<p>ಪಟ್ನಾ (ಐಎಎನ್ಎಸ್): ಭಾರಿ ಮಳೆಯಿಂದಾಗಿ ಗಂಗಾ ಮತ್ತು ಸೋನೆ ನದಿಗಳ ನೀರಿನ ಮಟ್ಟ ಏರಿದ ಪರಿಣಾಮ ಬಿಹಾರದಲ್ಲಿ ಸೋಮವಾರ ಪ್ರವಾಹ ಪರಿಸ್ಥಿತಿ ಕಳವಳಕಾರಿಯಾಗಿದ್ದು ನೂರಾರು ಗ್ರಾಮಗಳು ಜಲಾವೃತವಾಗಿದ್ದು ಸಾವಿರಾರು ಮಂದಿ ನೀರಿನ ಮಧ್ಯೆ ಸಿಲುಕಿದ್ದಾರೆ.<br /> <br /> ಮಧ್ಯಪ್ರದೇಶದ ಬನ್ಸಾಗರ್ ಜಲಾಶಯ ಮತ್ತು ಉತ್ತರ ಪ್ರದೇಶದ ರಿಹ್ಯಾಂಡ್ ಜಲಾಶಯದಿಂದ ಸುಮಾರು 10 ಲಕ್ಷ ಕ್ಯುಸೆಕ್ ನೀರನ್ನು ದಿಢೀರ್ ಬಿಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.<br /> <br /> ಬಿಹಾರ ಸರ್ಕಾರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರಕ್ರಿಯೆ ತಂಡಗಳನ್ನು ನೀರಿನ ಮಧ್ಯೆ ಸಿಲುಕಿರುವ ಗ್ರಾಮಸ್ಥರನ್ನು ರಕ್ಷಿಸಲು ಆಯೋಜಿಸಿದೆ.<br /> <br /> ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ಎತ್ತರ ಪ್ರದೇಶಗಳಿಗೆ ಹೋಗುವಂತೆ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಇಲಾಖೆ ತಿಳಿಸಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ವ್ಯಾಸ್ ಜಿ ಹೇಳಿದ್ದಾರೆ.<br /> <br /> 12 ಜಿಲ್ಲೆಗಳ ಸುಮಾರು ಐದು ಲಕ್ಷ ಮಂದಿ ಪ್ರವಾಹದಿಂದ ತೊಂದರೆಗೆ ಈಡಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.<br /> <br /> ರೊಹಟಾಸ್, ಔರಂಗಾಬಾದ್, ಅರ್ವಾಲ್, ಪಟ್ನಾ, ಭೋಜ್ಪುರ, ಸರನ್, ವೈಶಾಲಿ ಜಿಲ್ಲೆಗಳಲ್ಲಿ ಗ್ರಾಮಗಳು ನೀರಿನಿಂದ ಆವೃತ್ತಗೊಂಡಾಗ ನೂರಾರು ಮಂದಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ಅಕ್ಟೋಬರ್ 15 ರವರೆಗೆ ಸರ್ಕಾರ ಜಲಸಂಪನ್ಮೂಲ ಇಲಾಖೆಯ ಎಲ್ಲಾ ಎಂಜಿನಿಯರುಗಳ ರಜೆಯನ್ನು ರದ್ದು ಮಾಡಲಾಗಿದೆ.<br /> <br /> ಜಿಲ್ಲಾ ಆಡಳಿತ ತೀವ್ರ ನಿಗಾದಲ್ಲಿ ಇರಬೇಕೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.<br /> ಮುಂಜಾಗ್ರತಾ ಕ್ರಮವಾಗಿ ಸೊನೆ ನದಿಯ ಪಟ್ನಾ ಮತ್ತು ಅರಾ ಕಾಲುವೆಗಳನ್ನು ಮುಚ್ಚಲಾಗಿದೆ.<br /> <br /> 1975ರಿಂದ ಈಚೆಗೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಸೊನೆಗೆ ಈ ಮಟ್ಟದಲ್ಲಿ ನೀರನ್ನು ಬಿಟ್ಟಿರಲಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ತಿಳಿಸಿದೆ.<br /> <br /> ರಾಜ್ಯ ಸರ್ಕಾರ ಈ ಎರಡು ರಾಜ್ಯಗಳ ಕ್ರಮದ ವಿರುದ್ಧ ತೀವ್ರ ಖಂಡನೆ ಮಾಡಿದೆ ಎಂದು ಬಿಹಾರ ಜಲ ಸಂಪನ್ಮೂಲ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.<br /> <br /> ಬಿಹಾರದಲ್ಲಿ ಎಲ್ಲಾ ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.<br /> <br /> ಗಂಗಾ ಮತ್ತು ಸೊನೆ ನದಿಗಳು ದಿಢೀರನೆ ವ್ಯಾಪಕ ಹಾನಿ ಮಾಡುತ್ತಿರುವುದು 20 ದಿನಗಳಲ್ಲಿ ಇದು ಎರಡನೇ ಬಾರಿ .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಟ್ನಾ (ಐಎಎನ್ಎಸ್): ಭಾರಿ ಮಳೆಯಿಂದಾಗಿ ಗಂಗಾ ಮತ್ತು ಸೋನೆ ನದಿಗಳ ನೀರಿನ ಮಟ್ಟ ಏರಿದ ಪರಿಣಾಮ ಬಿಹಾರದಲ್ಲಿ ಸೋಮವಾರ ಪ್ರವಾಹ ಪರಿಸ್ಥಿತಿ ಕಳವಳಕಾರಿಯಾಗಿದ್ದು ನೂರಾರು ಗ್ರಾಮಗಳು ಜಲಾವೃತವಾಗಿದ್ದು ಸಾವಿರಾರು ಮಂದಿ ನೀರಿನ ಮಧ್ಯೆ ಸಿಲುಕಿದ್ದಾರೆ.<br /> <br /> ಮಧ್ಯಪ್ರದೇಶದ ಬನ್ಸಾಗರ್ ಜಲಾಶಯ ಮತ್ತು ಉತ್ತರ ಪ್ರದೇಶದ ರಿಹ್ಯಾಂಡ್ ಜಲಾಶಯದಿಂದ ಸುಮಾರು 10 ಲಕ್ಷ ಕ್ಯುಸೆಕ್ ನೀರನ್ನು ದಿಢೀರ್ ಬಿಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.<br /> <br /> ಬಿಹಾರ ಸರ್ಕಾರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರಕ್ರಿಯೆ ತಂಡಗಳನ್ನು ನೀರಿನ ಮಧ್ಯೆ ಸಿಲುಕಿರುವ ಗ್ರಾಮಸ್ಥರನ್ನು ರಕ್ಷಿಸಲು ಆಯೋಜಿಸಿದೆ.<br /> <br /> ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ಎತ್ತರ ಪ್ರದೇಶಗಳಿಗೆ ಹೋಗುವಂತೆ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಇಲಾಖೆ ತಿಳಿಸಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ವ್ಯಾಸ್ ಜಿ ಹೇಳಿದ್ದಾರೆ.<br /> <br /> 12 ಜಿಲ್ಲೆಗಳ ಸುಮಾರು ಐದು ಲಕ್ಷ ಮಂದಿ ಪ್ರವಾಹದಿಂದ ತೊಂದರೆಗೆ ಈಡಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.<br /> <br /> ರೊಹಟಾಸ್, ಔರಂಗಾಬಾದ್, ಅರ್ವಾಲ್, ಪಟ್ನಾ, ಭೋಜ್ಪುರ, ಸರನ್, ವೈಶಾಲಿ ಜಿಲ್ಲೆಗಳಲ್ಲಿ ಗ್ರಾಮಗಳು ನೀರಿನಿಂದ ಆವೃತ್ತಗೊಂಡಾಗ ನೂರಾರು ಮಂದಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ಅಕ್ಟೋಬರ್ 15 ರವರೆಗೆ ಸರ್ಕಾರ ಜಲಸಂಪನ್ಮೂಲ ಇಲಾಖೆಯ ಎಲ್ಲಾ ಎಂಜಿನಿಯರುಗಳ ರಜೆಯನ್ನು ರದ್ದು ಮಾಡಲಾಗಿದೆ.<br /> <br /> ಜಿಲ್ಲಾ ಆಡಳಿತ ತೀವ್ರ ನಿಗಾದಲ್ಲಿ ಇರಬೇಕೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.<br /> ಮುಂಜಾಗ್ರತಾ ಕ್ರಮವಾಗಿ ಸೊನೆ ನದಿಯ ಪಟ್ನಾ ಮತ್ತು ಅರಾ ಕಾಲುವೆಗಳನ್ನು ಮುಚ್ಚಲಾಗಿದೆ.<br /> <br /> 1975ರಿಂದ ಈಚೆಗೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಸೊನೆಗೆ ಈ ಮಟ್ಟದಲ್ಲಿ ನೀರನ್ನು ಬಿಟ್ಟಿರಲಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ತಿಳಿಸಿದೆ.<br /> <br /> ರಾಜ್ಯ ಸರ್ಕಾರ ಈ ಎರಡು ರಾಜ್ಯಗಳ ಕ್ರಮದ ವಿರುದ್ಧ ತೀವ್ರ ಖಂಡನೆ ಮಾಡಿದೆ ಎಂದು ಬಿಹಾರ ಜಲ ಸಂಪನ್ಮೂಲ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.<br /> <br /> ಬಿಹಾರದಲ್ಲಿ ಎಲ್ಲಾ ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.<br /> <br /> ಗಂಗಾ ಮತ್ತು ಸೊನೆ ನದಿಗಳು ದಿಢೀರನೆ ವ್ಯಾಪಕ ಹಾನಿ ಮಾಡುತ್ತಿರುವುದು 20 ದಿನಗಳಲ್ಲಿ ಇದು ಎರಡನೇ ಬಾರಿ .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>