<p><strong>ಮುನಿರಾಬಾದ್: </strong>ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರವಾಗಿ ಬತ್ತ ಬೆಳೆಯಲಾಗುತ್ತಿದ್ದು ಸುಗ್ಗಿಯ ಬೆಳೆಯನ್ನು ತೆಗೆದುಕೊಂಡ ರೈತ ಬೇಸಿಗೆ ಬೆಳೆಗೆ ತಯಾರಿ ನಡೆಸಿದ್ದು ಹೊಲಕ್ಕೆ ಬೆಂಕಿ ಹಾಕುವ ಕೆಲಸ ರೈತರಿಂದ ಅವ್ಯಾಹತವಾಗಿ ನಡೆದಿದೆ.<br /> <br /> ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ತಳಿ ವಿಜ್ಞಾನಿ ಪ್ರೋ.ಮೊಹ್ಮದ್ ಇಬ್ರಾಹಿಂ ಹೇಳುವಂತೆ ಗ್ರಾಮೀಣ ಜನರ ಮೂಲಾಧಾರ ಬೇಸಾಯ, ಅದಕ್ಕೆ ಮೂಲಾಧಾರ ಮಣ್ಣು. ಮಣ್ಣಿನಲ್ಲಿ ರೈತನ ಮಿತ್ರರಂತೆ ಕೆಲಸ ಮಾಡುವ ಅನೇಕ ಸೂಕ್ಷ್ಮಾಣುಜೀವಿಗಳು ನೆಲೆಸಿರುತ್ತವೆ.<br /> <br /> ಆದರೆ ರೈತರು ಬತ್ತದ ಕೊಯ್ಲಿನ ನಂತರ ಉಳಿಯುವ ಪುಡಿ ಬತ್ತದ ಹುಲ್ಲನ್ನು ಬೆಂಕಿ ಹಾಕಿ ಸುಡುತ್ತಿರುವುದರಿಂದ ಅಂಥಹ ಅನೇಕ ಜೀವಿಗಳು ಸತ್ತು ಹೋಗುತ್ತವೆ ಇದರಿಂದ ಪರಿಸರ ಅಸಮತೋಲನ ಉಂಟಾಗುತ್ತದೆ.<br /> <br /> ಬೆಂಕಿಯ ಉಷ್ಣದ ಪರಿಣಾಮ ಮಣ್ಣು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ ಅಲ್ಲದೆ ಬದುವಿನಲ್ಲಿನ ಇತರ ಗಿಡಗಳಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಕೂಡ ಇರಬೇಕು. ಆದರೆ ಎರಡೂ ನಮ್ಮ ನಿಯಂತ್ರಣದಲ್ಲಿಲ್ಲ.<br /> <br /> ರೈತ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಬತ್ತದ ಉಪ ಉತ್ಪನ್ನವಾದ ಹುಲ್ಲಿಗೆ ಬೆಂಕಿ ಇಡುವ ಬದಲಿಗೆ ಅದನ್ನು ಸಂಗ್ರಹಿಸಿ ಬಳಸಬಹುದು ಅಥವಾ ಮಾರಾಟ ಮಾಡಿ ಹಣ ಗಳಿಸಬಹುದಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಇದಾವುದನ್ನೂ ಲೆಕ್ಕಿಸದ ರೈತರು ದೊಡ್ಡ ಗಾತ್ರದ ಹುಲ್ಲನ್ನು ಮಾತ್ರ ಸಂಗ್ರಹಿಸಿ ಪುಡಿ ಹುಲ್ಲಿಗೆ ಬೆಂಕಿ ಹಾಕಿ ಸುಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್: </strong>ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರವಾಗಿ ಬತ್ತ ಬೆಳೆಯಲಾಗುತ್ತಿದ್ದು ಸುಗ್ಗಿಯ ಬೆಳೆಯನ್ನು ತೆಗೆದುಕೊಂಡ ರೈತ ಬೇಸಿಗೆ ಬೆಳೆಗೆ ತಯಾರಿ ನಡೆಸಿದ್ದು ಹೊಲಕ್ಕೆ ಬೆಂಕಿ ಹಾಕುವ ಕೆಲಸ ರೈತರಿಂದ ಅವ್ಯಾಹತವಾಗಿ ನಡೆದಿದೆ.<br /> <br /> ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ತಳಿ ವಿಜ್ಞಾನಿ ಪ್ರೋ.ಮೊಹ್ಮದ್ ಇಬ್ರಾಹಿಂ ಹೇಳುವಂತೆ ಗ್ರಾಮೀಣ ಜನರ ಮೂಲಾಧಾರ ಬೇಸಾಯ, ಅದಕ್ಕೆ ಮೂಲಾಧಾರ ಮಣ್ಣು. ಮಣ್ಣಿನಲ್ಲಿ ರೈತನ ಮಿತ್ರರಂತೆ ಕೆಲಸ ಮಾಡುವ ಅನೇಕ ಸೂಕ್ಷ್ಮಾಣುಜೀವಿಗಳು ನೆಲೆಸಿರುತ್ತವೆ.<br /> <br /> ಆದರೆ ರೈತರು ಬತ್ತದ ಕೊಯ್ಲಿನ ನಂತರ ಉಳಿಯುವ ಪುಡಿ ಬತ್ತದ ಹುಲ್ಲನ್ನು ಬೆಂಕಿ ಹಾಕಿ ಸುಡುತ್ತಿರುವುದರಿಂದ ಅಂಥಹ ಅನೇಕ ಜೀವಿಗಳು ಸತ್ತು ಹೋಗುತ್ತವೆ ಇದರಿಂದ ಪರಿಸರ ಅಸಮತೋಲನ ಉಂಟಾಗುತ್ತದೆ.<br /> <br /> ಬೆಂಕಿಯ ಉಷ್ಣದ ಪರಿಣಾಮ ಮಣ್ಣು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ ಅಲ್ಲದೆ ಬದುವಿನಲ್ಲಿನ ಇತರ ಗಿಡಗಳಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಕೂಡ ಇರಬೇಕು. ಆದರೆ ಎರಡೂ ನಮ್ಮ ನಿಯಂತ್ರಣದಲ್ಲಿಲ್ಲ.<br /> <br /> ರೈತ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಬತ್ತದ ಉಪ ಉತ್ಪನ್ನವಾದ ಹುಲ್ಲಿಗೆ ಬೆಂಕಿ ಇಡುವ ಬದಲಿಗೆ ಅದನ್ನು ಸಂಗ್ರಹಿಸಿ ಬಳಸಬಹುದು ಅಥವಾ ಮಾರಾಟ ಮಾಡಿ ಹಣ ಗಳಿಸಬಹುದಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಇದಾವುದನ್ನೂ ಲೆಕ್ಕಿಸದ ರೈತರು ದೊಡ್ಡ ಗಾತ್ರದ ಹುಲ್ಲನ್ನು ಮಾತ್ರ ಸಂಗ್ರಹಿಸಿ ಪುಡಿ ಹುಲ್ಲಿಗೆ ಬೆಂಕಿ ಹಾಕಿ ಸುಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>