<p><strong>ಧಾರವಾಡ: </strong>ಪ್ರಶಸ್ತಿಗೆ ಫೇವರಿಟ್ ಎನಿಸಿದ್ದ ಅಂತರರಾಷ್ಟ್ರೀಯ ಆಟಗಾರರನ್ನು ಹೊಂದಿದ ಬೆಂಗಳೂರು ತಂಡ ಶುಕ್ರವಾರ ಇಲ್ಲಿ ಮುಕ್ತಾಯವಾದ ಎಲ್ಐಸಿ ದಕ್ಷಿಣ ಮಧ್ಯ ವಲಯ ವಾಲಿಬಾಲ್ ಟೂರ್ನಿಯಲ್ಲಿ 25-8, 25-12, 25-10ರಿಂದ ವಿಶಾಖಪಟ್ಟಣ ತಂಡವನ್ನು ಪರಾಭವಗೊಳಿಸುವ ಮೂಲಕ ಮತ್ತೆ ಚಾಂಪಿಯನ್ಪಟ್ಟ ಅಲಂಕರಿಸಿತು.<br /> <br /> ಜಿಲ್ಲಾ ಒಳಾಗಂಣ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆದ ಫೈನಲ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಆಟಗಾರರಾದ ಟಿ.ಸಿ. ಶ್ರೀಶೇಖರ್ ಹಾಗೂ ಎಂ.ಎನ್. ವಿಕ್ರಂ ಅವರ ಆಕ್ರಮಣಕಾರಿ ಆಟದ ಎದುರು ವಿಶಾಖಪಟ್ಟಣ ತಂಡ ಸಂಪೂರ್ಣ ಸಪ್ಪೆಯಾಗಿ ಕಂಡಿತು. ಬೆಂಗಳೂರು ತಂಡದ ಅದ್ಭುತ ಸ್ಮ್ಯಾಷ್ಗಳಿಗೆ `ಬಂದರು ನಗರ~ದ ಹುಡುಗರಿಂದ ಮಾರುತ್ತರವೇ ಇರುತ್ತಿರಲಿಲ್ಲ. ಬೆಂಗಳೂರಿಗರ ಬ್ಲಾಕ್ಗಳೂ ಗಮನ ಸೆಳೆದವು.<br /> <br /> ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಮೈಸೂರು ತಂಡ 25-12, 25-10, 25-12ರಿಂದ ವಾರಂಗಲ್ ತಂಡವನ್ನು ಪರಾಭವಗೊಳಿಸಿತು. ಕಳೆದ ಸಲ ರನ್ನರ್ಸ್ ಅಪ್ ಎನಿಸಿದ್ದ ವಾರಂಗಲ್ ತಂಡ, ಈ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ದಕ್ಷಿಣ ಮಧ್ಯ ವಲಯದ ಪ್ರಾದೇಶಿಕ ವ್ಯವಸ್ಥಾಪಕ ವಿ.ಬಿ. ಕೃಷ್ಣಮೂರ್ತಿ ಪ್ರಶಸ್ತಿ ವಿತರಿಸಿದರು.</p>.<p><strong>ಗಾಲ್ಫ್: ಭಾರತ ಚಾಂಪಿಯನ್</strong></p>.<p><strong>ಪೆಟಾಲಿಂಗ್ ಜಾಯ, ಮಲೇಷ್ಯ (ಐಎಎನ್ಎಸ್):</strong> ಬೆಂಗಳೂರಿನ ಅದಿತಿ ಅಶೋಕ್ ಮತ್ತು ತ್ರಿಶೂಲ್ ಚಿನ್ನಪ್ಪ ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಲ್ಲಿ ನಡೆದ ಮಲೇಷ್ಯನ್ ಓಪನ್ ಜೂನಿಯರ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. <br /> <br /> ಸುಜಾನಾ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ಕೋರ್ಸ್ನಲ್ಲಿ ನಡೆದ ಟೂರ್ನಿಯಲ್ಲಿ ತ್ರಿಶೂಲ್ ಮತ್ತು ಅದಿತಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. <br /> <br /> ಬಾಲಕಿಯರ 14 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಅದಿತಿ ಅಗ್ರಸ್ಥಾನ ಪಡೆದರು. ಭಾರತ (301) ಇತರ ತಂಡಗಳನ್ನು ಭಾರಿ ಅಂತರದಿಂದ ಹಿಂದಕ್ಕೆ ತಳ್ಳಿ ಚಾಂಪಿಯನ್ ಎನಿಸಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>ಪ್ರಶಸ್ತಿಗೆ ಫೇವರಿಟ್ ಎನಿಸಿದ್ದ ಅಂತರರಾಷ್ಟ್ರೀಯ ಆಟಗಾರರನ್ನು ಹೊಂದಿದ ಬೆಂಗಳೂರು ತಂಡ ಶುಕ್ರವಾರ ಇಲ್ಲಿ ಮುಕ್ತಾಯವಾದ ಎಲ್ಐಸಿ ದಕ್ಷಿಣ ಮಧ್ಯ ವಲಯ ವಾಲಿಬಾಲ್ ಟೂರ್ನಿಯಲ್ಲಿ 25-8, 25-12, 25-10ರಿಂದ ವಿಶಾಖಪಟ್ಟಣ ತಂಡವನ್ನು ಪರಾಭವಗೊಳಿಸುವ ಮೂಲಕ ಮತ್ತೆ ಚಾಂಪಿಯನ್ಪಟ್ಟ ಅಲಂಕರಿಸಿತು.<br /> <br /> ಜಿಲ್ಲಾ ಒಳಾಗಂಣ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆದ ಫೈನಲ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಆಟಗಾರರಾದ ಟಿ.ಸಿ. ಶ್ರೀಶೇಖರ್ ಹಾಗೂ ಎಂ.ಎನ್. ವಿಕ್ರಂ ಅವರ ಆಕ್ರಮಣಕಾರಿ ಆಟದ ಎದುರು ವಿಶಾಖಪಟ್ಟಣ ತಂಡ ಸಂಪೂರ್ಣ ಸಪ್ಪೆಯಾಗಿ ಕಂಡಿತು. ಬೆಂಗಳೂರು ತಂಡದ ಅದ್ಭುತ ಸ್ಮ್ಯಾಷ್ಗಳಿಗೆ `ಬಂದರು ನಗರ~ದ ಹುಡುಗರಿಂದ ಮಾರುತ್ತರವೇ ಇರುತ್ತಿರಲಿಲ್ಲ. ಬೆಂಗಳೂರಿಗರ ಬ್ಲಾಕ್ಗಳೂ ಗಮನ ಸೆಳೆದವು.<br /> <br /> ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಮೈಸೂರು ತಂಡ 25-12, 25-10, 25-12ರಿಂದ ವಾರಂಗಲ್ ತಂಡವನ್ನು ಪರಾಭವಗೊಳಿಸಿತು. ಕಳೆದ ಸಲ ರನ್ನರ್ಸ್ ಅಪ್ ಎನಿಸಿದ್ದ ವಾರಂಗಲ್ ತಂಡ, ಈ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ದಕ್ಷಿಣ ಮಧ್ಯ ವಲಯದ ಪ್ರಾದೇಶಿಕ ವ್ಯವಸ್ಥಾಪಕ ವಿ.ಬಿ. ಕೃಷ್ಣಮೂರ್ತಿ ಪ್ರಶಸ್ತಿ ವಿತರಿಸಿದರು.</p>.<p><strong>ಗಾಲ್ಫ್: ಭಾರತ ಚಾಂಪಿಯನ್</strong></p>.<p><strong>ಪೆಟಾಲಿಂಗ್ ಜಾಯ, ಮಲೇಷ್ಯ (ಐಎಎನ್ಎಸ್):</strong> ಬೆಂಗಳೂರಿನ ಅದಿತಿ ಅಶೋಕ್ ಮತ್ತು ತ್ರಿಶೂಲ್ ಚಿನ್ನಪ್ಪ ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಲ್ಲಿ ನಡೆದ ಮಲೇಷ್ಯನ್ ಓಪನ್ ಜೂನಿಯರ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. <br /> <br /> ಸುಜಾನಾ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ಕೋರ್ಸ್ನಲ್ಲಿ ನಡೆದ ಟೂರ್ನಿಯಲ್ಲಿ ತ್ರಿಶೂಲ್ ಮತ್ತು ಅದಿತಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. <br /> <br /> ಬಾಲಕಿಯರ 14 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಅದಿತಿ ಅಗ್ರಸ್ಥಾನ ಪಡೆದರು. ಭಾರತ (301) ಇತರ ತಂಡಗಳನ್ನು ಭಾರಿ ಅಂತರದಿಂದ ಹಿಂದಕ್ಕೆ ತಳ್ಳಿ ಚಾಂಪಿಯನ್ ಎನಿಸಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>