<p><strong>ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಆಫ್ಸ್ಪಿನ್ನರ್ ಭಜ್ಜಿ ಎನ್ನುವುದು ನಿಸ್ಸಂಶಯ. <br /> <br /> ಆದರೆ ಲಭಿಸಿದ್ದ ಯಶಸ್ಸಿನ ಕಿರೀಟದ ಭಾರವನ್ನು ಸಹಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ಅವರು ಎಡವಿದರು. ಇಂಗ್ಲೆಂಡ್ ಪ್ರವಾಸದಲ್ಲಿ ಅವರು ತೋರಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ</strong><br /> <br /> `ದೂಸ್ರಾ~ ಪರಿಣಿತ ಹರಭಜನ್ ಸಿಂಗ್ ರಟ್ಟೆ ಕಸುವು ಮತ್ತು ಬೆರಳುಗಳ ಕೌಶಲ್ಯ ಮುಗಿದು ಹೋಯಿತಾ? <br /> ಅ. 14ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅವರನ್ನು ಕೈಬಿಟ್ಟಿರುವ ಬೆನ್ನ ಹಿಂದೆಯೇ ಇಂತಹ ಹಲವು ಪ್ರಶ್ನೆಗಳು ಹುಟ್ಟಿವೆ. <br /> <br /> ಅವರನ್ನು ತಂಡದಿಂದ ಕೈಬಿಟ್ಟಿದ್ದು ಸರಿಯಾದ ನಿರ್ಧಾರವೇ ಎನ್ನುವುದನ್ನು ಅವರ ಇತ್ತೀಚಿಗಿನ ಸಾಧನೆಯ ಅಂಕಿ ಅಂಶಗಳು ಸಮರ್ಥಿಸುತ್ತವೆ. <br /> <br /> ಇಂಗ್ಲೆಂಡ್ನಲ್ಲಿ ಈಚೆಗೆ ಸಾಲು ಸಾಲು ಸೋಲು ಕಂಡ ಭಾರತಕ್ಕೆ ಭಜ್ಜಿಯ ಕಳಪೆ ಪ್ರದರ್ಶನವೂ ಸವಾಲಾಗಿತ್ತು. ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಭಜ್ಜಿ ಪಡೆದದ್ದು ಕೇವಲ ಎರಡು ವಿಕೆಟ್ ಮಾತ್ರ.ಅದೂ 143.50 ಸರಾಸರಿಯಲ್ಲಿ. <br /> <br /> ಇದರಿಂದಾಗಿ ಅವರು ಇದಕ್ಕೂ ಮುನ್ನ ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಗಳಲ್ಲಿ ಪಡೆದಿದ್ದ 26 ವಿಕೆಟ್ಗಳ ಸಾಧನೆ ಮಸುಕಾಗಿ ಹೋಯಿತು.ಇಂಗ್ಲೆಂಡ್ನಲ್ಲಿ ಮೂರನೇ ಟೆಸ್ಟ್ನಿಂದ ಹೊರಗುಳಿಯಬೇಕಾಯಿತು. <br /> <br /> ಆದರೆ, ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಆಫ್ಸ್ಪಿನ್ನರ್ ಭಜ್ಜಿ ಎನ್ನುವುದು ನಿಸ್ಸಂಶಯ. ಆದರೂ ಯಶಸ್ಸಿನ ಕಿರೀಟದ ಭಾರವನ್ನುಸಹಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ಅವರು ಎವಿದರು.<br /> <br /> ಜೆಂಟಲ್ಮೆನ್ಗಳ ಆಟ ಕ್ರಿಕೆಟ್ನ ವಿವಾದಾಸ್ಪದ ವ್ಯಕ್ತಿಗಳಲ್ಲಿ ಭಜ್ಜಿಗೂ ಪ್ರಮುಖ ಸ್ಥಾನವಿದೆ. ಆಟದ ಅಂಗಳದಲ್ಲಿ ಮತ್ತು ಮೈದಾನದ ಹೊರಗೆ ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಓಡಾಡಿದವರು.<br /> <br /> ಆಸ್ಟ್ರೇಲಿಯ ತಂಡದ ವಿರುದ್ಧದ ಸರಣಿಯಲ್ಲಿ ಜನಾಂಗೀಯ ನಿಂದನೆ ವಿವಾದವನ್ನು ಎದುರಿಸಿದವರು. ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ (ಐಪಿಎಲ್) ಎಸ್. ಶ್ರೀಶಾಂತ್ ಕಪಾಳಕ್ಕೆ ಹೊಡೆದು ಸುದ್ದಿ ಮಾಡಿದವರು. ಅಷ್ಟಕ್ಕೆ ಸಾಲದೆಂಬಂತೆ ಕಾರು ಓಡಿಸುವಾಗ ನಿಯಮ ಉಲ್ಲಂಘಿಸಿ ದಂಡನೆಗೊಳಗಾಗಿದ್ದು ಆಯಿತು.<br /> </p>.<p>ಇದಕ್ಕೆಲ್ಲ ಕಾರಣ ಭಜ್ಜಿಯ ಮೂಗಿನ ಮೇಲೆ ಇರುತ್ತಿದ್ದ ಸಿಟ್ಟು. ಆದರೆ, ಈ ಮುಂಗೋಪಿ ಹುಡುಗನ ಇನ್ನೊಂದು ಮುಖವೂ ಇದೆ. ಆತ ಒಬ್ಬ ಒಳ್ಳೆಯ ಆಫ್ಸ್ಪಿನ್ನರ್ ಆಗಿ ಭಾರತ ತಂಡಕ್ಕೆ ಹಲವು ಅಮೂಲ್ಯ ಕೊಡುಗೆ ಕೊಟ್ಟಿದ್ದರು. <br /> <br /> 1998ರ ಏಪ್ರಿಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಪದಾರ್ಪಣೆ ಮಾಡಿದ ಅವರು 2004ರ ಡಿಸೆಂಬರ್ವರೆಗೆ ತಾವಾಡಿದ 93 ಪಂದ್ಯಗಳಲ್ಲಿ 117 ವಿಕೆಟ್ಗಳನ್ನು ಕಿತ್ತರು. ಆದರೆ 2005ರಿಂದ ಇಲ್ಲಿಯವರೆಗೆ ಅವರು 136 ಪಂದ್ಯಗಳಿಂದ ಪಡೆದಿರುವುದು 142 ವಿಕೆಟ್ಗಳನ್ನು ಮಾತ್ರ. <br /> <br /> ಈ ಅಂಕಿಸಂಖ್ಯೆಯಿಂದ ಅವರ ಏಕದಿನ ಬೌಲಿಂಗ್ ಸಾಧನೆಯ ಕುಸಿತವನ್ನೂ ಅಳೆಯಬಹುದು. ಯಾವುದೇ ಬೌಲರ್ನಿಂದ ನಿರಂತರ ಉತ್ತಮ ಸಾಧನೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲವಾದರೂ, ಪರಿಪಕ್ವತೆಯನ್ನು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ. </p>.<p>ಟ್ವೆಂಟಿ-20, ಏಕದಿನ ಮತ್ತು ಟೆಸ್ಟ್ ಮಾದರಿಗಳೆಲ್ಲವನ್ನೂ ರೂಢಿಸಿಕೊಂಡು ಬೌಲಿಂಗ್ ಮಾಡಿದ ಭಜ್ಜಿ ತೋಳುಗಳು ಸೋತಿರಬಹುದು. ಅದರೆ, ವಿಶ್ವಕಪ್ ವಿಜೇತ ತಂಡವಾಗಿ ಮೆರೆಯುತ್ತಿದ್ದ ಭಾರತ ತಂಡಕ್ಕೆ ಇಂಗ್ಲೆಂಡ್ ಆರದ ಗಾಯ ನೀಡಿದೆ. <br /> <br /> ಆ ಗಾಯದ ಮೇಲೆ ಉಪ್ಪು ಸವರುವ ಉದ್ದೇಶದಿಂದಲೇ ಹೈದರಾಬಾದಿಗೆ ಕುಕ್ ಪಡೆ ಬಂದಿಳಿದಿದೆ. ಇಂತಹ ಸಂದರ್ಭದಲ್ಲಿಯೂ ಭಜ್ಜಿಯನ್ನು ಬಗಲಿಗೆ ಇಟ್ಟುಕೊಂಡು ಹೋರಾಡುವ ಧೈರ್ಯ ಯಾವ ನಾಯಕನಿಗೂ ಇರುವುದಿಲ್ಲ. <br /> <br /> ಅವರ ಸ್ಥಾನಕ್ಕೆ ಬಂದಿರುವ ಆರ್. ಅಶ್ವಿನ್ ಮೇಲೆ ಅಪಾರ ನಿರೀಕ್ಷೆಯ ಭಾರವಿದೆ. ಅಶ್ವಿನ್ ಮಿಂಚಿಬಿಟ್ಟರೆ ಭಜ್ಜಿ ಮತ್ತೆ ತಂಡದೊಳಗೆ ಬರಲು ಸಾಕಷ್ಟು ಪರಿಶ್ರಮ ಪಡಬೇಕು. ಇಲ್ಲದಿದ್ದರೆ ಕ್ರಿಕೆಟ್ ಆಟಕ್ಕೆ ಬೈಬೈ ಹೇಳಬೇಕು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಆಫ್ಸ್ಪಿನ್ನರ್ ಭಜ್ಜಿ ಎನ್ನುವುದು ನಿಸ್ಸಂಶಯ. <br /> <br /> ಆದರೆ ಲಭಿಸಿದ್ದ ಯಶಸ್ಸಿನ ಕಿರೀಟದ ಭಾರವನ್ನು ಸಹಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ಅವರು ಎಡವಿದರು. ಇಂಗ್ಲೆಂಡ್ ಪ್ರವಾಸದಲ್ಲಿ ಅವರು ತೋರಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ</strong><br /> <br /> `ದೂಸ್ರಾ~ ಪರಿಣಿತ ಹರಭಜನ್ ಸಿಂಗ್ ರಟ್ಟೆ ಕಸುವು ಮತ್ತು ಬೆರಳುಗಳ ಕೌಶಲ್ಯ ಮುಗಿದು ಹೋಯಿತಾ? <br /> ಅ. 14ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅವರನ್ನು ಕೈಬಿಟ್ಟಿರುವ ಬೆನ್ನ ಹಿಂದೆಯೇ ಇಂತಹ ಹಲವು ಪ್ರಶ್ನೆಗಳು ಹುಟ್ಟಿವೆ. <br /> <br /> ಅವರನ್ನು ತಂಡದಿಂದ ಕೈಬಿಟ್ಟಿದ್ದು ಸರಿಯಾದ ನಿರ್ಧಾರವೇ ಎನ್ನುವುದನ್ನು ಅವರ ಇತ್ತೀಚಿಗಿನ ಸಾಧನೆಯ ಅಂಕಿ ಅಂಶಗಳು ಸಮರ್ಥಿಸುತ್ತವೆ. <br /> <br /> ಇಂಗ್ಲೆಂಡ್ನಲ್ಲಿ ಈಚೆಗೆ ಸಾಲು ಸಾಲು ಸೋಲು ಕಂಡ ಭಾರತಕ್ಕೆ ಭಜ್ಜಿಯ ಕಳಪೆ ಪ್ರದರ್ಶನವೂ ಸವಾಲಾಗಿತ್ತು. ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಭಜ್ಜಿ ಪಡೆದದ್ದು ಕೇವಲ ಎರಡು ವಿಕೆಟ್ ಮಾತ್ರ.ಅದೂ 143.50 ಸರಾಸರಿಯಲ್ಲಿ. <br /> <br /> ಇದರಿಂದಾಗಿ ಅವರು ಇದಕ್ಕೂ ಮುನ್ನ ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಗಳಲ್ಲಿ ಪಡೆದಿದ್ದ 26 ವಿಕೆಟ್ಗಳ ಸಾಧನೆ ಮಸುಕಾಗಿ ಹೋಯಿತು.ಇಂಗ್ಲೆಂಡ್ನಲ್ಲಿ ಮೂರನೇ ಟೆಸ್ಟ್ನಿಂದ ಹೊರಗುಳಿಯಬೇಕಾಯಿತು. <br /> <br /> ಆದರೆ, ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಆಫ್ಸ್ಪಿನ್ನರ್ ಭಜ್ಜಿ ಎನ್ನುವುದು ನಿಸ್ಸಂಶಯ. ಆದರೂ ಯಶಸ್ಸಿನ ಕಿರೀಟದ ಭಾರವನ್ನುಸಹಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ಅವರು ಎವಿದರು.<br /> <br /> ಜೆಂಟಲ್ಮೆನ್ಗಳ ಆಟ ಕ್ರಿಕೆಟ್ನ ವಿವಾದಾಸ್ಪದ ವ್ಯಕ್ತಿಗಳಲ್ಲಿ ಭಜ್ಜಿಗೂ ಪ್ರಮುಖ ಸ್ಥಾನವಿದೆ. ಆಟದ ಅಂಗಳದಲ್ಲಿ ಮತ್ತು ಮೈದಾನದ ಹೊರಗೆ ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಓಡಾಡಿದವರು.<br /> <br /> ಆಸ್ಟ್ರೇಲಿಯ ತಂಡದ ವಿರುದ್ಧದ ಸರಣಿಯಲ್ಲಿ ಜನಾಂಗೀಯ ನಿಂದನೆ ವಿವಾದವನ್ನು ಎದುರಿಸಿದವರು. ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ (ಐಪಿಎಲ್) ಎಸ್. ಶ್ರೀಶಾಂತ್ ಕಪಾಳಕ್ಕೆ ಹೊಡೆದು ಸುದ್ದಿ ಮಾಡಿದವರು. ಅಷ್ಟಕ್ಕೆ ಸಾಲದೆಂಬಂತೆ ಕಾರು ಓಡಿಸುವಾಗ ನಿಯಮ ಉಲ್ಲಂಘಿಸಿ ದಂಡನೆಗೊಳಗಾಗಿದ್ದು ಆಯಿತು.<br /> </p>.<p>ಇದಕ್ಕೆಲ್ಲ ಕಾರಣ ಭಜ್ಜಿಯ ಮೂಗಿನ ಮೇಲೆ ಇರುತ್ತಿದ್ದ ಸಿಟ್ಟು. ಆದರೆ, ಈ ಮುಂಗೋಪಿ ಹುಡುಗನ ಇನ್ನೊಂದು ಮುಖವೂ ಇದೆ. ಆತ ಒಬ್ಬ ಒಳ್ಳೆಯ ಆಫ್ಸ್ಪಿನ್ನರ್ ಆಗಿ ಭಾರತ ತಂಡಕ್ಕೆ ಹಲವು ಅಮೂಲ್ಯ ಕೊಡುಗೆ ಕೊಟ್ಟಿದ್ದರು. <br /> <br /> 1998ರ ಏಪ್ರಿಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಪದಾರ್ಪಣೆ ಮಾಡಿದ ಅವರು 2004ರ ಡಿಸೆಂಬರ್ವರೆಗೆ ತಾವಾಡಿದ 93 ಪಂದ್ಯಗಳಲ್ಲಿ 117 ವಿಕೆಟ್ಗಳನ್ನು ಕಿತ್ತರು. ಆದರೆ 2005ರಿಂದ ಇಲ್ಲಿಯವರೆಗೆ ಅವರು 136 ಪಂದ್ಯಗಳಿಂದ ಪಡೆದಿರುವುದು 142 ವಿಕೆಟ್ಗಳನ್ನು ಮಾತ್ರ. <br /> <br /> ಈ ಅಂಕಿಸಂಖ್ಯೆಯಿಂದ ಅವರ ಏಕದಿನ ಬೌಲಿಂಗ್ ಸಾಧನೆಯ ಕುಸಿತವನ್ನೂ ಅಳೆಯಬಹುದು. ಯಾವುದೇ ಬೌಲರ್ನಿಂದ ನಿರಂತರ ಉತ್ತಮ ಸಾಧನೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲವಾದರೂ, ಪರಿಪಕ್ವತೆಯನ್ನು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ. </p>.<p>ಟ್ವೆಂಟಿ-20, ಏಕದಿನ ಮತ್ತು ಟೆಸ್ಟ್ ಮಾದರಿಗಳೆಲ್ಲವನ್ನೂ ರೂಢಿಸಿಕೊಂಡು ಬೌಲಿಂಗ್ ಮಾಡಿದ ಭಜ್ಜಿ ತೋಳುಗಳು ಸೋತಿರಬಹುದು. ಅದರೆ, ವಿಶ್ವಕಪ್ ವಿಜೇತ ತಂಡವಾಗಿ ಮೆರೆಯುತ್ತಿದ್ದ ಭಾರತ ತಂಡಕ್ಕೆ ಇಂಗ್ಲೆಂಡ್ ಆರದ ಗಾಯ ನೀಡಿದೆ. <br /> <br /> ಆ ಗಾಯದ ಮೇಲೆ ಉಪ್ಪು ಸವರುವ ಉದ್ದೇಶದಿಂದಲೇ ಹೈದರಾಬಾದಿಗೆ ಕುಕ್ ಪಡೆ ಬಂದಿಳಿದಿದೆ. ಇಂತಹ ಸಂದರ್ಭದಲ್ಲಿಯೂ ಭಜ್ಜಿಯನ್ನು ಬಗಲಿಗೆ ಇಟ್ಟುಕೊಂಡು ಹೋರಾಡುವ ಧೈರ್ಯ ಯಾವ ನಾಯಕನಿಗೂ ಇರುವುದಿಲ್ಲ. <br /> <br /> ಅವರ ಸ್ಥಾನಕ್ಕೆ ಬಂದಿರುವ ಆರ್. ಅಶ್ವಿನ್ ಮೇಲೆ ಅಪಾರ ನಿರೀಕ್ಷೆಯ ಭಾರವಿದೆ. ಅಶ್ವಿನ್ ಮಿಂಚಿಬಿಟ್ಟರೆ ಭಜ್ಜಿ ಮತ್ತೆ ತಂಡದೊಳಗೆ ಬರಲು ಸಾಕಷ್ಟು ಪರಿಶ್ರಮ ಪಡಬೇಕು. ಇಲ್ಲದಿದ್ದರೆ ಕ್ರಿಕೆಟ್ ಆಟಕ್ಕೆ ಬೈಬೈ ಹೇಳಬೇಕು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>