<p><strong>ಪಣಜಿ (ಐಎಎನ್ಎಸ್</strong>): ಅನಾರೋಗ್ಯದಿಂದಾಗಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಗೈರುಹಾಜರಿದ್ದ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಪೌರಾಣಿಕ ಹಾಗೂ ಐತಿಹಾಸಿಕ ವ್ಯಕ್ತಿಗಳನ್ನು ಪ್ರಸ್ತಾಪಿಸುವ ಮೂಲಕ ಕಾರ್ಯಕರ್ತರೊಂದಿಗೆ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.<br /> <br /> `ಕೃಷ್ಣನ ವಿಶ್ವರೂಪ, ಭೀಷ್ಮ ಪಿತಾಮಹ, ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್, ಮುಸಲೋನಿ...ಹೀಗೆ ಹರಿಯುತ್ತ ಹೋಗುತ್ತದೆ ಬ್ಲಾಗ್ನಲ್ಲಿ ಅಡ್ವಾಣಿ ಭಾವ ಲಹರಿ.<br /> <br /> ತಮ್ಮ ಈಗಿನ ಸ್ಥಿತಿಯನ್ನು ಅವರು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನಿಗೆ ಹೋಲಿಸಿಕೊಳ್ಳುತ್ತಾರೆ. ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್ ಮತ್ತು ಮುಸಲೋನಿ ಕುರಿತ ಕಥಾನಕವೊಂದನ್ನು ಅಡ್ವಾಣಿ ತಮ್ಮ ಬ್ಲಾಗ್ನಲ್ಲಿ ಉಲ್ಲೇಖಿಸಿದ್ದಾರೆ.<br /> <br /> ` ಅದು ಎರಡನೇ ಮಹಾಯುದ್ಧದ ಕಾಲ. ನಾವಿಬ್ಬರು ಮಾಡಿದ ಪಾಪಕ್ಕೆ ಸತ್ತ ಮೇಲೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹಿಟ್ಲರ್ ಮುಸಲೋನಿಗೆ ಹೇಳುತ್ತಾನೆ. ಸ್ವರ್ಗಕ್ಕೆ ಹೋಗಲು ಪೋಪ್ ನೆರವು ಪಡೆಯುವುದಾಗಿ ಮುಸಲೋನಿ ಮರು ನುಡಿಯುತ್ತಾನೆ. ಹಿಟ್ಲರ್ ಕೂಡ ಇದೇ ಮಾತು ಹೇಳುತ್ತಾನೆ. ಕೊನೆಗೆ ಈ ಇಬ್ಬರು ಸರ್ವಾಧಿಕಾರಿಗಳು ನರಕಕ್ಕೆ ಹೋದರೆ, ಪೋಪ್ ಮಾತ್ರ ಸ್ವರ್ಗ ಸೇರಿದರು' ಎಂಬಲ್ಲಿಗೆ ಕಥೆ ಮುಗಿಯುತ್ತದೆ.<br /> <br /> ಮೋದಿಗೆ ಪಕ್ಷದಲ್ಲಿ ಮಹತ್ವದ ಪಾತ್ರ ನೀಡುವುದನ್ನು ವಿರೋಧಿಸಿದ್ದಕ್ಕೆ ಪ್ರತಿಭಟನೆ ಎದುರಿಸಿದ ಬೆನ್ನಲ್ಲಿಯೇ ಅಡ್ವಾಣಿ ತಮ್ಮ ಬ್ಲಾಗ್ನಲ್ಲಿ ಸರ್ವಾಧಿಕಾರಿಗಳ ಪ್ರಸ್ತಾಪ ಮಾಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಕೆಲ ದಿನಗಳ ಹಿಂದೆ ಗೋವಾದ ಕಾಂಗ್ರೆಸ್ ಸಂಸದ ಶಾಂತಾರಾಂ ನಾಯ್ಕ ಕೂಡ ಮೋದಿ ಅವರನ್ನು ` ಹಿಟ್ಲರ್'ಗೆ ಹೋಲಿಸಿದ್ದರು.<br /> <br /> <strong>ಅಡ್ವಾಣಿಗೆ ವಿವಾದ ಹೊಸದಲ್ಲ...</strong><br /> ಹಿಂದೆಯೂ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.<br /> <br /> <strong>2012, ಮೇ 26</strong>: ಮುಂಬೈನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ನಡೆದ ರ್ಯಾಲಿಯಲ್ಲಿ ಗೈರುಹಾಜರಿ. ನಿತಿನ್ ಗಡ್ಕರಿ ಅವರನ್ನು ಎರಡನೇ ಅವಧಿಗೆ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅಸಮಾಧಾನಗೊಂಡು ರ್ಯಾಲಿ ತಪ್ಪಿಸಿಕೊಂಡ ಅಡ್ವಾಣಿ.</p>.<p><br /> <strong>2012, ಸೆಪ್ಟೆಂಬರ್ </strong>3: ಕಾಂಗ್ರೆಸ್ ಹಾಗೂ ಬಿಜೆಪಿಯೇತರ ರಾಜಕಾರಣಿ ದೇಶದ ಮುಂದಿನ ಪ್ರಧಾನಿಯಾಗಲಿ ಎಂದು ನಿರೀಕ್ಷಿಸುತ್ತೇನೆ.<br /> <br /> <strong>2013, ಮಾರ್ಚ್ </strong>9: ಈಗ ಆಡಳಿತದಲ್ಲಿರುವ ಪಕ್ಷವನ್ನು ಜನ ವಿರೋಧಿಸುತ್ತಿದ್ದಾರೆ. ಅದೇ ರೀತಿ ಬಿಜೆಪಿ ಬಗ್ಗೆಯೂ ಅವರಿಗೆ ಭ್ರಮನಿರಸನವಾಗಿದೆ.<br /> <br /> <strong>2013, ಮೇ 12</strong>: ಕರ್ನಾಟಕದಲ್ಲಿ ಬಿಜೆಪಿ ಗೆದ್ದಿದ್ದರೆ ನನಗೆ ಅಚ್ಚರಿಯಾಗುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ (ಐಎಎನ್ಎಸ್</strong>): ಅನಾರೋಗ್ಯದಿಂದಾಗಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಗೈರುಹಾಜರಿದ್ದ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಪೌರಾಣಿಕ ಹಾಗೂ ಐತಿಹಾಸಿಕ ವ್ಯಕ್ತಿಗಳನ್ನು ಪ್ರಸ್ತಾಪಿಸುವ ಮೂಲಕ ಕಾರ್ಯಕರ್ತರೊಂದಿಗೆ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.<br /> <br /> `ಕೃಷ್ಣನ ವಿಶ್ವರೂಪ, ಭೀಷ್ಮ ಪಿತಾಮಹ, ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್, ಮುಸಲೋನಿ...ಹೀಗೆ ಹರಿಯುತ್ತ ಹೋಗುತ್ತದೆ ಬ್ಲಾಗ್ನಲ್ಲಿ ಅಡ್ವಾಣಿ ಭಾವ ಲಹರಿ.<br /> <br /> ತಮ್ಮ ಈಗಿನ ಸ್ಥಿತಿಯನ್ನು ಅವರು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನಿಗೆ ಹೋಲಿಸಿಕೊಳ್ಳುತ್ತಾರೆ. ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್ ಮತ್ತು ಮುಸಲೋನಿ ಕುರಿತ ಕಥಾನಕವೊಂದನ್ನು ಅಡ್ವಾಣಿ ತಮ್ಮ ಬ್ಲಾಗ್ನಲ್ಲಿ ಉಲ್ಲೇಖಿಸಿದ್ದಾರೆ.<br /> <br /> ` ಅದು ಎರಡನೇ ಮಹಾಯುದ್ಧದ ಕಾಲ. ನಾವಿಬ್ಬರು ಮಾಡಿದ ಪಾಪಕ್ಕೆ ಸತ್ತ ಮೇಲೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹಿಟ್ಲರ್ ಮುಸಲೋನಿಗೆ ಹೇಳುತ್ತಾನೆ. ಸ್ವರ್ಗಕ್ಕೆ ಹೋಗಲು ಪೋಪ್ ನೆರವು ಪಡೆಯುವುದಾಗಿ ಮುಸಲೋನಿ ಮರು ನುಡಿಯುತ್ತಾನೆ. ಹಿಟ್ಲರ್ ಕೂಡ ಇದೇ ಮಾತು ಹೇಳುತ್ತಾನೆ. ಕೊನೆಗೆ ಈ ಇಬ್ಬರು ಸರ್ವಾಧಿಕಾರಿಗಳು ನರಕಕ್ಕೆ ಹೋದರೆ, ಪೋಪ್ ಮಾತ್ರ ಸ್ವರ್ಗ ಸೇರಿದರು' ಎಂಬಲ್ಲಿಗೆ ಕಥೆ ಮುಗಿಯುತ್ತದೆ.<br /> <br /> ಮೋದಿಗೆ ಪಕ್ಷದಲ್ಲಿ ಮಹತ್ವದ ಪಾತ್ರ ನೀಡುವುದನ್ನು ವಿರೋಧಿಸಿದ್ದಕ್ಕೆ ಪ್ರತಿಭಟನೆ ಎದುರಿಸಿದ ಬೆನ್ನಲ್ಲಿಯೇ ಅಡ್ವಾಣಿ ತಮ್ಮ ಬ್ಲಾಗ್ನಲ್ಲಿ ಸರ್ವಾಧಿಕಾರಿಗಳ ಪ್ರಸ್ತಾಪ ಮಾಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಕೆಲ ದಿನಗಳ ಹಿಂದೆ ಗೋವಾದ ಕಾಂಗ್ರೆಸ್ ಸಂಸದ ಶಾಂತಾರಾಂ ನಾಯ್ಕ ಕೂಡ ಮೋದಿ ಅವರನ್ನು ` ಹಿಟ್ಲರ್'ಗೆ ಹೋಲಿಸಿದ್ದರು.<br /> <br /> <strong>ಅಡ್ವಾಣಿಗೆ ವಿವಾದ ಹೊಸದಲ್ಲ...</strong><br /> ಹಿಂದೆಯೂ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.<br /> <br /> <strong>2012, ಮೇ 26</strong>: ಮುಂಬೈನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ನಡೆದ ರ್ಯಾಲಿಯಲ್ಲಿ ಗೈರುಹಾಜರಿ. ನಿತಿನ್ ಗಡ್ಕರಿ ಅವರನ್ನು ಎರಡನೇ ಅವಧಿಗೆ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅಸಮಾಧಾನಗೊಂಡು ರ್ಯಾಲಿ ತಪ್ಪಿಸಿಕೊಂಡ ಅಡ್ವಾಣಿ.</p>.<p><br /> <strong>2012, ಸೆಪ್ಟೆಂಬರ್ </strong>3: ಕಾಂಗ್ರೆಸ್ ಹಾಗೂ ಬಿಜೆಪಿಯೇತರ ರಾಜಕಾರಣಿ ದೇಶದ ಮುಂದಿನ ಪ್ರಧಾನಿಯಾಗಲಿ ಎಂದು ನಿರೀಕ್ಷಿಸುತ್ತೇನೆ.<br /> <br /> <strong>2013, ಮಾರ್ಚ್ </strong>9: ಈಗ ಆಡಳಿತದಲ್ಲಿರುವ ಪಕ್ಷವನ್ನು ಜನ ವಿರೋಧಿಸುತ್ತಿದ್ದಾರೆ. ಅದೇ ರೀತಿ ಬಿಜೆಪಿ ಬಗ್ಗೆಯೂ ಅವರಿಗೆ ಭ್ರಮನಿರಸನವಾಗಿದೆ.<br /> <br /> <strong>2013, ಮೇ 12</strong>: ಕರ್ನಾಟಕದಲ್ಲಿ ಬಿಜೆಪಿ ಗೆದ್ದಿದ್ದರೆ ನನಗೆ ಅಚ್ಚರಿಯಾಗುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>