<p><strong>ಧಾರವಾಡ:</strong> `ಲಿಂಗಾಯತ ಸಮುದಾಯದ ಕೆಲವು ಸ್ವಾಮೀಜಿಗಳು ಬುಡ್ಗ ಜಂಗಮರ ಹಕ್ಕುಗಳನ್ನು ದಮನ ಮಾಡಿದ್ದು, ಇದರಿಂದ ಆ ಸಮುದಾಯದ ಪ್ರಗತಿ ಕುಂಠಿತವಾಗಿದೆ~ ಎಂದು ಹಿರಿಯ ಸಂಶೋಧಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ವಿಷಾದಿಸಿದರು.<br /> <br /> ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬುಡ್ಗ ಜಂಗಮರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. `ಜಂಗಮರಿಗೆ ಬುಡ್ಗ ಹಾಗೂ ಬೇಡ ಎಂಬ ಅಡ್ಡನಾಮ ಬರುವಲ್ಲಿ ಸ್ವಾಮೀಜಿಗಳ ಪಾತ್ರವೇ ಹಿರಿದಾಗಿದೆ. ಇದೇ ಕಾರಣದಿಂದ ಈ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸೌಲಭ್ಯಗಳಿಂದಲೂ ವಂಚಿತವಾಗಿದೆ~ ಎಂದು ಅವರು ಅವರು ಅಭಿಪ್ರಾಯಪಟ್ಟರು.<br /> <br /> `ರಾಜ್ಯದ ತುಂಬಾ ಈ ಸಮುದಾಯ ಕೇವಲ 50 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಸರ್ಕಾರ ಸಹ ಅವರ ಕಲ್ಯಾಣವನ್ನು ಮರೆತುಬಿಟ್ಟಿದೆ. ಬುಡ್ಗ ಜಂಗಮರ ಪ್ರಗತಿಗಾಗಿ ಯಾವ ಯೋಜನೆಗಳನ್ನೂ ಹಾಕಿಕೊಂಡಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. `ಬುಡ್ಗ ಜಂಗಮರ ಹಕ್ಕು ದಮನ ಮಾಡುವ ಇಂತಹ ವರ್ತನೆ ನಾಚಿಕೆ ತರಿಸುವಂತಿದ್ದು, ಇದಕ್ಕಾಗಿ ನಾನು ಸಮುದಾಯದ ಕ್ಷಮೆಯಾಚಿಸುತ್ತೇನೆ~ ಎಂದು ಹೇಳಿದರು.<br /> <br /> `ಸಮುದಾಯಗಳ ಸಾಂಪ್ರದಾಯಿಕ ಕಾಯಕಕ್ಕೆ ಅನುಗುಣವಾಗಿ ಸಮಾಜ ಒಡೆಯುವ ಕೆಲಸ ನಿಲ್ಲಬೇಕು. ಹಿಂದುಳಿದ ಜನಾಂಗವನ್ನು ಮೇಲೆತ್ತುವ ಕೆಲಸವನ್ನು ಮುಂದುವರಿದ ಸಮುದಾಯ ಮಾಡಬೇಕು~ ಎಂದು ಅವರು ಸಲಹೆ ನೀಡಿದರು.<br /> <br /> `ದೇಶದ ಭವ್ಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಹಾಡು, ಕುಣಿತ, ರೂಪಕಗಳ ಮೂಲಕ ಜನಸಾಮಾನ್ಯರ ಎದುರು ಅನಾವರಣ ಮಾಡಿದ ಕೀರ್ತಿ ಬುಡ್ಗ ಜಂಗಮರಿಗೆ ಸಲ್ಲಬೇಕು~ ಎಂದು ಮೆಚ್ಚುಗೆಯಿಂದ ಹೇಳಿದರು.<br /> <br /> `ಸಮಾಜಕ್ಕೆ ಈ ಸಮುದಾಯ ನೀಡಿದ ಕೊಡುಗೆಯನ್ನು ಗಮನಿಸಿ ರಾಜ್ಯ ಸರ್ಕಾರ, ಬುಡ್ಗ ಜಂಗಮರಿಗೆ ಶಿಕ್ಷಣ, ಉದ್ಯೋಗ ಒದಗಿಸುವಂತಹ ಸರಣಿ ಯೋಜನೆಗಳನ್ನು ಹಾಕಿಕೊಳ್ಳಬೇಕು~ ಎಂದು ಆಗ್ರಹಿಸಿದರು. ಬುಡ್ಗರು ಅಲೆಮಾರಿಗಳಾಗಿದ್ದರಿಂದ ಅವರಿಗೆ ಸ್ವಂತ ಜಮೀನಿಲ್ಲ. ವಲಸೆಯನ್ನು ತಪ್ಪಿಸಲು ಅವರಿಗೆ ಮನೆ ಕಟ್ಟಿಕೊಡಬೇಕಾದ ಹೊಣೆಯೂ ಸರ್ಕಾರದ ಮೇಲಿದೆ ಎಂದು ಹೇಳಿದರು.<br /> <br /> `ಕರ್ನಾಟಕ ವಿದ್ಯಾವರ್ಧಕ ಸಂಘ ತನ್ನ ಚಟುವಟಿಕೆಗಳನ್ನು ಕೇವಲ ಸಾಹಿತ್ಯ, ಭಾಷೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಧ್ವನಿಯಿಲ್ಲದವರ ಧ್ವನಿಯಾಗಿಯೂ ಕೆಲಸ ಮಾಡಬೇಕು~ ಎಂದು ಅವರು ಸಲಹೆ ನೀಡಿದರು. `ಕೇವಲ ಮೇಲ್ವರ್ಗದಿಂದ ಯಾವುದೇ ಸಮಾಜ ನಿರ್ಮಾಣಗೊಳ್ಳುವುದಿಲ್ಲ. ಸಮಾಜದ ಪ್ರಗತಿಗೆ ಕೆಳವರ್ಗವೂ ಮಹತ್ವದ ಕೊಡುಗೆ ನೀಡುತ್ತದೆ ಎಂಬುದನ್ನು ಯಾರೂ ಮರೆಯಬಾರದು~ ಎಂದು ತಿಳಿಸಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಬುಡ್ಗ ಜಂಗಮರ ಕಲೆಯನ್ನು ಸಂರಕ್ಷಿಸಿ ಜಾಗತಿಕವಾಗಿ ಬೆಳೆಸುವ ಅಗತ್ಯವಿದೆ ಎಂದರು. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಡೀನ್ ಕೆ.ದುರ್ಗಾದಾಸ, ಪ್ರೊ. ಕೆ.ಎಂ. ಮೇಟ್ರಿ, ಮೋಹನ ನಾಗಮ್ಮನವರ ಮತ್ತಿತರರು ಮಾತನಾಡಿದರು.<br /> <br /> ಕರ್ನಾಟಕ ಬುಡ್ಗ ಜಂಗಮ ಕಲ್ಯಾಣ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಂಡೊಳ್ಳು ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಗೌರವಕ್ಕೆ ಪಾತ್ರರಾದ ಬರ್ರಕಥಾ ಈರಮ್ಮ ಅವರಿಗೆ `ಬುಡ್ಗ ರತ್ನಾ~ ಹಾಗೂ ಕವಿ ಎಸ್.ಜಿ. ಸಿದ್ದರಾಮಯ್ಯ ಅವರಿಗೆ `ಬುಡ್ಗ ಶ್ರೀ~ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> `ಲಿಂಗಾಯತ ಸಮುದಾಯದ ಕೆಲವು ಸ್ವಾಮೀಜಿಗಳು ಬುಡ್ಗ ಜಂಗಮರ ಹಕ್ಕುಗಳನ್ನು ದಮನ ಮಾಡಿದ್ದು, ಇದರಿಂದ ಆ ಸಮುದಾಯದ ಪ್ರಗತಿ ಕುಂಠಿತವಾಗಿದೆ~ ಎಂದು ಹಿರಿಯ ಸಂಶೋಧಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ವಿಷಾದಿಸಿದರು.<br /> <br /> ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬುಡ್ಗ ಜಂಗಮರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. `ಜಂಗಮರಿಗೆ ಬುಡ್ಗ ಹಾಗೂ ಬೇಡ ಎಂಬ ಅಡ್ಡನಾಮ ಬರುವಲ್ಲಿ ಸ್ವಾಮೀಜಿಗಳ ಪಾತ್ರವೇ ಹಿರಿದಾಗಿದೆ. ಇದೇ ಕಾರಣದಿಂದ ಈ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸೌಲಭ್ಯಗಳಿಂದಲೂ ವಂಚಿತವಾಗಿದೆ~ ಎಂದು ಅವರು ಅವರು ಅಭಿಪ್ರಾಯಪಟ್ಟರು.<br /> <br /> `ರಾಜ್ಯದ ತುಂಬಾ ಈ ಸಮುದಾಯ ಕೇವಲ 50 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಸರ್ಕಾರ ಸಹ ಅವರ ಕಲ್ಯಾಣವನ್ನು ಮರೆತುಬಿಟ್ಟಿದೆ. ಬುಡ್ಗ ಜಂಗಮರ ಪ್ರಗತಿಗಾಗಿ ಯಾವ ಯೋಜನೆಗಳನ್ನೂ ಹಾಕಿಕೊಂಡಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. `ಬುಡ್ಗ ಜಂಗಮರ ಹಕ್ಕು ದಮನ ಮಾಡುವ ಇಂತಹ ವರ್ತನೆ ನಾಚಿಕೆ ತರಿಸುವಂತಿದ್ದು, ಇದಕ್ಕಾಗಿ ನಾನು ಸಮುದಾಯದ ಕ್ಷಮೆಯಾಚಿಸುತ್ತೇನೆ~ ಎಂದು ಹೇಳಿದರು.<br /> <br /> `ಸಮುದಾಯಗಳ ಸಾಂಪ್ರದಾಯಿಕ ಕಾಯಕಕ್ಕೆ ಅನುಗುಣವಾಗಿ ಸಮಾಜ ಒಡೆಯುವ ಕೆಲಸ ನಿಲ್ಲಬೇಕು. ಹಿಂದುಳಿದ ಜನಾಂಗವನ್ನು ಮೇಲೆತ್ತುವ ಕೆಲಸವನ್ನು ಮುಂದುವರಿದ ಸಮುದಾಯ ಮಾಡಬೇಕು~ ಎಂದು ಅವರು ಸಲಹೆ ನೀಡಿದರು.<br /> <br /> `ದೇಶದ ಭವ್ಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಹಾಡು, ಕುಣಿತ, ರೂಪಕಗಳ ಮೂಲಕ ಜನಸಾಮಾನ್ಯರ ಎದುರು ಅನಾವರಣ ಮಾಡಿದ ಕೀರ್ತಿ ಬುಡ್ಗ ಜಂಗಮರಿಗೆ ಸಲ್ಲಬೇಕು~ ಎಂದು ಮೆಚ್ಚುಗೆಯಿಂದ ಹೇಳಿದರು.<br /> <br /> `ಸಮಾಜಕ್ಕೆ ಈ ಸಮುದಾಯ ನೀಡಿದ ಕೊಡುಗೆಯನ್ನು ಗಮನಿಸಿ ರಾಜ್ಯ ಸರ್ಕಾರ, ಬುಡ್ಗ ಜಂಗಮರಿಗೆ ಶಿಕ್ಷಣ, ಉದ್ಯೋಗ ಒದಗಿಸುವಂತಹ ಸರಣಿ ಯೋಜನೆಗಳನ್ನು ಹಾಕಿಕೊಳ್ಳಬೇಕು~ ಎಂದು ಆಗ್ರಹಿಸಿದರು. ಬುಡ್ಗರು ಅಲೆಮಾರಿಗಳಾಗಿದ್ದರಿಂದ ಅವರಿಗೆ ಸ್ವಂತ ಜಮೀನಿಲ್ಲ. ವಲಸೆಯನ್ನು ತಪ್ಪಿಸಲು ಅವರಿಗೆ ಮನೆ ಕಟ್ಟಿಕೊಡಬೇಕಾದ ಹೊಣೆಯೂ ಸರ್ಕಾರದ ಮೇಲಿದೆ ಎಂದು ಹೇಳಿದರು.<br /> <br /> `ಕರ್ನಾಟಕ ವಿದ್ಯಾವರ್ಧಕ ಸಂಘ ತನ್ನ ಚಟುವಟಿಕೆಗಳನ್ನು ಕೇವಲ ಸಾಹಿತ್ಯ, ಭಾಷೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಧ್ವನಿಯಿಲ್ಲದವರ ಧ್ವನಿಯಾಗಿಯೂ ಕೆಲಸ ಮಾಡಬೇಕು~ ಎಂದು ಅವರು ಸಲಹೆ ನೀಡಿದರು. `ಕೇವಲ ಮೇಲ್ವರ್ಗದಿಂದ ಯಾವುದೇ ಸಮಾಜ ನಿರ್ಮಾಣಗೊಳ್ಳುವುದಿಲ್ಲ. ಸಮಾಜದ ಪ್ರಗತಿಗೆ ಕೆಳವರ್ಗವೂ ಮಹತ್ವದ ಕೊಡುಗೆ ನೀಡುತ್ತದೆ ಎಂಬುದನ್ನು ಯಾರೂ ಮರೆಯಬಾರದು~ ಎಂದು ತಿಳಿಸಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಬುಡ್ಗ ಜಂಗಮರ ಕಲೆಯನ್ನು ಸಂರಕ್ಷಿಸಿ ಜಾಗತಿಕವಾಗಿ ಬೆಳೆಸುವ ಅಗತ್ಯವಿದೆ ಎಂದರು. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಡೀನ್ ಕೆ.ದುರ್ಗಾದಾಸ, ಪ್ರೊ. ಕೆ.ಎಂ. ಮೇಟ್ರಿ, ಮೋಹನ ನಾಗಮ್ಮನವರ ಮತ್ತಿತರರು ಮಾತನಾಡಿದರು.<br /> <br /> ಕರ್ನಾಟಕ ಬುಡ್ಗ ಜಂಗಮ ಕಲ್ಯಾಣ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಂಡೊಳ್ಳು ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಗೌರವಕ್ಕೆ ಪಾತ್ರರಾದ ಬರ್ರಕಥಾ ಈರಮ್ಮ ಅವರಿಗೆ `ಬುಡ್ಗ ರತ್ನಾ~ ಹಾಗೂ ಕವಿ ಎಸ್.ಜಿ. ಸಿದ್ದರಾಮಯ್ಯ ಅವರಿಗೆ `ಬುಡ್ಗ ಶ್ರೀ~ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>