಿಗೆ ಆಡಳಿತ ವರದಿ ಮಂಡಿಸುವ ಅಧಿಕಾರ ಮಾತ್ರ ಇದೆ. ಭ್ರಷ್ಟಾಚಾರಗಳು ಬಯಲಿಗೆ ಬರುತ್ತವೆ ಎಂಬ ಭೀತಿಯಿಂದ ತಮ್ಮ ಅಧಿಕಾರ ಚಲಾಯಿಸದೆ ಪಲಾಯನ ಮಾಡಿದ್ದಾರೆ~ ಎಂದು ಪದ್ಮನಾಭ ರೆಡ್ಡಿ ಲೇವಡಿ ಮಾಡಿದರು. <br /> <br /> `ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಲ್ಲಿ ಬಿಜೆಪಿ ಆಡಳಿತ ವಿಫಲವಾಗಿದೆ~ ಎಂದು ಆರೋಪಿಸಿದರು. `ಬಿಬಿಎಂಪಿಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಹಣ ದುರುಪಯೋಗ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು~ ಎಂದರು. <br /> <br /> `ಜಾಹೀರಾತು ಹಗರಣದಿಂದ ಪಾಲಿಕೆಗೆ ಪ್ರತಿವರ್ಷ ನೂರಾರು ಕೋಟಿ ಆದಾಯ ತಪ್ಪಿ ಹೋಗುತ್ತಿದೆ. 2,500ಕ್ಕೂ ಹೆಚ್ಚು ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಕಸ ಗುತ್ತಿಗೆ ಅವಧಿ ಮುಗಿದು ಮೂರು ವರ್ಷಗಳು ಕಳೆದಿವು. ಹೊಸದಾಗಿ ಗುತ್ತಿಗೆ ಕರೆದಿಲ್ಲ. <br /> <br /> ಅನಧಿಕೃತ ಒಎಫ್ಸಿ ಕೇಬಲ್ಗಳನ್ನು ಕತ್ತರಿಸಿ ಹಾಕಲಾಗುವುದು ಎಂದು ಪಾಲಿಕೆ ಸಭೆಯಲ್ಲಿ ಮೇಯರ್ ಘೋಷಿಸಿದ್ದರು. ಈ ನಡುವೆ ಒಎಫ್ಸಿ ಕೇಬಲ್ ಮಾಲೀಕರ ಜತೆ ಬಿಜೆಪಿ ಆಡಳಿತ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಬಿಬಿಎಂಪಿಗೆ ಸಾವಿರಾರು ಕೋಟಿ ಆದಾಯ ಕೈ ತಪ್ಪಿ ಹೋಗಿದೆ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>