<p>ವಿಜಾಪುರ: ಎಲ್ಲೆಡೆ ಈಗ `ಬೆಳಕಿನ~ ಹಬ್ಬ ದೀಪಾವಳಿಯ ಸಡಗರ. ಮನೆಗಳ ಎದುರು ಹಣತೆಗಳ ಸಾಲು; ಆಕಾಶ ಬುಟ್ಟಿಗಳ ಸೊಬಗು. ಬಾನಲ್ಲಿ ಸಿಡಿಮದ್ದಿನ ಚಿತ್ತಾರ. ಲಕ್ಷ್ಮಿಯ ಆರಾಧನೆ. ಸಿಹಿ ತಿಂಡಿಗಳ ವಿನಿಮಯ...<br /> <br /> ದೀಪಗಳ ಹಬ್ಬ ತಂದಿರುವ ಸಂಭ್ರಮಕ್ಕೆ ಪಾರವೇ ಇಲ್ಲ. ಎರಡು ದಿನಗಳಿಂದ ಇಡೀ ವಿಜಾಪುರ ನಗರ ಎಣ್ಣೆ ದೀಪ-ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಹೆಂಗಳೆಯರು ಮನೆಯ ಎದುರಿನ ಬೀದಿಯಲ್ಲಿ ಪೈಪೋಟಿಗೆ ಬಿದ್ದವರಂತೆ ರಂಗೋಲಿಗಳನ್ನು ಬಿಡಿಸುತ್ತಿದ್ದಾರೆ. ಮನೆ-ಮನೆಯ ಅಂಗಳಗಳನ್ನು ಅಲಂಕರಿಸುತ್ತಿದ್ದಾರೆ. ಹೀಗಾಗಿ ಬೀದಿಗಳಲ್ಲಿಯ ಆಕರ್ಷಕ ರಂಗವಲ್ಲಿಯ ಚಿತ್ತಾರವೂ ಹಬ್ಬದ ಸೊಬಗನ್ನು ಇಮ್ಮಡಿಗೊಳಿಸಿದೆ.<br /> <br /> ಮುದ್ದು ಮಕ್ಕಳು ಕೈಯೊಲ್ಲೊಂದಿಷ್ಟು `ಸುರ್ಸುರ್ ಕಡ್ಡಿ~ಗಳನ್ನು ಹಿಡಿದುಕೊಂಡು ಮನೆಯ ಬಾಗಿಲಲ್ಲಿ ನಿಂತು ಬೆಳಗಿಸುತ್ತ ಸಂಭ್ರಮ ಪಡುತ್ತಿದ್ದಾರೆ. ಯುವಕರು ಬಾನೆತ್ತರಕ್ಕೆ ನೆಗೆಯುವ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ.<br /> <br /> ಮಹಿಳೆಯರು ಬಗೆ ಬಗೆಯ ಲಾಡು, ಚಕ್ಕಲಿ, ಚೂಡಾ ಮತ್ತಿತರ ಸಿಹಿ ಪದಾರ್ಥಗಳನ್ನು ತಯಾರಿಸಿಕೊಂಡು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ಭಾವೈಕ್ಯತೆಯ ಹಬ್ಬವೂ ಆಗಿದೆ.<br /> <br /> ಕಳೆದ ಕೆಲ ದಿನಗಳಿಂದ ನಗರದ ಬೇಕರಿ-ಸ್ವೀಟ್ಮಾರ್ಟ್ಗಳು ಜನರಿಂದ ಕಿಕ್ಕಿರಿದು ತುಂಬಿಹೋಗಿವೆ. ಬಟ್ಟೆ ಅಂಗಡಿ-ಚಿನ್ನಾಭರಣ ಅಂಗಡಿಗಳಲ್ಲಿ ಕಾಲಿಡಲೂ ಸ್ಥಳ ಸಿಗುತ್ತಿಲ್ಲ. ಹಣ್ಣು-ಹಂಪಲು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಖರೀದಿಯೂ ಅಷ್ಟೇ ಭರಾಟೆಯಿಂದ ನಡೆಯುತ್ತಿದೆ. ಇಲ್ಲಿಯ ಕೆ.ಸಿ. ಮಾರುಕಟ್ಟೆ, ಎಸ್.ಎಸ್. ರಸ್ತೆ, ಸರಾಫ್ ಬಜಾರ್, ಆಜಾದ್ ರಸ್ತೆ, ಎಲ್ಬಿಎಸ್ ಮತ್ತಿತರ ಮಾರುಕಟ್ಟೆಗಳು ಮಂಗಳವಾರ ಜನರಿಂದ ತುಂಬಿ ಹೋಗಿದ್ದವು.<br /> <br /> ಅಮಾವಾಸ್ಯೆಯ ದಿನವಾದ ಮಂಗಳವಾರ ಇಡೀ ನಗರ ಹಾಗೂ ಜಿಲ್ಲೆಯ ಅಂಗಡಿ-ಮುಂಗಟ್ಟುಗಳು, ಮನೆಗಳಲ್ಲಿ ಹಿಂದೂ ಸಮಾಜ ಬಾಂಧವರು ಲಕ್ಷ್ಮಿ ಪೂಜೆ ನೆರವೇರಿಸಿದರು.<br /> <br /> ಲಕ್ಷ್ಮಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ, ಪುಷ್ಪ-ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಿದರು. ಹೊಸ ಸೀರೆ-ಕುಬಸ ದೇವಿಗೆ ಸಮರ್ಪಿಸಿದರು. ಗರಿಗರಿಯಾದ ನೋಟು-ಚಿನ್ನ-ಬೆಳ್ಳಿ ಹಾಗೂ ಲೋಹದ ನಾಣ್ಯಗಳನ್ನು ದೇವಿಯ ಮುಂದಿಟ್ಟು ಪೂಜಿಸಿದರು. ಮುತ್ತೈದೆಯರಿಗೆ ಉಡಿ ತುಂಬಿದರು. `ಸಮೃದ್ಧಿ ಕೊಡು-ಸಂಪತ್ತು ವೃದ್ಧಿಸು ತಾಯಿ~ ಎಂದು ಪ್ರಾರ್ಥಿಸಿದರು. ಪೂಜೆಯ ನಂತರ ಬಂಧು-ಮಿತ್ರರು ಎಲ್ಲರೂ ಒಟ್ಟಾಗಿ ಊಟ ಮಾಡಿದರು. <br /> <br /> ದೀಪಾವಳಿ ಎಂದರೆ ವರ್ತಕರ ಪಾಲಿಗೆ ಹೊಸ ವರ್ಷದ ಸಂಭ್ರಮ. ಹಳೆಯ ಲೆಕ್ಕ ಚುಕ್ತಾ ಮಾಡಿ ಹೊಸ ಲೆಕ್ಕ ಇಡುವುದು ಪರಿಪಾಠ. ಅದೇ ಕಾರಣಕ್ಕೆ ಲಕ್ಷ್ಮಿ ಪೂಜೆಯೊಂದಿಗೆ ಹೊಸ ಲೆಕ್ಕದ ಪುಸ್ತಗಳನ್ನು ಇಟ್ಟು ಪೂಜಿಸಿದರು.<br /> <br /> ದೀಪಾವಳಿ ಪೂಜೆಗಾಗಿ ಫಲ ಇರುವ ಬಾಳೆ ದಿಂಡು, ತೆಂಗಿನ ಗರಿ, ಕಬ್ಬು, ಚೆಂಡು ಹೂವಿನ ಗಿಡ, ಬಗೆ ಬಗೆಯ ಹೂವುಗಳ ಮಾರಾಟ ಇಲ್ಲಿಯ ಅಂಬೇಡ್ಕರ ಚೌಕ್ನಲ್ಲಿ ಜೋರಾಗಿತ್ತು. ರೈತರು ಹಾಗೂ ವರ್ತಕರು ರಾತ್ರಿಯೇ ಇವುಗಳನ್ನು ತಂದು ಇಲ್ಲಿ ದಾಸ್ತಾನು ಮಾಡಿಟ್ಟುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: ಎಲ್ಲೆಡೆ ಈಗ `ಬೆಳಕಿನ~ ಹಬ್ಬ ದೀಪಾವಳಿಯ ಸಡಗರ. ಮನೆಗಳ ಎದುರು ಹಣತೆಗಳ ಸಾಲು; ಆಕಾಶ ಬುಟ್ಟಿಗಳ ಸೊಬಗು. ಬಾನಲ್ಲಿ ಸಿಡಿಮದ್ದಿನ ಚಿತ್ತಾರ. ಲಕ್ಷ್ಮಿಯ ಆರಾಧನೆ. ಸಿಹಿ ತಿಂಡಿಗಳ ವಿನಿಮಯ...<br /> <br /> ದೀಪಗಳ ಹಬ್ಬ ತಂದಿರುವ ಸಂಭ್ರಮಕ್ಕೆ ಪಾರವೇ ಇಲ್ಲ. ಎರಡು ದಿನಗಳಿಂದ ಇಡೀ ವಿಜಾಪುರ ನಗರ ಎಣ್ಣೆ ದೀಪ-ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಹೆಂಗಳೆಯರು ಮನೆಯ ಎದುರಿನ ಬೀದಿಯಲ್ಲಿ ಪೈಪೋಟಿಗೆ ಬಿದ್ದವರಂತೆ ರಂಗೋಲಿಗಳನ್ನು ಬಿಡಿಸುತ್ತಿದ್ದಾರೆ. ಮನೆ-ಮನೆಯ ಅಂಗಳಗಳನ್ನು ಅಲಂಕರಿಸುತ್ತಿದ್ದಾರೆ. ಹೀಗಾಗಿ ಬೀದಿಗಳಲ್ಲಿಯ ಆಕರ್ಷಕ ರಂಗವಲ್ಲಿಯ ಚಿತ್ತಾರವೂ ಹಬ್ಬದ ಸೊಬಗನ್ನು ಇಮ್ಮಡಿಗೊಳಿಸಿದೆ.<br /> <br /> ಮುದ್ದು ಮಕ್ಕಳು ಕೈಯೊಲ್ಲೊಂದಿಷ್ಟು `ಸುರ್ಸುರ್ ಕಡ್ಡಿ~ಗಳನ್ನು ಹಿಡಿದುಕೊಂಡು ಮನೆಯ ಬಾಗಿಲಲ್ಲಿ ನಿಂತು ಬೆಳಗಿಸುತ್ತ ಸಂಭ್ರಮ ಪಡುತ್ತಿದ್ದಾರೆ. ಯುವಕರು ಬಾನೆತ್ತರಕ್ಕೆ ನೆಗೆಯುವ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ.<br /> <br /> ಮಹಿಳೆಯರು ಬಗೆ ಬಗೆಯ ಲಾಡು, ಚಕ್ಕಲಿ, ಚೂಡಾ ಮತ್ತಿತರ ಸಿಹಿ ಪದಾರ್ಥಗಳನ್ನು ತಯಾರಿಸಿಕೊಂಡು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ಭಾವೈಕ್ಯತೆಯ ಹಬ್ಬವೂ ಆಗಿದೆ.<br /> <br /> ಕಳೆದ ಕೆಲ ದಿನಗಳಿಂದ ನಗರದ ಬೇಕರಿ-ಸ್ವೀಟ್ಮಾರ್ಟ್ಗಳು ಜನರಿಂದ ಕಿಕ್ಕಿರಿದು ತುಂಬಿಹೋಗಿವೆ. ಬಟ್ಟೆ ಅಂಗಡಿ-ಚಿನ್ನಾಭರಣ ಅಂಗಡಿಗಳಲ್ಲಿ ಕಾಲಿಡಲೂ ಸ್ಥಳ ಸಿಗುತ್ತಿಲ್ಲ. ಹಣ್ಣು-ಹಂಪಲು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಖರೀದಿಯೂ ಅಷ್ಟೇ ಭರಾಟೆಯಿಂದ ನಡೆಯುತ್ತಿದೆ. ಇಲ್ಲಿಯ ಕೆ.ಸಿ. ಮಾರುಕಟ್ಟೆ, ಎಸ್.ಎಸ್. ರಸ್ತೆ, ಸರಾಫ್ ಬಜಾರ್, ಆಜಾದ್ ರಸ್ತೆ, ಎಲ್ಬಿಎಸ್ ಮತ್ತಿತರ ಮಾರುಕಟ್ಟೆಗಳು ಮಂಗಳವಾರ ಜನರಿಂದ ತುಂಬಿ ಹೋಗಿದ್ದವು.<br /> <br /> ಅಮಾವಾಸ್ಯೆಯ ದಿನವಾದ ಮಂಗಳವಾರ ಇಡೀ ನಗರ ಹಾಗೂ ಜಿಲ್ಲೆಯ ಅಂಗಡಿ-ಮುಂಗಟ್ಟುಗಳು, ಮನೆಗಳಲ್ಲಿ ಹಿಂದೂ ಸಮಾಜ ಬಾಂಧವರು ಲಕ್ಷ್ಮಿ ಪೂಜೆ ನೆರವೇರಿಸಿದರು.<br /> <br /> ಲಕ್ಷ್ಮಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ, ಪುಷ್ಪ-ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಿದರು. ಹೊಸ ಸೀರೆ-ಕುಬಸ ದೇವಿಗೆ ಸಮರ್ಪಿಸಿದರು. ಗರಿಗರಿಯಾದ ನೋಟು-ಚಿನ್ನ-ಬೆಳ್ಳಿ ಹಾಗೂ ಲೋಹದ ನಾಣ್ಯಗಳನ್ನು ದೇವಿಯ ಮುಂದಿಟ್ಟು ಪೂಜಿಸಿದರು. ಮುತ್ತೈದೆಯರಿಗೆ ಉಡಿ ತುಂಬಿದರು. `ಸಮೃದ್ಧಿ ಕೊಡು-ಸಂಪತ್ತು ವೃದ್ಧಿಸು ತಾಯಿ~ ಎಂದು ಪ್ರಾರ್ಥಿಸಿದರು. ಪೂಜೆಯ ನಂತರ ಬಂಧು-ಮಿತ್ರರು ಎಲ್ಲರೂ ಒಟ್ಟಾಗಿ ಊಟ ಮಾಡಿದರು. <br /> <br /> ದೀಪಾವಳಿ ಎಂದರೆ ವರ್ತಕರ ಪಾಲಿಗೆ ಹೊಸ ವರ್ಷದ ಸಂಭ್ರಮ. ಹಳೆಯ ಲೆಕ್ಕ ಚುಕ್ತಾ ಮಾಡಿ ಹೊಸ ಲೆಕ್ಕ ಇಡುವುದು ಪರಿಪಾಠ. ಅದೇ ಕಾರಣಕ್ಕೆ ಲಕ್ಷ್ಮಿ ಪೂಜೆಯೊಂದಿಗೆ ಹೊಸ ಲೆಕ್ಕದ ಪುಸ್ತಗಳನ್ನು ಇಟ್ಟು ಪೂಜಿಸಿದರು.<br /> <br /> ದೀಪಾವಳಿ ಪೂಜೆಗಾಗಿ ಫಲ ಇರುವ ಬಾಳೆ ದಿಂಡು, ತೆಂಗಿನ ಗರಿ, ಕಬ್ಬು, ಚೆಂಡು ಹೂವಿನ ಗಿಡ, ಬಗೆ ಬಗೆಯ ಹೂವುಗಳ ಮಾರಾಟ ಇಲ್ಲಿಯ ಅಂಬೇಡ್ಕರ ಚೌಕ್ನಲ್ಲಿ ಜೋರಾಗಿತ್ತು. ರೈತರು ಹಾಗೂ ವರ್ತಕರು ರಾತ್ರಿಯೇ ಇವುಗಳನ್ನು ತಂದು ಇಲ್ಲಿ ದಾಸ್ತಾನು ಮಾಡಿಟ್ಟುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>